ಉತ್ತರಪ್ರದೇಶ: ಹರಿದ 200 ರೂಪಾಯಿ ನೋಟು ಸ್ವೀಕರಿಸಲು ನಿರಾಕರಿಸಿದ್ದಕ್ಕಾಗಿ ಇಬ್ಬರು ವ್ಯಕ್ತಿಗಳು ಪಿಜ್ಜಾ ಡೆಲಿವರಿ ಬಾಯ್ನ ಮೇಲೆ ಗುಂಡು ಹಾರಿಸಿದ ಘಟನೆ ಯುಪಿಯ ಶಹಜಹಾನ್ಪುರದಲ್ಲಿ ನಡೆದಿದ್ದು, ಇದೀಗ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ವರದಿಯಾಗಿದೆ.
ಡೆಲಿವರಿ ಬಾಯ್ ಸಚಿನ್ ಕಶ್ಯಪ್ ಸ್ಥಿತಿ ಗಂಭೀರವಾಗಿದ್ದು, ಬರೇಲಿಯ ವಿಶೇಷ ವೈದ್ಯಕೀಯ ಕೇಂದ್ರದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಆರೋಪಿಗಳ ವಿರುದ್ಧ ಎಫ್ಐಆರ್ ದಾಖಲಿಸಲಾಗಿದ್ದು, ಅವರನ್ನು ಬಂಧಿಸಲಾಗಿದೆ ಮತ್ತು ಕಂಟ್ರಿ ನಿರ್ಮಿತ ಪಿಸ್ತೂಲ್ಗಳನ್ನು ಸಹ ವಶಪಡಿಸಿಕೊಳ್ಳಲಾಗಿದೆ ಎಂದು ಸದರ್ ಬಜಾರ್ನ ಎಸ್ಎಚ್ಒ ಅಮಿತ್ ಪಾಂಡೆ ತಿಳಿಸಿದ್ದಾರೆ.
ಏನಿದು ಪ್ರಕರಣ?
ರಾತ್ರಿ 11 ಗಂಟೆ ವೇಳೆಯಲ್ಲಿ ಸಹೋದರರಾದ ಆರೋಪಿಗಳು ಫೋನ್ ಮೂಲಕ ಪಿಜ್ಜಾವನ್ನು ಆರ್ಡರ್ ಮಾಡಿದ್ದಾರೆ. ಸಚಿನ್ ತನ್ನ ಸಹೋದ್ಯೋಗಿಯೊಂದಿಗೆ ಆರೋಪಿಯ ಸ್ಥಳಕ್ಕೆ ತಲುಪಿ ಪಿಜ್ಜಾ ವಿತರಿಸಿದ್ದಾನೆ. ಆರೋಪಿ ನದೀಂ ನೀಡಿದ ಹಣದಲ್ಲಿ ಸಚಿನ್ ಮತ್ತು ಆತನ ಸಹಚರ ತಂಪು ಪಾನೀಯ ಖರೀದಿಸಲು ತೆರಳಿದ್ದರು. ಆದರೆ, ನೋಟು ಹರಿದಿದ್ದರಿಂದ ಅದನ್ನು ಸ್ವೀಕರಿಸಲು ಅಂಗಡಿಯವರು ನಿರಾಕರಿಸಿದ್ದಾರೆ. ನಂತರ ಸಚಿನ್ ನದೀಂ ಬಾಗಿಲು ತಟ್ಟಿ ಹೊರಗೆ ಕರೆದು ನೋಟು ಬದಲಿಸುವಂತೆ ಕೇಳಿದರು. ಇದರಿಂದ ಕುಪಿತಗೊಂಡ ನದೀಂ ಸಚಿನ್ ಮೇಲೆ ದೌರ್ಜನ್ಯ ಎಸಗಿದ್ದಾನೆ. ನಂತರ, ನದೀಂನ ಸಹೋದರ ಹೊರಗೆ ಬಂದು ಮತ್ತೆ ಕಂಟ್ರಿಮೇಡ್ ಪಿಸ್ತೂಲ್ನಿಂದ ಗುಂಡು ಹಾರಿಸಿದ್ದಾನೆ ಎಂದು ವರದಿ ತಿಳಿಸಿದೆ.
ಗುಂಡೇಟಿನ ಸದ್ದು ಕೇಳಿದ ನೆರೆಹೊರೆಯವರು ಪೊಲೀಸರಿಗೆ ಮಾಹಿತಿ ನೀಡಿದ್ದು, ಸಚಿನ್ ಅವರನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಯಿತು.
BREAKING NEWS: ಹೃದಯಾಘಾತದಿಂದ ಪತಿ ಸಾವು : ಪತ್ನಿ & ನವಜಾತ ಶಿಶು ತಿರಸ್ಕರಿಸಿದ ಕುಟುಂಬ