ಲಖನೌ (ಉತ್ತರ ಪ್ರದೇಶ): ಉತ್ತರ ಪ್ರದೇಶದ ಅಯೋಧ್ಯೆ ಜಿಲ್ಲೆಯ ದೇವಸ್ಥಾನವೊಂದರಲ್ಲಿ ಮಲಗಿದ್ದ ವ್ಯಕ್ತಿಯನ್ನು ಆತನ ಸೋದರ ಸಂಬಂಧಿಯೊಬ್ಬ ಕತ್ತು ಸೀಳಿ ಕೊಂದಿರುವ ಘಟನೆ ನಡೆದಿದೆ.
ಮೃತನನ್ನು 35 ವರ್ಷದ ಪಂಕಜ್ ಶುಕ್ಲಾ ಎಂದು ಗುರುತಿಸಲಾಗಿದೆ. ಈತ ಅಮೇಥಿಯ ನಿವಾಸಿಯಾಗಿದ್ದು, ತಮ್ಮ ತಾಯಿಯ ಅಜ್ಜನ ಗ್ರಾಮಕ್ಕೆ ಭೇಟಿ ನೀಡಿದ್ದರು. ಈ ವೇಳೆ ದೇವಸ್ಥಾನದಲ್ಲಿ ಮಲಗಿದ್ದ ಪಂಕಜ್ನನ್ನು ಅವನ ತಾಯಿಯ ಸೋದರಸಂಬಂಧಿ ಗುಲ್ಲು ಮಿಶ್ರಾ ಅವನನ್ನು ಕೊಲೆ ಮಾಡಿದ್ದಾನೆ.
ಕುಮಾರಗಂಜ್ ಪೊಲೀಸ್ ಠಾಣೆ ವ್ಯಾಪ್ತಿಯ ಭೂಪುರ್ ಗ್ರಾಮದಿಂದ ಬೆಳಗ್ಗೆ 6 ಗಂಟೆ ಸುಮಾರಿಗೆ ನಮಗೆ ಕರೆ ಬಂದಿತ್ತು. ಈ ವೇಳೆ ನಾವು ಘಟನಾ ಸ್ಥಳಕ್ಕೆ ಭೇಟಿ ನೀಡಿದಾಗ ಯುವಕನ ಶವ ದೇವಸ್ಥಾನದಲ್ಲಿ ಬಿದ್ದಿತ್ತು. ಪರಿಶೀಲನೆಗೆ ಮುಂದಾದಾಗ ಅವನ ಕತ್ತು ಸೀಳಿರುವುದು ಕಂಡುಬಂದಿದೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ಪೊಲೀಸ್ ಅಧಿಕಾರಿ ಸತ್ಯೇಂದ್ರ ಭೂಷಣ್ ತಿವಾರಿ ತಿಳಿಸಿದ್ದಾರೆ.
ಇದೀಗ ಆರೋಪಿಯನ್ನು ಬಂಧಿಸಲಾಗಿದ್ದು, ತನಿಖೆ ಮುಂದುವರೆದಿದೆ. ಈ ಹಿಂದೆಯೂ ಕೂಡ ಇವರಿಬ್ಬರೂ ಜಗಳವಾಡಿಕೊಂಡಿದ್ದರು ಎಂದು ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿದೆ.
ನನಗೆ ವ್ಯಕ್ತಿ ಮುಖ್ಯವಲ್ಲ, ಪಕ್ಷ ಮುಖ್ಯ, ಪಕ್ಷ ಇದ್ದರೆ ಮಾತ್ರ ನಾವು – ಡಿ.ಕೆ ಶಿವಕುಮಾರ್
Big news: 2002ರ ಗೋಧ್ರಾ ಹತ್ಯಾಕಾಂಡ ಪ್ರಕರಣ: ಆರೋಪಿಗೆ ಜೀವಾವಧಿ ಶಿಕ್ಷೆ