ಮುಂಬೈ: ಶಿವಸೇನೆ ಅಧ್ಯಕ್ಷ ಉದ್ಧವ್ ಠಾಕ್ರೆ ಇಂದು ಮಹಾರಾಷ್ಟ್ರದಲ್ಲಿ ಮಧ್ಯಂತರ ಚುನಾವಣೆಗೆ ಒತ್ತಾಯಿಸಿದ್ದು, ‘ಬಿಲ್ಲು ಮತ್ತು ಬಾಣ’ ತಮ್ಮ ಪಕ್ಷದ ಚುನಾವಣಾ ಚಿಹ್ನೆಯಾಗಿಯೇ ಉಳಿಯುತ್ತದೆ ಎಂದು ಹೇಳಿದ್ದಾರೆ.
ಮಹಾರಾಷ್ಟ್ರದ ಸಿಎಂ ಆಗಿ ಏಕನಾಥ್ ಶಿಂಧೆ ಅಧಿಕಾರ ವಹಿಸಿಕೊಂಡ ನಂತರ ಮಾಜಿ ಸಿಎಂ ಉದ್ಧವ್ ಠಾಕ್ರೆ ಇಂದು ತಮ್ಮ ಮೊದಲ ಸಾರ್ವಜನಿಕ ಭಾಷಣದಲ್ಲಿ ಮಾತನಾಡಿದ್ದಾರೆ. ಈ ವೇಳೆ ರಾಜ್ಯದಲ್ಲಿ ಹೊಸ ಚುನಾವಣೆಗೆ ಒತ್ತಾಯಿಸಿದ್ದು, ಬಂಡುಕೋರರು ಶಿವಸೇನೆಯ ಚುನಾವಣಾ ಚಿಹ್ನೆಯಾದ ಬಿಲ್ಲು ಮತ್ತು ಬಾಣವನ್ನು ಬಳಸಲು ಬಿಡುವುದಿಲ್ಲ ಎಂದಿದ್ದಾರೆ.
“ಇಂದೇ ವಿಧಾನಸಭೆ ಚುನಾವಣೆ ನಡೆಸಲಿ ಎಂದು ನಾನು ಸವಾಲು ಹಾಕುತ್ತೇನೆ. ನಾವು ತಪ್ಪು ಮಾಡಿದ್ದರೆ ಜನ ಮನೆಗೆ ಕಳುಹಿಸುತ್ತಾರೆ. ನೀವು ಮಾಡಬೇಕಾದ ಕೆಲಸಗಳನ್ನು ಎರಡೂವರೆ ವರ್ಷಗಳ ಹಿಂದೆಯೇ ಗೌರವಯುತವಾಗಿ ಮಾಡಬೇಕಿತ್ತು. ಈಗ ಇದೆಲ್ಲವೂ ಸಂಭವಿಸುವ ಅಗತ್ಯವಿರಲಿಲ್ಲ” ಎಂದು ಗುಡುಗಿದ್ದಾರೆ.
“ಶಿವಸೇನೆಯಿಂದ ಬಿಲ್ಲು ಬಾಣದ ಚಿಹ್ನೆಯನ್ನು ಯಾರೂ ತೆಗೆದುಕೊಳ್ಳಲು ಸಾಧ್ಯವಿಲ್ಲ. ಆದರೆ, ಜನರು ಕೇವಲ ಚಿಹ್ನೆಯನ್ನು ನೋಡುವುದಿಲ್ಲ. ಅವರು ಚಿಹ್ನೆಯನ್ನು ತೆಗೆದುಕೊಂಡ ವ್ಯಕ್ತಿಯನ್ನು ನೋಡುತ್ತಾರೆ” ಎಂದಿದ್ದಾರೆ.
Watch: ಮಳೆ ನೀರು ಶೇಖರಣೆಗೊಂಡಿದ್ದ ಅಂಡರ್ ಬೈಪಾಸ್ನಲ್ಲಿ ಮುಳುಗಿದ ಶಾಲಾ ಬಸ್: ಮಕ್ಕಳೆಲ್ಲರೂ ಸೇಫ್!