ಬೆಂಗಳೂರು : ಉದ್ಯಮಿ ವಿದ್ಯಾಭರಣ್ ಜೊತೆ ವೈಷ್ಣವಿ ನಿಶ್ಚಿತಾರ್ಥ ಫಿಕ್ಸ್ ಆಗುತ್ತಿದ್ದಂತೆ ವಿದ್ಯಾಭರಣ್ ಸಂಬಂಧಿಸಿದ ಅಡಿಯೋವೊಂದು ವೈರಲ್ ಆಗುತ್ತಿದ್ದಂತೆ ನಿಶ್ಚಿತಾರ್ಥ ಮುರಿದು ಬಿದ್ದಿತ್ತು. ಈ ವಿಚಾರವಾಗಿ ಮಾಧ್ಯಮಗಳೊಂದಿಗೆ ನಟಿ ವೈಷ್ಣವಿ ಮಾತನಾಡಿ ” ನಾನು ಡಿಪ್ರೆಷನ್ ಗೆ ಹೋಗಿರಲಿಲ್ಲ”ವೆಂದು ಎಂದು ಸ್ಪಷ್ಟನೆ ನೀಡಿದ್ದಾರೆ.
https://kannadanewsnow.com/kannada/big-news-%e0%b2%86%e0%b2%aa%e0%b2%b0%e0%b3%87%e0%b2%b7%e0%b2%a8%e0%b3%8d-%e0%b2%ae%e0%b2%be%e0%b2%a1%e0%b2%bf%e0%b2%b8%e0%b2%bf%e0%b2%95%e0%b3%8a%e0%b2%b3%e0%b3%8d%e0%b2%b3%e0%b3%81%e0%b2%a4/
ವಿದ್ಯಾಭರಣ್ ಜೊತೆಗಿನ ನಿಶ್ಚಿತಾರ್ಥ ವಿಚಾರವಾಗಿ ನಟಿ ವೈಷ್ಣವಿ ತಮ್ಮ ರೂಮಿನಿಂದ ಹೊರಗೆ ಬಂದಿರಲಿಲ್ಲ ಆ ಕಾರಣಕ್ಕಾಗಿ ಮಾಧ್ಯಮಗಳ ಜೊತೆ ಅವರ ತಾಯಿ ಮಾತನಾಡಿ, ‘ಮಗಳ ಮನಸ್ಸು ಸರಿಯಿಲ್ಲ. ಹಾಗಾಗಿ ಮಾಧ್ಯಮಗಳ ಮುಂದೆ ಆಕೆ ಕಾಣಿಸಿಕೊಳ್ಳುತ್ತಿಲ್ಲ’ ಎಂದಿದ್ದರು.
ವೈಷ್ಣವಿ ಆಚೆ ಬಾರದೇ ಇರುವ ಕಾರಣಕ್ಕಾಗಿ ಅವರು ಡಿಪ್ರೆಷನ್ ಗೆ ಹೋಗಿದ್ದಾರೆ ಎಂದು ಹೇಳಲಾಗಿತ್ತು. ಅದರಿಂದ ಆಚೆ ಬರಲು ಅವರು ಟ್ಯಾಟೋ ಹಾಕಿಸಿಕೊಂಡರು ಎಂದು ಚರ್ಚೆ ನಡೆದಿತ್ತು. ಈ ಕುರಿತು ವೈಷ್ಣವಿ ಮೊದಲ ಬಾರಿಗೆ ಸ್ಪಷ್ಟನೆ ನೀಡಿದ್ದಾರೆ.
https://kannadanewsnow.com/kannada/big-news-%e0%b2%86%e0%b2%aa%e0%b2%b0%e0%b3%87%e0%b2%b7%e0%b2%a8%e0%b3%8d-%e0%b2%ae%e0%b2%be%e0%b2%a1%e0%b2%bf%e0%b2%b8%e0%b2%bf%e0%b2%95%e0%b3%8a%e0%b2%b3%e0%b3%8d%e0%b2%b3%e0%b3%81%e0%b2%a4/
ವಿದ್ಯಾಭರಣ್ ಕುರಿತಾದ ಆಡಿಯೋ ಬಹಿರಂಗವಾದಾಗ ಅವರ ಮನಸಿಗೆ ನೋವು ಆಗಿದ್ದು ನಿಜವಂತೆ. ಆದರೆ, ಯಾವುದೇ ಕಾರಣಕ್ಕೂ ಡಿಪ್ರೆಷನ್ ಗೆ ಹೋಗಿರಲಿಲ್ಲ ಎಂದು ಅವರು ಸ್ಪಷ್ಟ ಪಡಿಸಿದ್ದಾರೆ. ಕೆಲವರು ಈ ರೀತಿಯಲ್ಲಿ ಮಾತನಾಡಿದರು. ಅದರಿಂದ ಆಚೆ ಬರುವುದಕ್ಕಾಗಿ ಟ್ಯಾಟೋ ಹಾಕಿಸಿಕೊಂಡರು ಎಂದೆಲ್ಲ ಮಾತನಾಡಿದ್ದನ್ನು ಕೇಳಿದ್ದೇನೆ. ಆದರೆ, ನಾನು ತುಂಬಾ ಸ್ಟ್ರಾಂಗ್. ನನ್ನ ಬದುಕಿಗೆ ಬಗ್ಗೆ ನನಗೆ ಸ್ಪಷ್ಟತೆ ಇದೆ ಮಾಧ್ಯಮಗಳೊಂದಿಗೆ ಸ್ಪಷ್ಟನೆ ನೀಡಿದ್ದಾರೆ
https://kannadanewsnow.com/kannada/big-news-%e0%b2%86%e0%b2%aa%e0%b2%b0%e0%b3%87%e0%b2%b7%e0%b2%a8%e0%b3%8d-%e0%b2%ae%e0%b2%be%e0%b2%a1%e0%b2%bf%e0%b2%b8%e0%b2%bf%e0%b2%95%e0%b3%8a%e0%b2%b3%e0%b3%8d%e0%b2%b3%e0%b3%81%e0%b2%a4/