ತುಮಕೂರು : ಕಾಮಗಾರಿ ಮಾಡಿದರು ಕೂಡ ಹಣ ಬಿಡುಗಡೆಯಗಿಲ್ಲ ಎಂದು ಆರೋಪಿಸಿ ಗುತ್ತಿಗೆದಾರ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬೆದರಿಕೆ ಹಾಕಿದ್ದು, ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಹೇಳಿರುವ ವಿಡಿಯೋ ಇದೀಗ ವೈರಲ್ ಆಗಿದೆ. ತುಮಕೂರು ಜಿಲ್ಲೆಯ ಪಾವಗಡದ ಗುತ್ತಿಗೆದಾರ ಸುಜಿತ್ ವಿಡಿಯೋ ಇದೀಗ ವೈರಲ್ ಆಗಿದೆ.
ಹೌದು ಸುಜೀತ್ ಪ್ರಥಮ ದರ್ಜೆ ಗುತ್ತಿಗೆದಾರ ಹಾಗೂ ಕಾಂಗ್ರೆಸ್ ಮುಖಂಡ ಎಂದು ಹೇಳಲಾಗುತ್ತಿದೆ. ಕಾಮಗಾರಿ ಮುಗಿದರು ಹಣ ಬಿಡುಗಡೆ ಮಾಡದ ಆರೋಪ ಹಿನ್ನೆಲೆಯಲ್ಲಿ ವಿಶ್ವೇಶ್ವರಯ್ಯ ಜಲ ನಿಗಮ ಮಂಡಳಿ ಎಂ ಡಿ ಸಣ್ಣಚಿತ್ತಪ್ಪ ವಿರುದ್ಧ ಸುಜಿತ್ ಆರೋಪಿಸಿದ್ದಾರೆ. ಎಸ್ ಸಿ ಪಿ ಅಡಿ ಕಾಮಗಾರಿ ಮಾಡಿದ್ದ ಗುತ್ತಿಗೆದಾರ ಸುಜೀತ್ ಕಾಮಗಾರಿ ಮಾಡಿದ್ದರು.
ಆದರೆ ಕಾಮಗಾರಿ ಸರಿ ಇಲ್ಲ ಎಂದು ಸಣ್ಣಚಿತ್ತಪ್ಪ ತನಿಖೆಯು ಮಾಡಿದ್ದರು. ತನಿಖೆಯಲ್ಲಿ ಕಾಮಗಾರಿ ಪೂರ್ಣವಾಗಿ ಎಂದು ಸಾಬೀತಾಗಿತ್ತು.ಆದರೂ 45 ಲಕ್ಷ ಹಣ ಬಿಡುಗಡೆ ಮಾಡಿಲ್ಲ ಎಂದು ಆರೋಪ ಕೇಳಿ ಬಂದಿದೆ. ರಾಜಕೀಯ ದುರುದ್ದೇಶದಿಂದ ಹಣ ಬಿಡುಗಡೆ ಆಗಿಲ್ಲ. ಹೀಗಾಗಿ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಸುಜೀತ್ ವಿಡಿಯೋ ಮಾಡಿ ಮೃದುವೈರಲಾಗಿದೆ ಮೂಲತಃ ಪಾವಗಡ ದವರೇ ಆಗಿರುವ ಜನನಿಗಮ ಅಧಿಕಾರಿ ಸಣ್ಣ ಚಿತ್ತಪ್ಪ ಎಂದು ತಿಳಿದು ಬಂದಿದೆ.