ಮೈಸೂರು: ಮೈಸೂರು ಹಾಗೂ ಕೊಡಗು ಗಡಿ ಭಾಗದಲ್ಲಿ ಇಂದು ಮುಂಜಾಗನೆ ಭೂಕಂಪನದ ಅನುಭವ ಜನರಿಗೆ ಉಂಟಾಗಿದೆ. ಇದಲ್ಲದೇ ವಿಚಿತ್ರ ಶಬ್ದ ಕೂಡ ಭೂ ಕಂಪನದೊಂದಿಗೆ ಕೇಳಿ ಬಂದಿದ್ದು, ಜನರು ಭಯಭೀತಿಗೊಂಡಿರುವುದಾಗಿ ಹೇಳಲಾಗುತ್ತಿದೆ.
ಇಂದು ಬೆಳಿಗ್ಗೆ 6.30ರ ವೇಳೆಗೆ ಕೊಡಗು, ಮೈಸೂರು ಗಡಿ ಭಾಗದಲ್ಲಿ ಎರಡರಿಂದ ಮೂರು ಸೆಕೆಂಡುಗಳ ಕಾಲ ಭೂಮಿ ಕಂಪಿಸಿದಂತ ಅನುಭವ ಉಂಟಾಗಿದೆ. ಇದಲ್ಲದೇ ಭಾರೀ ಶಬ್ದ ಕೂಡ ಕೇಳಿ ಬಂದಿದೆ ಅಂತ ತಿಳಿದು ಬಂದಿದೆ.
ಕೊಡಗು ಜಿಲ್ಲೆಯ ಕುಶಾಲನಗರ ತಾಲ್ಲೂಕಿನ ಬಸವನತ್ತೂರು, ಮುಳ್ಳುಸೋಗೆ ಸೇರಿ ಹಲವೆಡೆ ಭೂಮಿ ಕಂಪಿಸಿದಂತ ಅನುಭವ ಉಂಟಾಗಿರುವುದಾಗಿ ಜನರು ತಿಳಿಸಿದ್ದಾರೆ.
ಭೂಮಿ ಕಂಪಿಸಿದ್ದರ ಜೊತೆಗೆ ಭಾರಿ ಶಬ್ದ, ಕೇಳಿ ಬಂದಿದೆಯಂತೆ. ವಿಚಿತ್ರ ಶಬ್ದವನ್ನು ಕೇಳಿದಂತ ಜನರು ಮನೆಯಿಂದ ಹೊರ ಓಡಿ ಬಂದು ಕೆಲ ಕಾಲ ಆತಂಕದಲ್ಲಿ ಬಯಲಲ್ಲೇ ಕಳೆಯುವಂತೆ ಆಗಿದೆ ಎನ್ನಲಾಗುತ್ತಿದೆ. ಈ ಬಗ್ಗೆ ಹೆಚ್ಚಿನ, ಖಚಿತ ಮಾಹಿತಿ ನಿರೀಕ್ಷಿಸಲಾಗಿದೆ.
‘ಮಜಾ’ರಾವ್ ಸ್ವಿಮ್ಮಿಂಗ್ ‘ಪೂಲ್ ಮಿನಿಸ್ಟರ್’ ದಿನೇಶ್ ಗುಂಡೂರಾವ್ ಎದ್ದೇಳಿ: JDS ಕಿಡಿಕಿಡಿ
ಬೆಂಗಳೂರು ಜನತೆ ಗಮನಕ್ಕೆ: ಆ.25ರಂದು ಈ ಪ್ರದೇಶಗಳಲ್ಲಿ ‘ವಿದ್ಯುತ್ ವ್ಯತ್ಯಯ’ | Power Cut