Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ALERT : ಬೆಂಗಳೂರಲ್ಲಿ ಬೆಚ್ಚಿ ಬೀಳಿಸೋ ಘಟನೆ : ಡಿಜಿಟಲ್ ಅರೆಸ್ಟ್ ಹೆಸರಲ್ಲಿ ಸ್ನೇಹಿತೆಯರಿಬ್ಬರನ್ನು ವಿವಸ್ತ್ರಗೊಳಿಸಿ ಕಿರುಕುಳ!

23/07/2025 3:46 PM

5 ವರ್ಷಗಳ ವಿರಾಮದ ಬಳಿಕ ಭಾರತದಿಂದ ಚೀನಾದ ನಾಗರಿಕರಿಗೆ ‘ಪ್ರವಾಸಿ ವೀಸಾ’ ಪುನರಾರಂಭ

23/07/2025 3:43 PM

BREAKING: ಒಂದೇ ಒಂದು ದಿನದ ಮಟ್ಟಿಗೆ ‘ಪೌರಾಯುಕ್ತ’ರನ್ನು ವರ್ಗಾವಣೆ: ರಾಜ್ಯ ಸರ್ಕಾರ ಆದೇಶ

23/07/2025 3:43 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BREAKING: ಒಂದೇ ಒಂದು ದಿನದ ಮಟ್ಟಿಗೆ ‘ಪೌರಾಯುಕ್ತ’ರನ್ನು ವರ್ಗಾವಣೆ: ರಾಜ್ಯ ಸರ್ಕಾರ ಆದೇಶ
KARNATAKA

BREAKING: ಒಂದೇ ಒಂದು ದಿನದ ಮಟ್ಟಿಗೆ ‘ಪೌರಾಯುಕ್ತ’ರನ್ನು ವರ್ಗಾವಣೆ: ರಾಜ್ಯ ಸರ್ಕಾರ ಆದೇಶ

By kannadanewsnow0923/07/2025 3:43 PM

ಬೆಂಗಳೂರು: ರಾಜ್ಯ ಸರ್ಕಾರದಿಂದ 66 ಪೌರಾಯುಕ್ತರನ್ನು ವರ್ಗಾವಣೆ ಮಾಡಿ ಆದೇಶಿಸಲಾಗಿದೆ. ಆದರೆ ಶಾಕಿಂಗ್ ಎನ್ನುವಂತೆ ಕೇವಲ ಒಂದು ದಿನದ ಮಟ್ಟಿಗೆ 50 ಪೌರಾಯುಕ್ತರನ್ನು ವರ್ಗಾವಣೆ ಮಾಡಿದೆ. ಆ ಬಳಿಕ ಹಾಲಿ ಕರ್ತವ್ಯ ನಿರ್ವಹಿಸುತ್ತಿರುವಂತ ಹುದ್ದೆಯಲ್ಲೇ ಮುಂದುವರೆಸುವಂತೆ ಆದೇಶಿಸಿದೆ. ಈ ರೀತಿಯಾಗಿ ಒಂದು ದಿನದ ಮಟ್ಟಿಗೆ ಪೌರಾಯುಕ್ತರನ್ನು ವರ್ಗಾವಣೆ ಮಾಡಿರುವುದು ಹಲವು ಅನುಮಾನ, ಗೊಂದಲಕ್ಕೂ ಕಾರಣವಾಗಿದೆ.

ಈ ಕುರಿತಂತೆ ನಗರಾಭಿವೃದ್ಧಿ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ಟಿ.ಮಂಜುನಾಥ್ ಎಂಬುವರು ಅಧಿಸೂಚನೆ ಹೊರಡಿಸಿದ್ದಾರೆ. ಕರ್ನಾಟಕ ಪೌರಾಡಳಿತ ಸೇವೆಗೆ ಸೇರಿದ ಈ ಕೆಳಕಂಡ ಅಧಿಕಾರಿಗಳಿಗೆ ಮುಖ್ಯಾಧಿಕಾರಿ ಶ್ರೇಣಿ-1 (ವೇತನ ಶ್ರೇಣಿ ರೂ. 65950-124900) ವೃಂದದಿಂದ ಪೌರಾಯುಕ್ತರು ಶ್ರೇಣಿ-2 (ವೇತನ ಶ್ರೇಣಿ ರೂ.83700-155200) ವೃಂದಕ್ಕೆ ಕರ್ನಾಟಕ ನಾಗರಿಕ ಸೇವಾ ನಿಯಮಗಳು 1958ರ ನಿಯಮ 42ರಡಿ ತಕ್ಷಣದಿಂದ ಜಾರಿಗೆ ಬರುವಂತೆ ಸ್ಥಾನಪನ್ನ ಆಧಾರದ ಮೇಲೆ ಮುಂಬಡ್ತಿ ನೀಡಿ ಸ್ಥಳನಿಯುಕ್ತಿಗೊಳಿಸಿ ಆದೇಶಿಸಿದ್ದಾರೆ.

ಮುಂದುವರೆದು, ಮುಖ್ಯಾಧಿಕಾರಿ ಶ್ರೇಣಿ-1 (ವೇತನ ಶ್ರೇಣಿ ರೂ. 65950-124900) ವೃಂದದಿಂದ ಪೌರಾಯುಕ್ತರು ಶ್ರೇಣಿ-2 (ವೇತನ ಶ್ರೇಣಿ ರೂ.83700-155200) ವೃಂದಕ್ಕೆ ಸ್ಥಾನವನ್ನು ಮುಂಬಡ್ತಿ ನೀಡಿ ಅವರುಗಳ ಹೆಸರುಗಳ ಮುಂದೆ ನಮೂದಿಸಿರುವ ಹುದ್ದೆಗಳಿಗೆ ಕಾರ್ಯವರದಿ ಮಾಡಿಕೊಳ್ಳತಕ್ಕದ್ದು ಎಂದಿದ್ದಾರೆ.

ಈ ಆದೇಶದಲ್ಲಿ ಶಾಕಿಂಗ್ ಎನ್ನುವಂತೆ ಒಂದು ದಿನದ ಮಟ್ಟಿಗೆ ಪೌರಾಯುಕ್ತರ ಹುದ್ದೆಗೆ ಸ್ಥಳ ನಿಯುಕ್ತಿಗೊಳಿಸಿದೆ. ತದನಂತರ ಹಾಲಿ ಕಾರ್ಯನಿರ್ವಹಿಸುತ್ತಿರುವ ಹುದ್ದೆಯಲ್ಲಿ ಮುಂದುವರೆಸಿದೆ ಎಂಬುದಾಗಿ ಸ್ಥಾನ ಪನ್ನ ಮುಂಬಡ್ತಿ ನೀಡಿ ಸ್ಥಳ ನಿಯುಕ್ತಿಗೊಳಿಸಲಾದ ಹುದ್ದೆಯಲ್ಲಿ ತಿಳಿಸಲಾಗಿದೆ.

ದಾವಣಗೆರೆ ಮಹಾನಗರ ಪಾಲಿಕೆ ಕಂದಾಯ ಅಧಿಕಾರಿ ಈರಮ್ಮ.ವಿ ಅವರನ್ನು ಒಂದು ದಿನದ ಮಟ್ಟಿಗೆ ಹಿರಿಯೂರು ನಗರಸಭೆಯ ಪೌರಾಯುಕ್ತರ ಹುದ್ದೆಗೆ ಸ್ಥಳ ನಿಯುಕ್ತಿಗೊಳಿಸಿದೆ. ತದನಂದರ ಅವರ ಸೇವೆಯನ್ನು ದಾವಣಗೆರೆ ಮಹಾನಗರ ಪಾಲಿಕೆ ವಶಕ್ಕೆ ನೀಡಿದೆ ಎಂದಿದ್ದಾರೆ.

ಇನ್ನೂ ಉಡುಪಿ ಜಿಲ್ಲೆಯ ಯೋಜನಾ ನಿರ್ದೇಶಕರ ಕಚೇರಿಯ ಜಿಲ್ಲಾ ನಗರ ವ್ಯವಸ್ಥಾಪಕರಾಗಿದ್ದಂತ ಧನಂಜಯ ಡಿ.ಬಿ ಅವರನ್ನು ಒಂದು ದಿನದ ಮಟ್ಟಿಗೆ ಸಾಗರ ನಗರಸಭೆಯ ಪೌರಾಯುಕ್ತರ ಹುದ್ದೆಗೆ ಸ್ಥಳನಿಯುಕ್ತಿಗೊಳಿಸಿದೆ. ತದನಂತರ ಹಾಲಿ ಕಾರ್ಯನಿರ್ವಹಿಸುತ್ತಿರುವ ಹುದ್ದೆಯಲ್ಲಿ ಮುಂದುವರೆಸಿದೆ ಎಂಬುದಾಗಿ ಆದೇಶದಲ್ಲಿ ತಿಳಿಸಿದ್ದಾರೆ.

ರಾಮನಗರ ಜಿಲ್ಲೆಯ ಬಿಡದಿ ಪುರಸಭೆಯ ಮುಖ್ಯಾಧಿಕಾರಿಯಾಗಿದ್ದಂತ ರಮೇಶ್ ಕೆ.ಜಿ ಅವರನ್ನು ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರು ನಗರಸಭೆಯ ಪೌರಾಯುಕ್ತರಾಗಿ ವರ್ಗಾವಣೆ ಮಾಡಲಾಗಿದೆ. ಆದರೇ ಇದೇ ಮಾದರಿಯಲ್ಲಿ 16 ಮಂದಿಯನ್ನು ಮಾತ್ರವೇ ವರ್ಗಾವಣೆ ಮಾಡಿದ್ದರೇ, ಇನ್ನುಳಿದಂತೆ ಪೌರಾಡಳಿತ ಇಲಾಖೆಯಿಂದ ಮಾಡಿದಂತ ವರ್ಗಾವಣೆ ಆದೇಶವು ಕೇವಲ ಒಂದು ದಿನದ ಮಟ್ಟಿಗೆ ಆಗಿದೆ.

ಅಂದಹಾಗೇ ಇದು ವರ್ಗಾವಣೆಯೋ ಅಥವಾ ಹಾಗೆ ಹೋಗಿ, ಹೀಗೆ ಬಾ ಎನ್ನುವಂತೆ ಅತ್ತೆಮನೆಗೆ ಕಳುಹಿಸಿಕೊಟ್ಟಂತ ಆದೇಶವೋ ಎಂಬುದು ಸಾರ್ವಜನಿಕರ ಪ್ರಶ್ನೆಯಾಗಿದೆ. ವರ್ಗಾವಣೆಯಾಗಲೀ, ಮುಂಬಡ್ತಿಯಾಗಲೀ ಇಂತಿಷ್ಟು ವರ್ಷಗಳವರೆಗೆ ವರ್ಗಾವಣೆಗೊಂಡ ಸ್ಥಳದಲ್ಲಿ ಕಾರ್ಯನಿರ್ವಹಿಸುವಂತಿರುವುದು ಸರ್ಕಾರದ ವರ್ಗಾವಣೆಯ ಮಾರ್ಗಸೂಚಿಯ ನಿಯಮವಾಗಿದೆ.  ಆದರೇ 66 ಪೌರಾಯುಕ್ತರ ವರ್ಗಾವಣೆಯಲ್ಲಿ 16 ಮಂದಿಯನ್ನು ಮಾತ್ರವೇ ಖಾಯಂ ವರ್ಗಾವಣೆ ಮಾಡಿದ್ದರೇ, ಇನ್ನುಳಿದಂತ 50 ಪೌರಾಯುಕ್ತರನ್ನು ಕೇವಲ ಒಂದು ದಿನದ ಮಟ್ಟಿಗೆ ಮಾತ್ರವೇ ರಾಜ್ಯ ಸರ್ಕಾರ ವರ್ಗಾವಣೆ ಮಾಡಿದೆ. ಆ ಬಳಿಕ ಹಾಲಿ ಹುದ್ದೆಯಲ್ಲೇ ಮುಂದುವರೆಸಿದೆ.

ವರದಿ; ವಸಂತ ಬಿ ಈಶ್ವರಗೆರೆ.., ಸಂಪಾದಕರು

       

Share. Facebook Twitter LinkedIn WhatsApp Email

Related Posts

ALERT : ಬೆಂಗಳೂರಲ್ಲಿ ಬೆಚ್ಚಿ ಬೀಳಿಸೋ ಘಟನೆ : ಡಿಜಿಟಲ್ ಅರೆಸ್ಟ್ ಹೆಸರಲ್ಲಿ ಸ್ನೇಹಿತೆಯರಿಬ್ಬರನ್ನು ವಿವಸ್ತ್ರಗೊಳಿಸಿ ಕಿರುಕುಳ!

23/07/2025 3:46 PM1 Min Read

ಒಂದು ದಿನದ ಮಟ್ಟಿಗೆ ‘ಸಾಗರ ನಗರಸಭೆ ಪೌರಾಯುಕ್ತ’ರಾಗಿ ಧನಂಜಯ ಡಿ.ಬಿ ನೇಮಕ

23/07/2025 3:38 PM1 Min Read

BREAKING : ಕರ್ನಾಟಕದಲ್ಲಿ ಸೆ.22 ರಿಂದ ಅ.7ರವರೆಗೆ ‘ಮರು ಜಾತಿಗಣತಿ’ ನಡೆಸಲು ರಾಜ್ಯ ಸರ್ಕಾರ ಮಹತ್ವದ ನಿರ್ಧಾರ

23/07/2025 3:17 PM1 Min Read
Recent News

ALERT : ಬೆಂಗಳೂರಲ್ಲಿ ಬೆಚ್ಚಿ ಬೀಳಿಸೋ ಘಟನೆ : ಡಿಜಿಟಲ್ ಅರೆಸ್ಟ್ ಹೆಸರಲ್ಲಿ ಸ್ನೇಹಿತೆಯರಿಬ್ಬರನ್ನು ವಿವಸ್ತ್ರಗೊಳಿಸಿ ಕಿರುಕುಳ!

23/07/2025 3:46 PM

5 ವರ್ಷಗಳ ವಿರಾಮದ ಬಳಿಕ ಭಾರತದಿಂದ ಚೀನಾದ ನಾಗರಿಕರಿಗೆ ‘ಪ್ರವಾಸಿ ವೀಸಾ’ ಪುನರಾರಂಭ

23/07/2025 3:43 PM

BREAKING: ಒಂದೇ ಒಂದು ದಿನದ ಮಟ್ಟಿಗೆ ‘ಪೌರಾಯುಕ್ತ’ರನ್ನು ವರ್ಗಾವಣೆ: ರಾಜ್ಯ ಸರ್ಕಾರ ಆದೇಶ

23/07/2025 3:43 PM

ಒಂದು ದಿನದ ಮಟ್ಟಿಗೆ ‘ಸಾಗರ ನಗರಸಭೆ ಪೌರಾಯುಕ್ತ’ರಾಗಿ ಧನಂಜಯ ಡಿ.ಬಿ ನೇಮಕ

23/07/2025 3:38 PM
State News
KARNATAKA

ALERT : ಬೆಂಗಳೂರಲ್ಲಿ ಬೆಚ್ಚಿ ಬೀಳಿಸೋ ಘಟನೆ : ಡಿಜಿಟಲ್ ಅರೆಸ್ಟ್ ಹೆಸರಲ್ಲಿ ಸ್ನೇಹಿತೆಯರಿಬ್ಬರನ್ನು ವಿವಸ್ತ್ರಗೊಳಿಸಿ ಕಿರುಕುಳ!

By kannadanewsnow0523/07/2025 3:46 PM KARNATAKA 1 Min Read

ಬೆಂಗಳೂರು : ಬೆಂಗಳೂರಿನಲ್ಲಿ ಬೆಚ್ಚಿ ಬೀಳಿಸುವ ಘಟನೆ ಒಂದು ನಡೆದದ್ದು, ಸೈಬರ್ ವಂಚಕರು ಮನಿ ಲ್ಯಾಂಡ್ ರಿಂಗ್ ಆರೋಪದ ಹೆಸರಿನಲ್ಲಿ…

BREAKING: ಒಂದೇ ಒಂದು ದಿನದ ಮಟ್ಟಿಗೆ ‘ಪೌರಾಯುಕ್ತ’ರನ್ನು ವರ್ಗಾವಣೆ: ರಾಜ್ಯ ಸರ್ಕಾರ ಆದೇಶ

23/07/2025 3:43 PM

ಒಂದು ದಿನದ ಮಟ್ಟಿಗೆ ‘ಸಾಗರ ನಗರಸಭೆ ಪೌರಾಯುಕ್ತ’ರಾಗಿ ಧನಂಜಯ ಡಿ.ಬಿ ನೇಮಕ

23/07/2025 3:38 PM

BREAKING : ಕರ್ನಾಟಕದಲ್ಲಿ ಸೆ.22 ರಿಂದ ಅ.7ರವರೆಗೆ ‘ಮರು ಜಾತಿಗಣತಿ’ ನಡೆಸಲು ರಾಜ್ಯ ಸರ್ಕಾರ ಮಹತ್ವದ ನಿರ್ಧಾರ

23/07/2025 3:17 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.