ನಾಳೆ ಗುರುವಾರ 2025 ಜುಲೈ 24 ರಂದು ಭೀಮನ ಅಮಾವಾಸ್ಯೆ ಇದೆ. ಈ ದಿನ ಪಿತೃಗಳಿಗೆ ತರ್ಪಣ ಅರ್ಪಿಸಲು ಸೂಕ್ತವಾಗಿದೆ. ಭೀಮನ ಅಮಾವಾಸ್ಯೆಯಂದು ಪಿತೃಗಳು ಭೂಮಿಗೆ ಬರುತ್ತಾರೆಂದು ನಂಬಲಾಗುವುದು. ಈ ಸಮಯದಲ್ಲಿ ತಿಥಿ, ತರ್ಪಣ ಮಾಡಿದರೆ ಆತ್ಮಗಳು ಶಾಂತಿಯುತವಾಗಿ ಸ್ವರ್ಗಕ್ಕೆ ಹೋಗುತ್ತವೆ. ಜೊತೆಗೆ ಪೂರ್ವಜರ ಆಶೀರ್ವಾದದಿಂದ ಜೀವನದಲ್ಲಿ ಸಮಸ್ಯೆಗಳು ದೂರವಾಗಿ ಸಂತೋಷ ನೆಲೆಸಲಿದೆ. ಅಲ್ಲದೇ ಪಿತೃ ದೋಷವಿರುವ ಜನರು ಕೆಲವು ವಸ್ತುಗಳನ್ನು ಈ ದಿನ ದಾನ ಮಾಡಿದರೆ ಪಿತೃ ದೋಷದಿಂದ ಮುಕ್ತರಾಗಬಹುದು.
ಜುಲೈ 24 ಗುರುವಾರ ಅಮಾವಾಸ್ಯೆ ತಿಥಿ ಮಧ್ಯ ರಾತ್ರಿ 2.29ಕ್ಕೆ ಪ್ರಾರಂಭವಾಗಿ ಮರುದಿನ ಮಧ್ಯರಾತ್ರಿ 12.40ಕ್ಕೆ ಕೊನೆಗೊಳ್ಳುತ್ತದೆ . ಇದು ಪಿತೃ ದೋಷ ನಿವಾರಣೆಗೆ ಸೂಕ್ತವಾದ ಸಮಯ. ಪಿತೃ ದೋಷ ಮರಣದ ನಂತರ ಪೂರ್ವಜರಿಗೆ ಅಗತ್ಯವಿರುವ ಆಚರಣೆಗಳನ್ನು ಸರಿಯಾಗಿ ಮಾಡದಿದ್ದಾಗ ಅಥವಾ ಅವರ ಆತ್ಮಗಳು ಶಾಂತಿಯಿಂದ ಇಲ್ಲದಿದ್ದಾಗ ಕುಟುಂಬದಲ್ಲಿ ಸಂಭವಿಸುವ ಸಮಸ್ಯೆಯಾಗಿದೆ. ಈ ದೋಷದಿಂದ ಮುಕ್ತರಾಗಲು ಭೀಮನ ಅಮವಾಸ್ಯೆಯಂದು ತಿಥಿ, ತರ್ಪಣ, ಆಚರಣೆಯಲ್ಲದೆ ದಾನದ ಮೂಲಕವೂ ಮುಕ್ತರಾಗಬಹುದು. ಹಾಗಾದರೆ ಈ ದಿನ ಯಾವ ರಾಶಿಯವರು ಯಾವ ವಸ್ತುಗಳನ್ನು ದಾನ ಮಾಡಿದರೆ ಪಿತೃ ದೋಷ ನಿವಾರಣೆಯಾಗುತ್ತದೆ ಎಂದು ಈಗ ತಿಳಿಯೋಣ.
ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ವಿದ್ವಾನ್ ವಿದ್ಯಾಧರ್ ತಂತ್ರಿ ಜ್ಯೋತಿಷ್ಯರ ಮೊಬೈಲ್ ಸಂಖ್ಯೆ 9686268564 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ. ನಿಮ್ಮ ಸಮಸ್ಯೆಗಳಾದ ಆರೋಗ್ಯ, ಸಂತಾನ, ಸಾಲದ ಬಾಧೆ, ಪ್ರೀತಿಯಲ್ಲಿ ನಂಬಿ ಮೋಸ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ, ದೃಷ್ಟಿ ದೋಷ, ಮನೆಯಲ್ಲಿ ದಟ್ಟದರಿದ್ರ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬದ ಕಷ್ಟ, ಹಣಕಾಸಿನ ಅಡಚಣೆ, ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಲು ಈಗಲೇ ಕರೆ ಮಾಡಿ 9686268564
ಮೇಷ ರಾಶಿ
ಜ್ಯೋತಿಷ್ಯಶಾಸ್ತ್ರದ ಪ್ರಕಾರ ಒಬ್ಬ ವ್ಯಕ್ತಿಯ ಜಾತಕದಲ್ಲಿ 5ನೇ ಮತ್ತು 9ನೇ ಮನೆಗಳಲ್ಲಿ ಪಾಪ ಗ್ರಹಗಳಿದ್ದರೆ, ಪಿತೃ ದೋಷವಿದೆ ಎಂದರ್ಥ. ಗೋಚಾರದಲ್ಲಿ ಮೇಷ ರಾಶಿಯ 5ನೇ ಮನೆಯಲ್ಲಿ ಕೇತು ಮತ್ತು ಕುಜನ ಸಂಚಾರ ನಡೆಯುತ್ತಿದೆ. ನವಗ್ರಹಗಳಲ್ಲಿ ಕೇತು ಮತ್ತು ಕುಜ ಪಾಪ ಗ್ರಹಗಳಲ್ಲಿ ಒಂದಾಗಿದ್ದರಿಂದ ಮೇಷ ರಾಶಿಯವರಿಗೆ ಪಿತೃ ದೋಷವಿದೆ. ಹೀಗಾಗಿ ಭೀಮನ ಅಮಾವಾಸ್ಯೆಯಂದು ಅಗತ್ಯ ಇರುವವರಿಗೆ ಕೆಂಪು ಬಟ್ಟೆ ಅಥವಾ ಕೆಂಪು ವಸ್ತುಗಳನ್ನು ದಾನ ಮಾಡುವುದರಿಂದ ಪಿತೃ ದೋಷ ನಿವಾರಣೆಯಾಗಲಿದೆ. ಜೊತೆಗೆ ಜೀವನದಲ್ಲಿ ಈವರೆಗೂ ಅನುಭಿಸಿದ ಅಡೆತಡೆಗಳು ದೂರವಾಗಿ ಪೂರ್ವಜರ ಆಶೀರ್ವಾದದಿಂದ ಸಕಲಾಭಿವೃದ್ಧಿಯಾಗಲಿದೆ.
ವೃಷಭ ರಾಶಿ
ಪ್ರಸ್ತುತ ವೃಷಭ ರಾಶಿಯಲ್ಲಿ ಶುಕ್ರ ಗ್ರಹ ಸಂಚಾರ ಮಾಡುತ್ತಿದೆ. ವೃಷಭ ರಾಶಿಯ ಆಳುವ ಗ್ರಹ ಶುಕ್ರವೇ ಆಗಿದೆ. ಈ ವೃಷಭ ರಾಶಿಯವರು ಭೀಮನ ಅಮಾವಾಸ್ಯೆಯಂದು ಬಿಳಿ ವಸ್ತುಗಳನ್ನು ಅಥವಾ ಬಟ್ಟೆಗಳನ್ನು ದಾನ ಮಾಡುವುದು ಸೂಕ್ತ. ಇದರಿಂದ ಮನೆಯಲ್ಲಿ ಮನಸ್ತಾಪಗಳು, ಪರಸ್ಪರ ದ್ವೇಷ ಎಲ್ಲವೂ ಕಡಿಮೆಯಾಗಿ ಸಂತೋಷ ನೆಲೆಸಲಿದೆ.
ಮಿಥುನ ರಾಶಿ
ಮಿಥುನ ರಾಶಿಚಕ್ರದ ಮೂರನೇ ರಾಶಿಯಾಗಿದೆ. ಭೀಮನ ಅಮಾವಾಸ್ಯೆಯಂದು ಮಿಥುನ ರಾಶಿಯಲ್ಲಿ ಗುರು ಮತ್ತು ಚಂದ್ರ ಒಟ್ಟಿಗೆ ಸಂಚಾರ ಮಾಡುತ್ತವೆ. ಮಿಥುನ ರಾಶಿಯ 9ನೇ ಮನೆಯಲ್ಲಿ ರಾಹು ಸಂಚಾರ ಮಾಡುವುದರಿಂದ ಪಿತೃ ದೋಷವಿದೆ. ಹೀಗಾಗಿ ಇದರ ನಿವಾರಣೆಗೆ ಆಷಾಢ ಅಮಾವಾಸ್ಯೆಯಂದು ಹಸಿರು ಬಟ್ಟೆಗಳನ್ನು ದಾನ ಮಾಡಿ. ಹಸಿರು ಬಟ್ಟೆ ಅಥವಾ ವಸ್ತುಗಳನ್ನು ದಾನ ಮಾಡುವುದರಿಂದ ದೋಷ ನಿವಾರಣೆಯಾಗಿ ಇಷ್ಟಾರ್ಥ ಸಿದ್ಧಿಯಾಗಲಿದೆ.
ಕಟಕ ರಾಶಿ
ಕಟಕ ರಾಶಿಯನ್ನು ಆಳುವ ಗ್ರಹ ಚಂದ್ರ. ಪ್ರಸ್ತುತ ಕಟಕ ರಾಶಿಯಲ್ಲಿ ಬುಧ ಮತ್ತು ಸೂರ್ಯ ಗ್ರಹಗಳು ಸಂಚಾರ ಮಾಡುತ್ತಿವೆ. ಕಟಕ ರಾಶಿಯ 9ನೇ ಮನೆಯಲ್ಲಿ ಶನಿ ಗ್ರಹ ಸಂಚಾರ ಮಾಡುತ್ತಿರುವುದು ಉತ್ತಮ ಸೂಚನೆಯಲ್ಲ. ಇದು ಪಿತೃ ದೋಷವನ್ನು ಸೂಚಿಸುತ್ತದೆ. ಹೀಗಾಗಿ ಕಟಕ ರಾಶಿಯ ಜನರು ಭೀಮನ ಅಮಾವಾಸ್ಯೆಯಂದು ಮೊಸರನ್ನು ದಾನ ಮಾಡುವುದು ಶುಭ.
ಸಿಂಹ ರಾಶಿ
ಸಿಂಹ ರಾಶಿಯಲ್ಲಿ ಪ್ರಸ್ತುತ ಕೇತು ಹಾಗೂ ಮಂಗಳ ಗ್ರಹ ಸಂಚಾರ ಮಾಡುತ್ತಿವೆ. ಹೀಗಾಗಿ ಸಿಂಹ ರಾಶಿಯವರು ಭೀಮನ ಅಮಾವಾಸ್ಯೆಯಂದು ಪಿತೃ ದೋಷ ನಿವಾರಣೆ ಮಾಡಿಕೊಳ್ಳಲೇಬೇಕು. ಇಲ್ಲದಿದ್ದರೆ ಜೀವನದಲ್ಲಿ ಅನೇಕ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಆದ್ದರಿಂದ ಆಷಾಢ ಅಮಾವಾಸ್ಯೆಯಂದು ಕೆಂಪು ಶ್ರೀಗಂಧವನ್ನು ಸಿಂಹ ರಾಶಿಯವರು ದಾನ ಮಾಡುವುದು ಒಳ್ಳೆಯದು.
ಕನ್ಯಾ ರಾಶಿ
ಕನ್ಯಾ ರಾಶಿಯವರು ಭೀಮನ ಅಮಾವಾಸ್ಯೆಯಂದು ಕೆಲ ವಸ್ತುಗಳನ್ನು ದಾನ ಮಾಡಿದರೆ ತುಂಬಾ ಒಳ್ಳೆಯದು. ಇದರಿಂದ ಆರ್ಥಿಕ ಸಮಸ್ಯೆಗಳು ದೂರವಾಗುತ್ತವೆ. ವೈವಾಹಿಕ ಜೀವನದಲ್ಲಿ ಅಡೆತಡೆಗಳು ಇರುವುದಿಲ್ಲ. ಅಲ್ಲದೇ ಆರೋಗ್ಯ ಸಮಸ್ಯೆ, ಕಲಹ ಹಾಗೂ ಜಗಳಗಳು ಕಡಿಮೆಯಾಗಿ ಕ್ರಮೇಣ ಶಾಂತಿ ಸಂತೋಷ ನೆಲೆಸಲಿದೆ. ಹೀಗಾಗಿ ಕನ್ಯಾ ರಾಶಿಯವರು ಭೀಮನ ಅಮಾವಾಸ್ಯೆಯಂದು ಬಡವರಿಗೆ ಉದ್ದಿನ ಬೇಳೆಯನ್ನು ದಾನ ಮಾಡುವುದರಿಂದ ಪೂರ್ವಜರ ಆಶೀರ್ವಾದ ಸಿಗಲಿದೆ.
ತುಲಾ ರಾಶಿ
ತುಲಾ ರಾಶಿಯ 5ನೇ ಮನೆಯಲ್ಲಿ ರಾಹು ಇರುವುದರಿಂದ ಪಿತೃ ದೋಷವಿದೆ. ಹೀಗಾಗಿ ತುಲಾ ರಾಶಿಯವರು ಈ ಭೀಮನ ಅಮಾವಾಸ್ಯೆಗೆ ದಾನ ಮಾಡಲೇಬೇಕು. ಕೈಲಾದಷ್ಟು ಸಹಾಯ, ದಾನ ಮಾಡುವುದರಿಂದ ಪೂರ್ವಜರು ಸಂತೋಷಗೊಂಡು ಆರ್ಥಿಕ ಅಭಿವೃದ್ಧಿಗೆ ಆಶೀರ್ವದಿಸುತ್ತಾರೆ. ಹೀಗಾಗಿ ಜ್ಯೋತಿಷ್ಯಶಾಸ್ತ್ರದ ಪ್ರಕಾರ ತುಲಾ ರಾಶಿಯವರು ಅಮಾವಾಸ್ಯೆಯಂದು ಅಕ್ಕಿಯನ್ನು ದಾನ ಮಾಡುವುದು ಉತ್ತಮ.
ವೃಶ್ಚಿಕ ರಾಶಿ
ವೃಶ್ಚಿಕ ರಾಶಿಯ 5ನೇ ಮನೆಯಲ್ಲಿ ಶನಿ ಸಂಚಾರ ಮಾಡುತ್ತಿರುವುದರಿಂದ ಪಿತೃದೋಷ ಇದೆ. ಹೀಗಾಗಿ ಭೀಮನ ಅಮಾವಾಸ್ಯೆಯಂದು ವೃಶ್ಚಿಕ ರಾಶಿಯವರು ದಾನದ ಮೂಲಕ ಪಿತೃ ದೋಷವನ್ನು ಕಡಿಮೆ ಮಾಡಿಕೊಂಡರೆ ಒಳ್ಳೆಯದು. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ನೀವು ಬೆಲ್ಲವನ್ನು ದಾನ ಮಾಡುವುದು ಸೂಕ್ತವಾಗಿದೆ.
ಧನಸ್ಸು ರಾಶಿ
ಧನಸ್ಸು ರಾಶಿಯ 9ನೇ ಮನೆಯಲ್ಲಿ ಕೇತು ಇದ್ದಾನೆ. ಈ ಸ್ಥಾನ ಪಿತೃ ದೋಷವನ್ನು ಸೂಚಿಸುತ್ತದೆ. ಆದ್ದರಿಂದ ಧನಸ್ಸು ರಾಶಿಯವರು ಭೀಮನ ಅಮಾವಾಸ್ಯೆಯಂದು ದಾನ ಮಾಡುವುದರಿಂದ ಪಿತೃ ದೋಷದ ಪರಿಣಾಮಗಳನ್ನು ಕಡಿಮೆ ಮಾಡಿಕೊಳ್ಳಬಹುದು. ಪಿತೃ ದೋಷವನ್ನು ನಿವಾರಿಸಿಕೊಳ್ಳಲು ಜುಲೈ 24 ಗುರುವಾರದಂದು ದೇವರಿಗೆ ಅರಿಶಿಣವನ್ನು ಅರ್ಪಿಸಿ ನಂತರ ಅದನ್ನು ಕನಿಷ್ಟ ಐದು ಜನರಿಗೆ ನೀಡಿ. ಇದು ಪಿತೃ ದೋಷವನ್ನು ಕಡಿಮೆ ಮಾಡುತ್ತದೆ.
ಮಕರ ರಾಶಿ
ಮಕರ ರಾಶಿಯವರು ಭೀಮನ ಅಮಾವಾಸ್ಯೆಯಂದು ಶ್ರಾದ್ಧ ಮತ್ತು ತರ್ಪಣ ಮಾಡಬೇಕು. ಪಿತೃ ಫೋಟೋಗಳಿಗೆ ಪೂಜೆ ಸಲ್ಲಿಸಿ ಬಡವರಿಗೆ ದಾನ ಮಾಡಿದರೆ ಶುಭ ಫಲಗಳನ್ನು ಪಡೆಯಬಹುದು. ಈ ದಿನ ಮಕರ ರಾಶಿಯ ಜನರು ಸಾಸಿವೆ ಎಣ್ಣೆಯನ್ನು ದಾನ ಮಾಡುವುದು ಒಳ್ಳೆಯದು.
ಕುಂಭ ರಾಶಿ
ಕುಂಭ ರಾಶಿಯವರು ಪೂರ್ವಜರ ಆಶೀರ್ವಾದವನ್ನು ಪಡೆಯಲು ಅರಳಿ ಮರದ ಕೆಳಗೆ ದೀಪ ಹಚ್ಚಿ, ನೆರಳು ಗಿಡಗಳನ್ನು ನೆಡಬೇಕು. ಜೊತೆಗೆ ಕರಿಬೇವನ್ನು ದಾನ ಮಾಡುವುದು ಉತ್ತಮ. ಇದರಿಂದ ವೃತ್ತಿಯಲ್ಲಿನ ಅಡೆತಡೆಗಳು ದೂರವಾಗುತ್ತವೆ. ಜೊತೆಗೆ ಪಿತೃ ದೋಷವೂ ನಿವಾರಣೆಯಾಗಲಿದೆ.
ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ವಿದ್ವಾನ್ ವಿದ್ಯಾಧರ್ ತಂತ್ರಿ ಜ್ಯೋತಿಷ್ಯರ ಮೊಬೈಲ್ ಸಂಖ್ಯೆ 9686268564 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ. ನಿಮ್ಮ ಸಮಸ್ಯೆಗಳಾದ ಆರೋಗ್ಯ, ಸಂತಾನ, ಸಾಲದ ಬಾಧೆ, ಪ್ರೀತಿಯಲ್ಲಿ ನಂಬಿ ಮೋಸ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ, ದೃಷ್ಟಿ ದೋಷ, ಮನೆಯಲ್ಲಿ ದಟ್ಟದರಿದ್ರ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬದ ಕಷ್ಟ, ಹಣಕಾಸಿನ ಅಡಚಣೆ, ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಲು ಈಗಲೇ ಕರೆ ಮಾಡಿ 9686268564.
ಮೀನ ರಾಶಿ
ಮೀನ ರಾಶಿಯ ಮೊದಲ ಮನೆಯಲ್ಲಿ ಶನಿ ಹಾಗೂ 6ನೇ ಮನೆಯಲ್ಲಿ ಕೇತು ಸಂಚಾರ ಮಾಡುತ್ತಿದೆ. ಗ್ರಹಗಳ ಈ ಸ್ಥಾನಗಳು ಪಿತೃದೋಷವನ್ನು ಸೂಚಿಸುತ್ತವೆ. ಹೀಗಾಗಿ ಮೀನ ರಾಶಿಯವರು ಭೀಮನ ಅಮಾವಾಸ್ಯೆಯಂದು ಸಿಹಿಯಾದ ಹಳದಿ ಹಣ್ಣುಗಳನ್ನು ದಾನ ಮಾಡುವುದು ಉತ್ತಮ. ಇದರಿಂದ ಪೂರ್ವಜರ ಆಶೀರ್ವಾದದಿಂದ ಇಷ್ಟಾರ್ಥಗಳು ನೆರವೇರಲಿವೆ.