Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

BREAKING : ಏರ್ ಇಂಡಿಯಾ ವಿಮಾನ ದುರಂತ ; ಗುಜರಾತ್ ಮಾಜಿ ಸಿಎಂ ‘ವಿಜಯ್ ರೂಪಾನಿ’ ಸಾವು |Plane Crash

12/06/2025 5:54 PM

BREAKING : ಅಹಮದಾಬಾದ್ ವಿಮಾನ ದುರಂತ ; ಎಲ್ಲಾ 242 ಜನರು ದುರ್ಮರಣ |Plane Crash

12/06/2025 5:52 PM

ಅಹಮದಾಬಾದ್ ಏರ್ ಪೋರ್ಟ್ ಬಳಿ ವಿಮಾನ ಪತನ: ವಿಮಾನದಲ್ಲಿದ್ದ ಎಲ್ಲಾ 242 ಪ್ರಯಾಣಿಕರು ದುರ್ಮರಣ

12/06/2025 5:51 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಇಂದು ಮೇ.2025ರ ನೈರುತ್ಯ ರೈಲ್ವೆಯ ಪ್ರಮುಖ ಸಾಧನೆ, ಸೇವೆ, ಆದಾಯ ಮತ್ತು ಸುರಕ್ಷತೆಯ ಪ್ರಗತಿ ರಿಪೋರ್ಟ್
KARNATAKA

ಇಂದು ಮೇ.2025ರ ನೈರುತ್ಯ ರೈಲ್ವೆಯ ಪ್ರಮುಖ ಸಾಧನೆ, ಸೇವೆ, ಆದಾಯ ಮತ್ತು ಸುರಕ್ಷತೆಯ ಪ್ರಗತಿ ರಿಪೋರ್ಟ್

By kannadanewsnow0911/06/2025 2:48 PM

ಬೆಂಗಳೂರು: ನೈಋತ್ಯ ರೈಲ್ವೆಯು ಮೇ 2025 ರಲ್ಲಿ ಪ್ರಯಾಣಿಕರ ಸೇವೆ, ಡಿಜಿಟಲ್ ನವೀನತೆ ಮತ್ತು ಆದಾಯದಲ್ಲಿ ಪ್ರಗತಿಯನ್ನು ದಾಖಲಿಸಿದ್ದು, ಗಮನಾರ್ಹ ಸಾಧನೆಗಳೊಂದಿಗೆ ಹರ್ಷ ವ್ಯಕ್ತ ಪಡಿಸಿದೆ.

ಈ ಕುರಿತಂತೆ ಹುಬ್ಬಳ್ಳಿಯ ನೈರುತ್ಯ ರೈಲ್ವೆಯ ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಡಾ.ಮಂಜುನಾಥ್ ಕನಮಡಿ ಅವರು ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.

ಪ್ರಯಾಣಿಕರ ಸೌಲಭ್ಯಗಳಲ್ಲಿ ಸುಧಾರಣೆ:

ಹುಬ್ಬಳ್ಳಿ ವಿಭಾಗದಲ್ಲಿ ಹೊಸ “ಮಾರ್ಗದರ್ಶಕ್ ಡಿಜಿಟಲ್ ನಕ್ಷೆ ಮತ್ತು ಸಂಚರಣೆ ವ್ಯವಸ್ಥೆ” ಪರಿಚಯಿಸಲಾಗಿದೆ. ಹುಬ್ಬಳ್ಳಿ (2) ಮತ್ತು ಮೈಸೂರು (4) ನಿಲ್ದಾಣಗಳಲ್ಲಿ ಒಟ್ಟು ಆರು ಹೊಸ ಸ್ವಯಂಚಾಲಿತ ಟಿಕೆಟ್ ಮಾರಾಟ ಯಂತ್ರಗಳನ್ನು (ATVM) ಸ್ಥಾಪಿಸಲಾಗಿದೆ. ಪಾರ್ಕಿಂಗ್ ಮತ್ತು ರೇಡಿಯೋ ಟ್ಯಾಕ್ಸಿಗಳ ಸೇವೆಗಾಗಿ ಹೊಸ ಒಪ್ಪಂದಗಳನ್ನು ಕೈಗೊಳ್ಳಲಾಯಿತು: ಎಸ್‌ಎಂವಿಬಿಯಲ್ಲಿ ಪ್ರವೇಶ ನಿಯಂತ್ರಿತ ಪಾರ್ಕಿಂಗ್ ಸೇವೆಗೆ ₹69.40 ಲಕ್ಷ ಮತ್ತು ಹುಬ್ಬಳ್ಳಿಯಲ್ಲಿ ₹56.00 ಲಕ್ಷಗಳ ಒಪ್ಪಂದಗಳನ್ನು ಮಾಡಲಾಯಿತು. ಮೈಸೂರಿನಲ್ಲಿ ಮೊಬೈಲ್ ಪರಿಕರಗಳ ಕಿಯೋಸ್ಕ್‌ಗೆ ₹30.90 ಲಕ್ಷ ಮತ್ತು ಕೆಎಸ್‌ಆರ್ ಬೆಂಗಳೂರು ನಗರದಲ್ಲಿ ಹವಾನಿಯಂತ್ರಿತ ಮಲ್ಟಿಕ್ಯೂಸಿನ್ ಕೋಚ್ ರೆಸ್ಟೋರೆಂಟ್‌ಗೆ ₹215.46 ಲಕ್ಷಗಳ ವಾಣಿಜ್ಯ ಒಪ್ಪಂದಗಳನ್ನು ಅಂತಿಮಗೊಳಿಸಲ್ಪಟ್ಟಿತು.

ಆದಾಯದಲ್ಲಿ ಪ್ರಮುಖ ಬೆಳವಣಿಗೆ:

ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ, ನೈಋತ್ಯ ರೈಲ್ವೆಯ ಒಟ್ಟು ಆದಾಯವು ₹642 ಕೋಟಿಯಿಂದ ₹780 ಕೋಟಿಗಳಿಗೆ ತಲುಪಿದ್ದುಇದು ಗಮನಾರ್ಹ ಪ್ರಗತಿಯನ್ನು ಸೂಚಿಸುತ್ತದೆ. ಈ ಅವಧಿಯಲ್ಲಿ ಸರಕು ಸಾಗಣೆ ಆದಾಯದಲ್ಲಿ ಶೇ. 36.91 ರಷ್ಟು ಹೆಚ್ಚಳವಾಗಿದ್ದು, ₹459.43 ಕೋಟಿಗಳನ್ನು ತಲುಪಿದೆ. ಟಿಕೆಟ್ ಪರಿಶೀಲನೆ ಮೂಲಕ ₹6.57 ಕೋಟಿ ಆದಾಯವನ್ನು ಗಳಿಸಿದ್ದು, ಇದು ಶೇ. 33ರಷ್ಟು ಏರಿಕೆಯನ್ನುಕಂಡಿದೆ. ಪಾರ್ಸೆಲ್ ಸೇವೆಗಳ ಮೂಲಕ ಆದಾಯವು ₹14.84 ಕೋಟಿಗಳಿಗೆ ತಲುಪಿದ್ದು, ಶೇ. 11.66ರಷ್ಟು ಹೆಚ್ಚಳವಾಗಿದೆ. ಆನ್‌ಲೈನ್ ಪಾವತಿ ವ್ಯವಸ್ಥೆಯು ₹102.97 ಕೋಟಿ ಮೌಲ್ಯದ ಸರಕು ವಹಿವಾಟುಗಳನ್ನು ಸುಗಮಗೊಳಿಸಿದ್ದು, 100% ಡಿಜಿಟಲ್ ಪಾವತಿಗಳನ್ನು ಸಾಧಿಸಿದೆ. ಜೊತೆಗೆ, ಮೊಬೈಲ್ ಘಟಕ ನಿರ್ವಹಣೆಯ ಉದ್ದೇಶಕ್ಕಾಗಿ ಐಆರ್‌ಸಿಟಿಸಿ ₹18.63 ಕೋಟಿಗಳ ನೆರವನ್ನು ಒದಗಿಸಿದೆ.

ಸರಕು ಸಾಗಣೆ ಮತ್ತು ಲೋಡಿಂಗ್ ಮೈಲಿಗಲ್ಲುಗಳು:

ಮೈಸೂರು ವಿಭಾಗವು 22,230 ನೆಸ್ಲೆ ಉತ್ಪನ್ನ ಪ್ಯಾಕೇಜ್‌ಗಳೊಂದಿಗೆ ಪಾರ್ಸೆಲ್ ರೈಲನ್ನು ಲೋಡ್ ಮಾಡಿ ₹22.27 ಲಕ್ಷಗಳ ಆದಾಯ ಗಳಿಸಿತು. ಹುಬ್ಬಳ್ಳಿ ವಿಭಾಗವು ಎರಡು ಮೊಲಾಸಸ್ ರೇಕ್‌ಗಳನ್ನು ಲೋಡ್ ಮಾಡುವ ಮೂಲಕ ₹1.20 ಕೋಟಿ ಗಳಿಸಲಾಯಿತು. ಆಟೋಮೊಬೈಲ್ ಲೋಡಿಂಗ್ ಮೇ 2024ಕ್ಕೆ ಹೋಲಿಸಿದರೆ 44 ರೇಕ್‌ಗಳಿಂದ ಮೇ 2025ರಲ್ಲಿ 58 ರೇಕ್‌ಗಳಿಗೆ (1464 ವ್ಯಾಗನ್‌ಗಳು) ಹೆಚ್ಚಾಗಿ ₹9.01 ಕೋಟಿಗಳಿಂದ ₹11.52 ಕೋಟಿಗಳ ಆದಾಯ ಗಳಿಸಿತು. ಜಿ-ಸ್ಲ್ಯಾಗ್, ಸಕ್ಕರೆ ಮತ್ತು ರಸಗೊಬ್ಬರವನ್ನು ಹೊಸ ಸರಕುಗಳಾಗಿ ಸೇರಿಸಲಾಯಿತು.

ಕಾರ್ಯಾಚರಣೆ ಮತ್ತು ಮೂಲಸೌಕರ್ಯ ಅಭಿವೃದ್ಧಿ:

ಪ್ರಯಾಣಿಕರ ಸಂಖ್ಯೆ ಶೇ. 3.58ರಷ್ಟು ಹೆಚ್ಚಾಗಿ 15.33 ಮಿಲಿಯನ್‌ಗಳಿಗೆ ತಲುಪಿ ಇದರಿಂದ 263 ವಿಶೇಷ ರೈಲುಗಳ ಸೇವೆ ನೀಡಲಾಯಿತು. ಮೇ 22, 2025 ರಂದು, ಗೌರವಾನ್ವಿತ ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರು ಅಮೃತ್ ಭಾರತ್ ನಿಲ್ದಾಣ ಯೋಜನೆಯಡಿಯಲ್ಲಿ ಮುನಿರಾಬಾದ್, ಬಾಗಲಕೋಟೆ, ಗೋಕಾಕ್ ರೋಡ್, ಧಾರವಾಡ ಮತ್ತು ಗದಗ ನಿಲ್ದಾಣಗಳನ್ನು ಉದ್ಘಾಟಿಸಿದರು. ಮೇ 15, 2025 ರಂದು, ಮಾನ್ಯ ರೈಲ್ವೆ ಮತ್ತು ಜಲಶಕ್ತಿ ರಾಜ್ಯ ಸಚಿವ ಶ್ರೀ ವಿ. ಸೋಮಣ್ಣನವರು ತುಮಕೂರು–ಚಿತ್ರದುರ್ಗ–ದಾವಣಗೆರೆ ಮಾರ್ಗವನ್ನು ಪರಿಶೀಲಿಸಿದರು ಮತ್ತು ಗದಗ–ವಾಡಿ ಹೊಸ ಮಾರ್ಗದ ತಳಕಲ್–ಕುಷ್ಟಗಿ ಮಾರ್ಗವನ್ನು ಉದ್ಘಾಟಿಸಿದರು.

ಸುರಕ್ಷತೆ ಮತ್ತು ಗ್ರಾಹಕ ಸೇವೆ:

ಮೇ 2024ಕ್ಕೆ ಹೋಲಿಸಿದರೆ “ರೈಲ್ ಮದದ್” ದೂರುಗಳು ಶೇ. 30.29ರಷ್ಟು ಕಡಿಮೆಯಾದವು – ಇದು ಸುಧಾರಿತ ಗ್ರಾಹಕ ತೃಪ್ತಿಯನ್ನು ಸೂಚಿಸುತ್ತದೆ. ಮೇ 16, 2025ರಂದು ಅರಸಿಕೆರೆಯಲ್ಲಿ ಬೆಂಕಿಯ ಅಪಾಯ ನಿವಾರಣೆಗೆ 183 ಸುರಕ್ಷತಾ ತಪಾಸಣೆ ಮತ್ತು ಅಣಕು ಭದ್ರತಾ ಅಭ್ಯಾಸಗಳನ್ನು ಕೈಗೊಳ್ಳಲಾಯಿತು.

ನೈಋತ್ಯ ರೈಲ್ವೆ ತನ್ನ ಸೇವೆಗಳನ್ನು ಉತ್ತಮಗೊಳಿಸಲು, ಕಾರ್ಯಾಚರಣೆಯ ಗುಣಮಟ್ಟವನ್ನು ಹೆಚ್ಚಿಸಲು ಮತ್ತು ಸುಸ್ಥಿರ ಅಭಿವೃದ್ಧಿಗೆ ನಿರಂತರವಾಗಿ ಶ್ರಮಿಸುತ್ತಿದೆ.

ಗಮನಿಸಿ: ಈ ರೈಲುಗಳು ಡೋರ್ನಹಳ್ಳಿ ರೈಲು ನಿಲ್ದಾಣದಲ್ಲಿ ತಾತ್ಕಾಲಿಕ ನಿಲುಗಡೆ

ಕೋವಿಡ್-19 ಉಲ್ಬಣ: ಪ್ರಧಾನಿ ಮೋದಿ ಭೇಟಿ ಮಾಡುವ ಮೊದಲು ಸಚಿವರಿಗೆ RT-PCR ಪರೀಕ್ಷೆ ಕಡ್ಡಾಯ:

Share. Facebook Twitter LinkedIn WhatsApp Email

Related Posts

ಉಜ್ಜೀವನ್‌ ಬ್ಯಾಂಕ್‌ ಗ್ರಾಹಕರಿಗೆ ಸಿಹಿ ಸುದ್ದಿ: ಇಲ್ಲಿ ಖಾತೆ ಹೊಂದಿದ್ದರೆ ನಿಮಗೆ ಸಿಗಲಿದೆ ರಿವಾಡ್ಸ್‌ ಪಾಯಿಂಟ್ಸ್‌

12/06/2025 5:10 PM1 Min Read

ನಮಗೆ ಜಾತಿ ಗಣತಿಯಲ್ಲಿ ರಾಜಕೀಯ ಬೇಡ, ಸಾಮಾಜಿಕ ನ್ಯಾಯ ಬೇಕು: ಡಿಸಿಎಂ ಡಿ.ಕೆ.ಶಿವಕುಮಾರ್

12/06/2025 5:00 PM2 Mins Read

BIG NEWS: ಹಿಂದುಳಿದ ವರ್ಗಗಳ ಸಾಮಾಜಿಕ, ಶೈಕ್ಷಣಿಕ ಮರು ಸಮೀಕ್ಷೆಗೆ ಸಚಿವ ಸಂಪುಟ ತೀರ್ಮಾನ: ಸಿಎಂ ಸಿದ್ದರಾಮಯ್ಯ

12/06/2025 4:57 PM4 Mins Read
Recent News

BREAKING : ಏರ್ ಇಂಡಿಯಾ ವಿಮಾನ ದುರಂತ ; ಗುಜರಾತ್ ಮಾಜಿ ಸಿಎಂ ‘ವಿಜಯ್ ರೂಪಾನಿ’ ಸಾವು |Plane Crash

12/06/2025 5:54 PM

BREAKING : ಅಹಮದಾಬಾದ್ ವಿಮಾನ ದುರಂತ ; ಎಲ್ಲಾ 242 ಜನರು ದುರ್ಮರಣ |Plane Crash

12/06/2025 5:52 PM

ಅಹಮದಾಬಾದ್ ಏರ್ ಪೋರ್ಟ್ ಬಳಿ ವಿಮಾನ ಪತನ: ವಿಮಾನದಲ್ಲಿದ್ದ ಎಲ್ಲಾ 242 ಪ್ರಯಾಣಿಕರು ದುರ್ಮರಣ

12/06/2025 5:51 PM

BIG BREAKING: ಅಹಮದಾಬಾದ್ ವಿಮಾನ ದುರಂತದಲ್ಲಿ 242 ಮಂದಿಯೂ ದುರ್ಮರಣ

12/06/2025 5:40 PM
State News
KARNATAKA

ಉಜ್ಜೀವನ್‌ ಬ್ಯಾಂಕ್‌ ಗ್ರಾಹಕರಿಗೆ ಸಿಹಿ ಸುದ್ದಿ: ಇಲ್ಲಿ ಖಾತೆ ಹೊಂದಿದ್ದರೆ ನಿಮಗೆ ಸಿಗಲಿದೆ ರಿವಾಡ್ಸ್‌ ಪಾಯಿಂಟ್ಸ್‌

By kannadanewsnow0912/06/2025 5:10 PM KARNATAKA 1 Min Read

ಬೆಂಗಳೂರು: ಉಜ್ಜಿವಾನ್ ಸ್ಮಾಲ್ ಫೈನಾನ್ಸ್ ಬ್ಯಾಂಕ್ನಲ್ಲಿ ಖಾತೆ ಹೊಂದಿರುವ ಗ್ರಾಹಕರಿಗೆ “ಉಜ್ಜೀವನ್‌ ರಿವಾರ್ಡ್‌” ನೀಡುವುದಾಗಿ ಸಂಸ್ಥೆ ಘೊಷಣೆ ಮಾಡಿದೆ. ಈ…

ನಮಗೆ ಜಾತಿ ಗಣತಿಯಲ್ಲಿ ರಾಜಕೀಯ ಬೇಡ, ಸಾಮಾಜಿಕ ನ್ಯಾಯ ಬೇಕು: ಡಿಸಿಎಂ ಡಿ.ಕೆ.ಶಿವಕುಮಾರ್

12/06/2025 5:00 PM

BIG NEWS: ಹಿಂದುಳಿದ ವರ್ಗಗಳ ಸಾಮಾಜಿಕ, ಶೈಕ್ಷಣಿಕ ಮರು ಸಮೀಕ್ಷೆಗೆ ಸಚಿವ ಸಂಪುಟ ತೀರ್ಮಾನ: ಸಿಎಂ ಸಿದ್ದರಾಮಯ್ಯ

12/06/2025 4:57 PM

ಮರಾಠ ಸಮುದಾಯದವರಿಗೆ ಗುಡ್ ನ್ಯೂಸ್: ಅಭಿವೃದ್ಧಿ ನಿಗಮದಿಂದ ವಿವಿಧ ಯೋಜನೆಗಳಿಗೆ ಅರ್ಜಿ ಆಹ್ವಾನ

12/06/2025 4:53 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.