Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಮೆಕ್ಸಿಕನ್ ನೌಕಾಪಡೆಯ ತರಬೇತಿ ಹಡಗು ಸೇತುವೆಗೆ ಡಿಕ್ಕಿ : ಹಲವರಿಗೆ ಗಾಯ | ship hits Brooklyn Bridge

18/05/2025 8:30 AM

‘ನಮ್ಮ ಸೇನೆ 100 ಕಿ.ಮೀವರೆಗೆ ಹೋಗಿ ಭಯೋತ್ಪಾದಕ ಶಿಬಿರಗಳನ್ನು ನಾಶಪಡಿಸಿದೆ’: ಅಮಿತ್ ಶಾ

18/05/2025 8:25 AM

SHOCKING : ಬೆಚ್ಚಿ ಬೀಳಿಸುವ ಘಟನೆ : 3 ದಿನದ ಮಗುವನ್ನು ರಕ್ಷಿಸಿ, ಸಾಕಿದ ಮಹಿಳೆಯನ್ನೇ ಹತ್ಯೆಗೈದ ‘ದತ್ತು ಪುತ್ರಿ’.!

18/05/2025 8:21 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಯೋಗ ಬಲ್ಲವರಿಗೆ ರೋಗವಿಲ್ಲ: ಚಿತ್ರದುರ್ಗದ ಬಸವೇಶ್ವರ ಆಸ್ಪತ್ರೆ ವ್ಯವಸ್ಥಾಪಕ ಸತ್ಯನಾರಾಯಣ್
KARNATAKA

ಯೋಗ ಬಲ್ಲವರಿಗೆ ರೋಗವಿಲ್ಲ: ಚಿತ್ರದುರ್ಗದ ಬಸವೇಶ್ವರ ಆಸ್ಪತ್ರೆ ವ್ಯವಸ್ಥಾಪಕ ಸತ್ಯನಾರಾಯಣ್

By kannadanewsnow0921/05/2024 5:58 PM

ಚಿತ್ರದುರ್ಗ: ನಿತ್ಯ ಯೋಗ ಮಾಡುವವರಿಗೆ ಯಾವುದೇ ರೋಗ ಬರುವುದಿಲ್ಲವೆಂದು ಬಸವೇಶ್ವರ ಆಸ್ಪತ್ರೆಯ ವ್ಯವಸ್ಥಾಪಕರಾದ ಸತ್ಯನಾರಾಯಣ್ ಹೇಳಿದರು.

ಚಿತ್ರದುರ್ಗದ ಐಯುಡಿಪಿ ಬಡಾವಣೆಯ ನಿಸರ್ಗ ಯೋಗ,ಕ್ರೀಡಾ ಮತ್ತು ಸಾಂಸ್ಕೃತಿಕ ಕೇಂದ್ರವನ್ನು ಸಸಿಗೆ ನೀರೆರೆಯುವ ಮೂಲಕ ಉದ್ಘಾಟಿಸಿದ ಅವರು, ಚಿತ್ರದುರ್ಗ ನಗರದ ಹೊರವಲಯದಲ್ಲಿರುವ ಜಿಸಿಬಿ ಬಸಣ್ಣ‌ಅವರ ನರ್ಸರಿಯಲ್ಲಿ ನಡೆದ ಉದ್ಘಾಟನಾ ಸಮಾರಂಭ ಉದ್ದೇಶಿಸಿ ಮಾತನಾಡಿದರು.

ಕಳೆದ ಹತ್ತು ವರ್ಷಗಳ ಹಿಂದೆ ತಾವು ಸಹ ದೈತ್ಯ ದೇಹವನ್ನು ಹೊಂದಿದ್ದು,ನಿರಂತರ ವ್ಯಾಯಾಮ, ವಾಕಿಂಗ್ ಹಾಗು ಆಹಾರ ಬಳಕೆಯಲ್ಲಿ ನಿಯಮವನ್ನು ಪಾಲಿಸುವ ಮೂಲಕ ದೇಹದ ತೂಕವನ್ನು ಇಳಿಸಿದ್ದೇನೆ.ಅಂದು ದಡೂತಿ ದೇಹದಿಂದ ತುಂಭಾ ಹಿಂಸೆ ಅನುಭವಿಸಿದ್ದೆನು. ಆಗ ಸ್ವಯಂ ನಿರ್ಧಾರದಿಂದ ವ್ಯಾಯಾಮ ಹಾಗು ಆಹಾರದಲ್ಲಿ ಕಠಿಣ ಪಾಲನೆ ಮಾಡುವ ಮೂಲಕ ತಮ್ಮ ಎತ್ತರಕ್ಕೆ ತಕ್ಕಂತೆ ತೂಕವನ್ನು ಮಿತವಾಗಿಸುವಲ್ಲಿ ಯಶಸ್ವಿಯಾಗಿದ್ದೇನೆ.ಹೀಗಾಗಿ ನನ್ನ ಸಾಧನೆಯ ಬಗ್ಹೆ ನನಗೆ ಹೆಮ್ಮೆ ಇದೆ ಎಂದು ಸಂತಸ ವ್ಯಕ್ತಪಡಿಸಿದರು.

ಇನ್ನು ಇದೇ ವೇಳೆ ಮಾತನಾಡಿದ ಯೋಗ ಕೇಂದ್ರದ ಯೋಗಗುರುಗಳಾದ ಶಿವಲಿಂಗಪ್ಪ ಅವರು,ಸತತ ಹತ್ತು‌ವರ್ಷಗಳ ಪರಿಶ್ರಮದಿಂದ ನಮ್ಮ ಯೋಗ ಕೇಂದ್ರ ಹೆಮ್ಮರವಾಗಿ ಬೆಳದಿದೆ. ಇಂದು ನಿಸರ್ಗದ ಮಡಿಲಲ್ಲಿ ನೈಸರ್ಗಿಕವಾಗಿ ಬೆಳೆದು‌ನಿಂತಿದೆ.ಇದಕ್ಕೆಲ್ಲ ಬೆನ್ನೆಲುಬಾಗಿ ನಿಂತಿದ್ದ ಪತಾಂಜಲಿ ಯೋಗ ಸಂಸ್ಥೆಯ ಮಾಜಿ ಜಿಲ್ಲಾಧ್ಯಕ್ಷ ದಿವಂಗತ ಮಲ್ಲಿಕಾರ್ಜುನಪ್ಪ ಅವರು ಸ್ಪೂರ್ತಿ ಎಂದು ಅವರನ್ನು ಸ್ಮರಿಸಿದರು.

ಬಳಿಕ ಮಾತನಾಡಿದ ಯೋಗ ಕೇಂದ್ರದ ಅಧ್ಯಕ್ಷ ರಾಮಪ್ಪ ಅವರು, ಈ ನಿಸರ್ಗ ಯೋಗ ಕೇಂದ್ರವೊಂದು ಕುಟುಂಬದಂತೆ.ಎಲ್ಲರು ತಮ್ಮ ಆರೋಗ್ಯ ರಕ್ಷಣೆಗಾಗಿ ನಿತ್ಯ ಯೋಗಾಭ್ಯಾಸ ಮಾಡುತ್ತೇವೆ.ಅಲ್ಲದೇ ನಮ್ಮ ಯೋಗ ಕೇಂದ್ರದಲ್ಲಿನ ಎಲ್ಲಾ‌ಸದಸ್ಯರ ಕಷ್ಟ ಸುಖದಲ್ಲಿ ಭಾಗಿಯಾಗುತ್ತೇವೆ.ನಮ್ಮ‌ಸದಸ್ಯರು‌ ಯಾರಾದರೂ ಒಂದು ದಿನ ಯೋಗಾಭ್ಯಾಸಕ್ಕೆ ಗೈರಾದರೆ ಅವರ ಬಗ್ಗೆ ವಿಚಾರಿಸುತ್ತೇವೆ.ಆಗ ಅವರಿಗೆ ಏನಾದರು ಸಾಮಾಜಿಕವಾಗಿ,ಕೌಟಂಬಿಕವಾಗಿ ಅಥವಾ ಆರೋಗ್ಯದ ವಿಚಾರದಲ್ಲಿ ಸಮಸ್ಯೆ ಆಗಿದ್ದರೆ ತಕ್ಷಣ ಅವರ ಸಮಸ್ಯೆ ನಿವಾರಿಸಲು ಮುಂದಾಗುತ್ತೇವೆ.

ನಮ್ಮ ಯೋಗ ಬಂಧುಗಳಲ್ಲಿ ಯಾವುದೇ ತಾರತಮ್ಯ ಇಲ್ಲ.ಜಾತಿಭೇಧವಿಲ್ಲ.ಪರಸ್ಪರ ಎಲ್ಲರಲ್ಲೂ‌ ಅನ್ಯೋನ್ಯತೆ ಮನೆ ಮಾಡಿದೆ ಎಂದರು.ಇದೇ ವೇಳೆ ಯೋಗ ಕೇಂದ್ರದ ಬಗ್ಹೆ ತಮ್ಮ ಅಭಿಪ್ರಾಯ ತಿಳಿಸಿದ ಯೋಗ ಪಟುಗಳಾದ ರವಿಶಂಕರ್,ಪುಷ್ಪ ಹಾಗು ದಿವ್ಯ ಅವರು, ನಿಸರ್ಗ ಯೋಗ ಕೇಂದ್ರದಿಂದ ನಮ್ಮಲ್ಲಿನ ಸೋಮಾರಿತನ ನಿರ್ಮೂಲನೆ ಆಗಿದೆ.ಇಲ್ಲಿನ ಸದಸ್ಯರೆಲ್ಲರು ಒಂದೇ ಕುಟುಂಬದಂತೆ ಪ್ರೀತಿ,ಬಾಂದವ್ಯದಿಂದ ಇರುತ್ತೇವೆ.ಹೀಗಾಗಿ ಒಂದು‌ದಿನ ತಪ್ಪದೇ‌ಯೋಗಾಭ್ಯಾಸ ಮಾಡುತ್ತೇವೆ.

ಇದರಿಂದಾಗಿ ನಮ್ಮ‌ಲ್ಲಿನ ಆರೋಗ್ಯದ ಸಮಸ್ಯೆ ನಿವಾರಣೆ ಆಗಿದೆ.ಮನಸಿಗೆ ಸಂತೋಷವಿದೆ.ದೇಹಕ್ಕೆ ಉಲ್ಲಾಸವಿದ್ದು,ಈ ಯೋಗಕೇಂದ್ರ ಬಾಂದವ್ಯದ ಬೆಸುಗೆ ಎನಿಸಿದೆ ಎಂದರು.ಈ ವೇಳೆ ಕೇಂದ್ರವನ್ನು ಉದ್ಗಾಟಿಸಿದ ಸತ್ಯನಾರಾಯಣ,ಯೋಗಗುರು ಶಿವಲಿಂಗಪ್ಪ,ಅಧ್ಯಕ್ಷ ರಾಮಪ್ಪಹಾಗು ಹಿರಿಯ ಯೋಗಪಟು ರವಿಶಂಕರ್ ಅವರನ್ನು ಯೋಗಪಟುಗಳು ಗೌರವಿಸಿ,ಅಭಿನಂದಿಸಿದರು.

ಯೋಗ ಕೇಂದ್ರದ ಉದ್ಘಾಟನೆ ಬಳಿಕ ಸಾಂಸ್ಕೃತಿಕ ಕಾರ್ಯಕ್ರಮಗಳು ನೆರವೇರಿದ್ದು,ಕೋಟೆನಾಡಿನ ಜೂನಿಯರ್ ವಿಜಯ್ ಪ್ರಕಾಶ್ ಖ್ಯಾತಿಯ ಸತ್ಯನಾರಾಯಣ ಅವರು ಗೀತ ಗಾಯನದ ಮೂಲಕ ಎಲ್ಲರ ಗಮನ ಸೆಳೆದರು.ಈ ವೇಳೆ ಯೋಗ ಬಂಧುಗಳು ಸಹ ಗೀತೆಗಳ ರಸದೌತಣ ಸವಿಯುತ್ತಾ,ಹಾಡುತ್ತಾ ಕುಣಿದು ಕುಪ್ಪಳಿಸಿದರು.ನಿಸರ್ಗದ‌ಮಡಿಲಲ್ಲಿ ಸಮಯದ ಅರಿವಿಲ್ಲದಂತೆ ನಡೆದ ಗೀತಗಾಯನವನ್ನು‌ ಮೈಮರೆತು ಎಂಜಾಯ್ ಮಾಡಿದರು.

ಈ ಕಾರ್ಯಕ್ರಮದಲ್ಲಿ‌ ನಿಸರ್ಗ ಯೋಗ,ಕ್ರೀಡಾ ಮತ್ತು ಸಾಂಸ್ಕೃತಿಕ ಕೇಂದ್ರದ ಪ್ರಧಾನ ಕಾರ್ಯದರ್ಶಿ ಎಸ್.ಸಿದ್ದರಾಜು ಸ್ವಾಗತಿಸಿದರು.ಯೋಗಪಟು ಶಬರಿ ಪ್ರಾರ್ಥಿಸಿದರು.ಗೌರವ ಸಲಹೆಗಾರರಾದ ಮಹಲಿಂಗಪ್ಪ‌ ನಿರೂಪಿಸಿದರು.ಖಜಾಂಚಿ‌ಯಾದ ಜಯ್ಯಣ್ಣ ವಂದಿಸಿದ್ದು,ಕಾರ್ಯಕ್ರಮದಲ್ಲಿ ಹಿರಿಯ ಯೋಗಬಂಧುಗಳಾದ ಚಿದಾನಂದ ಮೂರ್ತಿ, ನಳಿನಾ,ಹನುಮಂತಪ್ಪ,ಗೀತಮ್ಮ,ಪುಷ್ಪವತಿ‌,ಕೌಸಲ್ಯ ಮತ್ತು ಯುವ ಯೋಗಪಟುಗಳಾದ ಶಬರಿ,ಸಂಯುಕ್ತ,ದಿವ್ಯ,ಮಧುಸೂದನ್,ಅಣ್ಣೇಶ್ ಭಾಗವಹಿ‌ಸಿದ್ದರು.

20 ದಿನಗಳ ಬಳಿಕ ಹಾಸನ ಜಿಲ್ಲೆಗೆ ಎಂಟ್ರಿ ಕೊಟ್ಟ HD ರೇವಣ್ಣ: ದಾರಿಯುದ್ಧಕ್ಕೂ ಅದ್ಧೂರಿ ಸ್ವಾಗತ

ಪೆನ್ ಡ್ರೈವ್ ಮೊದಲು ತಲುಪಿದ್ದೇ ಡಿಕೆಶಿಗೆ, ತಂದುಕೊಟ್ಟಿದ್ದೇ ಚಾಲಕ ಕಾರ್ತಿಕ್: HDK ಸ್ಪೋಟಕ ಬಾಂಬ್

Share. Facebook Twitter LinkedIn WhatsApp Email

Related Posts

ALERT : `ಹೃದಯಾಘಾತ’ಕ್ಕೆ ಮುನ್ನ ದೇಹದ ಈ ಭಾಗಗಳಲ್ಲಿ ನೋವು ಕಾಣಿಸಲಿದೆ : ಇದನ್ನು ನಿರ್ಲಕ್ಷಿಸಬೇಡಿ.!

18/05/2025 8:15 AM2 Mins Read

ALERT : `ಇನ್ವರ್ಟರ್’ಗೆ ನೀರು ಹಾಕುವಾಗ ಈ ತಪ್ಪು ಮಾಡಿದ್ರೆ ಬಾಂಬ್ ನಂತೆ ಸ್ಫೋಟಗೊಳ್ಳಬಹುದು ಎಚ್ಚರ.!

18/05/2025 8:11 AM2 Mins Read

BREAKING : ರಾಯಚೂರಿನಲ್ಲಿ ಬೆಳ್ಳಂಬೆಳಗ್ಗೆ ಚಾಕುವಿನಿಂದ ಇರಿದು ಯುವಕನ ಬರ್ಬರ ಹತ್ಯೆ.!

18/05/2025 7:46 AM1 Min Read
Recent News

ಮೆಕ್ಸಿಕನ್ ನೌಕಾಪಡೆಯ ತರಬೇತಿ ಹಡಗು ಸೇತುವೆಗೆ ಡಿಕ್ಕಿ : ಹಲವರಿಗೆ ಗಾಯ | ship hits Brooklyn Bridge

18/05/2025 8:30 AM

‘ನಮ್ಮ ಸೇನೆ 100 ಕಿ.ಮೀವರೆಗೆ ಹೋಗಿ ಭಯೋತ್ಪಾದಕ ಶಿಬಿರಗಳನ್ನು ನಾಶಪಡಿಸಿದೆ’: ಅಮಿತ್ ಶಾ

18/05/2025 8:25 AM

SHOCKING : ಬೆಚ್ಚಿ ಬೀಳಿಸುವ ಘಟನೆ : 3 ದಿನದ ಮಗುವನ್ನು ರಕ್ಷಿಸಿ, ಸಾಕಿದ ಮಹಿಳೆಯನ್ನೇ ಹತ್ಯೆಗೈದ ‘ದತ್ತು ಪುತ್ರಿ’.!

18/05/2025 8:21 AM

ವಿರಾಟ್ ಕೊಹ್ಲಿಗೆ ಭಾರತ ರತ್ನ ಪ್ರಶಸ್ತಿ ನೀಡಬೇಕು: ಸುರೇಶ್ ರೈನಾ

18/05/2025 8:19 AM
State News
KARNATAKA

ALERT : `ಹೃದಯಾಘಾತ’ಕ್ಕೆ ಮುನ್ನ ದೇಹದ ಈ ಭಾಗಗಳಲ್ಲಿ ನೋವು ಕಾಣಿಸಲಿದೆ : ಇದನ್ನು ನಿರ್ಲಕ್ಷಿಸಬೇಡಿ.!

By kannadanewsnow5718/05/2025 8:15 AM KARNATAKA 2 Mins Read

ಹೃದಯಾಘಾತವು ಇದ್ದಕ್ಕಿದ್ದಂತೆ ಬರುತ್ತದೆ ಎಂದು ನಾವು ಹೆಚ್ಚಾಗಿ ಭಾವಿಸುತ್ತೇವೆ. ಯಾವುದೇ ಎಚ್ಚರಿಕೆ ಇಲ್ಲದೆ, ಆದರೆ ಸತ್ಯವೆಂದರೆ ನಮ್ಮ ದೇಹವು ಮುಂಚಿತವಾಗಿ…

ALERT : `ಇನ್ವರ್ಟರ್’ಗೆ ನೀರು ಹಾಕುವಾಗ ಈ ತಪ್ಪು ಮಾಡಿದ್ರೆ ಬಾಂಬ್ ನಂತೆ ಸ್ಫೋಟಗೊಳ್ಳಬಹುದು ಎಚ್ಚರ.!

18/05/2025 8:11 AM

BREAKING : ರಾಯಚೂರಿನಲ್ಲಿ ಬೆಳ್ಳಂಬೆಳಗ್ಗೆ ಚಾಕುವಿನಿಂದ ಇರಿದು ಯುವಕನ ಬರ್ಬರ ಹತ್ಯೆ.!

18/05/2025 7:46 AM

ಕಾರಿಡಾರ್ನಲ್ಲಿ ಶೂ ರ್ಯಾಕ್ ಇಟ್ಟುಕೊಂಡಿದ್ದಕ್ಕೆ ಬೆಂಗಳೂರು ವ್ಯಕ್ತಿಗೆ 24,000 ರೂ.ಗಳ ದಂಡ | Shoe Rack In Corridor

18/05/2025 7:34 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.