ಶಿವಮೊಗ್ಗ: ಕಾಂತಾರಾ ಚಾಪ್ಟರ್-1 ಸಿನಿಮಾ ಶೂಟಿಂಗ್ ವೇಳೆಯಲ್ಲಿ ಯಾವುದೇ ಅವಘಟ ಸಂಭವಿಸಿಲ್ಲ. ಆದರೇ ಗಾಳಿ ಮಳೆಯಿಂದ ಸೆಟ್ ಮುಗುಚಿ ಹೋಗಿದೆ ಅಷ್ಟೇ. ಯಾವ ಕಲಾವಿದರಿಗೂ ಏನೂ ಆಗಿಲ್ಲ ಎಂಬುದಾಗಿ ಹೊಂಬಾಳೆ ಫಿಲ್ಮ್ಸ್ ಸ್ಪಷ್ಟ ಪಡಿಸಿದೆ.
ಈ ಬಗ್ಗೆ ಮಾಹಿತಿ ಹಂಚಿಕೊಂಡಿರುವಂತ ಹೊಂಬಾಳೆ ಫಿಲ್ಮ್ಸ್ ನ ಎಕ್ಸಿಕ್ಯೂಟಿವ್ ಪ್ರೊಡ್ಯೂಸರ್ ಆದರ್ಶ್, ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲ್ಲೂಕಿನ ಯಡೂರು ಸಮೀಪದ ಮೇಲಿನ ಕೊಪ್ಪದ ಮಾಣಿ ಹಿನ್ನೀರಿನ ಪ್ರದೇಶದಲ್ಲಿ ಶೂಟಿಂಗ್ ವೇಳೆ ಯಾವುದೇ ಅವಘಡ ಸಂಭವಿಸಿಲ್ಲ ಎಂದರು.
ಇಂದು ಗಾಳಿ ಮಳೆಯ ಕಾರಣದಿಂದ ಸೆಟ್ ಮುಗುಚಿದೆ. ಆದರೇ ಈ ವೇಳೆಯಲ್ಲಿ ಸೆಟ್ ಹಾಕಿದಂತ ಸ್ಥಳದಿಂದ ನಾವು ತುಂಬಾ ದೂರಲ್ಲಿ ಚಿತ್ರೀಕರಣ ಮಾಡಲಾಗುತ್ತಿತ್ತು. ಹೀಗಾಗಿ ನಮ್ಮ ತಂಡದ ಯಾರಿಗೂ ಯಾವುದೇ ಅನಾಹತುವಾಗಿಲ್ಲ. ಎಲ್ಲರೂ ಸುರಕ್ಷಿತರಿರುವುದಾಗಿ ತಿಳಿಸಿದ್ದಾರೆ.
ಕಾಂತಾರಾ ಚಾಪ್ಟರ್-1 ಸಿನಿಮಾ ಚಿತ್ರೀಕರಣಕ್ಕಾಗಿ ಪೊಲೀಸ್ ಇಲಾಖೆ, ಅರಣ್ಯ ಇಲಾಖೆ, ಪಂಚಾಯ್ತಿ ಸೇರಿದಂತೆ ಸಂಬಂಧ ಪಟ್ಟಂತ ಎಲ್ಲಾ ಇಲಾಖೆಯಿಂದ ಅನುಮತಿ ಪಡೆಯಲಾಗಿದೆ ಎಂಬುದಾಗಿ ಹೇಳಿದರು.
ಬೆಂಗಳೂರು ಕಾಲ್ತುಳಿತ ದುರಂತ: ತುರ್ತು ಅಧಿವೇಶನ ಕರೆಯಲು ಪ್ರತಿಪಕ್ಷ ನಾಯಕ ಆರ್.ಅಶೋಕ್ ಆಗ್ರಹ