ಅಹಮದಾಬಾದ್ ; ಭಾರತ ಸರ್ಕಾರ ಮತ್ತು ಗುಜರಾತ್ ಸರ್ಕಾರದ ಎಲ್ಲಾ ಇಲಾಖೆಗಳು ಒಟ್ಟಾಗಿ ಪರಿಹಾರ ಮತ್ತು ರಕ್ಷಣಾ ಕಾರ್ಯದಲ್ಲಿ ತೊಡಗಿವೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದರು.
ಈ ವಿಮಾನದಲ್ಲಿ ಭಾರತ ಮತ್ತು ವಿದೇಶಗಳಿಂದ ಒಟ್ಟು 230 ಪ್ರಯಾಣಿಕರು ಮತ್ತು 12 ಸಿಬ್ಬಂದಿ ಇದ್ದರು. ಈ ಪ್ರಯಾಣಿಕರಲ್ಲಿ ಒಬ್ಬರು ಬದುಕುಳಿದಿದ್ದು, ನಾನು ಅವರನ್ನು ಭೇಟಿ ಮಾಡಿದ್ದೇನೆ. ಡಿಎನ್ಎ ಪರೀಕ್ಷೆ ಮತ್ತು ಗುರುತಿಸುವಿಕೆಯ ನಂತರವೇ ಸಾವಿನ ಸಂಖ್ಯೆಯನ್ನ ಅಧಿಕೃತವಾಗಿ ಘೋಷಿಸಬಹುದು ಎಂದು ಸಚಿವರು ಹೇಳಿದರು.
ಗುಜರಾತ್ ಸರ್ಕಾರವು ಎಲ್ಲಾ ಇಲಾಖೆಗಳಿಗೆ ಎಚ್ಚರಿಕೆ ನೀಡಿತ್ತು. ಎಲ್ಲರೂ ಒಟ್ಟಾಗಿ ಪರಿಹಾರ ಮತ್ತು ರಕ್ಷಣಾ ಕಾರ್ಯವನ್ನು ಪ್ರಾರಂಭಿಸಿದರು. ಆದರೆ ವಿಮಾನದೊಳಗೆ ಇದ್ದ ಶಾಖ ಮತ್ತು 1.25 ಲಕ್ಷ ಟನ್ ಇಂಧನದಿಂದಾಗಿ ಯಾರನ್ನೂ ಉಳಿಸುವ ಅವಕಾಶವಿರಲಿಲ್ಲ. ನಾನು ಕೂಡ ಸ್ಥಳಕ್ಕೆ ಭೇಟಿ ನೀಡಿದ್ದೇನೆ. ಎಲ್ಲರನ್ನೂ ಸ್ಥಳಾಂತರಿಸುವ ಕೆಲಸ ಬಹುತೇಕ ಪೂರ್ಣಗೊಂಡಿದೆ. ಡಿಎನ್ಎ ಮಾದರಿಗಳನ್ನ ತೆಗೆದುಕೊಳ್ಳುವ ಪ್ರಕ್ರಿಯೆಯೂ ಶೀಘ್ರದಲ್ಲೇ ಪೂರ್ಣಗೊಳ್ಳಲಿದೆ ಎಂದು ಹೇಳಿದರು.
Pained beyond words by the tragic plane crash in Ahmedabad. Disaster response forces have been quickly rushed to the crash site. Spoke with the Gujarat Chief Minister Shri Bhupendra Patel, Home Minister Shri Harsh Sanghavi, and Commissioner of Police Ahmedabad to assess the…
— Amit Shah (@AmitShah) June 12, 2025
VIDEO : ಟೇಕಾಫ್’ನಿಂದ ಪತನದವರೆಗೂ.! ವಿಮಾನ ಅಪಘಾತದ ಮತ್ತೊಂದು ಭಯಾನಕ ವಿಡಿಯೋ ಇಲ್ಲಿದೆ!