Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಆದಾಯ ತೆರಿಗೆದಾರರೇ ಗಮನಿಸಿ : ಏ.1 ರಿಂದ ಜಾರಿಗೆ ಬರಲಿದೆ ಈ 10 ಹೊಸ ನಿಯಮಗಳು |New Income tax Rules

04/03/2026 11:02 AM

ಬಿಹಾರದಲ್ಲಿ ‘ಸಂಚಲನ’; ಸಕ್ರಿಯ ರಾಜಕಾರಣಕ್ಕೆ ನಿತೀಶ್ ಕುಮಾರ್ ಪುತ್ರ ನಿಶಾಂತ್ ಎಂಟ್ರಿ!

04/03/2026 10:59 AM

BIG NEWS : ಕಳೆದ ಬಾರಿಗಿಂತ ಈ ಬಾರಿ ಶೇ.10 ರಿಂದ 15 ರಷ್ಟು ಬಜೆಟ್ ಗಾತ್ರ ಹೆಚ್ಚಳ ಸಾಧ್ಯತೆ!

04/03/2026 10:57 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಆರುಮುಗ ಪ್ರಾಮಾಣಿಕತೆ ಮೆರೆದು ನೀಡಿದ್ದ ಹಣ, ಕಳೆದುಕೊಂಡವರಿಗೆ ಹಿಂತಿರುಗಿಸಿದ ಸಾಗರ ಟೌನ್ ಪೊಲೀಸರು
KARNATAKA

ಆರುಮುಗ ಪ್ರಾಮಾಣಿಕತೆ ಮೆರೆದು ನೀಡಿದ್ದ ಹಣ, ಕಳೆದುಕೊಂಡವರಿಗೆ ಹಿಂತಿರುಗಿಸಿದ ಸಾಗರ ಟೌನ್ ಪೊಲೀಸರು

By kannadanewsnow0916/05/2025 9:23 PM

ಶಿವಮೊಗ್ಗ: ಜಿಲ್ಲೆಯ ಸಾಗರ ನಗರದಲ್ಲಿ ದಾರಿಯೊಂದರಲ್ಲಿ ರೂ.6,500 ಸಿಕ್ಕಂತ ಹಣವನ್ನು ಕಳೆದುಕೊಂಡವರಿಗೆ ನೀಡುವಂತೆ ಉಡುಪಿ ಮೂಲದ ಬೇಕರಿ ಐಟಂ ವಿತರಕ ಆರುಮುಗ ಪೊಲೀಸರಿಗೆ ನೀಡಿದ್ದರು. ಇಂತಹ ಹಣವನ್ನು ಕಳೆದುಕೊಂಡವರಿಗೆ ಸಾಗರ ಟೌನ್ ಪೊಲೀಸರು ಹಿಂದಿರುಗಿಸಿದ್ದಾರೆ.

ಇಂದು ನಿಮ್ಮ ಕನ್ನಡ ನ್ಯೂಸ್ ನೌ “ಸಾಗರದಲ್ಲಿ ಪ್ರಾಮಾಣಿಕತೆ ಮೆರೆದ ಬೇಕರಿ ಐಟಂ ವಿತರಕ: ದಾರಿಯಲ್ಲಿ ಸಿಕ್ಕ 6,500 ಪೊಲೀಸರಿಗೆ ನೀಡಿಕೆ” ಎಂಬುದಾಗಿ ಸುದ್ದಿಯೊಂದನ್ನು ಪ್ರಕಟಿಸಿತ್ತು. ಅದರಲ್ಲಿ ಸಾಗರ ಟೌನ್ ಠಾಣೆ ಪಿಎಸ್ಐ ನಾಗರಾಜು ಅವರು, ಆರುಮುಗ ಎಂಬುವರು ಉಡುಪಿಯಿಂದ ಸಾಗರದ ವಿವಿಧ ಬೇಕರಿಗಳಿಗೆ ಬೇಕರಿ ತಿನಿಸು ಸರಬರಾಜು ಮಾಡುತ್ತಾರೆ. ಇಂದು ಮಾರಿಕಾಂಬಾ ದೇವಸ್ಥಾನದ ರಸ್ತೆಯ ಜೈಹಿಂದ್ ಸಮೀಪದ ದಾರಿಯಲ್ಲಿ ರೂ.6,500 ಹಣ ಸಿಕ್ಕಿದೆ. ಅದನ್ನು ಕಂಡು ಕೂಡಲೇ ಸಾಗರ ಟೌನ್ ಠಾಣೆಗೆ ತಂದು ಸಂಭವಿಸಿದವರಿಗೆ ನೀಡಲು ಮನವಿ ಮಾಡಿದ್ದಾರೆ ಎಂದಿದ್ದರು.

ಆರಮುಗ ನೀಡಿರುವಂತ ರೂ.6,500 ಸಾಗರ ಟೌನ್ ಠಾಣೆಯಲ್ಲಿ ಇರುತ್ತದೆ. ಸಾಗರ ನಗರ, ತಾಲ್ಲೂಕಿನ ಜನರು ಯಾರಾದರೂ ಕಳೆದುಕೊಂಡಿದ್ದರೇ ಸೂಕ್ತ ದಾಖಲೆ, ಮಾಹಿತಿ ಒದಗಿಸಿ ಪಡೆಯಬಹುದು ಎಂದು ತಿಳಿಸಿದ್ದರು.

ಸೋ ಸಾಗರದ ಜನರು ಯಾರಾದರೂ ಮಾರಿಕಾಂಬಾ ರಸ್ತೆಯ ಜೈಹಿಂದ್ ಬೇಕರಿ ಸಮೀಪದಲ್ಲಿ ರೂ.6,500 ಕಳೆದುಕೊಂಡಿದ್ದರೇ ಸಾಗರ ಟೌನ್ ಠಾಣೆಗೆ ತೆರಳಿ ಸೂಕ್ತ ಮಾಹಿತಿ, ಹಣದ ದಾಖಲೆ ಇದ್ದರೇ ನೀಡಿ ಪಡೆಯಬಹುದಾಗಿದೆ ಎಂಬುದಾಗಿ ಸುದ್ದಿಯನ್ನು ಪ್ರಕಟಿಸಲಾಗಿತ್ತು.

ಸಾಗರ ನಗರಸಭೆಯ ಮಾಜಿ ನಾಮನಿರ್ದೇಶಿತ ಸದಸ್ಯನಿಗೆ ಹಣ ವಾಪಾಸ್

ಈ ಸುದ್ದಿಯನ್ನು ಓದಿದಂತ ಸಾಗರದ ಸುಭಾಷ್ ನಗರ 2ನೇ ಕ್ರಾಸ್ ನ ನಿವಾಸಿ ಮಾಜಿ ನಾಮ ನಿರ್ದೇಶಿತ ನಗರಸಭೆ ಸದಸ್ಯರಾಗಿದ್ದಂತ ಪುರುಷೋತ್ತಮ್ ಅವರು ಸಾಗರ ಟೌನ್ ಪೊಲೀಸ್ ಠಾಣೆಗೆ ತೆರಳಿದ್ದರು. ಪೊಲೀಸರು ಕೇಳಿದಂತ ಮಾಹಿತಿ, ರೂ.6,500ರ ಹಣ ಕಳೆದುಕೊಂಡ ಬಗೆಯ ಬಗ್ಗೆ ವಿವರಿಸಿದ್ದರು. ತಾನು ಮೊಬೈಲ್ ಜೇಬಿನಿಂದ ತೆಗೆಯುವಾಗ ಸಾಗರದ ಮಾರಿಕಾಂಬಾ ದೇವಸ್ಥಾನ ರಸ್ತೆಯ ಜೈಹಿಂದ್ ಬೇಕರಿ ಸಮೀಪದ ರಸ್ತೆಯಲ್ಲಿ ಬಿದ್ದು ಹೋಗಿದ್ದನ್ನು, ಹಲವೆಡೆ ಹುಡುಕಾಡಿದ್ದನು ಸಾಗರ ಟೌನ್ ಠಾಣೆಯ ಪಿಎಸ್ಐ ನಾಗರಾಜ್ ಅವರಿಗೆ ತಿಳಿಸಿದರು.

ಪುರುಷೋತ್ತಮ್ ತಂದೆ ಬರಮಪ್ಪ ಅವರು ನೀಡಿದಂತ ಮಾಹಿತಿಯನ್ನು ಖಚಿತ ಪಡಿಸಿಕೊಂಡ ಸಾಗರ ಟೌನ್ ಠಾಣೆಯ ಪಿಎಸ್ಐ ನಾಗರಾಜ್ ಅವರು, ರೂ.6,500 ಹಣವನ್ನು ಕೊಟ್ಟಿದ್ದಾರೆ. ಈ ಮೂಲಕ ಮಾನವೀಯತೆ ಮೆರೆದು ಉಡುಪಿ ಮೂಲದ ಬೇಕರಿ ಐಟಂ ವಿತರಕ ಆರಮುಗ ದಾರಿಯಲ್ಲಿ ಸಿಕ್ಕಿದ್ದಂತ ರೂ.6,500 ಹಣವನ್ನು ಅಷ್ಟೇ ಕಾಳಜಿಯಿಂದ ಕಳೆದುಕೊಂಡವರಿಗೆ ಹಿಂದಿರುಗಿಸಿದ್ದಾರೆ.

ಈ ಸಂದರ್ಭದಲ್ಲಿ ಮೂರನೇ ಕಣ್ಣು ನಾಗರಾಜ್, ಕೆಎ 15 ಲೈವ್ ನ ಫ್ರಾಂಕಿ ಲೋಬೋ ಉಪಸ್ಥಿತರಿದ್ದರು.

ವರದಿ: ವಸಂತ ಬಿ ಈಶ್ವರಗೆರೆ, ಸಂಪಾದಕರು

BIG NEWS: ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಅನಧಿಕೃತ, ನಿಯಮ ಉಲ್ಲಂಘಿಸಿ ಕಟ್ಟಿದ ಕಟ್ಟಡ ನೆಲಸಮಗೊಳಿಸಿ: ರಾಜ್ಯ ಸರ್ಕಾರ ಆದೇಶ

ನಿಮ್ಮ ಮೊಬೈಲ್ ಫೋನಿನ `ಬ್ಯಾಕ್ ಕವರ್’ ಬಣ್ಣ ಬದಲಾಗಲು ಕಾರಣ ಏನು ಗೊತ್ತಾ?

Share. Facebook Twitter LinkedIn WhatsApp Email

Related Posts

BIG NEWS : ಕಳೆದ ಬಾರಿಗಿಂತ ಈ ಬಾರಿ ಶೇ.10 ರಿಂದ 15 ರಷ್ಟು ಬಜೆಟ್ ಗಾತ್ರ ಹೆಚ್ಚಳ ಸಾಧ್ಯತೆ!

04/03/2026 10:57 AM2 Mins Read

ರಾಜ್ಯ ಸರ್ಕಾರದಿಂದ ಅನರ್ಹ `BPL’ ಕಾರ್ಡ್‌ದಾರರಿಗೆ ಬಿಗ್ ಶಾಕ್ : 20 ಲಕ್ಷ ಕಾರ್ಡ್‌ ಗಳ ರದ್ದತಿಗೆ ಸರ್ಕಾರ ಸಿದ್ಧತೆ !

04/03/2026 10:54 AM2 Mins Read

ನಾನು ಪ್ರಯತ್ನ ಮಾಡುವ ಅಗತ್ಯವಿಲ್ಲ, ನನಗೆ ಯಾವಾಗ ಯಾವುದು ಬರಬೇಕೋ ಅದು ಬರುತ್ತದೆ : ಡಿಸಿಎಂ ಡಿಕೆ ಶಿವಕುಮಾರ್

04/03/2026 10:20 AM2 Mins Read
Recent News

ಆದಾಯ ತೆರಿಗೆದಾರರೇ ಗಮನಿಸಿ : ಏ.1 ರಿಂದ ಜಾರಿಗೆ ಬರಲಿದೆ ಈ 10 ಹೊಸ ನಿಯಮಗಳು |New Income tax Rules

04/03/2026 11:02 AM

ಬಿಹಾರದಲ್ಲಿ ‘ಸಂಚಲನ’; ಸಕ್ರಿಯ ರಾಜಕಾರಣಕ್ಕೆ ನಿತೀಶ್ ಕುಮಾರ್ ಪುತ್ರ ನಿಶಾಂತ್ ಎಂಟ್ರಿ!

04/03/2026 10:59 AM

BIG NEWS : ಕಳೆದ ಬಾರಿಗಿಂತ ಈ ಬಾರಿ ಶೇ.10 ರಿಂದ 15 ರಷ್ಟು ಬಜೆಟ್ ಗಾತ್ರ ಹೆಚ್ಚಳ ಸಾಧ್ಯತೆ!

04/03/2026 10:57 AM

ರಾಜ್ಯ ಸರ್ಕಾರದಿಂದ ಅನರ್ಹ `BPL’ ಕಾರ್ಡ್‌ದಾರರಿಗೆ ಬಿಗ್ ಶಾಕ್ : 20 ಲಕ್ಷ ಕಾರ್ಡ್‌ ಗಳ ರದ್ದತಿಗೆ ಸರ್ಕಾರ ಸಿದ್ಧತೆ !

04/03/2026 10:54 AM
State News
KARNATAKA

BIG NEWS : ಕಳೆದ ಬಾರಿಗಿಂತ ಈ ಬಾರಿ ಶೇ.10 ರಿಂದ 15 ರಷ್ಟು ಬಜೆಟ್ ಗಾತ್ರ ಹೆಚ್ಚಳ ಸಾಧ್ಯತೆ!

By kannadanewsnow0504/03/2026 10:57 AM KARNATAKA 2 Mins Read

ಬೆಂಗಳೂರು : ಈಗಾಗಲೇ ಡಿ ದೇವರಾಜು ಅರಸು ಅವರ ದಾಖಲೆ ಮುರಿದು ದೀರ್ಘಾವಧಿ ಮುಖ್ಯಮಂತ್ರಿ ಎಂದು ಸಿಎಂ ಸಿದ್ದರಾಮಯ್ಯ ದಾಖಲೆ…

ರಾಜ್ಯ ಸರ್ಕಾರದಿಂದ ಅನರ್ಹ `BPL’ ಕಾರ್ಡ್‌ದಾರರಿಗೆ ಬಿಗ್ ಶಾಕ್ : 20 ಲಕ್ಷ ಕಾರ್ಡ್‌ ಗಳ ರದ್ದತಿಗೆ ಸರ್ಕಾರ ಸಿದ್ಧತೆ !

04/03/2026 10:54 AM

ನಾನು ಪ್ರಯತ್ನ ಮಾಡುವ ಅಗತ್ಯವಿಲ್ಲ, ನನಗೆ ಯಾವಾಗ ಯಾವುದು ಬರಬೇಕೋ ಅದು ಬರುತ್ತದೆ : ಡಿಸಿಎಂ ಡಿಕೆ ಶಿವಕುಮಾರ್

04/03/2026 10:20 AM

BREAKING : ‘ಟಾಕ್ಸಿಕ್’ ಸಿನಿಮಾ ರಿಲೀಸ್ ಮುಂದಕ್ಕೆ; ಯಶ್ ಅಭಿಮಾನಿಗಳಿಗೆ ಶಾಕ್ ನೀಡಿದ ಚಿತ್ರತಂಡ!

04/03/2026 10:15 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.