Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

BREAKING: ಸ್ಪ್ಯಾನಿಷ್ ಗ್ರ್ಯಾಂಡ್ ಪ್ರಿಕ್ಸ್ ಗೆದ್ದ ಆಸ್ಕರ್ ಪಿಯಾಸ್ಟ್ರಿ | Spanish Grand Prix

01/06/2025 10:26 PM

‘ನಾಸಿಕ್’ನ ‘ಸಿಂಹಸ್ಥ ಕುಂಭಮೇಳ’ಕ್ಕೆ ದಿನಾಂಕ ಘೋಷಣೆ | Simhastha Kumbh Mela

01/06/2025 9:24 PM

IPL 2025: ಮಳೆ ಅಡ್ಡಿಯಾದ ನಂತರ ಪಿಬಿಕೆಎಸ್ vs ಎಂಐ ಕ್ವಾಲಿಫೈಯರ್-2ಗಾಗಿ 20 ಓವರ್‌ಗಳ ಸ್ಪರ್ಧೆಗೆ ಕಟ್-ಆಫ್

01/06/2025 9:17 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ದೇಶದ ಭವಿಷ್ಯದ ನಾಯಕಿಯನ್ನು ಆಯ್ಕೆ ಮಾಡುವ ಸುವರ್ಣ ಅವಕಾಶ ವಯನಾಡಿನ ಜನತೆಗೆ ಸಿಕ್ಕಿದೆ: ಡಿಸಿಎಂ ಡಿ.ಕೆ. ಶಿವಕುಮಾರ್
KARNATAKA

ದೇಶದ ಭವಿಷ್ಯದ ನಾಯಕಿಯನ್ನು ಆಯ್ಕೆ ಮಾಡುವ ಸುವರ್ಣ ಅವಕಾಶ ವಯನಾಡಿನ ಜನತೆಗೆ ಸಿಕ್ಕಿದೆ: ಡಿಸಿಎಂ ಡಿ.ಕೆ. ಶಿವಕುಮಾರ್

By kannadanewsnow0909/11/2024 8:41 PM

ವಯನಾಡು: “ವಯನಾಡಿನ ಜನ ಕೇವಲ ಒಬ್ಬ ಸಂಸತ್ ಸದಸ್ಯರನ್ನು ಆಯ್ಕೆ ಮಾಡುತ್ತಿಲ್ಲ. ಬದಲಾಗಿ ಈ ದೇಶದ ಭವಿಷ್ಯದ ನಾಯಕಿ ಪ್ರಿಯಾಂಕಾ ಗಾಂಧಿ ಅವರನ್ನು ಆಯ್ಕೆ ಮಾಡುತ್ತಿದ್ದೀರಿ. ಇದು ವಯನಾಡಿನ ಹಾಗೂ ಕೇರಳದ ಜನತೆಗೆ ಸಿಕ್ಕಿರುವ ಸುವರ್ಣ ಅವಕಾಶ” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಹೇಳಿದರು.

ವಯನಾಡು ಲೋಕಸಭಾ ಕ್ಷೇತ್ರದ ಉಪಚುನಾವಣೆ ಕಾಂಗ್ರೆಸ್ ಅಭ್ಯರ್ಥಿ ಪ್ರಿಯಾಂಕಾ ಗಾಂಧಿ ಅವರ ಪರವಾಗಿ ಕೇರಳದ ತಿರುವಂಬಾಡಿ ವಿಧಾನಸಭಾ ಕ್ಷೇತ್ರದ ಮುಕ್ಕಾಂ ನಲ್ಲಿ ಶನಿವಾರದಂದು ಚುನಾವಣಾ ಪ್ರಚಾರ ನಡೆಸಿ, ಶಿವಕುಮಾರ್ ಅವರು ಸಾರ್ವಜನಿಕ ಸಭೆ ಉದ್ದೇಶಿಸಿ ಮಾತನಾಡಿದರು.

“ಪ್ರಿಯಾಂಕಾ ಗಾಂಧಿ ಅವರ ಆಯ್ಕೆಯ ಮೂಲಕ, ಶೋಷಿತರ ಬಡವರ ತಳವರ್ಗದ ಜನರ ಪರವಾದ ಪ್ರಬಲವಾದ ಮತ್ತೊಂದು ದನಿ ಸಂಸತ್ತಿನಲ್ಲಿ ಮೊಳಗಿದಂತಾಗುತ್ತದೆ. ಈ ಅವಕಾಶವನ್ನು ದಯವಿಟ್ಟು ಕೈ ಚೆಲ್ಲಬೇಡಿ” ಎಂದು ಮನವಿ ಮಾಡಿದರು.

“ಪ್ರಿಯಾಂಕಾ ಗಾಂಧಿಯವರು ತಮ್ಮ ಸಮಯ, ತಮ್ಮ ಪ್ರೀತಿ, ಚಿಂತನೆಯನ್ನು ಕೇರಳದ ಅಭಿವೃದ್ಧಿಗಾಗಿ ಮುಡುಪಾಗಿ ಇಟ್ಟಿದ್ದಾರೆ ಮತ್ತು ಇಡಲಿದ್ದಾರೆ” ಎಂದು ಹೇಳಿದರು.

ಬಂಡಿಪುರ ರಾತ್ರಿ ಸಂಚಾರ ಸಮಸ್ಯೆ ಪರಿಹಾರಕ್ಕೆ ಚಿಂತನೆ

“ಮೂರು ದಿನಗಳ ಹಿಂದೆ ಪ್ರಿಯಾಂಕಾ ಗಾಂಧಿಯವರು ನನ್ನ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಜೊತೆ ರಾತ್ರಿ ವೇಳೆ ಬಂಡಿಪುರದಲ್ಲಿ ವಾಹನ ಸಂಚಾರ ಕುರಿತು ಚರ್ಚೆ ನಡೆಸಿದರು. ಪ್ರಿಯಾಂಕಾ ಗಾಂಧಿ ಅವರು ಆಯ್ಕೆಯಾದ ನಂತರ, ಈ ವಿಚಾರವಾಗಿ ಎರಡು ರಾಜ್ಯಗಳ ಪ್ರತಿನಿಧಿಗಳು ಕುಳಿತು ಸಮಸ್ಯೆ ಬಗೆಹರಿಸುವ ಬಗ್ಗೆ ಯೋಚಿಸಲಾಗುವುದು” ಎಂದು ಹೇಳಿದರು.

ಸರ್ವ ಪಕ್ಷಗಳ ಮತದಾರರು, ನಾಯಕರಿಂದ ಬೆಂಬಲ

“ಎರಡು ತಿಂಗಳ ಹಿಂದೆ ನಾನು ವೈಯಕ್ತಿಕವಾಗಿ ಸಮೀಕ್ಷೆ ನಡೆಸುವ ತಂಡವನ್ನು ಕಳುಹಿಸಿ, ಕಾಂಗ್ರೆಸ್ ಪಕ್ಷದ ಗೆಲುವಿನ ಕುರಿತು ಅಭಿಪ್ರಾಯ ಸಂಗ್ರಹಿಸಿದ್ದೆ. ಎಲ್ ಡಿ ಎಫ್ ಹಾಗೂ ಬಿಜೆಪಿ ನಾಯಕರೇ ಪ್ರಿಯಾಂಕಾ ಗಾಂಧಿ ಅವರು ಗೆದ್ದೇ ಗೆಲ್ಲುತ್ತಾರೆ, ಈ ಕ್ಷೇತ್ರದ ಜನರಿಗೆ ಭವಿಷ್ಯದ ರಾಷ್ಟ್ರೀಯ ನಾಯಕಿಯನ್ನು ಆಯ್ಕೆ ಮಾಡುವ ಅವಕಾಶ ಸಿಕ್ಕಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದರು. ಅಲ್ಲದೇ, ನಾವುಗಳು ಎಲ್ಲಾ ಭಿನ್ನಾಭಿಪ್ರಾಯಗಳನ್ನು ಮರೆತು ಪ್ರಿಯಾಂಕ ಗಾಂಧಿ ಅವರಿಗೆ ಬೆಂಬಲ ವ್ಯಕ್ತಪಡಿಸುತ್ತೇವೆ ಎಂದು ತಿಳಿಸಿದ್ದರು” ಎಂದು ಹೇಳಿದ್ದರು.

“ರಾಹುಲ್ ಗಾಂಧಿ ಅವರ ವಿರುದ್ಧ ಸಂಚು ಮಾಡಿ ಸಂಸತ್ ಸದಸ್ಯ ಸ್ಥಾನದಿಂದ ಕೆಳಗೆ ಇಳಿಸಲಾಯಿತು. ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ರಾಹುಲ್ ಗಾಂಧಿ ವಯನಾಡಿನಿಂದ ಮತ್ತೆ ಆಯ್ಕೆ ಆಗುತ್ತಾರೆ ಎನ್ನುವ ನಂಬಿಕೆ ನಮಗಿತ್ತು. ವಯನಾಡಿನ ಜನರನ್ನು ಕಾಂಗ್ರೆಸ್ ಎಂದಿಗೂ ಮರೆಯಲು ಸಾಧ್ಯವಿಲ್ಲ. ಅಮೇಥಿಯಿಂದ ವಯನಾಡಿಗೆ ಬಂದಂತಹ ರಾಹುಲ್ ಗಾಂಧಿ ಅವರಿಗೆ ಮರುಜನ್ಮ ನೀಡಿದವರು ನೀವು. ಜೊತೆಗೆ ಕಾಂಗ್ರೆಸ್ ಈ ದೇಶದಲ್ಲಿ ಮತ್ತೊಮ್ಮೆ ಅಧಿಕಾರದ ಚುಕ್ಕಾಣಿ ಹಿಡಿಯುತ್ತದೆ ಎನ್ನುವ ಸಂದೇಶವನ್ನು ಇಡೀ ದೇಶಕ್ಕೆ ಕೊಟ್ಟವರು ನೀವು” ಎಂದರು.

ಕರ್ನಾಟಕದಲ್ಲಿ ಸ್ಪರ್ಧಿಸುವಂತೆ ರಾಹುಲ್ ಅವರಿಗೆ ಮನವಿ

“ಕರ್ನಾಟಕ ಅಥವಾ ತೆಲಂಗಾಣದಲ್ಲಿ ಸ್ಪರ್ಧಿಸಬೇಕು ಎಂದು ನಾನು ಮತ್ತೆ ತೆಲಂಗಾಣದ ಸಿಎಂ ರೇವಂತ್ ರೆಡ್ಡಿ ಅವರು ರಾಹುಲ್ ಗಾಂಧಿಯವರಿಗೆ ಮನವಿ ಮಾಡಿದೆವು. ನಿಮ್ಮನ್ನು ಗೆಲ್ಲಿಸಿಕೊಂಡು ಬರುವ ಜವಾಬ್ದಾರಿ ನಮ್ಮದು ಎಂದು ಹೇಳಿದ್ದೆವು. ಏಕೆಂದರೆ ಈ ಹಿಂದೆ ಇಂದಿರಾ ಗಾಂಧಿಯವರು ಹಾಗೂ ಸೋನಿಯಾ ಗಾಂಧಿ ಅವರು ಕರ್ನಾಟಕದಿಂದ ಸ್ಪರ್ಧಿಸಿದ್ದರು. ಹೀಗೆ ಹೇಳಿದಾಗ ರಾಹುಲ್ ಗಾಂಧಿಯವರು ವಯನಾಡಿನ ಜನ ನನಗೆ ಸಾಕಷ್ಟು ಪ್ರೀತಿ ವಿಶ್ವಾಸವನ್ನು ತೋರಿಸಿದ್ದಾರೆ. ಅವರನ್ನು ಯಾವುದೇ ಕಾರಣಕ್ಕೂ ನಾನು ಬಿಟ್ಟು ಬರುವುದಿಲ್ಲ ಎಂದು ಉತ್ತರಿಸಿದ್ದರು” ಎಂದರು.

ದೇಶದ ಭವಿಷ್ಯದ ಫಲಿತಾಂಶವಿದು

“ಕಳೆದ ಲೋಕಸಭಾ ಚುನಾವಣೆಯಲ್ಲಿ ರಾಹುಲ್ ಗಾಂಧಿ ಅವರಿಗೆ ಉತ್ತಮ ಮತವನ್ನು ನೀಡಿದ್ದೀರಿ. ಈ ಬಾರಿಯೂ ಅದೇ ರೀತಿ, ಯುಪಿಎ ಜೊತೆ ಬೆಂಬಲವಾಗಿ ನಿಂತು ಇಂಡಿಯಾ ಒಕ್ಕೂಟದ ಶಕ್ತಿಯನ್ನು ದೇಶಕ್ಕೆ ತಿಳಿಸಬೇಕು. ಭವಿಷ್ಯದ ಫಲಿತಾಂಶವನ್ನು ಈಗಲೇ ನೀವು ಹೇಳಬೇಕು” ಎಂದರು.

“ಕಾಂಗ್ರೆಸ್ ಪಕ್ಷದ ಬೆಳವಣಿಗೆಗೆ ನೆಹರು ಕುಟುಂಬದ ಕೊಡುಗೆಯನ್ನು ನಾವು ಎಂದಿಗೂ ಮರೆಯಲು ಸಾಧ್ಯವಿಲ್ಲ. ಇಂದಿರಾ ಗಾಂಧಿ, ರಾಜೀವ್ ಗಾಂಧಿ ಅವರು ಈ ದೇಶಕ್ಕಾಗಿ ಪ್ರಾಣ ಕೊಟ್ಟಿದ್ದಾರೆ. ಸೋನಿಯಾ ಗಾಂಧಿ ಅವರಿಗೆ ಈ ದೇಶದ ಪ್ರಧಾನಿಯಾಗುವ ಅವಕಾಶ ಸಿಕ್ಕಿತು. ಆದರೆ ಈ ದೇಶದ ಭವಿಷ್ಯ ಮುಖ್ಯ ಎಂದು ಆರ್ಥಿಕ ತಜ್ಞರಾದ ಮನಮೋಹನ್ ಸಿಂಗ್ ಅವರನ್ನು ಪ್ರಧಾನಿಯನ್ನಾಗಿ ಅವರು ಘೋಷಿಸಿದರು. ಈ ರೀತಿಯಾಗಿ ಈ ಕುಟುಂಬವು ದೇಶಕ್ಕಾಗಿ ಪ್ರಾಣ, ಅಧಿಕಾರವನ್ನೇ ತ್ಯಾಗ ಮಾಡಿದೆ” ಎಂದರು.

Share. Facebook Twitter LinkedIn WhatsApp Email

Related Posts

BIG NEWS : 2024-25ರ ಸಾಲಿನಲ್ಲಿ ರಾಜ್ಯದಲ್ಲಿ ಒಟ್ಟು 700 ಬಾಲ್ಯ ವಿವಾಹ : ಸಿಎಂ ತವರಲ್ಲೇ ಅತೀ ಹೆಚ್ಚು ದೂರು ಸ್ವೀಕೃತ!

01/06/2025 9:09 PM2 Mins Read

BREAKING: ನಟ ಕಮಲ್ ಹಾಸನ್ ಚಿತ್ರ ಬಿಡುಗಡೆ ಆದ್ರೆ ಕರ್ನಾಟಕ ರಣರಂಗ ಆಗುತ್ತೆ: ವಾಟಾಳ್ ನಾಗರಾಜ್ ಎಚ್ಚರಿಕೆ

01/06/2025 8:24 PM1 Min Read

BREAKING : ರಾಜ್ಯದಲ್ಲಿ ಕೊರೊನ ಕೇಸ್ ಹೆಚ್ಚಳ ಹಿನ್ನೆಲೆ : ಶಾಲೆಗಳಿಗೆ ಶಿಕ್ಷಣ ಇಲಾಖೆಯಿಂದ ಮಾರ್ಗಸೂಚಿ ಪ್ರಕಟ

01/06/2025 8:18 PM1 Min Read
Recent News

BREAKING: ಸ್ಪ್ಯಾನಿಷ್ ಗ್ರ್ಯಾಂಡ್ ಪ್ರಿಕ್ಸ್ ಗೆದ್ದ ಆಸ್ಕರ್ ಪಿಯಾಸ್ಟ್ರಿ | Spanish Grand Prix

01/06/2025 10:26 PM

‘ನಾಸಿಕ್’ನ ‘ಸಿಂಹಸ್ಥ ಕುಂಭಮೇಳ’ಕ್ಕೆ ದಿನಾಂಕ ಘೋಷಣೆ | Simhastha Kumbh Mela

01/06/2025 9:24 PM

IPL 2025: ಮಳೆ ಅಡ್ಡಿಯಾದ ನಂತರ ಪಿಬಿಕೆಎಸ್ vs ಎಂಐ ಕ್ವಾಲಿಫೈಯರ್-2ಗಾಗಿ 20 ಓವರ್‌ಗಳ ಸ್ಪರ್ಧೆಗೆ ಕಟ್-ಆಫ್

01/06/2025 9:17 PM

BIG NEWS : 2024-25ರ ಸಾಲಿನಲ್ಲಿ ರಾಜ್ಯದಲ್ಲಿ ಒಟ್ಟು 700 ಬಾಲ್ಯ ವಿವಾಹ : ಸಿಎಂ ತವರಲ್ಲೇ ಅತೀ ಹೆಚ್ಚು ದೂರು ಸ್ವೀಕೃತ!

01/06/2025 9:09 PM
State News
KARNATAKA

BIG NEWS : 2024-25ರ ಸಾಲಿನಲ್ಲಿ ರಾಜ್ಯದಲ್ಲಿ ಒಟ್ಟು 700 ಬಾಲ್ಯ ವಿವಾಹ : ಸಿಎಂ ತವರಲ್ಲೇ ಅತೀ ಹೆಚ್ಚು ದೂರು ಸ್ವೀಕೃತ!

By kannadanewsnow0501/06/2025 9:09 PM KARNATAKA 2 Mins Read

ಬೆಂಗಳೂರು : ಬಾಲ್ಯ ವಿವಾಹ ತಡೆಗಟ್ಟಲು ಸರ್ಕಾರ ನಾನಾ ರೀತಿಯ ಯೋಜನೆಗಳು ಹಾಗೂ ಜಾಗೃತಿ ಮೂಡಿಸುವ ಕಾರ್ಯಕ್ರಮಗಳನ್ನು ಆಯೋಜನೆ ಮಾಡುತ್ತದೆ.…

BREAKING: ನಟ ಕಮಲ್ ಹಾಸನ್ ಚಿತ್ರ ಬಿಡುಗಡೆ ಆದ್ರೆ ಕರ್ನಾಟಕ ರಣರಂಗ ಆಗುತ್ತೆ: ವಾಟಾಳ್ ನಾಗರಾಜ್ ಎಚ್ಚರಿಕೆ

01/06/2025 8:24 PM

BREAKING : ರಾಜ್ಯದಲ್ಲಿ ಕೊರೊನ ಕೇಸ್ ಹೆಚ್ಚಳ ಹಿನ್ನೆಲೆ : ಶಾಲೆಗಳಿಗೆ ಶಿಕ್ಷಣ ಇಲಾಖೆಯಿಂದ ಮಾರ್ಗಸೂಚಿ ಪ್ರಕಟ

01/06/2025 8:18 PM

BREAKING: ನಟ ಕಮಲ್ ಹಾಸನ್ ಕ್ಷಮೆ ಕೇಳದಿದ್ರೆ ಕರ್ನಾಟಕ ಬಂದ್: ವಾಟಾಳ್ ನಾಗರಾಜ್

01/06/2025 8:17 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.