Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

Clove Health Benefits: ಬೆಳಗ್ಗೆ ಎದ್ದ ತಕ್ಷಣ 1 ಲವಂಗ ಅಗಿದು ತಿಂದರೆ ದೇಹದಲ್ಲಿ ಏನೆಲ್ಲಾ ಬದಲಾವಣೆಯಾಗುತ್ತೆ ಗೊತ್ತಾ?

​ಭಾರತದ ಸುಧಾರಣೆಯ ವೇಗ ಎಂದಿಗೂ ನಿಲ್ಲದು, ಸ್ಟಾರ್ಟ್‌ಅಪ್ ವ್ಯವಸ್ಥೆ ಮತ್ತಷ್ಟು ವಿಸ್ತರಣೆಯಾಗಲಿದೆ: ಫ್ರಾನ್ಸ್‌ನಲ್ಲಿ ಪ್ರಧಾನಿ ಮೋದಿ ಭರವಸೆ

BIG NEWS: ರಾಜ್ಯದ ಆರೋಗ್ಯ ಇಲಾಖೆಯ ‘NHM ಗುತ್ತಿಗೆ ನೌಕರ’ರನ್ನು ‘ಖಾಯಂ’ ಅಸಾಧ್ಯ: ಸಚಿವ ಯು.ಟಿ ಖಾದರ್

Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಒಬ್ಬರ ಕಾರಣಕ್ಕೆ ‘BPL ಕಾರ್ಡ್ ರದ್ದು’ ಮಾಡಿ ಬಡವರ ಹೊಟ್ಟೆ ಮೇಲೆ ಹೊಡೆದ ಸರ್ಕಾರ
KARNATAKA

ಒಬ್ಬರ ಕಾರಣಕ್ಕೆ ‘BPL ಕಾರ್ಡ್ ರದ್ದು’ ಮಾಡಿ ಬಡವರ ಹೊಟ್ಟೆ ಮೇಲೆ ಹೊಡೆದ ಸರ್ಕಾರ

By ವಸಂತ ಬಿ ಈಶ್ವರಗೆರೆ

ಬೆಂಗಳೂರು: ಆದಾಯ ತೆರಿಗೆ ಪಾವತಿ ಮಾಡುತ್ತಿದ್ದಾರೆ ಎಂಬ ಒಂದೇ ಒಂದು ಕಾರಣಕ್ಕೆ ಇಡೀ ಕುಟುಂಬದ ಬಿಪಿಎಲ್ ಕಾರ್ಡ್ ರದ್ದುಗೊಳಿಸಿ ಎಪಿಎಲ್ ಕಾರ್ಡ್ ಮಾಡಿ, ಸರ್ಕಾರ ಬಡವರ ಹೊಡ್ಡೆ ಮೇಲೆ ಹೊಡೆದಿದೆ. ಕೇವಲ ಒಬ್ಬರ ಕಾರಣಕ್ಕಾಗಿ ಇಡೀ ಕುಟುಂಬ ರೇಷನ್ ಕಾರ್ಡಿನ ರೇಷನ್ ಮೇಲೆ ಅವಲಂಬಿತವಾಗಿದ್ದದ್ದನ್ನು, ರದ್ದುಗೊಳಿಸಿದ ಬಳಿಕ ಅಕ್ಕಿಗಾಗಿ ಪರದಾಡುವ ಪರಿಸ್ಥಿತಿಯನ್ನು ತಂದಿಟ್ಟಿದೆ.

ಕಾಲ ಬದಲಾದಂತೆ ಆದಾಯವೂ ಹೆಚ್ಚಾಗುತ್ತಿದೆ. ಆದಾಯದಂತೆ ಸರ್ಕಾರದ ನಿಯಮ, ಮಾನದಂಡಗಳು ಬದಲಾವಣೆಯಾಗಬೇಕಿತ್ತು. ಆದರೇ 2017ರಲ್ಲಿ ನಿಗದಿಯಾಗಿದ್ದಂತ ಮಾನದಂಡವನ್ನೇ ಇಟ್ಟುಕೊಂಡು, ಲಕ್ಷಾಂತರ ಕುಟುಂಬಗಳ ಬಿಪಿಎಲ್ ಕಾರ್ಡ್ ಅನ್ನು ರಾಜ್ಯ ಸರ್ಕಾರ ರದ್ದುಗೊಳಿಸಿದೆ. ಸಿಎಂ ಸಿದ್ಧರಾಮಯ್ಯ ಮಾತ್ರ ತಾನು ಮಾಡಿದ್ದಲ್ಲ, ಬದಲಾಗಿ ಕೇಂದ್ರ ಸರ್ಕಾರವೆಂದು ಗೂಬೆ ಕೂರಿಸುತ್ತಿದ್ದಾರೆ. ಕೇಂದ್ರ, ರಾಜ್ಯ ಸರ್ಕಾರಗಳ ಕಚ್ಚಾಟದಲ್ಲಿ ಈಗ ಕೂಸು ಬಡವಾದಂತೆ ಬಿಪಿಎಲ್ ಕಾರ್ಡ್ ರದ್ದಾದಂತ ಅನೇಕ ಕುಟುಂಬಗಳು ಕಣ್ಣೀರಲ್ಲಿ ಕೈತೊಳೆಯುವಂತೆ ಆಗಿದೆ.

ಒಂದು ಬಾರಿಗೆ ಅವಕಾಶ ಕೊಡಬೇಕಿತ್ತು

ಬಿಪಿಎಲ್ ಕಾರ್ಡ್ ಹೊಂದಿರೋರು ಯಾರೆಲ್ಲ ಆದಾಯ ತೆರಿಗೆ ಪಾವತಿ ಮಾಡ್ತಾ ಇದ್ದೀರಿ ಅವರು ನಿಮ್ಮ ಹೆಸರನ್ನು ಕಾರ್ಡ್ ನಿಂದ ಡಿಲಿಟ್ ಮಾಡಿಸಿ. ಇಲ್ಲವಾದಲ್ಲಿ ನಿಮ್ಮ ಇಡೀ ಕುಟುಂಬದ ರೇಷನ್ ಕಾರ್ಡ್ ರದ್ದುಗೊಳಿಸುವುದಾಗಿ ಒಮ್ಮೆ ಎಚ್ಚರಿಸಿ ಅವಕಾಶ ಕೊಟ್ಟಿದ್ದರೇ, ಲಕ್ಷಾಂತರ ಮಂದಿಯ ಪಡಿತರ ಚೀಟಿ ರದ್ದಾಗುವ ಸಂಭವವೇ ಬರುತ್ತಿರಲಿಲ್ಲ. ಆದರೇ ರೋಗಿ ಬಯಸಿದ್ದು ಹಾಲು ಅನ್ನ, ಸರ್ಕಾರ ಹಿಡನ್ ಸೀಕ್ರೆಟ್ ರೇಷನ್ ಹೊರೆ ತಪ್ಪಿಸೋದು ಎನ್ನುವಂತೆ ಏಕಾಏಕಿ ಆದಾಯ ತೆರಿಗೆ ಪಾವತಿ ನೆಪದ ಕಾರಣ ಒಂದು ಇಡೀ ಕುಟುಂಬದ ಬಿಪಿಎಲ್ ಕಾರ್ಡ್ ರದ್ದುಪೊಡಿಸಿದ್ದು ಮಾತ್ರ ವಿಪರ್ಯಾಸವೇ ಸರಿ.

ಒಮ್ಮೆ ಆದಾಯ ತೆರಿಗೆ ಪಾವತಿದಾರರು ತಮ್ಮ ಹೆಸರು ಡಿಲಿಟ್ ಮಾಡಿಸಿ ಎಂಬುದಾಗಿ ಅವಕಾಶವನ್ನು ಸರ್ಕಾರ ಎಚ್ಚರಿಸಿ ನೀಡಿದ್ದೇ ಆಗಿದ್ದಲ್ಲಿ ಅನೇಕ ಬಡ ಕುಟುಂಬಗಳು ಎಚ್ಚೆತ್ತುಕೊಂಡು ಡಿಲೀಟ್ ಮಾಡಿಸುತ್ತಿದ್ದವು. ಆಗ ಆದಾಯ ತೆರಿಗೆ ಪಾವತಿದಾರನೊಬ್ಬ ಕಾರ್ಡ್ ನಿಂದ ಹೊರಗುಳಿದು, ನ್ಯಾಯಯುತವಾಗಿ ಬಡತನ ರೇಖೆಗಿಂತ ಕೆಳಗಿರುವಂತ ಕುಟುಂಬಕ್ಕೆ ಬಿಪಿಎಲ್ ಕಾರ್ಡ್ ನಿಂದ ಪಡಿತರ ಲಭ್ಯವಾಗುವಂತೆ ಆಗುತ್ತಿತ್ತು. ಆದರೇ ಅದ್ಯಾವುದನ್ನು ಮಾಡದೇ ಸರ್ಕಾರ ಮಾತ್ರ ಕರ್ನಾಟಕದಲ್ಲಿ ತಾಲ್ಲೂಕು ಮಟ್ಟ ಒಂದರಲ್ಲೇ 2 ರಿಂದ 3 ಸಾವಿರಕ್ಕೂ ಹೆಚ್ಚು ಬಿಪಿಎಲ್ ಕಾರ್ಡ್ ರದ್ದು ಮಾಡಿದೆ.

ಒಬ್ಬರ ಕಾರಣಕ್ಕೆ ಇಡೀ ಕುಟುಂಬದ ಬಿಪಿಎಲ್ ಕಾರ್ಡ್ ರದ್ದು ನ್ಯಾಯವೇ ಸಿಎಂ ಸಿದ್ಧರಾಮಯ್ಯನವರೇ?

ಬಿಪಿಎಲ್ ಕಾರ್ಡ್ ಹೊಂದಿದ್ದಂತ ಕುಟುಂಬದ ಸದಸ್ಯರೊಬ್ಬರಲ್ಲಿ ಯಾರೋ ಒಬ್ಬರು ನಿವೇಶನ, ಗೃಹ, ಕೃಷಿ ಸೇರಿದಂತೆ ಇತರೆ ಕಾರಣಕ್ಕೆ ಲೋನ್ ಪಡೆಯೋದಕ್ಕೆ ಐಟಿ ಫೈಲ್ ಮಾಡಿದ್ದಾರೆ. ಕೆಲವರು ಟಿಡಿಎಸ್ ವಾಪಾಸ್ ಪಡೆಯೋದಕ್ಕೂ ಐಟಿ ಫೈಲ್ ಮಾಡಿದ್ದಾರೆ. ಹಾಗಂತ ಯಾರೂ ಇಲ್ಲಿ ಆದಾಯ ತೆರಿಗೆ ಪಾವತಿ ಮಾಡಿಲ್ಲ. ಕಾರಣ ಅವರ ಆದಾಯದ ಮಿತಿ ಸರ್ಕಾರ ನಿಗದಿ ಪಡಿಸಿದಂತ ಮಿತಿ ಮೀರಿ ವ್ಯವಹಾರವಾಗಿಲ್ಲ.

ಹೀಗೆ ಇದ್ದರೂ ಎರಡು ಮೂರು ವರ್ಷಗಳ ಹಿಂದಿನ ಆದಾಯ ತೆರಿಗೆ ಪಾವತಿಯ ಹಣಕಾಸು ವ್ಯವಹಾರದ ದತ್ತಾಂಶ ಪಡೆದು, ಒಬ್ಬರ ಕಾರಣಕ್ಕೆ ಇಡೀ ಕುಟುಂಬದ ಬಿಪಿಎಲ್ ಕಾರ್ಡ್ ರದ್ದು ಮಾಡಿ, ತಿನ್ನುವ ಅನ್ನಕ್ಕೆ ಮಣ್ಣು ಹಾಕಿದ್ದು ಸಿಎಂ ಸಿದ್ಧರಾಮಯ್ಯ ಅವರೇ ಸರಿಯೇ ಎಂಬುದು ಅನೇಕ ಕುಟುಂಬಗಳ ಪ್ರಶ್ನೆಯಾಗಿದೆ.

ಒಮ್ಮೆ ಹೆಸರು ತೆಗೆಯಲು ಅವಕಾಶ ನೀಡಿ, ಪಾಲಿಸದೇ ಇದ್ದರೇ ಬಿಪಿಎಲ್ ಟು ಎಪಿಎಲ್ ಕಾರ್ಡ್ ಮಾಡೇಬಕಿತ್ತು

ಯಾರೆಲ್ಲ ಆದಾಯ ತೆರಿಗೆ ಪಾವತಿಯನ್ನು ಮಾಡಿದ್ದಾರೋ ಬಿಪಿಎಲ್ ಕಾರ್ಡ್ ಕುಟುಂಬದ ಸದಸ್ಯರು ಅವರ ಹೆಸರು ಡಿಲಿಟ್ ಮಾಡಲು ಅವಕಾಶ ನೀಡಬೇಕಿತ್ತು. ಆಗ ಕುಟುಂಬದ ಒಬ್ಬರ ಕಾರಣಕ್ಕೆ ಇಂದು ಇಡೀ ಕುಟುಂಬದ ಬಿಪಿಎಲ್ ಕಾರ್ಡ್ ರದ್ದುಗೊಂಡಿರೋದು ತಪ್ಪುತ್ತಿತ್ತು. ಆದರೇ ಇಲ್ಲಿ ಅದ್ಯಾವುದೂ ಆಗದೇ ಬಿಪಿಎಲ್ ಕಾರ್ಡ್ ಹೊಂದಿರುವಂತ ಕುಟುಂಬದಲ್ಲಿ ಓರ್ವ ಆದಾಯ ತೆರಿಗೆ ಪಾವತಿದಾರ ಎನ್ನುವ ಕಾರಣಕ್ಕೆ ಇಡೀ ಕಾರ್ಡ್ ರದ್ದುಗೊಳಿಸಿ ಅಷ್ಟೇ ತ್ವರಿತವಾಗಿ ಎಪಿಎಲ್ ಕಾರ್ಡ್ ಗೆ ಬದಲಾಯಿಸಿದ್ದು ಮಾತ್ರ ಸರಿಯಲ್ಲ ಎಂಬುದು ನೊಂದವರ ಮಾತಾಗಿದೆ.

ಈ ಎಲ್ಲಾ ಕಾರಣದಿಂದಾಗಿ ಮಾನ್ಯ ಸಿದ್ಧರಾಮಯ್ಯನವರೇ ದಯವಿಟ್ಟು ಒಮ್ಮೆ ಯೋಚನೆ ಮಾಡಿ, ಬಿಪಿಎಲ್ ಕಾರ್ಡ್ ರದ್ದು ಮಾಡಿದ ಕುಟುಂಬದ ಆದಾಯ ತೆರಿಗೆ ಪಾವತಿದಾರ ಸದಸ್ಯನ ಹೆಸರು ಕೈಬಿಟ್ಟು, ಮರಳಿ ನೀಡುವಂತ ಕೆಲಸ ಮಾಡಿ ಎಂಬುದು ಕಾರ್ಡ್ ರದ್ದಾದ ಕುಟುಂಬಸ್ಥರ ವಿನಂತಿಯಾಗಿದೆ. ಆ ನಿಟ್ಟಿನಲ್ಲಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಒಂದು ಬಾರಿಗೆ ಅವಕಾಶ ನೀಡಿದರೇ, ಬಿಪಿಎಲ್ ಕಾರ್ಡ್ ರೇಷನ್ ಮೇಲೆಯೇ ಅವಲಂಬಿತವಾಗಿರುವಂತ ಅನೇಕರು ನೆಮ್ಮದಿಯ ನಿಟ್ಟುಸಿರು ಬಿಡುವಂತೆ ಆಗುತ್ತದೆ. ಆ ನಿಟ್ಟಿನಲ್ಲಿ ಸಿಎಂ ಸಿದ್ಧರಾಮಯ್ಯ ಕ್ರಮವಹಿಸಲಿ ಎಂಬುದು ರಾಜ್ಯದ ಲಕ್ಷಾಂತರ ಬಿಪಿಎಲ್ ಕಾರ್ಡ್ ರದ್ದುಗೊಂಡಿರುವಂತ ಕುಟುಂಬಸ್ಥರ ಮನವಿಯಾಗಿದೆ.

ವರದಿ; ವಸಂತ ಬಿ ಈಶ್ವರಗೆರೆ.., ಸಂಪಾದಕರು…

Health Tips: ಫ್ರಿಡ್ಜ್‌ನಲ್ಲಿಟ್ಟ ಹಿಟ್ಟನ್ನು ಬಳಸುವುದು ಸುರಕ್ಷಿತವೇ ?

ಈ ಎರಡು ಎಲೆಗಳು ಮನೆಯಲ್ಲಿದ್ದರೆ ಸಾಕು, ಎಲ್ಲ ದೋಷಗಳು, ದುಷ್ಟಶಕ್ತಿಗಳು ಓಡಿ ಹೋಗುತ್ತವೆ

Share. Facebook Twitter LinkedIn WhatsApp Email

Related Posts

BIG NEWS: ರಾಜ್ಯದ ಆರೋಗ್ಯ ಇಲಾಖೆಯ ‘NHM ಗುತ್ತಿಗೆ ನೌಕರ’ರನ್ನು ‘ಖಾಯಂ’ ಅಸಾಧ್ಯ: ಸಚಿವ ಯು.ಟಿ ಖಾದರ್

2 Mins Read

ಬೆಂಗಳೂರಿನಲ್ಲಿ ಗ್ರಾಹಕರಿಗೆ ತಟ್ಟಿದ ಬೆಲೆ ಏರಿಕೆ ಬಿಸಿ: ಗಗನಕ್ಕೇರಿದ ಸೋನಾ ಸ್ಟೀಮ್, ಬಾಸುಮತಿ ಅಕ್ಕಿ ಬೆಲೆ!

1 Min Read

ಸಾಗರ ನಗರಸಭೆ ‘ಮೇಸ್ತ್ರಿ ನಾಗರಾಜ್’ ಮಹಿಳೆಗೆ ಲೈಂಗಿಕ ಕಿರುಕುಳ; ನಾಳೆ ಅಮಾನತಿಗೆ ಆಗ್ರಹಿಸಿ ‘DSS ಪ್ರತಿಭಟನೆ’

1 Min Read
Recent News

Clove Health Benefits: ಬೆಳಗ್ಗೆ ಎದ್ದ ತಕ್ಷಣ 1 ಲವಂಗ ಅಗಿದು ತಿಂದರೆ ದೇಹದಲ್ಲಿ ಏನೆಲ್ಲಾ ಬದಲಾವಣೆಯಾಗುತ್ತೆ ಗೊತ್ತಾ?

​ಭಾರತದ ಸುಧಾರಣೆಯ ವೇಗ ಎಂದಿಗೂ ನಿಲ್ಲದು, ಸ್ಟಾರ್ಟ್‌ಅಪ್ ವ್ಯವಸ್ಥೆ ಮತ್ತಷ್ಟು ವಿಸ್ತರಣೆಯಾಗಲಿದೆ: ಫ್ರಾನ್ಸ್‌ನಲ್ಲಿ ಪ್ರಧಾನಿ ಮೋದಿ ಭರವಸೆ

BIG NEWS: ರಾಜ್ಯದ ಆರೋಗ್ಯ ಇಲಾಖೆಯ ‘NHM ಗುತ್ತಿಗೆ ನೌಕರ’ರನ್ನು ‘ಖಾಯಂ’ ಅಸಾಧ್ಯ: ಸಚಿವ ಯು.ಟಿ ಖಾದರ್

​ಬಾರ್ಸಿಲೋನಾ ಗ್ರಾಂಡ್ ಪ್ರಿಕ್ಸ್‌ನಲ್ಲಿ ಲೂಯಿಸ್ ಹ್ಯಾಮಿಲ್ಟನ್‌ಗೆ ಐತಿಹಾಸಿಕ ಜಯ; ಫೆರಾರಿ ಪರ ಮೊದಲ ಪ್ರಶಸ್ತಿ ಮುಡಿಗೇರಿಸಿಕೊಂಡ ದಿಗ್ಗಜ!

State News
KARNATAKA

BIG NEWS: ರಾಜ್ಯದ ಆರೋಗ್ಯ ಇಲಾಖೆಯ ‘NHM ಗುತ್ತಿಗೆ ನೌಕರ’ರನ್ನು ‘ಖಾಯಂ’ ಅಸಾಧ್ಯ: ಸಚಿವ ಯು.ಟಿ ಖಾದರ್

By ವಸಂತ ಬಿ ಈಶ್ವರಗೆರೆ KARNATAKA 2 Mins Read

ಮಂಗಳೂರು : “ಸರ್, ನಮಗೆ ಬರುತ್ತಿರುವ ಅಲ್ಪ ಸಂಬಳದಲ್ಲಿ ಜೀವನ ನಡೆಸಲು ಸಾಧ್ಯವಾಗುತ್ತಿಲ್ಲ. ಕಳೆದ 15 ವರ್ಷಗಳಿಂದ ಕನಿಷ್ಠ ವೇತನದಲ್ಲೇ…

ಬೆಂಗಳೂರಿನಲ್ಲಿ ಗ್ರಾಹಕರಿಗೆ ತಟ್ಟಿದ ಬೆಲೆ ಏರಿಕೆ ಬಿಸಿ: ಗಗನಕ್ಕೇರಿದ ಸೋನಾ ಸ್ಟೀಮ್, ಬಾಸುಮತಿ ಅಕ್ಕಿ ಬೆಲೆ!

ಸಾಗರ ನಗರಸಭೆ ‘ಮೇಸ್ತ್ರಿ ನಾಗರಾಜ್’ ಮಹಿಳೆಗೆ ಲೈಂಗಿಕ ಕಿರುಕುಳ; ನಾಳೆ ಅಮಾನತಿಗೆ ಆಗ್ರಹಿಸಿ ‘DSS ಪ್ರತಿಭಟನೆ’

ಬೆಂಗಳೂರಲ್ಲಿ ಪ್ರಿಯಕರನಿಂದಲೇ ಯುವತಿ ಕೊಲೆ ಕೇಸ್‌ಗೆ ಬಿಗ್ ಟ್ವಿಸ್ಟ್! ಮದುವೆ ವಿಷಯ ಮುಚ್ಚಿಟ್ಟು ಪ್ರೀತಿ, ಕೊನೆಗೆ ಕಗ್ಗೊಲೆ!

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.