ಹೈದರಾಬಾದ್: ನ್ಯಾಯಬೆಲೆ ಅಂಗಡಿಗಳ ಮೂಲಕ ಸರಬರಾಜು ಮಾಡುವ ಅಕ್ಕಿಯಲ್ಲಿ ಕೇಂದ್ರ ಮತ್ತು ರಾಜ್ಯಗಳ ಪಾಲು ಎಷ್ಟು ಎಂಬುದಕ್ಕೆ ಉತ್ತರ ನೀಡಲು ಸಾಧ್ಯವಾಗದ ಜಿಲ್ಲಾಧಿಕಾರಿಗೆ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಛೀಮಾರಿ ಹಾಕಿದ್ದಕ್ಕೆ ತೆಲಂಗಾಣ ಸಚಿವ ಕೆಟಿ ರಾಮರಾವ್ ತೀವ್ರ ಆಘಾತ ವ್ಯಕ್ತಪಡಿಸಿದ್ದಾರೆ.
ಕೆಟಿಆರ್ ಎಂದೇ ಖ್ಯಾತರಾಗಿರುವ ರಾಮರಾವ್ ಶುಕ್ರವಾರ ರಾತ್ರಿ ಟ್ವೀಟ್ ಮಾಡಿ, ʻಉನ್ನತ ಹುದ್ದೆಯಲ್ಲಿರುವವರ ಇಂತಹ ನಡವಳಿಕೆಯು ಕಠಿಣ ಪರಿಶ್ರಮಿ ಎಐಎಸ್ ಅಧಿಕಾರಿಗಳನ್ನು ಕುಗ್ಗಿಸುತ್ತದೆʼ ಎಂದು ಹೇಳಿದ್ದಾರೆ.
ಬೀರ್ಕೂರಿನ ಪಿಡಿಎಸ್ ಪಡಿತರ ಅಂಗಡಿಯೊಂದರ ಪರಿಶೀಲನೆ ವೇಳೆ ಕೇಂದ್ರ ಸಚಿವರು ಜಿತೇಶ್ ಪಾಟೀಲ್ ಅವರಿಗೆ ʻಇಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಚಿತ್ರ ಏಕೆ ಕಾಣೆಯಾಗಿದೆ ಎಂದು ಪ್ರಶ್ನಿಸಿದ್ದಾರೆ ಹಾಗೂ 2020 ರ ಮಾರ್ಚ್-ಏಪ್ರಿಲ್ನಿಂದ ಕೇಂದ್ರವು ರಾಜ್ಯ ಸರ್ಕಾರ ಮತ್ತು ಫಲಾನುಭವಿಗಳಿಗೆ ಕೇಂದ್ರವು 30-35 ರೂ. ಬೆಲೆಯ ಅಕ್ಕಿಯನ್ನು ಉಚಿತವಾಗಿ ನೀಡುತ್ತಿದೆʼ ಎಂದಿದ್ದಾರೆ ಎನ್ನಲಾಗಿದೆ.
ಸೀತಾರಾಮನ್ ಅವರು ಬಿಜೆಪಿಯ ‘ಲೋಕಸಭಾ ಪ್ರವಾಸ ಯೋಜನೆ’ಯ ಭಾಗವಾಗಿ ಜಹೀರಾಬಾದ್ ಸಂಸದೀಯ ಕ್ಷೇತ್ರದಲ್ಲಿ ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ರಾಜ್ಯಕ್ಕೆ ಆಗಮಿಸಿದ್ದರು.
BIGG NEWS : ‘ ಮುರುಘಾ ಮಠಕ್ಕೆ ಸೂಕ್ತ ಭದ್ರತೆ ನೀಡಲಾಗಿದೆ ‘: ಗೃಹ ಸಚಿವ ಅರಗ ಜ್ಞಾನೇಂದ್ರ ಪ್ರತಿಕ್ರಿಯೆ