ತಮಿಳುನಾಡು : ತಮಿಳುನಾಡಿನಲ್ಲಿ ಮಳೆಗೆ ಸಂಬಂಧಿತ ಘಟನೆಗಳಲ್ಲಿ ಮೂವರು ಸಾವಿನ್ನಪ್ಪಿದ್ದು, ಸಾವಿನ ಸಂಖ್ಯೆ 26 ಕ್ಕೆ ತಲುಪಿದೆ. ಸಂತ್ರಸ್ತರ ಕುಟುಂಬಕ್ಕೆ ಸರ್ಕಾರ ಪರಿಹಾರದ ಭಾಗವಾಗಿ 4 ಲಕ್ಷ ರೂ.ಘೋಷಿಸಿದೆ.
ಇಂದು ಸಾವನ್ನಪ್ಪಿದ ಮೂವರಲ್ಲಿ ಎರಡು ಸಾವುಗಳು ಚೆನ್ನೈನಲ್ಲಿ ವರದಿಯಾಗಿದ್ದು, ಒಬ್ಬರು ತಿರುವಳ್ಳೂರ್ ಜಿಲ್ಲೆಯಲ್ಲಿ ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ.
ಕಳೆದ 24 ಗಂಟೆಗಳಲ್ಲಿ ತಮಿಳುನಾಡಿನಲ್ಲಿ 10.04 ಮಿಮೀ ಮಳೆಯಾಗಿದೆ. ನಾಗಪಟ್ಟಣಂ ಜಿಲ್ಲೆಯ ಕೊಡಿಯಕರೈ ನಿಲ್ದಾಣದಲ್ಲಿ ಗರಿಷ್ಠ 9 ಸೆಂ.ಮೀ ಮಳೆಯಾಗಿದ್ದು, ರಾಮೇಶ್ವರಂ (ರಾಮನಾಥಪುರಂ) 8, ಕೊಟ್ಟಾರಂ (ಕನ್ಯಾಕುಮಾರಿ) ಮತ್ತು ಕುಲಶೇಖರಪಟ್ಟಿಣಂ (ತೂತುಕುಡಿ) ಕ್ರಮವಾಗಿ 7 ಸೆಂ.ಮೀ ಮಳೆಯಾಗಿದೆ.
ನವೆಂಬರ್ 4 ರಂದು ಭಾರೀ ಮಳೆಯಿಂದಾಗಿ 25 ಜಾನುವಾರುಗಳು ಮೃತಪಟ್ಟಿದ್ದು, 140 ಗುಡಿಸಲುಗಳು ಹಾನಿಗೊಳಗಾಗಿವೆ ಎಂದು ಸರ್ಕಾರ ಶನಿವಾರ ಮಾಹಿತಿ ನೀಡಿದೆ.
ಪ್ರತಿ ಸಂತ್ರಸ್ತ ಕುಟುಂಬಕ್ಕೆ ಮುಖ್ಯಮಂತ್ರಿಗಳ ಸಾರ್ವಜನಿಕ ಪರಿಹಾರ ನಿಧಿಯಿಂದ ₹ 4 ಲಕ್ಷ ಪರಿಹಾರ ನೀಡುವಂತೆ ಮುಖ್ಯಮಂತ್ರಿ ಎಂ ಕೆ ಸ್ಟಾಲಿನ್ ಆದೇಶಿಸಿದ್ದಾರೆ.
ಇದರ ಪರಿಣಾಮವಾಗಿ ರಾಜ್ಯ ಸಚಿವರಾದ ಕೆ ಎನ್ ನೆಹರು ಮತ್ತು ಪಿ ಕೆ ಶೇಖರ್ ಬಾಬು ಅವರು ಮೃತರ ಕುಟುಂಬಗಳನ್ನು ಖುದ್ದಾಗಿ ಭೇಟಿ ಮಾಡಿ, ಅವರಿಗೆ ಸಾಂತ್ವನ ಹೇಳಿದರು ಮತ್ತು ಘೋಷಿಸಿದಂತೆ ಪರಿಹಾರ ಧನವನ್ನು ವಿತರಿಸಿದರು.
ಮಳೆಯಿಂದಾಗಿ ತಮಿಳುನಾಡು 6 ಜಿಲ್ಲೆಗಳಲ್ಲಿ ಶಾಲಾ ರಜೆಗಳನ್ನು ಘೋಷಿಸಿದೆ. ಚೆನ್ನೈ ಸೇರಿದಂತೆ ಪ್ರಾದೇಶಿಕ ಹವಾಮಾನ ಕೇಂದ್ರವು ನವೆಂಬರ್ 6 ಭಾನುವಾರದವರೆಗೆ ಭಾರೀ ಮಳೆಯಾಗುವ ಮುನ್ಸೂಚನೆ ನೀಡಿದೆ.
ಮಳೆಯ ಬಗ್ಗೆ ಮಾಹಿತಿ ಪಡೆಯಲು ಮುಖ್ಯಮಂತ್ರಿಗಳು ಅಧಿಕಾರಿಗಳೊಂದಿಗೆ ನಿಯಮಿತವಾಗಿ ಸಭೆ ನಡೆಸುತ್ತಿದ್ದು, ಒಗ್ಗಟ್ಟಿನಿಂದ ಕೆಲಸ ಮಾಡಲು ಮತ್ತು ತ್ವರಿತವಾಗಿ ಸ್ಪಂದಿಸುವಂತೆ ಸೂಚಿಸಿದ್ದಾರೆ ಎನ್ನಲಾಗುತ್ತಿದೆ.
BREAKING NEWS: ಕರ್ನಾಟಕದಲ್ಲಿ ಜಾನುವಾರು ಸಾಗಣೆಗೆ ಆನ್ಲೈನ್ ಪಾಸ್ ಪರ್ಮಿಟ್ ಕಡ್ಡಾಯ, ನವೆಂಬರ್ 17ರಿಂದ ಜಾರಿಗೆ