Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಮನೆಗೆ ನುಗ್ಗಿ ಹಣ, ಚಿನ್ನ ದೋಚುತ್ತಿದ್ದಾಗಲೇ ಕಳ್ಳರನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ ಗ್ರಾಮಸ್ಥರು!

27/01/2026 5:47 PM

ಶಿವಮೊಗ್ಗದ ‘ತಾಳಗುಪ್ಪ ಗ್ರಾಮ ಪಂಚಾಯ್ತಿ ಮಳಿಗೆ’ಗೆ ತರಾತುರಿಯಲ್ಲಿ ಹರಾಜು: ಹಿಂದಿದೆ ಹಲವು ಅನುಮಾನ!

27/01/2026 5:36 PM

Watch Video: ರೋಡಲ್ಲಿ ಅಲ್ಲ, ‘ಲಿಫ್ಟ್’ನಲ್ಲಿದ್ದ ಮಹಿಳೆಯ ಸರವನ್ನೇ ಕಿತ್ತುಕೊಂಡು ಓಡಿದ ಕಳ್ಳ: ವೀಡಿಯೋ ವೈರಲ್

27/01/2026 5:23 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಶಿವಮೊಗ್ಗದ ‘ತಾಳಗುಪ್ಪ ಗ್ರಾಮ ಪಂಚಾಯ್ತಿ ಮಳಿಗೆ’ಗೆ ತರಾತುರಿಯಲ್ಲಿ ಹರಾಜು: ಹಿಂದಿದೆ ಹಲವು ಅನುಮಾನ!
KARNATAKA

ಶಿವಮೊಗ್ಗದ ‘ತಾಳಗುಪ್ಪ ಗ್ರಾಮ ಪಂಚಾಯ್ತಿ ಮಳಿಗೆ’ಗೆ ತರಾತುರಿಯಲ್ಲಿ ಹರಾಜು: ಹಿಂದಿದೆ ಹಲವು ಅನುಮಾನ!

By kannadanewsnow0927/01/2026 5:36 PM

ಶಿವಮೊಗ್ಗ: ಜಿಲ್ಲೆಯ ಸೊರಬ ವಿಧಾನಸಭಾ ವ್ಯಾಪ್ತಿಯ ತಾಳಗುಪ್ಪದ ಗ್ರಾಮ ಪಂಚಾಯ್ತಿಯ ಮಳಿಗೆಗಳನ್ನು ಸದ್ದಿಲ್ಲದೇ ತರಾತುರಿಯಲ್ಲಿ ಹರಾಜು ಮುಕ್ತಾಯಗೊಳಿಸಲಾಗಿದೆ. ಯಾವುದೇ ಪ್ರಚಾರವಿಲ್ಲದೇ ತಾಳಗುಪ್ಪ ಗ್ರಾಮ ಪಂಚಾಯ್ತಿ ಮಳಿಗೆಗಳ ಹರಾಜು ಪ್ರಕ್ರಿಯೆಗಳನ್ನು ಕೊನೆಗೊಳಿಸಿದ್ದರ ಹಿಂದೆ ಹಲವು ಅನುಮಾನಗಳು ಕಾಡುತ್ತಿವೆ.

ಹೌದು.. ಶಿವಮೊಗ್ಗ ಜಿಲ್ಲೆಯ ಸಾಗರ ತಾಲ್ಲೂಕಿನ, ಸೊರಬ ವಿಧಾನಸಭಾ ಕ್ಷೇತ್ರದ ತಾಳಗುಪ್ಪ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿನ ಮಳಿಗೆಗಳನ್ನು ಪ್ರಚಾರವೇ ಇಲ್ಲದೇ ಟೆಂಡರ್ ಕರೆಯಲಾಗಿದೆ. ದಿನಾಂಕ 22-01-2026ರಂದು ಟೆಂಡರ್ ಆಹ್ವಾನಿಸಿದಂತೆ ತಾಳಗುಪ್ಪ ಸಂತೆ ಸುಂಕದ ಹರಾಜು, ಹಸಿ ಮೀನು ಮಾರಾಟದ ಮೂರು ಅಂಗಡಿಗಳ ಹಕ್ಕು, 2 ಒಣ ಮೀನಿನ ಅಂಗಡಿ, ಕಸಾಯಿ ಅಂಗಡಿ ನಡೆಸೋದಕ್ಕೆ ಲೈಸೆನ್ಸ್, ಕೋಳಿ ಅಂಗಡಿ ನಡೆಸೋದಕ್ಕೆ ಲೈಸೆನ್ಸ್ ಫೀ ಕುರಿತ ಮಾಹಿತಿ ನೀಡಲಾಗಿದೆ. ಆದರೇ ಈ ಮಳಿಗೆಗಳ ಅವಧಿ ದಿನಾಂಕ 01-04-2026ರವರೆಗೆ ಇದೆ.

ಇನ್ನೂ ದಿನಾಂಕ 22-03-2026 ಬಾರದೇ ಇದ್ದರೂ ಆ ದಿನಾಂಕದಲ್ಲಿ ಪ್ರಕಟಿಸಿದಂತ ಪಾಪ್ಲೆಟ್ಸ್ ನಲ್ಲಿ ತಾಳಗುಪ್ಪದ ಬಸ್ ನಿಲ್ದಾಣದ ವಾಣಿಜ್ಯ ಮಳಿಗೆಗಳ ಎರಡು ಅಂಗಡಿಗಳ ಟೆಂಡರ್ ಗೆ ಕರೆಯಲಾಗಿದೆ. ಈ ಮಳಿಗೆಗೆಗಳನ್ನು ಈ ಹಿಂದೆ ಟೆಂಡರ್ ಹಿಡಿದು ವಾಣಿಜ್ಯ ಮಳಿಗೆಯನ್ನು ಪಡೆದಿರೋರ ಅವಧಿ ಮಾತ್ರ ದಿನಾಂಕ 01-04-2026ಕ್ಕೆ ಮುಕ್ತಾಯವಾಗಲಿದೆ.

ತಾಳಗುಪ್ಪ ಗ್ರಾಮ ಪಂಚಾಯ್ತಿ ಸದಸ್ಯರ ಅವಧಿ ಮುಕ್ತಾಯಕ್ಕೆ ಮುನ್ನಾ ಟೆಂಡರ್ ಮುಗಿಸೋದಕ್ಕೆ ತರಾತುರಿ?

ತಾಳಗುಪ್ಪ ಗ್ರಾಮ ಪಂಚಾಯ್ತಿ ಸದಸ್ಯರ ಅವಧಿ ಮುಂಬರುವಂತ ಮಾರ್ಚ್ ನಲ್ಲಿ ಅಂತ್ಯಗೊಳ್ಳಲಿದೆ. ಅದಕ್ಕೂ ಮುನ್ನಾ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ವಾಣಿಜ್ಯ ಮಳಿಗೆ ಸೇರಿದಂತೆ ಇತರೆ ಟೆಂಡರ್ ಗಳನ್ನು ಹರಾಜಿಗಿಟ್ಟು ತರಾತುರಿಯಲ್ಲಿ ನೀಡಲಾಗಿದೆ. ತಮ್ಮ ಅಧಿಕಾರ ಅವಧಿ ಮುಕ್ತಾಯಕ್ಕೆ ಮುನ್ನವೇ ಟೆಂಡರ್ ಮುಗಿಸೋದಕ್ಕೆ, ತಮ್ಮ ಪರಿಚಿತರಿಗೆ ಮಳಿಗೆಗಳನ್ನು ಕೊಡಿಸೋದಕ್ಕೆ ಈ ರೀತಿಯಾಗಿ ಟೆಂಡರ್ ಕರೆದು ಮುಕ್ತಾಯಗೊಳಿಸಿದಂತ ಆರೋಪ ಕೇಳಿ ಬಂದಿದೆ.

ಮೂರು ತಿಂಗಳ ಮೊದಲೇಕೆ ಟೆಂಡರ್ ಕರೆದಿದ್ದು?

ಯಾವುದೇ ವಾಣಿಜ್ಯ ಮಳಿಗೆಯ ಅವಧಿ ಮುಕ್ತಾಯವು ಒಂದು ಅಥವಾ ಎರಡು ತಿಂಗಳು ಹೊಸದಾಗಿ ಟೆಂಡರ್ ಕರೆಯುವುದು ಸರ್ವೇ ಸಾಮಾನ್ಯವಾದಂತ ಪ್ರಕ್ರಿಯೆಯಾಗಿದೆ. ಆದರೇ ತಾಳಗುಪ್ಪ ಗ್ರಾಮ ಪಂಚಾಯ್ತಿಯಲ್ಲಿ ಬೇಲಿಯೇ ಎದ್ದು ಹೊಲ ಮೇಯ್ದಂತೆ ಜನಪ್ರತಿನಿಧಿಗಳು, ಪಿಡಿಓ ಸಾಹೇಬ್ರು ಜೊತೆಗೂಡಿ ಮೂರು ತಿಂಗಳ ಮೊದಲೇ ಟೆಂಡರ್ ಕರೆದಿದ್ದು ಮಾತ್ರ ಹಲವು ಅನುಮಾನಗಳಿಗೆ ಕಾರಣವಾಗಿದೆ.

ಪಿಡಿಓ ಮೊಬೈಲ್ ಪೋನೇ ಸ್ವಿಚ್ ಆಫ್

ಸರ್ಕಾರ ನೀಡಿರುವಂತ ಮೊಬೈಲ್ ಸಂಖ್ಯೆಯನ್ನು ಕರ್ತವ್ಯ ನಿರತ ಅಧಿಕಾರಿ ತುರ್ತು ಸಂದರ್ಭ ಹೊರತಾಗಿ ಸ್ವಿಚ್ ಆಫ್ ಮಾಡುವಂತಿಲ್ಲ. ಆದರೇ ತಾಳಗುಪ್ಪ ಗ್ರಾಮ ಪಂಚಾಯ್ತಿ ಪಿಡಿಓ ಸಾಹೇಬ್ರು ಮಾತ್ರ ಕೆಲ ದಿನಗಳಿಂದ ಸ್ವಿಚ್ ಆಫ್ ಮಾಡಿದ್ದಾರೆ ಎನ್ನಲಾಗಿದೆ. ಇಂದು ಕೂಡ ನಿಮ್ಮ ಕನ್ನಡ ನ್ಯೂಸ್ ನೌ ಪಿಡಿಓ ಸಂಪರ್ಕಿಸಿ ಮಾಹಿತಿ ಪಡೆಯೋದಕ್ಕೆ ಕರೆ ಮಾಡಿದ್ರೇ ಸರ್ಕಾರಿ ನಂಬರ್ ಹಾಗೂ ಅವರ ಖಾಸಗಿ ನಂಬರ್ ಗಳೆರಡೂ ಸ್ವಿಚ್ ಆಫ್ ಆಗಿದ್ದು ಗಮನಕ್ಕೆ ಬಂದಿದೆ.

ಪ್ರಚಾರವೇ ಇಲ್ಲದೇ ಟೆಂಡರ್ ಮುಕ್ತಾಯ

ರಾಜ್ಯ ಸರ್ಕಾರದ ನಿಯಮಾನುಸಾರ ಸರ್ಕಾರಿ ಮಳಿಗೆ ಮಾರಾಟ ಸೇರಿದಂತೆ ಇತರೆ ಯಾವುದೇ ಮಾಹಿತಿಯನ್ನು ಸ್ಥಳೀಯ ಪತ್ರಿಕೆ ಇಲ್ಲವೇ ರಾಷ್ಟ್ರ ಮಟ್ಟದ ಪತ್ರಿಕೆಗಳಿಗೆ ಜಾಹೀರಾತು ನೀಡಿ ಪ್ರಚುರಗೊಳಿಸಬೇಕು. ಆ ಮೂಲಕ ಪೈಪೋಟಿ ಹುಟ್ಟು ಹಾಕಿ ಟೆಂಡರ್ ವೇಳೆಯಲ್ಲಿ ಅತಿ ಹೆಚ್ಚು ಬಿಡ್ ಗಳಿಗೆ ಮಾರಾಟ ಮಾಡುವಂತ ಕ್ರಮವಾಗಬೇಕು. ಆದರೇ ತಾಳಗುಪ್ಪ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಮಳಿಗೆ ಸೇರಿದಂತೆ ಇತರೆ ಟೆಂಡರ್ ಗಳ ಬಗ್ಗೆ ಯಾವುದೇ ಪ್ರಚಾರವನ್ನೇ ನೀಡಿಲ್ಲ ಎನ್ನಲಾಗುತ್ತಿದೆ.

ಒಂದಷ್ಟು ಪಾಪ್ಲೆಟ್ಸ್ ಮಾಡಿಸಿ ಕೆಲವೆಡೆ ಹಂಚಿದ್ದಾರೆಯೇ ಹೊರತು ಪತ್ರಿಕೆಗಳ ಜಾಹೀರಾತಾಗಲೀ, ಬೇರೆಯ ಮಾಧ್ಯಮಗಳಲ್ಲಿ ಪ್ರಚಾರವನ್ನೇ ನೀಡದೇ ಸದ್ದಿಲ್ಲದೇ ಇಂದು ಟೆಂಡರ್ ಪೂರ್ಣಗೊಳಿಸಲಾಗಿದೆ. ಹೆಚ್ಚು ಪ್ರಚಾರವು ತಾಳಗುಪ್ಪ ಗ್ರಾಮ ಪಂಚಾಯ್ತಿ ಮಳಿಗೆಗಳ ಟೆಂಡರ್ ಬಗ್ಗೆ ಆಗಿದ್ದರೇ 7,51,000 ರೂಪಾಯಿ ಅಲ್ಲ, ಇನ್ನೂ ಹೆಚ್ಚಿನ ಬಿಡ್ ಗೆ ಪೈಪೋಟಿ ನಡೆದು, ಮತ್ತಷ್ಟು ಆದಾಯ ಹರಿದು ಬರುತ್ತಿತ್ತು ಎಂಬುದು ಹಲವರ ಮಾತಾಗಿದೆ.

ಟೆಂಡರ್ ಪ್ರಕ್ರಿಯೆ ರದ್ದುಗೊಳಿಸಲು ಸಾರ್ವಜನಿಕರ ಆಗ್ರಹ

ಇಂದು ನಡೆದಂತ ತಾಳಗುಪ್ಪ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ವಾಣಿಜ್ಯ ಮಳಿಗೆ ಸೇರಿದಂತೆ ಇತರೆ ಟೆಂಡರ್ ಪ್ರಕ್ರಿಯೆ ಕಾನೂನಾತ್ಮಕವಾಗಿ ನಡೆದಿಲ್ಲ. ಇದರಲ್ಲಿ ಹಲವಾರು ಗೋಲ್ಮಾನ್ ನಡೆದಿರುವಂತ ಶಂಕೆಗಳಿವೆ. ಟೆಂಡರ್ ಪ್ರಕ್ರಿಯೆಯನ್ನು ಸದಸ್ಯರ ಕಾಲಾವಧಿಯ ಕೊನೆಯಲ್ಲಿ ನಡೆಸಿದ್ದು ಸರಿಯಲ್ಲ. ಪ್ರಚಾರ ನೀಡದೇ ಟೆಂಡರ್ ಕರೆದು ಮುಕ್ತಾಯಗೊಳಿಸಿರೋದರಿಂದ ಸರ್ಕಾರಕ್ಕೆ ಇನ್ನೂ ಹೆಚ್ಚಿನ ಆದಾಯ ಕೈತಪ್ಪಿದಂತೆ ಆಗಿದೆ. ಈ ಎಲ್ಲದರ ಹಿನ್ನಲೆಯಲ್ಲಿ ಸಂಬಂಧ ಪಟ್ಟಂತ ಅಧಿಕಾರಿಗಳು ಟೆಂಡರ್ ಪ್ರಕ್ರಿಯೆಯನ್ನೇ ರದ್ದುಗೊಳಿಸುವಂತೆ ತಾಳಗುಪ್ಪ ಗ್ರಾಮಸ್ಥರು ಆಗ್ರಹಿಸಿದ್ದಾರೆ. ಆ ನಿಟ್ಟಿನಲ್ಲಿ ಸಾಗರ ತಾಲ್ಲೂಕು ಆಡಳಿತ, ಶಿವಮೊಗ್ಗ ಜಿಲ್ಲಾಡಳಿತ ಕ್ರಮವಹಿಸುತ್ತಾ ಎಂಬುದನ್ನು ಕಾದು ನೋಡಬೇಕಿದೆ.

ವರದಿ; ವಸಂತ ಬಿ ಈಶ್ವರಗೆರೆ, ಸಂಪಾದಕರು

Watch Video: ರೋಡಲ್ಲಿ ಅಲ್ಲ, ‘ಲಿಫ್ಟ್’ನಲ್ಲಿದ್ದ ಮಹಿಳೆಯ ಸರವನ್ನೇ ಕಿತ್ತುಕೊಂಡು ಓಡಿದ ಕಳ್ಳ: ವೀಡಿಯೋ ವೈರಲ್

BREAKING: ಶಾಸಕ ವಿನಯ್ ಕುಲಕರ್ಣಿಗೆ ಬಿಗ್ ಶಾಕ್: ಕೊಲೆ ಕೇಸಲ್ಲಿ ಸಲ್ಲಿಸಿದ್ದ ಜಾಮೀನು ಅರ್ಜಿ ವಜಾ

Share. Facebook Twitter LinkedIn WhatsApp Email

Related Posts

ಮನೆಗೆ ನುಗ್ಗಿ ಹಣ, ಚಿನ್ನ ದೋಚುತ್ತಿದ್ದಾಗಲೇ ಕಳ್ಳರನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ ಗ್ರಾಮಸ್ಥರು!

27/01/2026 5:47 PM1 Min Read

BREAKING: ಶಾಸಕ ವಿನಯ್ ಕುಲಕರ್ಣಿಗೆ ಬಿಗ್ ಶಾಕ್: ಕೊಲೆ ಕೇಸಲ್ಲಿ ಸಲ್ಲಿಸಿದ್ದ ಜಾಮೀನು ಅರ್ಜಿ ವಜಾ

27/01/2026 5:15 PM1 Min Read

BREAKING: ಶಿವಮೊಗ್ಗದಲ್ಲಿ ಸರ್ಕಾರಿ ಶಾಲೆಯಲ್ಲಿ ಮಾತ್ರೆ ಸೇವಿಸಿದ್ದ 59 ವಿದ್ಯಾರ್ಥಿಗಳು ಅಸ್ವಸ್ಥ

27/01/2026 5:02 PM1 Min Read
Recent News

ಮನೆಗೆ ನುಗ್ಗಿ ಹಣ, ಚಿನ್ನ ದೋಚುತ್ತಿದ್ದಾಗಲೇ ಕಳ್ಳರನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ ಗ್ರಾಮಸ್ಥರು!

27/01/2026 5:47 PM

ಶಿವಮೊಗ್ಗದ ‘ತಾಳಗುಪ್ಪ ಗ್ರಾಮ ಪಂಚಾಯ್ತಿ ಮಳಿಗೆ’ಗೆ ತರಾತುರಿಯಲ್ಲಿ ಹರಾಜು: ಹಿಂದಿದೆ ಹಲವು ಅನುಮಾನ!

27/01/2026 5:36 PM

Watch Video: ರೋಡಲ್ಲಿ ಅಲ್ಲ, ‘ಲಿಫ್ಟ್’ನಲ್ಲಿದ್ದ ಮಹಿಳೆಯ ಸರವನ್ನೇ ಕಿತ್ತುಕೊಂಡು ಓಡಿದ ಕಳ್ಳ: ವೀಡಿಯೋ ವೈರಲ್

27/01/2026 5:23 PM

BREAKING : ‘ಸ್ಪೋರ್ಟ್ಸ್ ಪೂಮಾ’ದಲ್ಲಿ $1.8 ಬಿಲಿಯನ್’ಗೆ 29% ಪಾಲು ಖರೀದಿಸಿದ ಚೀನಾದ ‘ಆಂಟಾ’

27/01/2026 5:18 PM
State News
KARNATAKA

ಮನೆಗೆ ನುಗ್ಗಿ ಹಣ, ಚಿನ್ನ ದೋಚುತ್ತಿದ್ದಾಗಲೇ ಕಳ್ಳರನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ ಗ್ರಾಮಸ್ಥರು!

By kannadanewsnow0927/01/2026 5:47 PM KARNATAKA 1 Min Read

ತುಮಕೂರು: ಮನೆಯೊಂದರ ಒಳಗೆ ಕಳ್ಳತನಕ್ಕೆ ನುಗ್ಗಿ, ಚಿನ್ನಾಭರಣ ಕದಿಯುತ್ತಿದ್ದಂತ ಸಂದರ್ಭದಲ್ಲಿಯೇ ಕಳ್ಳರನ್ನು ರೆಡ್ ಹ್ಯಾಂಡ್ ಆಗಿ ಗ್ರಾಮಸ್ಥರು ಹಿಡಿದಿರುವಂತ ಘಟನೆ…

ಶಿವಮೊಗ್ಗದ ‘ತಾಳಗುಪ್ಪ ಗ್ರಾಮ ಪಂಚಾಯ್ತಿ ಮಳಿಗೆ’ಗೆ ತರಾತುರಿಯಲ್ಲಿ ಹರಾಜು: ಹಿಂದಿದೆ ಹಲವು ಅನುಮಾನ!

27/01/2026 5:36 PM

BREAKING: ಶಾಸಕ ವಿನಯ್ ಕುಲಕರ್ಣಿಗೆ ಬಿಗ್ ಶಾಕ್: ಕೊಲೆ ಕೇಸಲ್ಲಿ ಸಲ್ಲಿಸಿದ್ದ ಜಾಮೀನು ಅರ್ಜಿ ವಜಾ

27/01/2026 5:15 PM

BREAKING: ಶಿವಮೊಗ್ಗದಲ್ಲಿ ಸರ್ಕಾರಿ ಶಾಲೆಯಲ್ಲಿ ಮಾತ್ರೆ ಸೇವಿಸಿದ್ದ 59 ವಿದ್ಯಾರ್ಥಿಗಳು ಅಸ್ವಸ್ಥ

27/01/2026 5:02 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.