ಬೆಂಗಳೂರು: ಕಳೆದ ಎರಡು ವರ್ಷಗಳಿಂದ ತೀವ್ರ ಭುಜದ ಸಂಧಿವಾತದಿಂದ ಬಳಲುತ್ತಿದ್ದ 68 ವರ್ಷದ ಮಹಿಳೆಗೆ ನಾಗರಭಾವಿಯ ಫೋರ್ಟಿಸ್ ಆಸ್ಪತ್ರೆ ವೈದ್ಯರ ತಂಡ ಯಶಸ್ವಿಯಾಗಿ ಚಿಕಿತ್ಸೆ ನೀಡಿದ್ದಾರೆ.
ಡಾ. ಮಂಜುನಾಥ್ ಕೋಡಿಹಳ್ಳಿ, ಸಲಹೆಗಾರ – ಆರ್ಥೋಪೆಡಿಕ್ಸ್, ಫೋರ್ಟಿಸ್ ಆಸ್ಪತ್ರೆ ನಾಗರಭವಿ ಮತ್ತು ಅವರ ತಂಡದ ತಜ್ಞರ ಆರೈಕೆಯಡಿಯಲ್ಲಿ ಹಿಮ್ಮುಖ ಒಟ್ಟು ಭುಜದ ಬದಲಿ ಶಸ್ತ್ರಚಿಕಿತ್ಸೆಯನ್ನು ನಡೆಸಲಾಯಿತು. ಭುಜದ ಚಲನೆ ಮತ್ತು ಕಾರ್ಯದಲ್ಲಿ ಗಮನಾರ್ಹ ಸುಧಾರಣೆಯೊಂದಿಗೆ ಶಸ್ತ್ರಚಿಕಿತ್ಸೆಯ ನಂತರದ ಒಂದು ದಿನದೊಳಗೆ ರೋಗಿಯನ್ನು ಬಿಡುಗಡೆ ಮಾಡಲಾಯಿತು.
ರೋಗಿಯಾದ ಶ್ರೀಮತಿ ಬಸಂತಿ, ನಿವೃತ್ತ ಶಾಲಾ ಶಿಕ್ಷಕರು ಮತ್ತು ಬೆಂಗಳೂರು ನಿವಾಸಿ ಆದ ಇವರು, ನಿರಂತರ ಭುಜದ ನೋವಿನಿಂದ ಬಳಲುತ್ತಿದ್ದರು. ಈ ನೋವು ಹೆಚ್ಚುತ್ತಲೇ ಹೋಯಿತು. ದೈನಂದಿಕ ಚಟುವಟಿಕಗಳಾದ, ಕೂದಲನ್ನು ಬಾಚಿಕೊಳ್ಳುವುದು, ಅಡುಗೆ ಮಾಡುವುದು ಮತ್ತು ಒಂದು ಕಪ್ ಚಹಾವನ್ನು ಎತ್ತಲು ಸಹ ಆಗದ ಸ್ಥಿತಿಗೆ ತಲುಪಿದರು. ನಗರದಾದ್ಯಂತ ಹಲವಾರು ಆಸ್ಪತ್ರೆಗಳಿಗೆ ಭೇಟಿ ನೀಡಿದರೂ ಯಾವುದೇ ಪ್ರಯೋಜನವಾಗಲಿಲ್ಲ. ಅವರ ನಿರಂತರ ನೋವು ನಿದ್ರಿಸಲಿ ಸಹ ಆಗದ ಸ್ಥಿತಿ ನಿರ್ಮಾಣವಾಯಿತು. ಫೋರ್ಟಿಸ್ ಆಸ್ಪತ್ರೆಗೆ ದಾಖಲಾದ ಬಳಿಕ ಸಂಪೂರ್ಣ ತಪಾಸಣೆಗೆ ಒಳಗಾದರು. ಆವರ್ತಕ ಪಟ್ಟಿಯ ಟಿಯರ್ ಪತ್ತೆಹಚ್ಚಿದರು, ಇದು ಭುಜದ ಸ್ನಾಯುಗಳನ್ನು ಮೂಳೆಗಳಿಗೆ ಸಂಪರ್ಕಿಸುವ ಅಂಗಾಂಶವಾಗಿದೆ, ಈ ಸಂಧಿವಾತದಿಂದ ನೋವು, ದೌರ್ಬಲ್ಯ ಕಾಣಿಸುತ್ತಿತ್ತು. ಹೀಗಾಗಿ ಅವರಿಗೆ ಹಿಮ್ಮುಖ ಭುಜದ ಬದಲಿ ಶಸ್ತ್ರಚಿಕಿತ್ಸೆ ಶಿಫಾರಸು ಮಾಡಿತು ಎಂದು ಡಾ.ಮಂಜುನಾಥ್ ಕೋಡಿಹಳ್ಳಿ ವಿವರಿಸಿದರು. ಸಾಕಷ್ಟು ಜನರು ಇಂತಹ ಸಮಸ್ಯೆ ದೀರ್ಘಕಾಲದಿಂದ ಬಳಲುತ್ತಿರುತ್ತಾರೆ. ಇದಕ್ಕೆ ಹಿಮ್ಮುಖ ಭುಜದ ಬದಲಿ ಶಸ್ತ್ರಚಿಕಿತ್ಸೆ ಹೆಚ್ಚು ಸೂಕ್ತ.
ಈ ರೋಗಿಗೆ ಶಸ್ತ್ರಚಿಕಿತ್ಸೆ ವೇಳೆ ಈಗಾಗಲೇ ಹಾನಿಯಾಗಿದ್ದ ಕೀಲಿನ ಚಲನಶೀಲತೆಯನ್ನು ಸಹ ಸುಧಾರಿಸಲು ಕೃತಕ ಇಂಪ್ಲಾಂಟ್ ಸಹ ಮಾಡಲಾಯಿತು ಎಂದು ಹೇಳಿದರು. ತೀವ್ರವಾದ ಭುಜದ ಹಾನಿ ಹೊಂದಿರುವ ರೋಗಿಗಳಿಗೆ ಈ ರೀತಿಯ ಶಸ್ತ್ರಚಿಕಿತ್ಸೆ ವಿಶೇಷವಾಗಿ ಪ್ರಯೋಜನಕಾರಿಯಾಗಿದೆ ಎಂದರು.
ವಿಶ್ವ ದರ್ಜೆಯ, ಪೇಟೆಂಟ್ ಉಳ್ಳ ಎರಡು ಬಣ್ಣ-ಲೇಪಿತ ಉತ್ಪನ್ನಗಳನ್ನು ಬಿಡುಗಡೆ ಮಾಡಿದ ಎಎಂ/ಎನ್ಎಸ್ ಇಂಡಿಯಾ