ಮೈಸೂರು: ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಭಾರತ್ ಜೋಡೋ ಯಾತ್ರೆಯಲ್ಲಿ ಪಾಲ್ಗೊಳ್ಳಲು ಇಂದು ಮೈಸೂರಿಗೆ ಆಗಮಿಸಿದ್ದಾರೆ. ಮೈಸೂರು ದೇವಿ ಚಾಮುಂಡೇಶ್ವರಿ ಬೆಟ್ಟಕ್ಕೆ ಭೇಟಿ ಕೊಟ್ಟಿದ್ದರು. ನಂತರ ಅವರು ಮಡಿಕೇರಿಗೆ ರೆಸಾರ್ಟ್ ಗೆ ತೆರಳಿ ವಿಶ್ರಾಂತಿ ಪಡೆಯಲಿದ್ದಾರೆ ಎಂದು ಹೇಳಲಾಗಿತ್ತು. ಇದೀಗ ಸೋನಿಯಾ ಗಾಂಧಿ ಅವರ ರೂಟ್ ಮ್ಯಾಪ್ ಬದಲಾಗಿದೆ.
ಮಡಿಕೇರಿ ಬದಲು ಕಬಿನಿಯತ್ತ ಸೋನಿಯಾ ಗಾಂಧಿ ತೆರಳಿದ್ದಾರೆ. ಕಬಿನಿಯ ರೆಸಾರ್ಟ್ ವೊಂದರಲ್ಲಿ ಸೋನಿಯಾ ಅವರು ಉಳಿದುಕೊಳ್ಳಲಿದ್ದಾರೆ.
ಇತ್ತ, ಭೋಜನದ ವಿರಾಮ ನಂತರ ಮತ್ತೆ ಭಾರತ್ ಜೋಡೋ ಯಾತ್ರೆ ಆರಂಬಗೊಂಡಿದೆ. ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣದಿಂದ ಯಾತ್ರೆ ಹೊರಟಿದೆ. ಈ ಪಾದಯಾತ್ರೆಯಲ್ಲಿ ಜಮೀರ್ ಭಾಗಿಯಾಗಿದ್ದಾರೆ. ಪಾಂಡವಪುರದವರೆಗೆ ರಾಹುಲ್ ಗಾಂಧಿ ಅವರು ಹೆಜ್ಜೆ ಹಾಕಲಿದ್ದಾರೆ.