ಚಿಕ್ಕಬಳ್ಳಾಪುರ : ಬೆಂಗಳೂರಿನಲ್ಲಿ ಬಸವ ಸಂಸ್ಕೃತಿ ಅಭಿಯಾನ ಕಾರ್ಯಕ್ರಮ ವಿಚಾರವಾಗಿ, ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ವಾಗ್ದಾಳಿ ನಡೆಸಿದ್ದು, ಸಿದ್ದರಾಮಯ್ಯ ತಂಡ ಹಿಂದೂ ಧರ್ಮ ಒಡೆಯಲು ಪ್ರಯತ್ನಿಸುತ್ತಿದೆ ಬಸವಣ್ಣನವರು ಮೂರ್ತಿ ಪೂಜಕರು, ಅಂಕಿತನಾಮ ಕೂಡಲಸಂಗಮದೇವ. ಶಿವನ ಹೆಸರಿನಲ್ಲಿ ಬಸವಣ್ಣನವರ ವಚನಗಳಿವೆ. ಬಸವಣ್ಣನ ಹೆಸರನ್ನು ಕೆಲವು ಸ್ವಾಮೀಜಿಗಳು ಬಿಸಿನೆಸ್ ಮಾಡಿಕೊಂಡಿದ್ದಾರೆ. ಈ ನಕ್ಸಲೆಟ್ ಸ್ವಾಮಿಗಳು ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ ಮನೆಯಲ್ಲಿ ಇರುತ್ತಾರೆ.
ಚಿಕ್ಕಬಳ್ಳಾಪುರದಲ್ಲಿ ಮಾತನಾಡಿದ ಅವರು, ಬಸವತತ್ವ ಅಂತಾರಲ್ಲ ಆ ಸ್ವಾಮಿಗಳಿಗೆ ಏನು ಗೊತ್ತಿದೆ? ಬಸವಣ್ಣ ಹುಟ್ಟಿದ್ದು ವಿಜಯಪುರ ಜಿಲ್ಲೆಯಲ್ಲಿ ಐಕ್ಯ ಆಗಿದ್ದು ಕೂಡ ಅಲ್ಲಿಯೇ. ಸನಾತನ ಧರ್ಮವನ್ನು ಬಯ್ಯುವ ನಕ್ಸಲೆಟ್ ಗ್ಯಾಂಗ್. ಕೆಲ ನಕ್ಸಲೆಟ್ ಸ್ವಾಮೀಜಿಗಳು ತಮ್ಮ ಮನಸ್ಸಿಗೆ ಬಂದಂತೆ ಕರೆಯುತ್ತಿದ್ದರು ಓಂ ಶ್ರೀ ಗುರು ಲಿಂಗ ಬಸವ ಸ್ವಾಮಿ ನಮಃ ಅಂತ ಕರೆಯುತ್ತಿದ್ದರು. ಈಗ ಶ್ರೀ ಗುರುಲಿಂಗ ಸ್ವಾಮಿ ನಮಃ ಅಂತ ಕರೆಯುತ್ತಿದ್ದಾರೆ ಮುಂದಿನ ದಿನಗಳಲ್ಲಿ ಇವರೆಲ್ಲ ಬಸವಲಿಂಗ ಅಂತ ಕರೆಯುತ್ತಾರೆ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ವಾಗ್ದಾಳಿ ನಡೆಸಿದರು
ಬಸವ ಸಂಸ್ಕೃತಿ ಮಾಡುವವರು ಎಷ್ಟು ಅಂತರ್ಜಾತಿ ವಿವಾಹ ಮಾಡಿದ್ದೀರಿ? ಬಸವಣ್ಣನವರು ಅಸ್ಪೃಶ್ಯರ ಜೊತೆ ಬ್ರಾಹ್ಮಣರ ಮದುವೆ ಮಾಡಿಸಿದರು. ಸಮಾನತೆ ಸಲುವಾಗಿ ಅನ್ನದಾಸೋಹ ಆರಂಭಿಸಿದ್ದರು. ನಿಮ್ಮ ಮಠಗಳಲ್ಲಿ ಅಸ್ಪೃಶ್ಯರ ಜೊತೆಗೆ ಲಿಂಗಾಯತರ ಮದುವೆ ಮಾಡಿಸಿದ್ದೀರಾ? ಬಸವ ಸಂಸ್ಕೃತಿ ಅಭಿಯಾನದಲ್ಲಿ ಭಾಗಿಯಾದ ಎಲ್ಲಾ ಸ್ವಾಮೀಜಿಗಳಿಗೆ ಬಸನಗೌಡ ಪಾಟೀಲ್ ಪ್ರಶ್ನಿಸಿದರು. ನೀವೆಲ್ಲರೂ ಬಸವಣ್ಣನನ್ನು ನಕ್ಸಲಿಯ ನಾಯಕನನ್ನಾಗಿ ಮಾಡುತ್ತಿದ್ದೀರಿ. ಜಗಜ್ಯೋತಿ ಬಸವಣ್ಣನವರು ಎಂದು ಹಿಂದೂ ಧರ್ಮವನ್ನು ಬೈದಿಲ್ಲ ಹಿಂದೂ ಧರ್ಮದ ನ್ಯೂನ್ಯತೆಗಳ ಬಗ್ಗೆ ಬಸವಣ್ಣನವರು ಹೇಳಿದ್ದಾರೆ ಎಂದು ವಾಗ್ದಾಳಿ ನಡೆಸಿದರು.