ಬೀದರ್ : ತಲವಾರ್ ತೆಗೆದುಕೊಂಡು ರಸ್ತೆಯಲ್ಲಿ ಬೇಕಾವಿಟ್ಟಿ ವಾಹನ ಚಲಾಯಿಸಿ ಸಿಖ್ ಯುವಕರು ಪುಂಡಾಟ ಮೆರೆದಿದ್ದಾರೆ.
ಪುಂಡಾಟ ಮೆರೆದ ಯುವಕರನ್ನು ಪ್ರಶ್ನೆ ಮಾಡಿದಕ್ಕೆ ಪೊಲೀಸರ ಮೇಲೆ ಹಲ್ಲೆಗೆ ಮುಂದಾದ ಘಟನೆ ಬೀದರ್ ನ ಅಂಬೇಡ್ಕರ್ ವೃತ್ತದ ಬಳಿ ನಡೆದಿದೆ. ತಲವಾರ್ ಬಿಸಾಡುವಾಗ ಓರ್ವ ವ್ಯಕ್ತಿಯ ಕೈಗೆ ಗಾಯವಾಗಿದ್ದು, ಪೊಲೀಸರು ಯುವಕರಿಗೆ ಪೊಲೀಸರು ಲಾಠಿ ರುಚಿ ತೋರಿಸಿದ್ದಾರೆ.
ನಿನ್ನೆ ಗುರುನಾನಕ್ ಜಯಂತಿ ಹಿನ್ನೆಲೆ ದೇಶದ ವಿವಿಧ ಕಡೆಯಿಂದ ಆಗಮಿಸಿದ್ದ ನೂರಾರು ಸಿಖ್ ಧರ್ಮದ ಯುವಕರು ಬೀದರ್ ನ ಐತಿಹಾಸಿಕ ಗುರುಧ್ವಾರಕ್ಕೆ ಭೇಟಿ ನೀಡಿದ್ದರು, ಈ ವೇಳೆ ತಲವಾರ್ ತೆಗೆದುಕೊಂಡು ರಸ್ತೆಯಲ್ಲಿ ಬೇಕಾವಿಟ್ಟಿ ವಾಹನ ಚಲಾಯಿಸಿ ಪುಂಡಾಟ ಮೆರೆದಿದ್ದಾರೆ. ಈ ವೇಳೆ ಪೊಲೀಸರು ಹಾಗೂ ಯುವಕರ ನಡುವೆ ವಾಗ್ವಾದ ನಡೆದಿದ್ದು, ಪೊಲೀಸರು ಯುವಕರ ವಿರುದ್ಧ ಲಾಠಿ ಚಾರ್ಜ್ ಬೀಸಿದ್ದಾರೆ.