ಕೋಲಾರ: ಮಾಜಿ ಸಿಎಂ ಸಿದ್ಧರಾಮಯ್ಯ ( Farmer CM Siddaramaiah ) ಅವರು ಯಾವ ಕ್ಷೇತ್ರದಿಂದ ಸ್ಪರ್ಧಿಸಲಿದ್ದಾರೆ ಎನ್ನುವುದೇ ಈಗ ಬಿಸಿ ಬಿಸಿ ಚರ್ಚೆ ನಡೆಯುತ್ತಿದೆ. ಮುಂಬರುವಂತ ವಿಧಾನಸಭಾ ಚುನಾವಣೆಗೆ ( Karnataka Assembly Election -2023 ) ಮತ್ತೆ ಕ್ಷೇತ್ರ ಬದಲಿಸೋ ಹಾದಿ ಹಿಡಿರುವಂತ ಅವರು, ಈಗ ಕೋಲಾರದಿಂದ ಬಹುತೇಕ ಸ್ಪರ್ಧಿಸೋದು ಫಿಕ್ಸ್ ಆದಂತೆ ಆಗಿದೆ. ಹೀಗಾಗಿಯೇ ನಾಮಪತ್ರ ಸಲ್ಲಿಸೋದಕ್ಕೆ ಮತ್ತೆ ಬರುತ್ತೇನೆ ಎಂಬುದಾಗಿಯೂ ಅವರು ಹೇಳಿದ್ದಾರೆ ಎನ್ನಲಾಗಿದೆ.

BIGG NEWS: ಪ್ರಸಿದ್ಧ ಫುಟ್ಬಾಲ್ ಕ್ಲಬ್ ‘ಲಿವರ್ ಪೂಲ್’ ಖರೀದಿಗೆ ‘ಮುಖೇಶ್ ಅಂಬಾನಿ’ ಬಿಡ್ | Mukesh Ambani enters race to buy Liverpool

ಇಂದು ಕೋಲಾರಕ್ಕೆ ವಿಶೇಷ ಬಸ್ ನಲ್ಲಿ ಪ್ರವಾಸ ಕೈಗೊಂಡಿರುವಂತ ವಿಪಕ್ಷ ನಾಯಕ ಸಿದ್ಧರಾಮಯ್ಯ ಅವರು, ಕೋಲಾರಮ್ಮನ ದರ್ಶನ ಪಡೆದು, ಅಲ್ಲಿಂದ ಚರ್ಚ್ ಗೂ ತೆರಳಿದರು. ಈ ಬಳಿಕ ಮಾತನಾಡಿದಂತ ಅವರು, ಕೋಲಾರಕ್ಕೆ ಬರುವಂತೆ ರಮೇಶ್ ಕುಮಾರ್ ಹಾಗೂ ಶಾಸಕರು ಸ್ವಾಗತಿಸುತ್ತಿದ್ದಾರೆ. ಹೀಗಾಗಿಯೇ ಭೇಟಿ ವೇಳೆ ಅದ್ದೂರಿಯಾಗಿ ಸ್ವಾಗತ ಸಿಕ್ಕಿದೆ ಎಂದರು.

ನಿಜಕ್ಕೂ ಇದು KSRTC ಬಸ್ ನಿರ್ವಾಹಕನ ಕರ್ತವ್ಯ ಪ್ರಜ್ಞೆ, ಪ್ರಯಾಣಿಕರ ಸುರಕ್ಷತೆ ಅಂದರೆ: ಅಂತದ್ದೇನು ಅಂತ ಈ ಸುದ್ದಿ ಓದಿ.!

ಮುಂಬರುವಂತ ವಿಧಾನಸಭಾ ಚುನಾವಣೆಯಲ್ಲಿ ಕೋಲಾರದಿಂದ ಸ್ಪರ್ಧೆ ಮಾಡುವಂತೆ ನನ್ನ ಮೇಲೆ ಒತ್ತಡ ಬರುತ್ತಿದೆ. ನಾನು ಈಗ ಬಾದಾಮಿ ಕ್ಷೇತ್ರದ ಶಾಸಕನಾಗಿದ್ದೇನೆ. ಆದ್ರೇ ವರುಣಾ, ಬಾದಾಮಿಯಿಂದಲೂ ಸ್ಪರ್ಧೆಸುವಂತೆ ಹೇಳುತ್ತಿದ್ದಾರೆ. ಈ ನಡುವೆಯೂ ಅದ್ದೂರಿಯಾಗಿ ಸ್ವಾಗತಿದಿಂದ ಕೋಲಾರದ ಜನತೆಗೆ ಧನ್ಯವಾದ, ಜಿಲ್ಲೆಯ ಜನತೆಗೆ ಅಬಾರಿ ಎಂದು ಹೇಳಿದರು.

BIG NEWS: 11,000 ಸಿಬ್ಬಂದಿಯನ್ನು ಕಡಿತಗೊಳಿಸಿದ ಫೇಸ್ ಬುಕ್ ಒಡೆತನದ ಮೆಟಾ | Facebook cut staff

ನಾನು ಸಿಎಂ ಆಗಿ ಮಾಡಿದಂತ ಆಡಳಿತವನ್ನು ನೀವು ನೋಡಿದ್ದೀರಿ. ಸಂವಿಧಾನದ ಅಡಿಯಲ್ಲಿ ಯಾವುದೇ ಧರ್ಮದ ಆಧಾರದ ಮೇಲೆ ಕೆಲಸ ಮಾಡದೇ, ಧರ್ಮಾತೀತವಾಗಿ ಕೆಲಸ ಮಾಡಿದ್ದೇನೆ. ಆ ಹಿನ್ನಲೆಯಲ್ಲಿಯೇ ನಾನು ನಾಮಪತ್ರ ಸಲ್ಲಿಸೋದಕ್ಕೆ ಮತ್ತೆ ಕೋಲಾರಕ್ಕೆ ಬರುತ್ತೇನೆ ಎಂಬುದಾಗಿ ಹೇಳುವ ಮೂಲಕ ಕೋಲಾರದಿಂದ ಸ್ಪರ್ಧಿಸೋ ಇಂಗಿತವನ್ನು ಹೊರ ಹಾಕಿದರು.

Share.
Exit mobile version