ನವದೆಹಲಿ: ದೇಶವು ಸ್ವಾತಂತ್ರ್ಯದ 75 ನೇ ವರ್ಷವನ್ನು ಆಚರಿಸುತ್ತಿರುವಾಗ ಮತ್ತು ಸ್ವಾತಂತ್ರ್ಯ ಹೋರಾಟದ ಭಾಗವಾಗಿದ್ದವರ ತ್ಯಾಗವನ್ನು ನೆನಪಿಸಿಕೊಳ್ಳುತ್ತಿರುವಾಗ, ಉತ್ತರಾಖಂಡದ ಹಲ್ದ್ವಾನಿಯ ಕುಟುಂಬವು 38 ವರ್ಷಗಳ ಸುದೀರ್ಘ ಕಾಯುವಿಕೆ ಕೊನೆಯಾಗಿದೆ.
1984ರಲ್ಲಿ ಸಚೆನ್ ನಲ್ಲಿ ನಡೆದ ಆಪರೇಷನ್ ಮೇಘದೂತ್ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದ ಲ್ಯಾನ್ಸ್ ನಾಯಕ್ ಚಂದ್ರ ಶೇಖರ್ ಅವರ ಪಾರ್ಥಿವ ಶರೀರವು ಆಗಸ್ಟ್ 13ರಂದು ಹಿಮನದಿಯ ಹಳೆಯ ಬಂಕರ್ ನಲ್ಲಿ ಪತ್ತೆಯಾಗಿದೆ ಎನ್ನಲಾಗಿದೆ. ಮೇ 29, 1984 ರಂದು ಸಿಯಾಚಿನ್ ನೀರ್ಗಲ್ಲನ್ನು ಆಕ್ರಮಿಸಲು ಆಪರೇಷನ್ ಮೇಘದೂತ್ ಅಡಿಯಲ್ಲಿ ನಡೆದ ಮೊದಲ ಕಾರ್ಯಾಚರಣೆಗಳಲ್ಲಿ ಇದು ಒಂದಾಗಿದೆ. ಲ್ಯಾನ್ಸ್ ನಾಯ್ಕ್ ಚಂದ್ರಶೇಖರ್ ಅವರು ಅಸ್ಥಿಪಂಜರದ ಭಾಗಗಳು ಸಿಕ್ಕಿದ್ದು, ಈಗ ಅವುಗಳನ್ನು ಸಕಲ ಸರ್ಕಾರಿ ಗೌರವಗಳೊಂದಿಗೆ ಸೇನೆ ಅವರ ಊರಿಗೆ ನೀಡಿದ ಬಳಿಕ ಅಲ್ಲಿ, ಅಂತಿಮ ಸಂಸ್ಕಾರ ನೇರವೇರಲಿದೆ ಎನ್ನಲಾಗಿದೆ.