ಬೆಂಗಳೂರು : ಹಣಕ್ಕಾಗಿ, ಆಸ್ತಿಗಾಗಿ ಮಕ್ಕಳು ತಂದೆ ತಾಯಿಯರ ಮೇಲೆ ಹಲ್ಲೆ ಮಾಡುವುದು ಅಥವಾ ತಂದೆ-ತಾಯಿರನ್ನು ಕೊಲ್ಲುವುದನ್ನು ನೋಡಿದ್ದೇವೆ ಕೇಳಿದ್ದೇವೆ. ಆದರೆ ಇಲ್ಲಿ ಒಬ್ಬ ಪಾಪಿ ತಂದೆ ತನ್ನ ಮಗನಿಗೆ ಚಿಕಿತ್ಸೆ ಕೊಡಿಸಲು ಹಣ ಇಲ್ಲ ಎಂದು ವಿಷ ಹಾಕಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಹೌದು ಬೆಂಗಳೂರಿನ ಬಾಗಲೂರುನಲ್ಲಿ ಮಗನ ಚಿಕಿತ್ಸೆಗೆ ಹಣವಿಲ್ಲದೇ ಬುದ್ದಿಮಾಂದ್ಯ ಮಗುವಿಗೆ ತನ್ನ ಕೈಯ್ಯಾರೆ ವಿಷ ಹಾಕಿದ್ದಾನೆ. ಮುನಿಕೃಷ್ಣ ಎಂಬಾತ ಸ್ವಂತ ಮಗನಿಗೆ ಕೀಟನಾಶಕ ಕುಡಿಸಿದ್ದಾನೆ.ಸತ್ಯಾ-ಮುನಿಕೃಷ್ಣ ದಂಪತಿಯ 2.5 ವರ್ಷದ ಮಗ ಜೋಯಲ್ ಗೆ ವಿಷ ಕುಡಿಸಿದ್ದಾನೆ. ಡಿಸೆಂಬರ್ 22 ರಂದು ನಡೆದಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.








