ಕಲಬುರ್ಗಿ : ಕಲ್ಬುರ್ಗಿಯಲ್ಲಿ ಅಮಾನವೀಯ ಘಟನೆ ನಡೆದಿದ್ದು, ಮಂಗಳಮುಖಿಯನ್ನು ಬೆತ್ತಲೆಗೊಳಿಸಿ ತಲೆ ಬೋಳಿಸಿ ಹಲ್ಲೆ ನಡೆಸಲಾಗಿದೆ. ಮಂಗಳಮುಖಿಯರಿಂದಲೇ ಮಂಗಳಮುಖಿಯ ಮೇಲೆ ಈ ಒಂದು ಹಲ್ಲೆ ನಡೆದಿದೆ ಎಂದು ತಿಳಿದು ಬಂದಿದೆ.
ಹೌದು ಕಲ್ಬುರ್ಗಿ ನಗರದ ಕೇಂದ್ರ ಬಸ್ ನಿಲ್ದಾಣದ ಬಳಿ ಈ ಒಂದು ಘಟನೆ ನಡೆದಿದ್ದು, ಕಲ್ಬುರ್ಗಿ ಜನತೆಯನ್ನು ಬೆಚ್ಚಿ ಬೀಳಿಸಿದೆ. ಘಟನೆ ನಡೆದಿದ್ದು ಇಷ್ಟೇ. ಹಲ್ಲೆಗೆ ಒಳಗಾದ ಅಂಕಿತಾ ಎನ್ನುವ ಮಂಗಳಮುಖಿ ಬಿಕ್ಷಾಟನೆ ಮಾಡಿದ್ದಳು. ಆದರೆ ಬಿಕ್ಷಾಟನೆ ಮಾಡಿದ್ದ ಪಾಲು ಕೊಡದಿದ್ದಕ್ಕೆ ಉಳಿದ ಮಂಗಳಮುಖಿಯರು ಅಂಕಿತಾಳ ಮೇಲೆ ಈ ರೀತಿ ಅಮಾನುಷವಾಗಿ ಹಲ್ಲೆ ಮಾಡಿದ್ದಾರೆ.
ತಲೆ ಕೂದಲು ಬೋಳಿಸಿ ಬೆತ್ತಲೆ ಮಾಡಿ ಹಲೆ ಮಾಡಿದ್ದಾರೆ. ಹಾಡ ಹಗಲೇ ಈ ಘಟನೆ ನಡೆದಿದ್ದು ಸಾಕಷ್ಟು ಆಕ್ರೋಶ ವ್ಯಕ್ತವಾಗುತ್ತಿದೆ. ಘಟನೆ ಕುರಿತು ಅಶೋಕ್ ನಗರ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪೊಲೀಸರು ತನಿಖೆ ಕೈಗೊಂಡಿದ್ದಾರೆ.