ಹುಬ್ಬಳ್ಳಿ : ಹುಬ್ಬಳ್ಳಿಯಲ್ಲಿ ವಿಚಿತ್ರವಾದಂತಹ ಘಟನೆಯೊಂದು ನಡೆದಿದ್ದು, ತಂದೆಯ ಜೊತೆಗೆ ತೋಟದಲ್ಲಿ ಕೆಲಸ ಮಾಡುತ್ತಿದ್ದ ವೇಳೆ ಹಾವು ಒಂದು ಯುವಕನಿಗೆ ಕಚ್ಚಿದೆ. ಈ ವೇಳೆ ಹಾವನ್ನು ಕೊಂದು, ಅದರ ಸಮೇತ ಯುವಕ ಕಿಮ್ಸ್ ಆಸ್ಪತ್ರೆಗೆ ಬಂದಿರುವ ಘಟನೆ ಹುಬ್ಬಳ್ಳಿಯ ಇಂಗಳಗಿ ಗ್ರಾಮದಲ್ಲಿ ನಡೆದಿದೆ.
ಹೌದು ಇಂಗಳಗಿ ಗ್ರಾಮದ ಫಕೀರಪ್ಪ ಅಣ್ಣಿಗೇರಿ ಹಾವು ಕಡಿತಕ್ಕೊಳಗಾದವ ಎಂದು ತಿಳಿದುಬಂದಿದೆ.ತಂದೆಯೊಂದಿಗೆ ಶೇಂಗಾ ಕೀಳಲು ಹೋಗಿದ್ದಾಗ ಯುವಕನಿಗೆ ಹಾವು ಕಚ್ಚಿದೆ. ಕೂಡಲೇ ಹಾವಿನ ತಲೆ ಜಜ್ಜಿ ಕೊಂದು ಹಾಕಿದ್ದಾನೆ. ನಂತರ ತಂದೆಯ ಜೊತೆ ಬಂದು ಆಸ್ಪತ್ರೆಗೆ ದಾಖಲಾಗಿದ್ದಾನೆ.
ಎಂದಿನಂತೆ ಹೊಲದಲ್ಲಿ ಕೆಲಸ ಮಾಡುವಾಗ ಮಗನಿಗೆ ಹಾವು ಕಚ್ಚಿತು. ಕೂಡಲೇ ಹಾವನ್ನು ಜಜ್ಜಿ ಹಾಕಿ ಕೊಂದು ಚೀಲದಲ್ಲಿ ಹಾಕಿಕೊಂಡು ಬಂದು ವೈದ್ಯರಿಗೆ ತೋರಿಸಿದ್ದಾನೆ. ಆಗ ವೈದ್ಯರು ಹೊರ ಹಾಕಲು ಹೇಳಿದರು. ಅದು ಚಿಣಗೇನ ಹಾವು. ಮಗ ವೈದ್ಯರಿಗೆ ಹಾವನ್ನು ತೋರಿಸಿ, ಇದೇ ಹಾವು ಕಚ್ಚಿದೆ, ಚಿಕಿತ್ಸೆ ಕೊಡಿ ಎಂದು ದಾಖಲಾಗಿದ್ದಾನೆ ಎಂದು ಫಕ್ಕಿರಪ್ಪ ತಂದೆ ತಿಳಿಸಿದರು.