ಕಲಬುರ್ಗಿ : ಅನೈತಿಕ ಸಂಬಂಧಕ್ಕೆ ಬೇಸತ್ತು ಪತಿ ಅಥವಾ ಪತ್ನಿ ಇಬ್ಬರಲ್ಲಿ ಒಬ್ಬರು ಕೊಲೆಯಾಗುವುದನ್ನು ನೋಡಿದ್ದೇವೆ. ಆದರೆ ಇಲ್ಲೊಂದು ಘಟನೆಯಲ್ಲಿ ಪತ್ನಿಯೊಬ್ಬಳು ಪರಸ್ತ್ರಿಯೊಂದಿಗೆ ಅನೈತಿಕ ಸಂಬಂಧ ಹೊಂದಿದ್ದ ಪತಿಯ ಕಾಲನ್ನು ಮುರಿಸಿರುವ ಘಟನೆ ಕಲಬುರ್ಗಿ ನಗರದಲ್ಲಿ ನಡೆದಿದೆ.
ಹೌದು ಅನೈತಿಕ ಸಂಬಂಧಕ್ಕೆ ಬೇಸತ್ತು ಪತ್ನಿ ಉಮಾದೇವಿ ಎನ್ನುವವರು ತಮ್ಮ ಪತಿ ವೆಂಕಟೇಶ್ ಅವರ ಕಾಲನ್ನು ಮುರಿಸಿರುವ ಘಟನೆ ಕಲಬುರ್ಗಿ ನಗರದ ಅತ್ತರ ಕಾಂಪೌಂಡ್ ಬಳಿ ಈ ಒಂದು ಘಟನೆ ನಡೆದಿದೆ. ಪರಸ್ತ್ರೀ ಜೊತೇ ಸಲುಗೆಯಿಂದ ಇದ್ದಾ ಪತಿ ವೆಂಕಟೇಶ್ ವೆಂಕಟೇಶ್ ನಡೆಯಿಂದ ಪತ್ನಿ ಉಮಾದೇವಿ ಕೋಪಗೊಂಡಿದ್ದರು. ದಂಪತಿಗಳ ಮಧ್ಯ ಹಲವು ಬಾರಿ ಜಗಳವಾದರೂ ಕೂಡ ಪತಿ ವೆಂಕಟೇಶ್ ಪರಸ್ತ್ರೀ ಸ್ನೇಹವನ್ನು ಬಿಟ್ಟಿರಲಿಲ್ಲ.
ಹೀಗಾಗಿ ಪತ್ನಿ ಉಮಾದೇವಿ ಸುಪಾರಿ ನಡಿ ಪತಿಯ ಎರಡು ಕಾಲುಗಳನ್ನು ಮುರಿಸಿದ್ದಾರೆ. ಎರಡು ಕಾಲು ಮುರಿದರೆ ಗಂಡ ಮನೆಯಲ್ಲಿ ಇರುತ್ತಾನೆ ಎಂದು ಉಹಾದೇವಿ ಸುಪಾರಿ ನೀಡಿ ಈ ಕೃತ್ಯ ಎಸಗಿದ್ದಾರೆ. 5 ಲಕ್ಷ ರೂಪಾಯಿಗೆ ಸುಪಾರಿ ನೀಡಿ ಎರಡು ಕಾಲುಗಳನ್ನು ಮುರಿಸಿದ್ದಾರೆ. ಸದ್ಯ ಪೊಲೀಸರು ಆರೋಪಿಗಳಾದ ಉಮಾದೇವಿ, ಆರಿಫ್, ಮನೋಹರ್ ಹಾಗೂ ಸುನಿಲ್ ಅರೆಸ್ಟ್ ಮಾಡಿದ್ದು, ಕಲ್ಬುರ್ಗಿ ಬ್ರಹ್ಮಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.