Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಊಟದ ಬಳಿಕ `ವೀಳ್ಯದೆಲೆ’ ತಿನ್ನುವುದರಿಂದ ಸಿಗಲಿದೆ ಈ ಎಲ್ಲಾ ಪ್ರಯೋಜನಗಳು !

19/02/2026 8:58 AM

BREAKING: ಶಿವನೇರಿ ಕೋಟೆಯಲ್ಲಿ ಶಿವಜಯಂತಿ ಸಂಭ್ರಮದಲ್ಲಿ ಭಕ್ತರ ನಡುವೆ ನೂಕುನುಗ್ಗಲು, ಹಲವರಿಗೆ ಗಾಯ!

19/02/2026 8:51 AM

BIG NEWS : ಧೂಮಪಾನದಿಂದ ಉಂಟಾಗುವ ಪಾರ್ಶ್ವವಾಯುವಿಗೆ `ಅಂಗವೈಕಲ್ಯ ಪಿಂಚಣಿ’ ಸಿಗಲ್ಲ : ಸುಪ್ರೀಂಕೋರ್ಟ್ ಮಹತ್ವದ ತೀರ್ಪು

19/02/2026 8:39 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BREAKING: ‘R ಕನ್ನಡ’ ವಾಹಿನಿಯ ಸಂಪಾದಕರ ಹುದ್ದೆಗೆ ‘ಶೋಭಾ ಮಳವಳ್ಳಿ’ ರಾಜೀನಾಮೆ
KARNATAKA

BREAKING: ‘R ಕನ್ನಡ’ ವಾಹಿನಿಯ ಸಂಪಾದಕರ ಹುದ್ದೆಗೆ ‘ಶೋಭಾ ಮಳವಳ್ಳಿ’ ರಾಜೀನಾಮೆ

By kannadanewsnow0918/01/2026 3:16 PM

ಬೆಂಗಳೂರು: ರಾಜ್ಯದ ಖ್ಯಾತ ಸುದ್ದಿವಾಹಿನಿ R ಕನ್ನಡ ವಾಹಿನಿಯ ಸಂಪಾದಕಿಯ ಸ್ಥಾನಕ್ಕೆ ಶೋಭಾ ಮಳವಳ್ಳಿ ಅವರು ರಾಜೀನಾಮೆ ನೀಡಿದ್ದಾರೆ. ಆ ಮೂಲಕ ಸಂಪಾದಕರಾಗಿ ಹುದ್ದೆಗೇರಿದಂತ ಕೆಲವೇ ತಿಂಗಳಿನಲ್ಲಿ ಆ ಹುದ್ದೆಯಿಂದ ಹೊರ ನಡೆದಿದ್ದಾರೆ.

ಈ ಕುರಿತಂತೆ ಪತ್ರಕರ್ತೆ ಶೋಭಾ ಮಳವಳ್ಳಿ ಅವರು ತಮ್ಮ ಫೇಸ್ ಬುಕ್ ಮುಖಪುಟದಲ್ಲಿ ಬರೆದುಕೊಂಡಿದ್ದು, R ಕನ್ನಡ ವಾಹಿನಿಯ ಸಂಪಾದಕಿಯ ಸ್ಥಾನಕ್ಕೆ ರಾಜೀನಾಮೆ ಕೊಟ್ಟಿದ್ದೇನೆ. 26 ವರ್ಷಗಳ ಕಾಲ ವರದಿಗಾರಿಕೆಯಿಂದ ಸಂಪಾದಕಿಯಾಗುವವರೆಗೆ ನಡೆದ ದಾರಿ ಧೀರ್ಘವಿದೆ ಮತ್ತು ಪ್ರಾಮಾಣಿಕವಾಗಿದೆ ಎಂದಿದ್ದಾರೆ.

ಇಷ್ಟುವರ್ಷಗಳ ಕಾಲ ಸುದ್ದಿಮನೆಯಲ್ಲಿ ಪಳಗಿದ, ದುಡಿದ, ಅನುಭವ, ಆತ್ಮ ವಿಶ್ವಾಸ ಎಲ್ಲವೂ ಇದ್ದ ಯಾರಿಗಾದರೂ EDITOR ಆಗುವ ಅವಕಾಶ ಸಂತೋಷವನ್ನೆ ಕೊಡುತ್ತದೆ. ಅದು ನಮ್ಮ ಸಾಮರ್ಥ್ಯಕ್ಕೆ ಸಿಗುವ ಸ್ವಾತಂತ್ರ್ಯ ‌ಮತ್ತು ಸವಾಲು. ಅಂತಹ ಅವಕಾಶವನ್ನು ರಾಷ್ಟ್ರೀಯ ಮಟ್ಟದ ದಿಗ್ಗಜ ಪತ್ರಿಕೋದ್ಯಮಿ ಅರ್ನಬ್ ಗೋಸ್ವಾಮಿ ನೀಡಿದಾಗ, ಕನ್ನಡದ ಸುದ್ದಿವಾಹಿನಿ ಜಗತ್ತಿನ ಮೊದಲ ಮಹಿಳಾ ಎಡಿಟರ್ ಆಗುವ ಸಾಧ್ಯತೆ ‌ಮತ್ತು ಸಂಭ್ರಮದ ಜೊತೆಗೇ ನಾನದನ್ನು ಸ್ವೀಕರಿಸಿದ್ದೆ. ಹೊಸ‌ಮನೆ ಕಟ್ಟುವುದು ಸುಲಭ. ಅದಾಗಲೇ ಕಟ್ಟಿದ ಮನೆಯನ್ನು ಹದಗೊಳಿಸುವುದು ದೊಡ್ಡ ಕಷ್ಟ. ದಿನಕ್ಕೊಂದು ಸವಾಲು. ಸವಾಲು ನನಗಿಷ್ಟ. 18 ವರ್ಷಗಳ ಸುವರ್ಣ ನ್ಯೂಸ್ ಅನುಭವ ಧಾರೆ ಎರೆದೆ.

R ಕನ್ನಡದಿಂದ ಸೈದ್ದಾಂತಿಕ ಕಾರಣ ಒಡ್ಡಿ ದೂರ ಇದ್ದ ಎಲ್ಲರನ್ನೂ ಸ್ಟುಡಿಯೋಗೆ ಕರೆಸಲು ಯತ್ನಿಸಿದೆ. ಪ್ರಜಾಪ್ರಭುತ್ವದಲ್ಲಿ ಎಲ್ಲ ಧ್ಚನಿಗಳಿಗೂ ಸ್ಥಾನವಿರಬೇಕೆಂಬುದು ನನ್ನ ನಂಬಿಕೆಯಾಗಿತ್ತು. ಇರಲಿ. ಯಾವ ಸುದ್ದಿಗೆ ಎಷ್ಟು ಮಹತ್ವ ಕೊಡಬೇಕು. ಟಿಆರ್ ಪಿ ದೃಷ್ಟಿಯಿಂದ ಯಾವುದು ಮುಖ್ಯ ಎಂಬುದನ್ನು ಚಾನೆಲ್ ಒಳಿತಿನ ಸಲುವಾಗಿಯೇ ನಾನು ನಿರ್ಧರಿಸಿರುತ್ತೇನೆ, ನಿರ್ಧರಿಸಿದ್ದೇನೆ. ಕೇವಲ ಏಳೇ ತಿಂಗಳಲ್ಲಿ ಚಾನೆಲ್ ಮನೆಮಾತಾಗಿದೆ.

ಈಗ ಚಾನೆಲ್ ಬಿಟ್ಟು ಹೊರಬಂದಿದ್ದಕ್ಕೆ ನನಗೆ ಯಾವ ಬೇಸರವೂ ಇಲ್ಲ. ನನ್ನ ಹಿತೈಷಿಗಳು ಸ್ವಲ್ಪ ಸಮಯ ತೆಗೆದುಕೊಳ್ಳಬಹುದಿತ್ತು, ಎಂದೆಲ್ಲಾ ಹೇಳಿದ್ದಾರೆ. ನನ್ನ ಒಳಿತಿಗಾಗಿಯೇ ಅವರು ಆ ಸಲಹೆ ಕೊಟ್ಟಿದ್ದಾರೆ. ಅವರಿಗೆಲ್ಲ ಆಭಾರಿ. ಸ್ವಾಭಿಮಾನ, ಆತ್ಮಗೌರವದ ಮುಂದೆ ಯಾವುದೂ ಹೆಚ್ಚಲ್ಲ.

ಯಾವ ಹಿನ್ನೆಲೆ ಇಲ್ಲದೆ ನಡೆದು ಬಂದ ದಾರಿ, ನಾನು ಹೆಣ್ಣೆಂಬ ಕಾರಣದ ನನ್ನ ಮತ್ತು ಅವರ ಕಷ್ಟಗಳು, ಇವನ್ನೆಲ್ಲ ಈ ಸಮಯದಲ್ಲಿ ಮಾತಾಡುವುದಿಲ್ಲ. ಮೊದಲಿಗೆ ಸಂಪಾದಕಿಯಾಗಲು, ಸಾಲು ಸವಾಲುಗಳನ್ನು ಎದುರಿಸಲು, ನನ್ನ ಸಾಮರ್ಥ್ಯವನ್ನು ಮತ್ತೆ ನಾನೇ ಪರೀಕ್ಷಿಸಿಕೊಳ್ಳಲು ಅವಕಾಶ ಕೊಟ್ಟ ಅರ್ನಬ್ ಗೆ ನಮಸ್ಕಾರ. ಆರಂಭದಿಂದಲೂ ನನ್ನನ್ನು ತಿದ್ದಿ, ಟಿಆರ್ ಪಿ ಒತ್ತಡ ಹೇರದೇ, ಜತೆಯಾಗಿ ನಿಂತ ಅರ್ನಾಬ್ ಜತೆ ಕೆಲಸ ಮಾಡುವ ಅವಕಾಶ ಸಿಕ್ಕಿದ್ದು ಸುಕೃತ.

ನನ್ನನ್ನು, ನನ್ನ ಸಾಮರ್ಥ್ಯವನ್ನು ಅರ್ನಾಬ್ ಗೆ ವಿವರಿಸಿ, ಚಾನೆಲ್ ಗೆ ಕರೆತಂದ ನಿರಂಜನ್ ನಾರಾಯಣಸ್ವಾಮಿ, ನನ್ನ ಹೊಸ ಯೋಚನೆಗಳ ಜಾರಿಗೆ ಬೆನ್ನಿಗೆ ನಿಂತ ಬಾಲಕೃಷ್ಣ, ನಿಖಿಲ್,‌‌ ನಾಗೇಂದ್ರ, ಸದಾಶಿವ ನನ್ನ ನಿರೀಕ್ಷೆಗೆ ಮೀರಿ ನನ್ನೊಂದಿಗೆ ಕೈಜೋಡಿಸಿದ ಸ್ಮಿತಾ ರಂಗನಾಥ್, ಶ್ರೀಪಾದ್ ಪಾಟೀಲ್, ರಂಜಿತ್, ಅಶ್ವಿನಿ, ಪ್ರವೀಣ್, ಶ್ರೀಲಕ್ಷ್ಮೀ, ಪ್ರೊಡಕ್ಷನ್ ಕೆಲಸದಲ್ಲಿ ಏನೇ‌ ಹೊಸತು ಹೇಳಿದರೂ ಮಾಡುವ ತಾಯ್ಬಾ, ಸಂತೋಷ್ ಮತ್ತು ಇಡೀ‌ ಟೀಮ್ ಗೆ ಸದಾ ಋಣಿ. ಸಾವಿರ ಮೆಸೇಜು, ಫೋನುಗಳನ್ನು ಮಾಡಿದವರು, ಮಾತಿಲ್ಲದೆಯೂ ಜೊತೆಗೆ ನಿಂತ ಆತ್ಮೀಯರು, ಸ್ನೇಹಿತರು, ಗೆಳೆಯರು, ಸಹೋದ್ಯೋಗಿಗಳ ಪ್ರೀತಿ ಪಡೆದ ನಾನೇ ಧನ್ಯೆ ಎನಿಸಿದೆ.

ನನ್ನೊಂದಿಗೆ ದುಡಿದ‌‌ ನೂರಾರು ಸಹೋದ್ಯೋಗಿಗಳು, ಅವರ ನಂಬಿಕೆ, ವಿಶ್ವಾಸ ಕಂಡು ಇನ್ನಷ್ಟು ಬಾಗಿದ್ದೇನೆ. 26 ವರ್ಷದಲ್ಲಿ ವೃತ್ತಿ ಬದುಕಿನಲ್ಲಿ ಏಳುಬೀಳುಗಳ ಪಟ್ಟಿಗೆ ಇದೊಂದು ಸೇರ್ಪಡೆ‌ ಅಷ್ಟೇ. ಬದುಕು ನನಗೆ ಅಚ್ಚರಿಗಳನ್ನೇ ಕೊಟ್ಟಿದೆ. ಬಯಸದೇ ಬಂದ ಭಾಗ್ಯಗಳ ಪಟ್ಟಿ ದೊಡ್ಡದಿದೆ. ಮತ್ತೊಂದು ಬರಲಿದೆ ಎಂಬುದಾಗಿ ವಿಶ್ವಾಸವನ್ನು ವ್ಯಕ್ತ ಪಡಿಸಿದ್ದಾರೆ.

BIG NEWS: ರಾಜ್ಯದಲ್ಲಿ ಮತ್ತೊಂದು ಘೋರ ದುರಂತ: ಗಾಳಿಪಟ ಹಿಡಿಯಲು ಹೋಗಿ ಕಟ್ಟಡದ ಮೇಲಿನಿಂದ ಬಿದ್ದು ಬಾಲಕ ಸಾವು

Share. Facebook Twitter LinkedIn WhatsApp Email

Related Posts

ಊಟದ ಬಳಿಕ `ವೀಳ್ಯದೆಲೆ’ ತಿನ್ನುವುದರಿಂದ ಸಿಗಲಿದೆ ಈ ಎಲ್ಲಾ ಪ್ರಯೋಜನಗಳು !

19/02/2026 8:58 AM1 Min Read

ALERT : `ಫ್ರಿಡ್ಜ್’ ಪಕ್ಕದಲ್ಲಿ ಅಪ್ಪಿತಪ್ಪಿಯೂ ಈ ವಸ್ತುಗಳನ್ನು ಇಡಬೇಡಿ : ಬಾಂಬ್ ನಂತೆ ಬ್ಲ್ಯಾಸ್ಟ್ ಆಗಬಹುದು !

19/02/2026 8:33 AM2 Mins Read

BIG NEWS : ರಾಜ್ಯದಲ್ಲಿ `ಜಮೀನುಗಳ ವಿನ್ಯಾಸ ನಕ್ಷೆ’ ಅನುಮೋದನೆಗೆ ಷರತ್ತು ವಿಧಿಸಿ ಸರ್ಕಾರ ಮಹತ್ವದ ಆದೇಶ

19/02/2026 8:23 AM2 Mins Read
Recent News

ಊಟದ ಬಳಿಕ `ವೀಳ್ಯದೆಲೆ’ ತಿನ್ನುವುದರಿಂದ ಸಿಗಲಿದೆ ಈ ಎಲ್ಲಾ ಪ್ರಯೋಜನಗಳು !

19/02/2026 8:58 AM

BREAKING: ಶಿವನೇರಿ ಕೋಟೆಯಲ್ಲಿ ಶಿವಜಯಂತಿ ಸಂಭ್ರಮದಲ್ಲಿ ಭಕ್ತರ ನಡುವೆ ನೂಕುನುಗ್ಗಲು, ಹಲವರಿಗೆ ಗಾಯ!

19/02/2026 8:51 AM

BIG NEWS : ಧೂಮಪಾನದಿಂದ ಉಂಟಾಗುವ ಪಾರ್ಶ್ವವಾಯುವಿಗೆ `ಅಂಗವೈಕಲ್ಯ ಪಿಂಚಣಿ’ ಸಿಗಲ್ಲ : ಸುಪ್ರೀಂಕೋರ್ಟ್ ಮಹತ್ವದ ತೀರ್ಪು

19/02/2026 8:39 AM

ALERT : `ಫ್ರಿಡ್ಜ್’ ಪಕ್ಕದಲ್ಲಿ ಅಪ್ಪಿತಪ್ಪಿಯೂ ಈ ವಸ್ತುಗಳನ್ನು ಇಡಬೇಡಿ : ಬಾಂಬ್ ನಂತೆ ಬ್ಲ್ಯಾಸ್ಟ್ ಆಗಬಹುದು !

19/02/2026 8:33 AM
State News
KARNATAKA

ಊಟದ ಬಳಿಕ `ವೀಳ್ಯದೆಲೆ’ ತಿನ್ನುವುದರಿಂದ ಸಿಗಲಿದೆ ಈ ಎಲ್ಲಾ ಪ್ರಯೋಜನಗಳು !

By kannadanewsnow5719/02/2026 8:58 AM KARNATAKA 1 Min Read

ವೀಳ್ಯದ ಎಲೆಗಳು ಹಲವಾರು ಆರೋಗ್ಯ ಪ್ರಯೋಜನಗಳನ್ನು ನೀಡುತ್ತಿರುವುದರಿಂದ ಅವುಗಳನ್ನು ಸಾಂಪ್ರದಾಯಿಕ ಔಷಧಿಗಳಾಗಿ ಬಳಸಲಾಗುತ್ತಿತ್ತು. ಬಾಯಿಯ ಆರೋಗ್ಯವನ್ನು ಉತ್ತೇಜಿಸುವುದರಿಂದ ಹಿಡಿದು ಮಧುಮೇಹವನ್ನು…

ALERT : `ಫ್ರಿಡ್ಜ್’ ಪಕ್ಕದಲ್ಲಿ ಅಪ್ಪಿತಪ್ಪಿಯೂ ಈ ವಸ್ತುಗಳನ್ನು ಇಡಬೇಡಿ : ಬಾಂಬ್ ನಂತೆ ಬ್ಲ್ಯಾಸ್ಟ್ ಆಗಬಹುದು !

19/02/2026 8:33 AM

BIG NEWS : ರಾಜ್ಯದಲ್ಲಿ `ಜಮೀನುಗಳ ವಿನ್ಯಾಸ ನಕ್ಷೆ’ ಅನುಮೋದನೆಗೆ ಷರತ್ತು ವಿಧಿಸಿ ಸರ್ಕಾರ ಮಹತ್ವದ ಆದೇಶ

19/02/2026 8:23 AM

ALERT : ಸಾರ್ವಜನಿಕರೇ ಎಚ್ಚರ : 8 ನಿಮಿಷಗಳ ಕೋಪದಿಂದ ಹೆಚ್ಚಾಗಲಿದೆ `ಹೃದಯಾಘಾತ’ದ ಅಪಾಯ!

19/02/2026 8:08 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.