ಶಿವಮೊಗ್ಗ: ನಾಳೆ ಶಿವಮೊಗ್ಗ ಜಿಲ್ಲೆಯ ಸಾಗರ ನಗರದಲ್ಲಿನ ಲಯನ್ಸ್ ಕ್ಲಬ್ ನ ನೂತನ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮ ನಡೆಯಲಿದೆ. 2024-25ನೇ ಸಾಲಿಗೆ ಲಯನ್ಸ್ ಕ್ಲಬ್ ಗೆ ಆಯ್ಕೆಯಾದಂತ ಅಧ್ಯಕ್ಷರು, ಸದಸ್ಯರು ನಾಳೆ ಪದಗ್ರಹಣ ಮಾಡಲಿದ್ದಾರೆ.
ಈ ಕುರಿತಂತೆ ಶುಕ್ರವಾರದಂದು ಸಾಗರದ ಕಾರ್ಯನಿರತ ಪತ್ರಕರ್ತರ ಸಂಘದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದಂತ ನೂತನ ಅಧ್ಯಕ್ಷರಾದ ಜಿ.ಕೆ ಕೃಷ್ಣಮೂರ್ತಿ ಅವರು, ಸೇವೆಯೇ ತನ್ನ ಮೂಲ ಉದ್ದೇಶದೊಂದಿಗೆ 1917ರಲ್ಲಿ ಮಲ್ಟಿನ್ ಜೋನ್ಸ್ ಅವರು ಅಮೇರಿಕಾದಲ್ಲಿ ಲಯನ್ಸ್ ಕ್ಲಬ್ ಸಂಸ್ಥೆಯನ್ನು ಆರಂಭಿಸಿದರು. ಈ ಸಂಸ್ಥೆ ಈಗ ಜಗತ್ತಿನಾಧ್ಯಂತ ವಿಸ್ತರಣೆಗೊಂಡಿದೆ. ಸುಮಾರು 210 ದೇಶಗಳಲ್ಲಿ ಕೆಲಸ ಮಾಡುತ್ತಿರುವ ಲಯನ್ಸ್ ಕ್ಲಪ್, 1973ರಲ್ಲಿ 68ನೇಯ ರಾಷ್ಟ್ರವಾಗಿ ಭಾರತಕ್ಕೆ ಕಾಲಿಟ್ಟಿತು ಅಂತ ಮಾಹಿತಿ ನೀಡಿದರು.
1973ರಲ್ಲಿ ಪ್ರಪ್ರಥಮವಾಗಿ ಸಾಗರದಲ್ಲಿ ಲಯನ್ಸ್ ಸಂಸ್ಥೆ ಪ್ರಾರಂಭಗೊಂಡಿತು. ಲಯನ್ಸ್ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷರಾಗಿ ಖ್ಯಾತ ದಾನಿಗಳಾದ ದಿ.ಚಿಪ್ಪಳ್ಳಿ ಗೋಪಾಲಕೃಷ್ಣ ಅವರು ಸೇವೆ ಸಲ್ಲಿಸಿದರು. ಕಾರ್ಯದರ್ಶಿಯಾಗಿ ದಿ.ರಮೇಶ್ ಭಟ್ ಕಾರ್ಯ ನಿರ್ವಹಿಸಿದರು ಎಂದರು.
ಕಳೆದ ವರ್ಷ 50 ವಸಂತಗಳನ್ನು ಪೂರೈಸಿದ ಲಯನ್ಸ್ ಕ್ಲಬ್, ತನ್ನ ಗೋಲ್ಡನ್ ಜ್ಯೂಬಿಲಿಯನ್ನು ಆಚರಿಸಿಕೊಂಡಿದೆ. ಸಾಮಾನ್ಯವಾಗಿ ಎಲ್ಲಾ ಸಂಸ್ಥೆಗಳೂ ಮಾರ್ಚ್ ತಿಂಗಳಲ್ಲಿ ವರ್ಷವನ್ನು ಮುಗಿಸಿದ್ರೇ, ಲಯನ್ಸ್ ಮತ್ತು ರೋಟರಿ ಸಂಸ್ಥೆಗಳು ಜೂನ್ ತಿಂಗಳಿಗೆ ತಮ್ಮ ಅವಧಿಯನ್ನು ಮುಕ್ತಾಯಗೊಳಿಸಿ, ಜುಲೈ ತಿಂಗಳಿಗೆ ಹೊಸ ಕಮಿಟಿಯನ್ನು ಆಯ್ಕೆ ಮಾಡುತ್ತದೆ ಎಂದು ತಿಳಿಸಿದರು.
ಜುಲೈ.13ರ ಶನಿವಾರದ ನಾಳೆಯಂದು 6 ಗಂಟೆಗೆ ಸಾಗರದ ಲಯನ್ಸ್ ಸೇವಾ ಮಂದಿರದಲ್ಲಿ ಲಯನ್ಸ್ ಕ್ಲಬ್ ನ ನೂತನ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮ ನಡೆಯಲಿದೆ. ಸಾಗರದ ಜನತೆ ಹೆಚ್ಚಿನಸ ಸಂಖ್ಯೆಯಲ್ಲಿ ಬಂದು, ನಮ್ಮ ಸೇವಾ ಕಾರ್ಯಕ್ರಮಗಳಿಗೆ ಪ್ರೋತ್ಸಾಹಿಸುವಂತೆ ವಿನಂತಿಸಿದ್ದಾರೆ.
ನಾಳಿನ ಪದಗ್ರಹಣ ಕಾರ್ಯಕ್ರಮದಲ್ಲಿ ಪಿಪಿಎಂಜೆ ಸ್ವಪ್ನ ಸುರೇಶ್, ಪ್ರಾದೇಶಿಕ ಕಾರ್ಯದರ್ಶಿ ಸತೀಶ್, ಡಾ.ಎಂ.ಕೆ ಭಟ್, ಮಾಜಿ ಮಂತ್ರಿ ಹೆಚ್.ಎಸ್ ಮಂಜಪ್ಪ ಸೇರಿದಂತೆ ಇತರರು ಹಾಜರಿರಲಿದ್ದಾರೆ ಎಂದು ಹೇಳಿದರು.
ಪತ್ರಿಕಾ ಗೋಷ್ಠಿಯಲ್ಲಿ ಸಾಗರದ ಲಯನ್ಸ್ ಕ್ಲಬ್ ನ ಕಾರ್ಯದರ್ಶಿ ನಾಗರಾಜ್ ಎಂ.ಹೆಚ್, ಖಜಾಂಚಿ ವಿನಯ ಕುಮಾರ್ ಎಂ, ಅಶ್ವಿನಿ ಕುಮಾರ್, ಎಂ ನಾಗರಾಜ್, ಪ್ರಭಾವತಿ ಶ್ರೀಧರ್, ಶ್ರೀಧರ್ ಇಡಿ ಉಪಸ್ಥಿತರಾಗಿದ್ದರು.
ವರದಿ: ವಸಂತ ಬಿ ಈಶ್ವರಗೆರೆ, ಸಂಪಾದಕರು
ಲೋಕಸಭೆ ಚುನಾವಣೆಯಲ್ಲಿ ಹೊಂದಾಣಿಕೆ ರಾಜಕಾರಣ ನಡೆದಿಲ್ಲ: ಡಿಸಿಎಂ ಡಿ.ಕೆ.ಶಿವಕುಮಾರ್
BREAKING: ‘ಅಗಲಿದ ಅಪರ್ಣಾ’ ಪಂಚಭೂತಗಳಲ್ಲಿ ಲೀನ: ‘ಅಚ್ಚಕನ್ನಡ ನಿರೂಪಕಿ’ ಇನ್ನೂ ‘ನೆನಪು’ ಮಾತ್ರ | Anchor Aparna