Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

2025ನೇ ಸಾಲಿನ `ಮುಖ್ಯಮಂತ್ರಿ ಪದಕ’ ಪ್ರಕಟ: ಪ್ರಜ್ವಲ್ ರೇವಣ್ಣ ಕೇಸ್ ತನಿಖೆ ನಡೆಸಿದ್ದ ಸುಮನ್ ಪನ್ನೇಕರ್‌ ಸೇರಿ ರಾಜ್ಯದ 153 ಅಧಿಕಾರಿ, ಸಿಬ್ಬಂದಿಗೆ ಗೌರವ !

29/03/2026 5:52 AM

IPL 2026 : ಚಿನ್ನಸ್ವಾಮಿಯಲ್ಲಿ ` ಕೊಹ್ಲಿ-ಪಡಿಕ್ಕಲ್’ ಅಬ್ಬರ : SRH ವಿರುದ್ಧ RCBಗೆ 6 ವಿಕೆಟ್‌ಗಳ ಭರ್ಜರಿ ಜಯ | WATCH VIDEO

29/03/2026 5:47 AM

ರಾಜ್ಯದ ಜನರೇ ಗಮನಿಸಿ : ಏ.1 ರಿಂದ ‘ಸ್ವಯಂ-ಗಣತಿ’ ಆರಂಭ, ಮನೆಯಲ್ಲೇ ಕುಳಿತು ಜಸ್ಟ್ ಈ ರೀತಿ ಮಾಹಿತಿ ಸಲ್ಲಿಸಿ!

29/03/2026 5:34 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಶಿವಮೊಗ್ಗ: ಮಳೆಯಿಂದ ಸಮಸ್ಯೆ ತಡೆಯಲು ಹಾಲಂಬಿ ಹಳ್ಳಕ್ಕೆ ಸೇತುವೆ ತಡೆಗೋಡೆ- ಶಾಸಕ ಗೋಪಾಲಕೃಷ್ಣ ಬೇಳೂರು
KARNATAKA

ಶಿವಮೊಗ್ಗ: ಮಳೆಯಿಂದ ಸಮಸ್ಯೆ ತಡೆಯಲು ಹಾಲಂಬಿ ಹಳ್ಳಕ್ಕೆ ಸೇತುವೆ ತಡೆಗೋಡೆ- ಶಾಸಕ ಗೋಪಾಲಕೃಷ್ಣ ಬೇಳೂರು

By kannadanewsnow0919/09/2025 9:47 PM

ಶಿವಮೊಗ್ಗ : ಜಿಲ್ಲೆಯ ಸಾಗರದ ಹಾನಂಬಿ ಹಳ್ಳಕ್ಕೆ ಸೇತುವೆ ಸೇರಿದಂತೆ ತಡೆಗೋಡೆ ನಿರ್ಮಾಣಕ್ಕೆ ಸುಮಾರು 75 ಕೋಟಿ ರೂ. ಯೋಜನೆ ರೂಪಿಸಲಾಗಿದ್ದು, ಮಳೆ  ಉಂಟಾಗುವ ಸಮಸ್ಯೆಯನ್ನು ತಡೆಯಲು ವಿಶೇಷವಾಗಿ ಯೋಜನೆ ರೂಪಿಸಲಾಗಿದ್ದು ಮೊದಲ ಹಂತದಲ್ಲಿ 10 ಕೋಟಿ ರೂಪಾಯಿ ಮಂಜೂರಾಗಿದೆ ಎಂದು ಶಾಸಕ ಹಾಗೂ ಅರಣ್ಯ ಕೈಗಾರಿಕಾ ಅಭಿವೃದ್ದಿ ನಿಗಮದ ಅಧ್ಯಕ್ಷ ಗೋಪಾಲಕೃಷ್ಣ ಬೇಳೂರು ಹೇಳಿದರು. 

ಇಂದು ಶಿವಮೊಗ್ಗ ಜಿಲ್ಲೆಯ ಸಾಗರದ ಹಾನಂಬಿ ಹಳ್ಳಕ್ಕೆ ಸೇತುವೆ ನಿರ್ಮಿಸಲು ಉದ್ದೇಶಿಸಿರುವ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದಂತ ಅವರು,  ಸೇತುವೆ ನಿರ್ಮಾಣ ಮಾಡಿ ಎನ್ನುವುದು ಈ ಭಾಗದ ಜನರ ಬಹುಕಾಲದ ಕನಸು. ಇಲ್ಲಿ ಬಡ ಕುಟುಂಬದವರು ವಾಸವಿದ್ದು, ಮಳೆಗಾಲದಲ್ಲಿ ನೀರು ಅವರ ಮನೆಗಳಿಗೆ ನುಗ್ಗುತ್ತಿದೆ. ಸದಾ ಆತಂಕದಲ್ಲಿಯೆ ಬದುಕುತ್ತಿರುವ ಜನರಿಗೆ ಶಾಶ್ವತ ಪರಿಹಾರ ಒದಗಿಸಲು ಯೋಜನೆ ರೂಪಿಸಿದ್ದು, ಉಪ ಮುಖ್ಯಮಂತ್ರಿಗಳು ಸೇತುವೆ ನಿರ್ಮಾಣಕ್ಕೆ 75 ಕೋಟಿ ರೂ. ಕೊಡಲು ಸಮ್ಮತಿ ಸೂಚಿಸಿದ್ದು, 10 ಕೋಟಿ ಮಂಜೂರು ಮಾಡಿದ್ದಾರೆ. ಬೆಂಗಳೂರಿನಿಂದ ತಜ್ಞರ ತಂದು ಬಂದು ಪರಿಶೀಲನೆ ನಡೆಸಿದ್ದು, ಶೀಘ್ರದಲ್ಲಿಯೆ ಕಾಮಗಾರಿ ಪ್ರಾರಂಭವಾಗಲಿದ್ದು, ಗುಣಮಟ್ಟದ ಕಾಮಗಾರಿಗೆ ಒತ್ತು ನೀಡಲಾಗುತ್ತದೆ ಎಂದರು.

ಸಾಗರ ಪಟ್ಟಣ  ಪ್ರದೇಶ ಹಾದು ಹೋಗುವ ಮಾವಿನಹೊಳೆಯಿಂದ ಸಹ ಸಾಕಷ್ಟು ಅನಾಹುತವಾಗುತ್ತಿದೆ. ಸೊರಬ ರಸ್ತೆ ಬ್ರಿಡ್ಜ್ನಿಂದ ಕೊಂಕಣಿ ಬ್ಯಾಣದವರೆಗೆ ನೀರು ಹರಿದು ಬರುತ್ತಿದ್ದು ವಿಪರೀತ ಮಳೆ ಸಂದರ್ಭದಲ್ಲಿ ಪ್ರವಾಹ ಉಂಟಾಗುತ್ತಿದೆ. ಇದನ್ನು ಮನಗಂಡು ನೀರು ಹರಿದು ಬರುವ ಪ್ರದೇಶವನ್ನು ವಿಸ್ತರಿಸುವ ಉದ್ದೇಶ ಹೊಂದಿದ್ದು ಇದಕ್ಕಾಗಿ ನೀಲನಕ್ಷೆ ಸಿದ್ದಪಡಿಸಿದೆ. ಮಳೆಗಾಲದ ಸಂದರ್ಭದಲ್ಲಿ ಜನರಿಗೆ ಯಾವುದೇ ಸಮಸ್ಯೆಯಾಗಬಾರದು ಎನ್ನುವ ಉದ್ದೇಶದಿಂದ ನಗರ ಹಾಗೂ ಗ್ರಾಮಾಂತರ ಪ್ರದೇಶಗಳಲ್ಲಿನ ನದಿ ಹೊಳೆ ಹಳ್ಳಕೊಳ್ಳಗಳ ಪಾತ್ರವನ್ನು ಅಭಿವೃದ್ದಿ ಪಡಿಸುವ, ಅಗತ್ಯ ಇರುವ ಕಡೆ ಸೇತುವೆ ನಿರ್ಮಿಸಲು ಉದ್ದೇಶಿಸಲಾಗಿದೆ ಎಂದು ಹೇಳಿದರು.

ದಿನದ 24 ಗಂಟೆ ಶರಾವತಿ ನೀರು ಮನೆಮನೆಗೆ ತಲುಪಿಸುವ ಯೋಜನೆಗೆ ಅಂತಿಮ ಹಂತದ ಸಿದ್ದತೆ ನಡೆದಿದ್ದು, ಸರ್ಕಾರದಿಂದ ಸುಮಾರು 210 ಕೋಟಿ ರೂ. ಬಿಡುಗಡೆಯಾಗುವ ಸಾಧ್ಯತೆ ಇದೆ. ಒಳಚರಂಡಿ ಯೋಜನೆಗೆ ಹೆಚ್ಚುವರಿಯಾಗಿ 20 ಕೋಟಿ ರೂ. ಮಂಜೂರಾಗಿದೆ. ವಿಪರೀತ ಮಳೆಯಿಂದ ಸಾಕಷ್ಟು ರಸ್ತೆಗಳು ಹಾಳಾಗಿದ್ದು ಅದರ ಅಭಿವೃದ್ದಿಗೆ ಸರ್ಕಾರದಿಂದ ಹೆಚ್ಚಿನ ಅನುದಾನ ಕೇಳಲಾಗಿದೆ. ಸಾಗರ ಮತ್ತು ಹೊಸನಗರ ವ್ಯಾಪ್ತಿಯಲ್ಲಿ ಮಳೆ ಹಿನ್ನೆಲೆಯಲ್ಲಿ ರಸ್ತೆ ಕಾಮಗಾರಿ ನಿಲ್ಲಿಸಲಾಗಿತ್ತು. ತಕ್ಷಣ ಕಾಮಗಾರಿ ಪ್ರಾರಂಭಿಸಲು ಗುಂಡಿ ಬಿದ್ದಿರುವ ರಸ್ತೆಗಳನ್ನು ಕೂಡ ತಕ್ಷಣವೇ ಸರಿಪಡಿಸಲಾಗುವುದು ಎಂದು ತಿಳಿಸಿದರು.

ಈ ವೇಳೆ ಸಾಗರ ನಗರಸಭೆ ಸದಸ್ಯ ಗಣಪತಿ ಮಂಡಗಳಲೆ, ಶಾಸಕರ ವಿಶೇಷ ಕರ್ತವ್ಯ ಅಧಿಕಾರಿ ಟಿಪಿ ರಮೇಶ್, ಪ್ರಮುಖರಾದ ನಿತ್ಯಾನಂದ ಶೆಟ್ಟಿ, ಕಲಸೆ ಚಂದ್ರಪ್ಪ, ಸುರೇಶಬಾಬು, ವಿಲ್ಸನ್ ಗೋನ್ಸಾಲ್ವಿಸ್, ಅರ್ಥರ್ ಗೋಮ್ಸ್, ಕಬೀರ್ ಚಿಪ್ಳಿ, ಯಶವಂತ ಪಣಿ, ಗಿರೀಶ್ ಕೋವಿ ಸೇರಿದಂತೆ ಇನ್ನಿತರರು ಹಾಜರಿದ್ದರು.

ಶಿವಮೊಗ್ಗ: ಉಳವಿಯ ‘ನ್ಯಾಯಬೆಲೆ ಅಂಗಡಿ’ ವ್ಯಾಪ್ತಿಯಲ್ಲಿ ’76 ರೇಷನ್ ಕಾರ್ಡ್’ ರದ್ದು, ನಿಮ್ದು ಇದ್ಯಾ ಚೆಕ್ ಮಾಡಿ

ರಾಜ್ಯದ ರೈತರ ಜಮೀನುಗಳಿಗೆ ಕಾಲುದಾರಿ, ಬಂಡಿದಾರಿ ಬಗ್ಗೆ ಸರ್ಕಾರದಿಂದ ಮಹತ್ವದ ಆದೇಶ

Share. Facebook Twitter LinkedIn WhatsApp Email

Related Posts

2025ನೇ ಸಾಲಿನ `ಮುಖ್ಯಮಂತ್ರಿ ಪದಕ’ ಪ್ರಕಟ: ಪ್ರಜ್ವಲ್ ರೇವಣ್ಣ ಕೇಸ್ ತನಿಖೆ ನಡೆಸಿದ್ದ ಸುಮನ್ ಪನ್ನೇಕರ್‌ ಸೇರಿ ರಾಜ್ಯದ 153 ಅಧಿಕಾರಿ, ಸಿಬ್ಬಂದಿಗೆ ಗೌರವ !

29/03/2026 5:52 AM2 Mins Read

IPL 2026 : ಚಿನ್ನಸ್ವಾಮಿಯಲ್ಲಿ ` ಕೊಹ್ಲಿ-ಪಡಿಕ್ಕಲ್’ ಅಬ್ಬರ : SRH ವಿರುದ್ಧ RCBಗೆ 6 ವಿಕೆಟ್‌ಗಳ ಭರ್ಜರಿ ಜಯ | WATCH VIDEO

29/03/2026 5:47 AM2 Mins Read

ರಾಜ್ಯದ ಜನರೇ ಗಮನಿಸಿ : ಏ.1 ರಿಂದ ‘ಸ್ವಯಂ-ಗಣತಿ’ ಆರಂಭ, ಮನೆಯಲ್ಲೇ ಕುಳಿತು ಜಸ್ಟ್ ಈ ರೀತಿ ಮಾಹಿತಿ ಸಲ್ಲಿಸಿ!

29/03/2026 5:34 AM1 Min Read
Recent News

2025ನೇ ಸಾಲಿನ `ಮುಖ್ಯಮಂತ್ರಿ ಪದಕ’ ಪ್ರಕಟ: ಪ್ರಜ್ವಲ್ ರೇವಣ್ಣ ಕೇಸ್ ತನಿಖೆ ನಡೆಸಿದ್ದ ಸುಮನ್ ಪನ್ನೇಕರ್‌ ಸೇರಿ ರಾಜ್ಯದ 153 ಅಧಿಕಾರಿ, ಸಿಬ್ಬಂದಿಗೆ ಗೌರವ !

29/03/2026 5:52 AM

IPL 2026 : ಚಿನ್ನಸ್ವಾಮಿಯಲ್ಲಿ ` ಕೊಹ್ಲಿ-ಪಡಿಕ್ಕಲ್’ ಅಬ್ಬರ : SRH ವಿರುದ್ಧ RCBಗೆ 6 ವಿಕೆಟ್‌ಗಳ ಭರ್ಜರಿ ಜಯ | WATCH VIDEO

29/03/2026 5:47 AM

ರಾಜ್ಯದ ಜನರೇ ಗಮನಿಸಿ : ಏ.1 ರಿಂದ ‘ಸ್ವಯಂ-ಗಣತಿ’ ಆರಂಭ, ಮನೆಯಲ್ಲೇ ಕುಳಿತು ಜಸ್ಟ್ ಈ ರೀತಿ ಮಾಹಿತಿ ಸಲ್ಲಿಸಿ!

29/03/2026 5:34 AM

ಸೋಲಿಸಲು ಬಂದವರ ನಡುವೆ ಸದ್ದಿಲ್ಲದೇ ಗೆದ್ದು ಮಾರಿಗುಡಿ ಖಜಾಂಚಿಯಾದ ವಿ.ಶಂಕರ್; ಸಾಗರ ಜನರ ಪ್ರೀತಿಯೇ ನನ್ನ ಶ್ರೀರಕ್ಷೆ ಎಂದು ಕೃತಜ್ಞತೆ

29/03/2026 12:06 AM
State News
KARNATAKA

2025ನೇ ಸಾಲಿನ `ಮುಖ್ಯಮಂತ್ರಿ ಪದಕ’ ಪ್ರಕಟ: ಪ್ರಜ್ವಲ್ ರೇವಣ್ಣ ಕೇಸ್ ತನಿಖೆ ನಡೆಸಿದ್ದ ಸುಮನ್ ಪನ್ನೇಕರ್‌ ಸೇರಿ ರಾಜ್ಯದ 153 ಅಧಿಕಾರಿ, ಸಿಬ್ಬಂದಿಗೆ ಗೌರವ !

By kannadanewsnow5729/03/2026 5:52 AM KARNATAKA 2 Mins Read

ಬೆಂಗಳೂರು: ರಾಜ್ಯ ಪೊಲೀಸ್ ಇಲಾಖೆಯಲ್ಲಿ ಅತ್ಯುತ್ತಮ ಸೇವೆ ಸಲ್ಲಿಸಿದ 153 ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿಗೆ 2025ನೇ ಸಾಲಿನ ಪ್ರತಿಷ್ಠಿತ…

IPL 2026 : ಚಿನ್ನಸ್ವಾಮಿಯಲ್ಲಿ ` ಕೊಹ್ಲಿ-ಪಡಿಕ್ಕಲ್’ ಅಬ್ಬರ : SRH ವಿರುದ್ಧ RCBಗೆ 6 ವಿಕೆಟ್‌ಗಳ ಭರ್ಜರಿ ಜಯ | WATCH VIDEO

29/03/2026 5:47 AM

ರಾಜ್ಯದ ಜನರೇ ಗಮನಿಸಿ : ಏ.1 ರಿಂದ ‘ಸ್ವಯಂ-ಗಣತಿ’ ಆರಂಭ, ಮನೆಯಲ್ಲೇ ಕುಳಿತು ಜಸ್ಟ್ ಈ ರೀತಿ ಮಾಹಿತಿ ಸಲ್ಲಿಸಿ!

29/03/2026 5:34 AM

ಸೋಲಿಸಲು ಬಂದವರ ನಡುವೆ ಸದ್ದಿಲ್ಲದೇ ಗೆದ್ದು ಮಾರಿಗುಡಿ ಖಜಾಂಚಿಯಾದ ವಿ.ಶಂಕರ್; ಸಾಗರ ಜನರ ಪ್ರೀತಿಯೇ ನನ್ನ ಶ್ರೀರಕ್ಷೆ ಎಂದು ಕೃತಜ್ಞತೆ

29/03/2026 12:06 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.