Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

‘KUWJ ಸಂಘ’ದ ಚುನಾವಣೆಗೆ 784 ಸ್ಥಾನಕ್ಕೆ 1,447 ನಾಮಪತ್ರ ಸಲ್ಲಿಕೆ: ಮುಖ್ಯ ಚುನಾವಣಾಧಿಕಾರಿ ರವಿಕುಮಾರ್ ಟೆಲೆಕ್ಸ್

27/10/2025 10:00 PM

ಶಿವಮೊಗ್ಗ: ಸೊರಬದ ಕಾನಹಳ್ಳಿಯ ಅಂಗನವಾಡಿ ಕಾರ್ಯಕರ್ತೆ ಗೋಪಾಲಮ್ಮ ನಿವೃತ್ತಿ, ಆತ್ಮೀಯವಾಗಿ ಬೀಳ್ಕೊಡುಗೆ

27/10/2025 9:56 PM

2026ರಲ್ಲಿ ಕಾದಿದೆ ಮತ್ತಷ್ಟು ವಿಪತ್ತು, ತಿಳಿದ್ರೆನೇ ಮೈ ಜುಮ್ಮೆನ್ನುತ್ತೆ ; ಬಾಬಾ ವಂಗಾ ಭಯಾನಕ ಭವಿಷ್ಯ

27/10/2025 9:27 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಶಿವಮೊಗ್ಗ: ಸೊರಬದ ಕಾನಹಳ್ಳಿಯ ಅಂಗನವಾಡಿ ಕಾರ್ಯಕರ್ತೆ ಗೋಪಾಲಮ್ಮ ನಿವೃತ್ತಿ, ಆತ್ಮೀಯವಾಗಿ ಬೀಳ್ಕೊಡುಗೆ
KARNATAKA

ಶಿವಮೊಗ್ಗ: ಸೊರಬದ ಕಾನಹಳ್ಳಿಯ ಅಂಗನವಾಡಿ ಕಾರ್ಯಕರ್ತೆ ಗೋಪಾಲಮ್ಮ ನಿವೃತ್ತಿ, ಆತ್ಮೀಯವಾಗಿ ಬೀಳ್ಕೊಡುಗೆ

By kannadanewsnow0927/10/2025 9:56 PM

ಶಿವಮೊಗ್ಗ: ಕಳೆದ 32 ವರ್ಷಗಳಿಂದ ಶಿವಮೊಗ್ಗದ ಸೊರಬ ತಾಲ್ಲೂಕಿನ ಕಾನಹಳ್ಳಿಯಲ್ಲಿ ಅಂಗನವಾಡಿ ಕಾರ್ಯಕರ್ತೆಯಾಗಿ ಕಾರ್ಯನಿರ್ವಹಿಸುತ್ತಿದ್ದಂತ ಗೋಪಾಲಮ್ಮ ಅವರು ಇಂದು ನಿವೃತ್ತರಾದರು. ಅವರಿಗೆ ಉಳವಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಆತ್ಮೀಯವಾಗಿ ಬೀಳ್ಕೊಡುಗೆ ನೀಡಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದಂತ ಅಂಗನವಾಡಿ ಮೇಲ್ವಿಚಾರಕಿ ರೇಣುಕಾ ಅವರು, ಗೋಪಾಲಮ್ಮ ಅವರು ಉತ್ತಮ ಕೆಲಸಗಾರ್ತಿಯಾಗಿದ್ದರು. ನಾವು ಯಾವುದೇ ಮಾಹಿತಿ ಕೇಳಿದ್ರೂ ಪಟ್ ಅಂತ ನೀಡುತ್ತಿದ್ದರು. ಸೌಮ್ಯ ಸ್ವಭಾವದವರಾಗಿದ್ದಂತ ಅವರು ನಮ್ಮೆಲ್ಲರಿಗೂ ಕೆಲಸದಲ್ಲಿ ಮಾದರಿಯಾಗಿದ್ದರು ಎಂಬುದಾಗಿ ಹೇಳಿದರು.

ಅಂಗನವಾಡಿ ಕಾರ್ಯಕರ್ತೆ ಕೆಲಸ ಮೆಚ್ಚಿ ಸರ್ಕಾರ ಪ್ರಶಸ್ತಿ

ಅಂದಹಾಗೇ ಶಿವಮೊಗ್ಗ ಜಿಲ್ಲೆಯ ಸೊರಬ ತಾಲ್ಲೂಕಿನ ಕಾನಹಳ್ಳಿಯ ಅಂಗನವಾಡಿ ಕಾರ್ಯಕರ್ತೆ ಗೋಪಾಲಮ್ಮ ಸೇವೆಯನ್ನು ಸರ್ಕಾರ ಗುರುತಿಸಿತ್ತು. ಅವರಿಗೆ 2002-3ನೇ ಸಾಲಿನಲ್ಲಿ ಉತ್ತಮ ಅಂಗನವಾಡಿ ಕಾರ್ಯಕರ್ತೆ ರಾಜ್ಯ ಪ್ರಶಸ್ತಿಯನ್ನು ನೀಡಿ ಗೌರವಿಸಿತ್ತು.

1993ರಲ್ಲಿ ಅಂಗನವಾಡಿ ಕಾರ್ಯಕರ್ತೆಯಾಗಿ ಸೇವೆಗೆ ಸೇರಿದ್ದಂತ ಗೋಪಾಲಮ್ಮ ಅವರು, ಬರೋಬ್ಬರಿ 32 ವರ್ಷಗಳ ಕಾಲ ಸೇವೆ ಸಲ್ಲಿಸಿ, ಇಂದು ನಿವೃತ್ತರಾದರು.

ಗೋಪಾಲಮ್ಮ ನಿವೃತ್ತರಾಗುವ ಬೀಳ್ಕೊಡುಗೆ ವಿಷಯ ತಿಳಿದಂತ ಈ ಹಿಂದೆ ಅಂಗನವಾಡಿ ಕಾರ್ಯಕರ್ತೆಯಾಗಿ, ಸದ್ಯ ಸಾಗರದಲ್ಲಿ ಮೇಲ್ವಿಚಾರಕಿಯಾಗಿ ಕಾರ್ಯನಿರ್ವಹಿಸುತ್ತಿರುವಂತ ವಿದ್ಯ ಕೂಡ ಭಾಗಿಯಾಗಿ, ಗೋಪಾಲಮ್ಮ ಗುಣಗಾನ ಮಾಡಿದರು.

ಬೀಳ್ಕೊಡುಗೆ ಸ್ವೀಕರಿಸಿದ ಬಳಿಕ ಭಾವುಕರಾಗಿ ಮಾತನಾಡಿದಂತ ಗೋಪಾಲಮ್ಮ ಅವರು, ನಮ್ಮ ಕಾಲದಲ್ಲಿ ಕಟ್ಟಿಗೆ ಓಲೆಯಲ್ಲಿ ಅಡುಗೆ ಮಾಡಿ ಮಕ್ಕಳಿಗೆ ಬಡಿಸಬೇಕಾಗಿತ್ತು. ಈಗ ಗ್ಯಾಸ್ ಸ್ಟೌ ಬಂದು ಆ ಕಷ್ಟವನ್ನು ದೂರ ಮಾಡಿದೆ. ಪ್ರಸ್ತುತ ಡಿಜಿಟಲ್ ವ್ಯವಸ್ಥೆಯಲ್ಲಿ ಎಲ್ಲವೂ ಸ್ಮಾರ್ಟ್ ಪೋನ್ ಮೂಲಕವೇ ಸಾಗುತ್ತಿದೆ. ಇಲ್ಲಿರುವಂತ ಅಂಗನವಾಡಿ ಕಾರ್ಯಕರ್ತೆಯರಿಗೆ ಉತ್ತಮ ಭವಿಷ್ಯವಿದೆ. ಉತ್ತಮ ರೀತಿಯಲ್ಲಿ ಕೆಲಸ ಮಾಡುವಂತೆ ಸಲಹೆ ಮಾಡಿದರು.

ಅಂಗನವಾಡಿ ಕಾರ್ಯಕರ್ತೆಯರ ಮುಖಂಡೆ ರೇಣುಕಾ ಮಾತನಾಡಿದರು. ಈ ವೇಳೆ ಉಳವಿ ಪ್ರಾಥಮಿಕ ಆರೋಗ್ಯದ ಪ್ರಾಥಮಿಕ ಆರೋಗ್ಯ ಸುರಕ್ಷಣಾಧಿಕಾರಿ ಕೆ.ವಿ.ನಿರ್ಮಲ, ಎನ್.ಅಕ್ಷತಾ, ಪಿ.ಕೆ.ಶೈಲಶ್ರೀ, ಅಶ್ವಿನಿ, ಆಶಾ ಕಾರ್ಯಕರ್ತೆಯರು, ಅಂಗನವಾಡಿ ಶಿಕ್ಷಕಿಯರು ಸೇರಿದಂತೆ ಇತರರು ಉಪಸ್ಥಿತರಿದ್ದರು.

ವರದಿ; ವಸಂತ ಬಿ ಈಶ್ವರಗೆರೆ.., ಸಂಪಾದಕರು

BREAKING: ಹಿರಿಯ ಸ್ವಾತಂತ್ರ್ಯ ಹೋರಾಟಗಾರ ವಿ.ಎನ್ ರೆಡ್ಡಿ ನಿಧನ

ಶಿವಮೊಗ್ಗದಲ್ಲಿ ಕಾರ್ಮಿಕ ಇಲಾಖೆ ಕಟ್ಟಡ ಕುಸಿದು ವ್ಯಕ್ತಿ ಸಾವನ್ನಪ್ಪಿಲ್ಲ: ಇಲಾಖೆ ಸ್ಪಷ್ಟನೆ

Share. Facebook Twitter LinkedIn WhatsApp Email

Related Posts

‘KUWJ ಸಂಘ’ದ ಚುನಾವಣೆಗೆ 784 ಸ್ಥಾನಕ್ಕೆ 1,447 ನಾಮಪತ್ರ ಸಲ್ಲಿಕೆ: ಮುಖ್ಯ ಚುನಾವಣಾಧಿಕಾರಿ ರವಿಕುಮಾರ್ ಟೆಲೆಕ್ಸ್

27/10/2025 10:00 PM1 Min Read

BREAKING: ಹಿರಿಯ ಸ್ವಾತಂತ್ರ್ಯ ಹೋರಾಟಗಾರ ವಿ.ಎನ್ ರೆಡ್ಡಿ ನಿಧನ

27/10/2025 9:24 PM1 Min Read

‘ಶರಾವತಿ ಪಂಪ್ಡ್ ಸ್ಟೋರೇಜ್’ ಯೋಜನೆ: ‘KPCL ಅಧಿಕಾರಿ’ಗಳಿಂದ ಈ ಸ್ಪಷ್ಟನೆ

27/10/2025 8:57 PM5 Mins Read
Recent News

‘KUWJ ಸಂಘ’ದ ಚುನಾವಣೆಗೆ 784 ಸ್ಥಾನಕ್ಕೆ 1,447 ನಾಮಪತ್ರ ಸಲ್ಲಿಕೆ: ಮುಖ್ಯ ಚುನಾವಣಾಧಿಕಾರಿ ರವಿಕುಮಾರ್ ಟೆಲೆಕ್ಸ್

27/10/2025 10:00 PM

ಶಿವಮೊಗ್ಗ: ಸೊರಬದ ಕಾನಹಳ್ಳಿಯ ಅಂಗನವಾಡಿ ಕಾರ್ಯಕರ್ತೆ ಗೋಪಾಲಮ್ಮ ನಿವೃತ್ತಿ, ಆತ್ಮೀಯವಾಗಿ ಬೀಳ್ಕೊಡುಗೆ

27/10/2025 9:56 PM

2026ರಲ್ಲಿ ಕಾದಿದೆ ಮತ್ತಷ್ಟು ವಿಪತ್ತು, ತಿಳಿದ್ರೆನೇ ಮೈ ಜುಮ್ಮೆನ್ನುತ್ತೆ ; ಬಾಬಾ ವಂಗಾ ಭಯಾನಕ ಭವಿಷ್ಯ

27/10/2025 9:27 PM

BREAKING: ಹಿರಿಯ ಸ್ವಾತಂತ್ರ್ಯ ಹೋರಾಟಗಾರ ವಿ.ಎನ್ ರೆಡ್ಡಿ ನಿಧನ

27/10/2025 9:24 PM
State News
KARNATAKA

‘KUWJ ಸಂಘ’ದ ಚುನಾವಣೆಗೆ 784 ಸ್ಥಾನಕ್ಕೆ 1,447 ನಾಮಪತ್ರ ಸಲ್ಲಿಕೆ: ಮುಖ್ಯ ಚುನಾವಣಾಧಿಕಾರಿ ರವಿಕುಮಾರ್ ಟೆಲೆಕ್ಸ್

By kannadanewsnow0927/10/2025 10:00 PM KARNATAKA 1 Min Read

ಬೆಂಗಳೂರು: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ 2025-2028ನೇ ಸಾಲಿನ ವಿವಿಧ ಘಟಕಗಳ 784 ಸ್ಥಾನಗಳಿಗೆ 1,447 ಮಂದಿ ನಾಮಪತ್ರ ಸಲ್ಲಿಸಿರುವುದಾಗಿ…

ಶಿವಮೊಗ್ಗ: ಸೊರಬದ ಕಾನಹಳ್ಳಿಯ ಅಂಗನವಾಡಿ ಕಾರ್ಯಕರ್ತೆ ಗೋಪಾಲಮ್ಮ ನಿವೃತ್ತಿ, ಆತ್ಮೀಯವಾಗಿ ಬೀಳ್ಕೊಡುಗೆ

27/10/2025 9:56 PM

BREAKING: ಹಿರಿಯ ಸ್ವಾತಂತ್ರ್ಯ ಹೋರಾಟಗಾರ ವಿ.ಎನ್ ರೆಡ್ಡಿ ನಿಧನ

27/10/2025 9:24 PM

‘ಶರಾವತಿ ಪಂಪ್ಡ್ ಸ್ಟೋರೇಜ್’ ಯೋಜನೆ: ‘KPCL ಅಧಿಕಾರಿ’ಗಳಿಂದ ಈ ಸ್ಪಷ್ಟನೆ

27/10/2025 8:57 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.