ಶಿವಮೊಗ್ಗ : ಶಿವಮೊಗ್ಗ ಜಿಲ್ಲಾ ಕಾರಾಗೃಹದಲ್ಲಿ ವಿಚಾರಣಾದೀನ ಕೈದಿಯ ಮೇಲೆ ಹಲ್ಲೆ ನಡೆಸಲಾಗಿದೆ. ಜೈಲಿನೊಳಗೆ ನಡೆದಿರುವ ಘಟನೆ ಸಾಮಾಜಿಕ ಜಾಲತಾಣದಲ್ಲಿ ಇದೀಗ ವೈರಲ್ ಆಗಿದೆ. ಫೇಸ್ಬುಕ್ ನಲ್ಲಿ ಭದ್ರಾವತಿ ಜೆಡಿಎಸ್ ಮುಖಂಡ ಅಜಿತ್ ಅಪ್ಪಾಜಿಗೌಡ ಪೋಸ್ಟ್ ಅಪ್ ಲೋಡ್ ಮಾಡಿದ್ದು, ಕಾರ್ಯಗೃಹದಲ್ಲಿ ಸಹಪಾಠಿ ಗಳಿಂದ ಕಿರಣ್ ಸೇಠ ಎಂಬುವನ ಮೇಲೆ ಹಲ್ಲೆ ನಡೆದಿದೆ.
ನಿನ್ನೆ ಅಟ್ರಾಸಿಟಿ ಕೇಸ್ ನಲ್ಲಿ ಜೆಡಿಎಸ್ ಕಾರ್ಯಕರ್ತ ಕಿರಣ್ ಜೈಲು ಸೇರಿದ್ದ ಕಿರಣ್ ನನ್ನು ಬಂಧಿಸಿ ಭದ್ರಾವತಿ ಗ್ರಾಮಾಂತರ ಪೊಲೀಸರು ಜೈಲಿಗೆ ಕಳುಹಿಸಿದ್ದರು. ಸಂಜೆ ಊಟಕ್ಕೆ ಬಿಟ್ಟಾಗ ರೂಮ್ಗೆ ಕರೆದುಕೊಂಡು ಹೋಗಿ ಹಲ್ಲಿ ನಡೆಸಿದ್ದಾರೆ. ಪರಶುರಾಮ್ ಯಾನೆ, ಅಪ್ಪು ನಾಯ್ಕ್, ಶಬರೀಶ್ ಹಾಗು ಪ್ರದೀಪ್ ಎನ್ನುವ ಸಹ ಕೈದಿಗಳು ಹಲ್ಲೆ ಮಾಡಿದ್ದಾರೆ. ಪಕ್ಷದ ವಿಚಾರದಲ್ಲಿ ಹೊಡೆದಾಡಿಕೊಂಡ ಬಗ್ಗೆ ಮಾಹಿತಿ ಇದೆ ಈ ಕುರಿತು FIR ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ ಎಂದು ಜೈಲರ್ ರಂಗನಾಥ್ ಮಾಹಿತಿ ನೀಡಿದ್ದಾರೆ.