Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ನಾಳೆ ಮಹಾಲಯ ಅಮಾವಾಸ್ಯೆ: ಈ ತಪ್ಪನ್ನು ಸುಮಂಗಲಿಯರು ಪೂರ್ವಜರಿಗೆ ಅಡುಗೆ ಮಾಡುವಾಗ ಮಾಡಬೇಡಿ

20/09/2025 6:57 PM

BREAKING : ಸೂಪರ್ ಸ್ಟಾರ್ ‘ಮೋಹನ್ ಲಾಲ್’ಗೆ ಒಲಿದ ಅತ್ಯುನ್ನತ ‘ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ’

20/09/2025 6:57 PM

ರಾಜ್ಯದ 53 ಪ್ರಯೋಗಾಲಯಗಳಿಗೆ NAVL ಮಾನ್ಯತೆ: ಸಚಿವ ಎನ್.ಚಲುವರಾಯಸ್ವಾಮಿ

20/09/2025 6:54 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಶಿವಮೊಗ್ಗ: ಉಳವಿಯಲ್ಲಿ ಯಶಸ್ವಿಯಾಗಿ ನಡೆದ ಈದ್ ಮಿಲಾದ್ ಪ್ರಯುಕ್ತ ಆಯೋಜಿಸಿದ್ದ ‘ರಕ್ತದಾನ ಶಿಬಿರ’
KARNATAKA

ಶಿವಮೊಗ್ಗ: ಉಳವಿಯಲ್ಲಿ ಯಶಸ್ವಿಯಾಗಿ ನಡೆದ ಈದ್ ಮಿಲಾದ್ ಪ್ರಯುಕ್ತ ಆಯೋಜಿಸಿದ್ದ ‘ರಕ್ತದಾನ ಶಿಬಿರ’

By kannadanewsnow0920/09/2025 5:29 PM

ಶಿವಮೊಗ್ಗ: ಇಂದು ಸೊರಬ ತಾಲ್ಲೂಕಿನ ಉಳವಿಯಲ್ಲಿ ಈದ್ ಮಿಲಾದ್ ಪ್ರಯುಕ್ತ ಆಯೋಜಿಸಿದ್ದಂತ ಬೃಹತ್ ರಕ್ತದಾನ ಶಿಬಿರ ಯಶಸ್ವಿಯಾಗಿ ನಡೆಯಿತು. ಈ ರಕ್ತದಾದನಲ್ಲಿ ಎಲ್ಲಾ ಸಮುದಾಯದವರು ಪಾಲ್ಗೊಂಡು ರಕ್ತದಾನ ಮಾಡಿ ಗಮನ ಸೆಳೆದರು.

ಶಿವಮೊಗ್ಗ ಜಿಲ್ಲೆಯ ಸೊರಬ ತಾಲ್ಲೂಕಿನ ಉಳವಿಯ ಪ್ರಾಥಮಿಕ ಆರೋಗ್ಯ ಕೇಂದ್ರ ಮುಂಭಾಗದಲ್ಲಿರುವಂತ ಹಳ್ಳಿ ಸಂತೆಯಲ್ಲಿ ಉಳವಿಯ ಫಲಾಹುಲ್ ಮುಸ್ಲಿಂ ಕಮಿಟಿ ಆಶ್ರಯದಲ್ಲಿ ದೂಗೂರು, ಉಳವಿ ಗ್ರಾಮಪಂಚಾಯ್ತಿ ಹಾಗೂ ಉಳವಿ ಪ್ರಾಥಮಿಕ ಆರೋಗ್ಯ ಕೇಂದ್ರದ ಸಹಯೋಗದಲ್ಲಿ ಪ್ರವಾದಿ ಮೊಹಮ್ಮದ್ ಅವರ 1500 ವರ್ಷದ ಜನ್ಮ ದಿನದ ಅಂಗವಾಗಿ ಬೃಹತ್ ರಕ್ತದಾನ ಶಿಬಿರವನ್ನು ಆಯೋಜಿಸಲಾಗಿತ್ತು. ಈ ಬೃಹತ್ ರಕ್ತದಾನ ಶಿಬಿರವನ್ನು ಸೊರಬ ತಹಶೀಲ್ದಾರ್ ಮಂಜುಳಾ ಬಿ ಹೆಗಡಾಳ ಅವರು ಉದ್ಘಾಟಿಸಿದರು.

ಈ ಬಳಿಕ ಮಾತನಾಡಿದಂತ ಅವರು, ರಕ್ತದಾನ ಮಹಾದಾನವಾಗಿದೆ. ಒಮ್ಮೆಯಾದರೂ ಪ್ರತಿಯೊಬ್ಬರೂ ರಕ್ತದಾನ ಮಾಡಬೇಕು. ಹೀಗೆ ರಕ್ತದಾನ ಮಾಡುವುದರಿಂದ 4 ಜನರ ಪ್ರಾಣ ಉಳಿಸಿದಂತೆ ಆಗಲಿದೆ. ಆ ನಿಟ್ಟಿನಲ್ಲಿ ಇಂದು ಉಳವಿಯಲ್ಲಿ ರಕ್ತದಾನ ಶಿಬಿರ ಆಯೋಜಿಸಿ, ಯಶಸ್ವಿಯಾಗಿ ನಡೆಸುತ್ತಿರುವುದು ನಿಜಕ್ಕೂ ಉತ್ತಮ ಕೆಲಸವಾಗಿದೆ ಎಂದರು.

ಉಳವಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಪೃಥ್ವಿ ಮಾತನಾಡಿ, ನಮ್ಮ ದೇಶದಲ್ಲಿ ಪ್ರತಿ ದಿನ 12 ಸಾವಿರಕ್ಕೂ ಹೆಚ್ಚು ಜನ ರಕ್ತದ ಕೊರತೆಯಿಂದ ಸಾವನ್ನಪ್ಪುತ್ತಿದ್ದಾರೆ. ಪ್ರತಿ ಗಂಟೆಗೆ 500 ಜನ, 1 ನಿಮಿಷಕ್ಕೆ 8 ಜನ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಹೀಗಾಗಿ ಒಬ್ಬ ವ್ಯಕ್ತಿಯು ರಕ್ತ ದಾನ ಮಾಡುವುದರಿಂದ 3-4 ಜನರ ಜೀವವನ್ನು ರಕ್ಷಿಸಬಹುದು. ಎಲ್ಲರೂ ರಕ್ತದಾನವನ್ನು ಮಾಡಿ ಜೀವವನ್ನು ಉಳಿಸಿ ಎಂಬುದಾಗಿ ಮನವಿ ಮಾಡಿದರು.

ದೂಗೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಹಾಗೂ ಉಳವಿ ಫಲಾಹುಲ್ ಮುಸ್ಲಿಂ ಕಮಿಟಿ ಅಧ್ಯಕ್ಷ ಫಯಾಜ್ ಅಹ್ಮದ್ ಅಧ್ಯಕ್ಷತೆ ವಹಿಸಿ ಮಾತನಾಡಿ, ಆಚರಣೆಗಳನ್ನು ಮಾಡುವುದರಿಂದ ಇನ್ನೊಬ್ಬರಿಗೆ ಹಾಗೂ ಸಮಾಜಕ್ಕೆ ಅಡ್ಡಿಯುಂಟು ಮಾಡಬಾರದು. ಇನ್ನೊಬ್ಬರಿಗೆ ಸಹಕಾರ ನೀಡುವಂತೆ ಇರಬೇಕು. ಈ ದೃಷ್ಟಿಯಿಂದ ಪ್ರವಾದಿ ಮೊಹಮ್ಮದ್ ಅವರ ಜನ್ಮದಿನಾಚರಣೆಯನ್ನು ರಕ್ತದಾನ ಶಿಬಿರ ಮಾಡುವುದರ ಮೂಲಕ, ಹಮ್ಮಿಕೊಳ್ಳಲಾಗಿದೆ. ಈ ಕಾರ್ಯಕ್ರಮಕ್ಕೆ ಎಲ್ಲ ಜಾತಿ, ಜನಾಂಗ, ಧರ್ಮದವರು ಸಹಕಾರ ನೀಡಿದ್ದಾರೆ ಎಂದರು.

ಈ ವೇಳೆ ಸೊರಬ ಸಾರ್ವಜನಿಕ ಆಸ್ಪತ್ರೆಯ ವೈದ್ಯ ಡಾ.ಪವಾರ್, ತಾಲ್ಲೂಕು ಪಂಚಾಯ್ತಿ ಮಾಜಿ ಸದಸ್ಯ ನಾಗರಾಜ್ ಚಿಕ್ಕಸವಿ, ಮಳಲಗದ್ದೆ ಕೃಷಿ ಪತ್ತಿನ ಸಹಕಾರ ಸಂಘದ ಉಪಾಧ್ಯಕ್ಷ ಭೈರಪ್ಪ ಮೈಸಾವಿ, ನಿರ್ದೇಶಕ ಭಾಸ್ಕರ್, ಮಂಜಪ್ಪ ಪತ್ರೆಸಾಲು, ಜಿ.ಟಿ.ಗಣಪತಿ ಮಾತನಾಡಿದರು.

ಈ ಸಂದರ್ಭದಲ್ಲಿ ಚಂದ್ರಕಾಂತ್, ದೂಗೂರು ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಗಂಗಮ್ಮ, ಸದಸ್ಯರಾದ ಗೌರಮ್ಮ ಗಣಪತಿ, ಚಂದ್ರಕಲಾ, ಉಳವಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ತನ್ವೀರ್ ಅಹ್ಮದ್, ಸದಸ್ಯ ಪ್ರಶಾಂತ್ ಕೈಸೋಡಿ, ಕಮಿಟಿ ಉಪಾಧ್ಯಕ್ಷ ಹಬ್ಬುಸಾಲೆ, ಕಾರ್ಯದರ್ಶಿ ಖಲಿಮುಲ್ಲ, ಖಜಾಂಚಿ ನೂರ್ ಅಹ್ಮದ್, ಅಲ್ತಾಫ್ ಸೇರಿದಂತೆ ಇತರರು ಉಪಸ್ಥಿತರಿದ್ದರು.

ಇದೇ ಸಂದರ್ಭದಲ್ಲಿ ಶ್ರೀ ಕಲ್ಪವೃಕ್ಷ ಸಂಜೀವಿನಿ ಒಕ್ಕೂಟದಿಂದ ಮಾದಕ ಮುಕ್ತ ಕರ್ನಾಟಕ ಅಭಿಯಾನ ನಡೆಯಿತು. ಎಲ್ಲರೂ ಮಾದಕ ಮುಕ್ತ ಕರ್ನಾಟಕ ನಿರ್ಮಾಣಕ್ಕೆ ಕೈಜೋಡಿಸುವಂತೆ ಪ್ರಮಾಣ ಸ್ವೀಕರಿಸಿದರು. ಇಂದಿನ ಬೃಹತ್ ರಕ್ತದಾನ ಶಿಬಿರದಲ್ಲಿ ಹಿಂದೂ-ಮುಸ್ಲೀಂ ಎನ್ನದೇ ಸುಮಾರು 100ಕ್ಕೂ ಹೆಚ್ಚು ಮಂದಿ ರಕ್ತದಾನ ಮಾಡಿದರು.

ವರದಿ; ವಸಂತ ಬಿ ಈಶ್ವರಗೆರೆ.., ಸಂಪಾದಕರು

ಕುರುಬರಿಗೆ ST ಮೀಸಲಾತಿ ಕುರಿತು ಹೇಳಿಕೆ ಕೇಸ್: ಛಲವಾದಿ ನಾರಾಯಣಸ್ವಾಮಿಗೆ ಜಾಮೀನು ಮಂಜೂರು

ಮೈಸೂರು ದಸರಾ ಪ್ರಯುಕ್ತ 2,300ಕ್ಕೂ ಹೆಚ್ಚು KSRTCಯಿಂದ ವಿಶೇಷ ಬಸ್ ಸಂಚಾರದ ವ್ಯವಸ್ಥೆ

Share. Facebook Twitter LinkedIn WhatsApp Email

Related Posts

ನಾಳೆ ಮಹಾಲಯ ಅಮಾವಾಸ್ಯೆ: ಈ ತಪ್ಪನ್ನು ಸುಮಂಗಲಿಯರು ಪೂರ್ವಜರಿಗೆ ಅಡುಗೆ ಮಾಡುವಾಗ ಮಾಡಬೇಡಿ

20/09/2025 6:57 PM3 Mins Read

ರಾಜ್ಯದ 53 ಪ್ರಯೋಗಾಲಯಗಳಿಗೆ NAVL ಮಾನ್ಯತೆ: ಸಚಿವ ಎನ್.ಚಲುವರಾಯಸ್ವಾಮಿ

20/09/2025 6:54 PM2 Mins Read

ಬೆಂಗಳೂರಲ್ಲಿ ಈವರೆಗೆ 7,000 ಗುಂಡಿ ಮುಚ್ಚಿದ್ದು, 5,000 ಬಾಕಿ ಇವೆ: ಡಿಸಿಎಂ ಡಿ.ಕೆ ಶಿವಕುಮಾರ್

20/09/2025 6:17 PM1 Min Read
Recent News

ನಾಳೆ ಮಹಾಲಯ ಅಮಾವಾಸ್ಯೆ: ಈ ತಪ್ಪನ್ನು ಸುಮಂಗಲಿಯರು ಪೂರ್ವಜರಿಗೆ ಅಡುಗೆ ಮಾಡುವಾಗ ಮಾಡಬೇಡಿ

20/09/2025 6:57 PM

BREAKING : ಸೂಪರ್ ಸ್ಟಾರ್ ‘ಮೋಹನ್ ಲಾಲ್’ಗೆ ಒಲಿದ ಅತ್ಯುನ್ನತ ‘ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ’

20/09/2025 6:57 PM

ರಾಜ್ಯದ 53 ಪ್ರಯೋಗಾಲಯಗಳಿಗೆ NAVL ಮಾನ್ಯತೆ: ಸಚಿವ ಎನ್.ಚಲುವರಾಯಸ್ವಾಮಿ

20/09/2025 6:54 PM

BREAKING : ಮಲಯಾಳಂ ಸೂಪರ್ ಸ್ಟಾರ್ ‘ಮೋಹನ್ ಲಾಲ್’ಗೆ ‘ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ’ ಘೋಷಣೆ

20/09/2025 6:34 PM
State News
KARNATAKA

ನಾಳೆ ಮಹಾಲಯ ಅಮಾವಾಸ್ಯೆ: ಈ ತಪ್ಪನ್ನು ಸುಮಂಗಲಿಯರು ಪೂರ್ವಜರಿಗೆ ಅಡುಗೆ ಮಾಡುವಾಗ ಮಾಡಬೇಡಿ

By kannadanewsnow0920/09/2025 6:57 PM KARNATAKA 3 Mins Read

ನಾಳೆ, ಭಾನುವಾರ, ಸೆಪ್ಟೆಂಬರ್ 21, 2025, ಮಹಾಲಯ ಅಮಾವಾಸ್ಯೆ ದಿನ. ಈ ದಿನದಂದು, ಪೂರ್ವಜರನ್ನು ಪೂಜಿಸುವುದು, ಅವರಿಗೆ ತಿಥಿ ತರ್ಪಣ…

ರಾಜ್ಯದ 53 ಪ್ರಯೋಗಾಲಯಗಳಿಗೆ NAVL ಮಾನ್ಯತೆ: ಸಚಿವ ಎನ್.ಚಲುವರಾಯಸ್ವಾಮಿ

20/09/2025 6:54 PM

ಬೆಂಗಳೂರಲ್ಲಿ ಈವರೆಗೆ 7,000 ಗುಂಡಿ ಮುಚ್ಚಿದ್ದು, 5,000 ಬಾಕಿ ಇವೆ: ಡಿಸಿಎಂ ಡಿ.ಕೆ ಶಿವಕುಮಾರ್

20/09/2025 6:17 PM

ರಾಜ್ಯದಲ್ಲಿ ‘ಪ್ರವಾಸಿ ಮಿತ್ರ ಯೋಜನೆ’ಯಿಂದ ‘50,000 ಉದ್ಯೋಗ’ ಸೃಷ್ಟಿ: ಸಿಎಂ ಸಿದ್ಧರಾಮಯ್ಯ

20/09/2025 5:59 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.