Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

GOOD NEWS: ರಾಜ್ಯಾಧ್ಯಂತ ‘ಗೃಹ ಆರೋಗ್ಯ ಯೋಜನೆ’ ಜಾರಿ: ಔಷಧಿ, ಉಪಕರಣ ಖರೀದಿಗೆ ಸರ್ಕಾರ ಅನುದಾನ ಬಿಡುಗಡೆ

13/06/2025 7:56 PM

ಶಿವಮೊಗ್ಗ: ಸಾಗರದ ಚಿಮಲೆ ಗ್ರಾಮ ಸತೀಶ್ ಅನುಮಾನಾಸ್ಪದ ಸಾವಿನ ತನಿಖೆಗೆ ಮಲ್ಲಿಕಾರ್ಜುನ ಹಕ್ರೆ ಆಗ್ರಹ

13/06/2025 7:49 PM

ಅಹಮದಾಬಾದ್ ವಿಮಾನ ದುರಂತ: ಮೃತಪಟ್ಟವರಿಗೆ ಸಾಗರ ಬ್ಲಾಕ್ ಕಾಂಗ್ರೆಸ್ ಶ್ರದ್ಧಾಂಜಲಿ ಸಲ್ಲಿಕೆ

13/06/2025 7:45 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಶಿವಮೊಗ್ಗ: ಸಾಗರದ ಚಿಮಲೆ ಗ್ರಾಮ ಸತೀಶ್ ಅನುಮಾನಾಸ್ಪದ ಸಾವಿನ ತನಿಖೆಗೆ ಮಲ್ಲಿಕಾರ್ಜುನ ಹಕ್ರೆ ಆಗ್ರಹ
KARNATAKA

ಶಿವಮೊಗ್ಗ: ಸಾಗರದ ಚಿಮಲೆ ಗ್ರಾಮ ಸತೀಶ್ ಅನುಮಾನಾಸ್ಪದ ಸಾವಿನ ತನಿಖೆಗೆ ಮಲ್ಲಿಕಾರ್ಜುನ ಹಕ್ರೆ ಆಗ್ರಹ

By kannadanewsnow0913/06/2025 7:49 PM

ಶಿವಮೊಗ್ಗ: ಇಂದು ಜಿಲ್ಲೆಯ ಸಾಗರ ತಾಲ್ಲೂಕಿನ ಕಿರತೋಡಿ-ಚಿಮಲೆ ಗ್ರಾಮದ ಸತೀಶ ಅವರ ಅನುಮಾನಸ್ಪದ ಸಾವಿನ ಕುರಿತು ತನಿಖೆ ನಡೆಸುವಂತೆ ಒತ್ತಾಯಿಸಿ ಗ್ರಾಮಸ್ಥರು ತಾಲ್ಲೂಕು ಪಂಚಾಯ್ತಿ ಮಾಜಿ ಅಧ್ಯಕ್ಷ ಮಲ್ಲಿಕಾರ್ಜುನ ಹಕ್ರೆ ನೇತೃತ್ವದಲ್ಲಿ ಡಿವೈಎಸ್‍ಪಿ ಕಚೇರಿಗೆ ಮನವಿ ಸಲ್ಲಿಸಿದರು.

ಈ ವೇಳೆ ಮಾತನಾಡಿದ ತಾಲ್ಲೂಕು ಪಂಚಾಯ್ತಿ ಮಾಜಿ ಅಧ್ಯಕ್ಷ ಮಲ್ಲಿಕಾರ್ಜುನ ಹಕ್ರೆ, ಕಳೆದ 14 ತಿಂಗಳ ಹಿಂದೆ ಚಿಮಲೆ ಗ್ರಾಮದ ಸತೀಶ್ ಎಂಬುವವರ ಕೊಲೆ ಆಗಿದೆ. ಸತೀಶ್ ಅವರ ಶವವನ್ನು ನಾಲ್ಕು ಅಡಿ ಎತ್ತರದಲ್ಲಿ ನೇತು ಹಾಕಲಾಗಿತ್ತು. ಅವರು ಧರಿಸಿದ್ದ ಅಂಗಿಯಲ್ಲಿ ರಕ್ತದ ಕಲೆಯಿತ್ತು. ಸತೀಶ್ ಅವರು ಸಾಯುವುದಕ್ಕಿಂತ ಮೊದಲ ನಾಲ್ಕೈದು ಜನರ ಬಳಿ ಫೋನ್‍ನಲ್ಲಿ ಮಾತನಾಡಿ ತಮ್ಮ ನೋವು ತೋಡಿಕೊಂಡಿದ್ದರು ಎಂದು ಹೇಳಲಾಗುತ್ತಿದೆ. ಆದರೆ ಸತೀಶ್ ಅವರದ್ದು ಆತ್ಮಹತ್ಯೆ ಎಂದು ಹೇಳಲಾಗುತ್ತಿದ್ದು, ಇದನ್ನು ಗ್ರಾಮಸ್ಥರು ಹಾಗೂ ಸತೀಶ್ ಅವರ ಪತ್ನಿ ಅಲ್ಲಗಳೆಯುತ್ತಿದ್ದಾರೆ ಎಂದು ಹೇಳಿದರು.

ಸತೀಶ್ ಅವರ ಕೊಲೆಗೆ ಸಂಬಂಧಿಸಿದಂತೆ ಗ್ರಾಮಸ್ಥರಿಗೆ ನಾಲ್ಕೈದು ಜನರ ಮೇಲೆ ಅನುಮಾನವಿದ್ದು ಅದನ್ನು ಡಿವೈಎಸ್‍ಪಿ ಅವರಿಗೆ ತಿಳಿಸಲಾಗಿದೆ. ಡಿವೈಎಸ್‍ಪಿ ಅವರ ತನಿಖಾ ವಿಧಾನ ಅತ್ಯಂತ ಸೂಕ್ಷ್ಮವಾಗಿದ್ದು ಇದನ್ನು ಅವರು ಬೇಧಿಸುವ ವಿಶ್ವಾಸವಿದೆ. ಸತೀಶ್ ಅವರ ಸಾವಿನ ತನಿಖೆಗಾಗಿ ಡಿವೈಎಸ್‍ಪಿ ವಿಶೇಷ ತಂಡ ರಚಿಸುವ ಭರವಸೆ ನೀಡಿದ್ದು, ನೊಂದ ಕುಟುಂಬಕ್ಕೆ ನ್ಯಾಯ ಸಿಗುವ ಭರವಸೆ ಇದೆ. ಡಿವೈಎಸ್‍ಪಿ ಗೋಪಾಲಕೃಷ್ಣ ನಾಯಕ್ ಅತ್ಯುತ್ತಮವಾಗಿ ಕೆಲಸ ಮಾಡುತ್ತಿದ್ದಾರೆ. ಅವರ ನೇತೃತ್ವದಲ್ಲಿ ಸತೀಶ್ ಅವರನ್ನು ಕೊಲೆ ಮಾಡಿರುವ ಕೊಲೆಪಾತಕರಿಗೆ ಶಿಕ್ಷೆ ಆಗುತ್ತದೆ ಎನ್ನುವ ವಿಶ್ವಾಸ ಇದೆ ಎಂದು ತಿಳಿಸಿದರು.

ಕರೂರು ಭಾರಂಗಿ ಹೋಬಳಿಯಲ್ಲಿ ಅಪರಾಧ ಕೃತ್ಯಗಳು ಜಾಸ್ತಿಯಾಗುತ್ತಿದೆ. ಐದು ವರ್ಷದ ಹಿಂದೆ ತುಮರಿಯಲ್ಲಿ ಚಿನ್ನಬೆಳ್ಳಿ ಕೆಲಸ ಮಾಡುತ್ತಿದ್ದ ಸುಂದರ ಶೇಟ್ ಮತ್ತು ದಂಪತಿಗಳನ್ನು ಭೀಕರವಾಗಿ ಹತ್ಯೆ ಮಾಡಲಾಗಿತ್ತು. ಈತನಕ ಕೊಲೆ ಮಾಡಿದವರನ್ನು ಪತ್ತೆ ಹಚ್ಚಿಲ್ಲ. ಅಂಬಾರಗೋಡ್ಲು ಸಮೀಪ ಸಿದ್ದಯ್ಯ ಸ್ವಾಮಿಯವರನ್ನು ಕೊಲೆ ಮಾಡಲಾಗಿದೆ. ಕರೂರು ಭಾರಂಗಿ ಹೋಬಳಿ ಭಾಗದಲ್ಲಿ ಮೂರ್ನಾಲ್ಕು ಕೊಲೆಗಳು ಆಗಿದೆ. ಈ ಭಾಗದ ಜನರು ಭಯಭೀತರಾಗಿದ್ದಾರೆ. ಸತೀಶ್ ಕೊಲೆ ನಡೆದು ಹದಿನಾಲ್ಕು ತಿಂಗಳು ಆಗಿದೆ. ತಕ್ಷಣ ಕೊಲೆಗಾರರನ್ನು ಬಂಧಿಸಿ ಕುಟುಂಬಕ್ಕೆ ನ್ಯಾಯ ದೊರಕಿಸಿ ಕೊಡಬೇಕು ಒತ್ತಾಯಿಸಿದರು.

ಈ ಸಂದರ್ಭದಲ್ಲಿ ಗ್ರಾಮ ಪಂಚಾಯ್ತಿ ಮಾಜಿ ಅಧ್ಯಕ್ಷ ಕೆ. ಶೇಖರಪ್ಪ, ಸವಿತಾ ಸತೀಶ್, ಲಲಿತಾ, ಗೌರಿ, ಸವಿತಾ, ರುಕ್ಮಿಣಿ, ಸೌಂದರ್ಯ, ಪುರುಷೋತ್ತಮ, ಸೌಭಾಗ್ಯ ಎಸ್., ಧನ್ವಿಕ್, ಪ್ರಶಾಂತ್ ಇತರರು ಉಪಸ್ಥಿತರಿದ್ದರು.

ಅಹಮದಾಬಾದ್ ವಿಮಾನ ದುರಂತ: ಮೃತಪಟ್ಟವರಿಗೆ ಸಾಗರ ಬ್ಲಾಕ್ ಕಾಂಗ್ರೆಸ್ ಶ್ರದ್ಧಾಂಜಲಿ ಸಲ್ಲಿಕೆ

BREAKING : ಬೆಳಗಾವಿಯಲ್ಲಿ ಭೀಕರ ಅಪಘಾತ : ಗಾಯಗೊಂಡವರ ರಕ್ಷಣೆಗೆ ಮುಂದಾಗಿದ್ದ ವ್ಯಕ್ತಿ ಸೇರಿ ಮೂವರು ಸಾವು

Share. Facebook Twitter LinkedIn WhatsApp Email

Related Posts

GOOD NEWS: ರಾಜ್ಯಾಧ್ಯಂತ ‘ಗೃಹ ಆರೋಗ್ಯ ಯೋಜನೆ’ ಜಾರಿ: ಔಷಧಿ, ಉಪಕರಣ ಖರೀದಿಗೆ ಸರ್ಕಾರ ಅನುದಾನ ಬಿಡುಗಡೆ

13/06/2025 7:56 PM1 Min Read

ಅಹಮದಾಬಾದ್ ವಿಮಾನ ದುರಂತ: ಮೃತಪಟ್ಟವರಿಗೆ ಸಾಗರ ಬ್ಲಾಕ್ ಕಾಂಗ್ರೆಸ್ ಶ್ರದ್ಧಾಂಜಲಿ ಸಲ್ಲಿಕೆ

13/06/2025 7:45 PM1 Min Read

BREAKING : ರಾಜ್ಯದಲ್ಲಿ ಕಳೆದ 24 ಗಂಟೆಗಳಲ್ಲಿ 150 ಕೊರೊನ ಪ್ರಕರಣಗಳು ಪತ್ತೆ | Covid19 Update

13/06/2025 7:34 PM1 Min Read
Recent News

GOOD NEWS: ರಾಜ್ಯಾಧ್ಯಂತ ‘ಗೃಹ ಆರೋಗ್ಯ ಯೋಜನೆ’ ಜಾರಿ: ಔಷಧಿ, ಉಪಕರಣ ಖರೀದಿಗೆ ಸರ್ಕಾರ ಅನುದಾನ ಬಿಡುಗಡೆ

13/06/2025 7:56 PM

ಶಿವಮೊಗ್ಗ: ಸಾಗರದ ಚಿಮಲೆ ಗ್ರಾಮ ಸತೀಶ್ ಅನುಮಾನಾಸ್ಪದ ಸಾವಿನ ತನಿಖೆಗೆ ಮಲ್ಲಿಕಾರ್ಜುನ ಹಕ್ರೆ ಆಗ್ರಹ

13/06/2025 7:49 PM

ಅಹಮದಾಬಾದ್ ವಿಮಾನ ದುರಂತ: ಮೃತಪಟ್ಟವರಿಗೆ ಸಾಗರ ಬ್ಲಾಕ್ ಕಾಂಗ್ರೆಸ್ ಶ್ರದ್ಧಾಂಜಲಿ ಸಲ್ಲಿಕೆ

13/06/2025 7:45 PM

ಏರ್ ಇಂಡಿಯಾ ವಿಮಾನ ಅಪಘಾತ ; ದೇಶದ ಇತಿಹಾಸದಲ್ಲೇ ಅತ್ಯಂತ ದುಬಾರಿ ‘ವಿಮಾ ಕ್ಲೇಮ್’ ; ಎಷ್ಟು ಸಾವಿರ ಕೋಟಿ ಗೊತ್ತಾ?

13/06/2025 7:37 PM
State News
KARNATAKA

GOOD NEWS: ರಾಜ್ಯಾಧ್ಯಂತ ‘ಗೃಹ ಆರೋಗ್ಯ ಯೋಜನೆ’ ಜಾರಿ: ಔಷಧಿ, ಉಪಕರಣ ಖರೀದಿಗೆ ಸರ್ಕಾರ ಅನುದಾನ ಬಿಡುಗಡೆ

By kannadanewsnow0913/06/2025 7:56 PM KARNATAKA 1 Min Read

ಬೆಂಗಳೂರು: ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ‘ಗೃಹ ಆರೋಗ್ಯ’ ಯೋಜನೆ ಅನುಷ್ಠಾನಕ್ಕೆ ಅಗತ್ಯವಿರುವ ಔಷಧಿ, ಉಪಕರಣಗಳಿಗಾಗಿ 185 ಕೋಟಿ ಅನುದಾನ ಬಳಕೆಗೆ…

ಶಿವಮೊಗ್ಗ: ಸಾಗರದ ಚಿಮಲೆ ಗ್ರಾಮ ಸತೀಶ್ ಅನುಮಾನಾಸ್ಪದ ಸಾವಿನ ತನಿಖೆಗೆ ಮಲ್ಲಿಕಾರ್ಜುನ ಹಕ್ರೆ ಆಗ್ರಹ

13/06/2025 7:49 PM

ಅಹಮದಾಬಾದ್ ವಿಮಾನ ದುರಂತ: ಮೃತಪಟ್ಟವರಿಗೆ ಸಾಗರ ಬ್ಲಾಕ್ ಕಾಂಗ್ರೆಸ್ ಶ್ರದ್ಧಾಂಜಲಿ ಸಲ್ಲಿಕೆ

13/06/2025 7:45 PM

BREAKING : ರಾಜ್ಯದಲ್ಲಿ ಕಳೆದ 24 ಗಂಟೆಗಳಲ್ಲಿ 150 ಕೊರೊನ ಪ್ರಕರಣಗಳು ಪತ್ತೆ | Covid19 Update

13/06/2025 7:34 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.