ಇಸ್ಲಮಾಬಾದ್: ಭಾರತದಿಂದ ಪಾಕಿಸ್ತಾನದ ವಿವಿಧ ಪ್ರದೇಶಗಳ ಮೇಲೆ ಡ್ರೋನ್ ದಾಳಿ ನಡೆಸಲಾಗುತ್ತಿದೆ. ಭಾರತದ ದಾಳಿಯಿಂದ ನಮ್ಮನ್ನು ರಕ್ಷಣೆ ಮಾಡಿ ಎಂಬುದಾಗಿ ಪಾಕಿಸ್ತಾನದ ಪಾರ್ಲಿಮೆಂಟಿನಲ್ಲೇ ಪ್ರಾಣಭಿಕ್ಷೆಯನ್ನು ಸಂಸದರೊಬ್ಬರು ಕಣ್ಣೀರಿಡುತ್ತ ಮಾತನಾಡಿದ್ದು ತಿಳಿದು ಬಂದಿದೆ.
ಇಂದು ಪಾಕಿಸ್ತಾನ ಸಂಸತ್ತಿನಲ್ಲಿ ಮಾತನಾಡಿದಂತ ಪಾಕ್ ಸಂಸದ ತಹೀರ್ ಇಕ್ಬಾಲ್ ಭಾರತದ ದಾಳಿಯಿಂದ ಜನರು ಭಯ ಬಿದ್ದಿದ್ದಾರೆ. ಭಾರತದ ದಾಳಿಯಿಂದ ನಮ್ಮನ್ನ ರಕ್ಷಣೆ ಮಾಡುವಂತೆ ಸಭಾಧ್ಯಕ್ಷರನ್ನು ಕಣ್ಣೀರಿಡುತ್ತಲೇ ಮನವಿ ಮಾಡಿದರು.
ಭಾರತದ ದಾಳಿಗೆ ಪತರುಗುಟ್ಟಿದ ಪಾಕಿಸ್ತಾನ: ಪಾಕ್ ನಗರಗಳಿಗೆ ನುಗ್ಗಿ ಹೊಡೆದ ಭಾರತದ ಡ್ರೋನ್
ನವದೆಹಲಿ: ಪಹಲ್ಗಾಮ್ ದಾಳಿಯ ಪ್ರತೀಕಾರವಾಗಿ ಭಾರತೀಯ ಸೇನೆಯಿಂದ ಪಾಕಿಸ್ತಾನದ ಮೇಲೆ ಆಪರೇಷನ್ ಸಿಂಧೂರ್ ಹೆಸರಿನಲ್ಲಿ ಡ್ರೋನ್ ದಾಳಿ ನಡೆಸಲಾಗಿದೆ. ಪಾಕ್ ನಗರಗಳಿಗೆ ನುಗ್ಗಿ ಭಾರತದ ಡ್ರೋನ್ ಗಳು ರಾವಲ್ಪಿಂಡಿ ಸ್ಟೇಡಿಯಂ ಧ್ವಂಸಗೊಳಿಸಿದ್ದಾವೆ.
ಭಾರತೀಯ ಸೇನೆಯಿಂದ ಪಾಕಿಸ್ತಾನದ ಆಂಟಿ ಡ್ರೋನ್ ಸಿಸ್ಟಮ್ ಫೇಲ್ ಮಾಡಿದ್ದರೇ, ಪಾಕಿಸ್ತಾನದ ಹಲವು ವಾಯು ರಕ್ಷಣಾ ರಾಡಾರ್ ವ್ಯವಸ್ಥೆ ಗುರಿಯಾಗಿಸಿ ದಾಳಿ ನಡೆಸಲಾಗಿದೆ. ಲಾಹೋರ್ ನಲ್ಲಿರುವಂತ ವಾಯು ರಕ್ಷಣಾ ವ್ಯವಸ್ಥೆಯನ್ನು ಧ್ವಂಸಗೊಳಿಸಲಾಗಿದೆ.
ಒಟ್ಟಾರೆಯಾಗಿ ಪಾಕಿಸ್ತಾನದ ನಗರಗಳಇಗೆ ನುಗ್ಗಿ ಭಾರತದ ಡ್ರೋನ್ ಗಳು ಡ್ಯಾಮೇಜ್ ಗೊಳಿಸಿದ್ದಾವೆ. ಭಾರತದ ದಾಳಿ ತಡೆಯೋಕೆ ಆಗದೇ ಪಾಕಿಸ್ತಾನ ವಿಲವಿಲ ಒದ್ದಾಡುವಂತೆ ಆಗಿದೆ.