ಶಿವಮೊಗ್ಗ: 2ನೇ ಬಾರಿಗೆ ಸಾಗರ ತಾಲ್ಲೂಕು ಮೊಗವೀರ ಸಂಘದ ನೂತನ ಅಧ್ಯಕ್ಷರಾಗಿ ಸತೀಶ್ ಕೆ ಮೊಗವೀರ ಅವರು ಎರಡೇ ಬಾರಿಗೆ ಸರ್ವಾನುಮತದಿಂದ ಆಯ್ಕೆಯಾಗಿದ್ದಾರೆ.
ಮೊಗವೀರ ಸಮಾಜದ ಮುಖಂಡ ನಾಡೋಜ. ಜಿ. ಶಂಕರ್ ನೇತೃತ್ವದಲ್ಲಿ, ದಕ್ಷಿಣ ಕನ್ನಡ ಮೊಗವೀರ ಮಹಾಜನ ಸಂಘದ ಅಧ್ಯಕ್ಷ ಜಯ ಸಿ ಕೋಟ್ಯಾ ಉಪಸ್ಥಿತಿಯಲ್ಲಿ ಸಾಗರ ತಾಲ್ಲೂಕು ಮೊಗವೀರ ಸಂಘದ ವಾರ್ಷಿಕ ಮಹಾಸಭೆ ನಡೆಯಿತು. ಈ ಸಭೆಯಲ್ಲಿ ಸತೀಶ್ ಕೆ ಮೊಗವೀರ ಅವರ ಆಯ್ಕೆಯನ್ನು ಸಭೆಯ ಎಲ್ಲಾ ಮುಖಂಡರು ಸರ್ವಾನುಮತದಿಂದ ಅನುಮೋದಿಸಿದರು. ಈ ಮೂಲಕ ಸತೀಶ್ ಕೆ ಮೊಗವೀರ ಅವರು ಸಾಗರ ತಾಲ್ಲೂಕು ಮೊಗವೀರ ಸಂಘದ ಅಧ್ಯಕ್ಷರಾಗಿ ಸರ್ವಾನುಮತದಿಂದ ಆಯ್ಕೆಯಾಗಿದ್ದಾರೆ.
ಸಾಗರ ತಾಲ್ಲೂಕು ಮೊಗವೀರ ಸಮುದಾಯದ ಏಳಿಗೆಗಾಗಿ ಶ್ರಮೀಸುತ್ತೇನೆ. ನನಗೆ ಸಮುದಾಯದ ಸೇವೆ ಮಾಡಲು ಅವಕಾಶ ಮಾಡಿಕೊಟ್ಟಂತ ನಾಡೋಜ ಜಿ.ಶಂಕರ್, ಜಯ ಸಿ ಕೋಟ್ಯಾ, ಉಡುಪಿ ಮೊಗವೀರ ಯುವ ಸಂಘಟನೆಯ ಅಧ್ಯಕ್ಷ ಜಯಂತ್ ಅಮೀನ್, ಹಾಲಿ ಅಧ್ಯಕ್ಷರಾಗಿದ್ದಂತ ನಾಗರಾಜ್ ಬಿಲಗುಂಜಿ ಸೇರಿದಂತೆ ಸಮುದಾಯದ ಎಲ್ಲಾ ಮುಖಂಡರಿಗೆ ಸತೀಶ್ ಕೆ ಮೊಗವೀರ ಧನ್ಯವಾದವನ್ನು ಸಲ್ಲಿಸಿದ್ದಾರೆ.
ಅಂದಹಾಗೇ ಸತೀಶ್ ಕೆ ಮೊಗವೀರ್ ಎರಡನೇ ಬಾರಿಗೆ ಸಾಗರ ತಾಲ್ಲೂಕು ಮೊಗವೀರ ಸಂಘದ ಅಧ್ಯಕ್ಷರಾಗಿದ್ದಾರೆ. ಇದಲ್ಲದೇ ಸಂಘದ ಕಾರ್ಯದರ್ಶಿಯಾಗಿ, ಖಜಾಂಚಿಯಾಗಿಯೂ ಕಾರ್ಯನಿರ್ವಹಿಸಿದ್ದಾರೆ.
ವರದಿ; ವಸಂತ ಬಿ ಈಶ್ವರಗೆರೆ..,
ಮಕ್ಕಳು ಪೋಷಕರ ಗೌರವ ಹೆಚ್ಚಿಸುವ ಕೆಲಸ ಮಾಡಿ: ದಕ್ಷಿಣ ಕನ್ನಡ ಮೋಗವೀರ ಮಹಾಸಭಾ ಅಧ್ಯಕ್ಷ ಜಯ ಸಿ ಕೋಟ್ಯಾನ್
‘ಪದೇ ಪದೇ ನಿಯಮ ಉಲ್ಲಂಘನೆ’ ಮಾಡಿದರೆ ಏರ್ ಇಂಡಿಯಾ ಪರವಾನಗಿ ರದ್ದು: DGCA ಎಚ್ಚರಿಕೆ | Air India Flight