ಶಿವಮೊಗ್ಗ: ಜಿಲ್ಲೆಯ ಸಾಗರ ನಗರದ ಸಂತೋಷ್ ಸದ್ಗುರು ( Santhosh Sadguru ) ಸದಾ ಒಂದಿಲ್ಲೊಂದು ಹೊಸತಿನ ಪ್ರಯೋಗಕ್ಕಿಳಿಯುವ ಸೃಜನಶೀಲ ಕಲೆಗಾರ. ಆರ್ ಸಿ ಬಿ ತಂಡದ ಅಪ್ಪಟ ಅಭಿಮಾನಿ. ಅವರೀಗ ಮಲೆನಾಡಿನ ಹಸಿರ ಸೊಬಗನ್ನು ಪ್ರೇಕ್ಷಕರ ಮುಂದಿಡುವಂತ ಪ್ರಯತ್ನ ಮಾಡಿದ್ದಾರೆ. ಇದರ ಭಾಗವಾಗಿ ನಾಳೆ ಸಂಜೆ 7 ಗಂಟೆಗೆ ಅವರ ಮಲ್ನಾಡ್ ಯಾನ ಆಲ್ಬಂ ಸಾಂಗ್ ( Malnad Yana Alubum Song ) ಯೂಟ್ಯೂಬ್ ನಲ್ಲಿ ಬಿಡುಗಡೆಯಾಗಲಿದೆ.
ಈ ಬಗ್ಗೆ ಕನ್ನಡ ನ್ಯೂಸ್ ನೌ ಜೊತೆಗೆ ಮಾಹಿತಿ ಹಂಚಿಕೊಂಡಿರುವಂತ ಅವರು, ಮಲೆನಾಡಿಗೆ ತನ್ನದೇ ಆದಂತ ಭಾಷಣೆ, ಸಂಸ್ಕೃತಿ ಇದೆ. ಆ ಕಲ್ಚರ್ ಅನ್ನು ನೋಡುಗರಿಗೆ ಮಲ್ನಾಡ್ ಯಾನದ ಮೂಲಕ ತೋರಿಸುವಂತ ಪ್ರಯತ್ನವನ್ನು ಮಾಡಿದ್ದೇನೆ ಎಂದು ತಿಳಿಸಿದರು.
ಮಲ್ನಾಡ್ ಯಾನ ಆಲ್ಬಂ ಸಾಂಗ್ ಅನ್ನು ತೀರ್ಥಹಳ್ಳಿ, ಹೊಸನಗರ, ಸಾಗರ ಹಾಗೂ ಶರಾವತಿ ಮುಳುಗಡೆ ಪ್ರದೇಶಗಳಲ್ಲಿ ಚಿತ್ರೀಕರಿಸಲಾಗಿದೆ. ಕಳೆದ ವರ್ಷ 2500 ಮಿಮೀ ಮಳೆಯಾಗಿತ್ತು. ಇದರ ನಡುವೆಯೂ ಚಿತ್ರೀಕರಿಸಿ, ಹಸಿರ ದೃಶ್ಯ ವೈಭವವನ್ನು ಪ್ರೇಕ್ಷಕರ ಮುಂದಿಡಲಾಗಿದೆ ಎಂದು ಹೇಳಿದರು.
ವಿಎಂ ಮಂಜುನಾಥ್ ಅವರ ಸಾಹಿತ್ಯದಲ್ಲಿ ಮಲ್ನಾಡ್ ಯಾನ ಹಾಡು ಮೂಡಿ ಬಂದಿದೆ. ಖ್ಯಾತ ಗಾಯಕ ಮಿತ್ರಾ ಹೆಗಡೆ ಇದಕ್ಕೆ ಧ್ವನಿಯಾಗಿದ್ದಾರೆ. ರಘೋತ್ತಮ ಎನ್ ಎಸ್ ಸಂಗೀತ ಮೋಡಿಯಿದೆ. ಸುಮಂತ್ ಶರ್ಮಾ, ಶಂಕರ್ ತಾಳಗುಪ್ಪ ಅವರು ನೋಡುಗರನ್ನು ಹಿಡಿದಿಡುವಂತೆ ಕ್ಯಾಮರಾ ಕಣ್ಣಲ್ಲಿ ಮಲೆನಾಡಿನ ಸೊಬಗು ಸೆರೆಹಿಡಿದಿದ್ದಾರೆ. ನೋಡೋರಿಗೆ ಚೆಂದವಾಗಿ ಕಾಣಿಸುವಂತೆ ಬೇಕು ಬೇಡಗಳಿಗೆ ಪಿ.ರಾಜ್ ಸಂಕಲನದ ಮೂಲಕ ಕತ್ತರಿ ಹಾಕಿ, ಅದ್ಬುತವಾಗಿ ಔಟ್ ಪುಟ್ ನೀಡಿದ್ದಾರೆ ಎಂದರು.
ನಾಳೆ ಸಂಜೆ 7 ಗಂಟೆಗೆ ಮಲ್ನಾಡ್ ಯಾನ ಆಲ್ಬಂ ಸಾಂಗ್ https://youtube.com/@santhoshsadguru?si=X4Yq-4ec1ug5efbh ಯೂಟ್ಯೂಬ್ ಚಾನಲ್ ನಲ್ಲಿ ಬಿಡುಗಡೆಯಾಗಲಿದೆ. ಮಲೆನಾಡು ಪ್ರಿಯರು, ಪ್ರಕೃತಿಯ ಸೊಬಗನ್ನು ಸವಿಯೋರು ತಪ್ಪದೇ ವೀಕ್ಷಿಸುವಂತೆ ಸಂತೋಷ್ ಸದ್ಗುರು ಮನವಿ ಮಾಡಿದ್ದಾರೆ. ಸೋ ಓದುಗರು, ನೋಡುಗರಾದಂತ ನೀವು ಸಂತೋಷ್ ಸದ್ಗುರು ಅವರ ಮಲ್ನಾಡ್ ಯಾನ ಆಲ್ಬಂ ಸಾಂಗ್ @santhoshsadguru ಯ್ಯೂಟ್ಯೂಬ್ ಪೇಜ್ ಗೆ ಭೇಟಿ ನೀಡಿ ನೋಡುವುದನ್ನು ಮರೆಯಬೇಡಿ.
ವರದಿ; ವಸಂತ ಬಿ ಈಶ್ವರಗೆರೆ., ಸಂಪಾದಕರು
ಸಾವಿನಲ್ಲೂ ಸಾರ್ಥಕತೆ ಮೆರೆದ ಅಕ್ಷಯ್ ಕುಟುಂಬಸ್ಥರು: ನೇತ್ರದಾನಕ್ಕೆ ತೀರ್ಮಾನ
BREAKING : ವಸತಿ ಯೋಜನೆಯಲ್ಲೂ ಮುಸ್ಲಿಂರಿಗೆ ಶೇ.15 ರಷ್ಟು ಮೀಸಲಾತಿ ಹೆಚ್ಚಳಕ್ಕೆ ಮುಂದಾದ ರಾಜ್ಯ ಸರ್ಕಾರ
BREAKING : ಮೇ ತಿಂಗಳ `ಗೃಹಲಕ್ಷ್ಮಿ’ ಹಣ ಬಿಡುಗಡೆ : ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಮಹತ್ವದ ಮಾಹಿತಿ