ಬೆಂಗಳೂರು : ರೌಡಿಶೀಟರ್ ಬಿಕ್ಲು ಶಿವ ಕೊಲೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಪ್ರಕರಣದ ಮತ್ತೋರ್ವ ಆರೋಪ A20 ಮಲಯಾಳಿ ಅಜಿತ್ ನನ್ನು ಫೆಬ್ರವರಿ 19 ರವರೆಗೆ CID ಕಸ್ಟಡಿಗೆ ನೀಡಿ ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಆದೇಶ ಹೊರಡಿಸಿದೆ.
ಹೌದು ರೌಡಿಶೀಟರ್ ಬಿಕ್ಲು ಶಿವ ಕೊಲೆ ಪ್ರಕರಣಕ್ಕೆ ಸಂಬಂಧಪಟ್ಟಂತೆ A20 ಆರೋಪಿ ಆಗಿರುವ ಅಜಿತ್ ಅಲಿಯಾಸ್ ಮಲಿಯಾಳಿ ಅಜಿತ್ ಬಿಜೆಪಿ ಶಾಸಕ ಭೈರತಿ ಬಸವರಾಜ್ ಅವರ ಕ್ಷೇತ್ರದಲ್ಲಿ ರಿಯಲ್ ಎಸ್ಟೇಟ್ ಹಾಗೂ ಫೈನಾನ್ಸ್ ಇಟ್ಟುಕೊಂಡಿದ್ದ. ಭೈರತಿ ಬಸವರಾಜ್ ಪ್ರಕರಣದ ಎಲ್ಲರಿಗೂ ಫೈನಾನ್ಸಿಯರ್ ಆಗಿದ್ದ. ಅಜಿತ್ ಈ ಪ್ರಕರಣದಲ್ಲಿ ಜಾಗದ ಮೇಲೆ ಬಿಕ್ಲು ಶಿವ ಮತ್ತು ಜಗ್ಗ ನಡುವೆ ಗಲಾಟೆ ಆಗುತ್ತಿತ್ತು.
ಫೈನಾನ್ಸ್ ಮಾಡಿ ಆ ಜಾಗವನ್ನು ಪಡೆದುಕೊಳ್ಳಬೇಕು ಅಂತ ಪ್ಲಾನ್ ಮಾಡಿದ್ದು ಈ ಮಲಿಯಾಳಿ ಅಜಿತ್. ಈತನನ್ನು ಅರೆಸ್ಟ್ ಮಾಡಲು ಪೊಲೀಸರು ಹರಸಾಹಸ ಪಟ್ಟಿದ್ದರು. ಏಕೆಂದರೆ ಈತನೊಬ್ಬ ವಕೀಲ ಕೂಡ ಆಗಿದ್ದ. ಇದೀಗ ಇಂದು ಅರೆಸ್ಟ್ ಮಾಡಿ ಬೌರಿಂಗ್ ಆಸ್ಪತ್ರೆಗೆ ಕರೆತಂದು ಮೆಡಿಕಲ್ ಟೆಸ್ಟ್ ಮಾಡಿದ ಬಳಿಕ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿತ್ತು. ವಿಚಾರಣೆ ಬಳಿಕ ಕೋರ್ಟ್ ಫೆಬ್ರವರಿ 19 ರವರೆಗೆ ಸಿಐಡಿ ಕಸ್ಟಡಿಗೆ ನೀಡಿ ಆದೇಶ ಹೊರಡಿಸಿದೆ.








