ಬೆಂಗಳೂರು : ಸುಮಾರು 11.51 ಕೋಟಿ ಆಸ್ತಿ ತೆರಿಗೆಯನ್ನು ಬಾಕಿ ಉಳಿಸಿಕೊಂಡಿರುವ ಹಿನ್ನೆಲೆಯಲ್ಲಿ ಬೆಂಗಳೂರಿನ ಟಿ ದಾಸರಹಳ್ಳಿಯ ಪ್ರಶಾಂತ್ ನಗರದಲ್ಲಿರುವ ರಾಕ್ ಲೈನ್ ಮಾಲ್ಗೆ ಇದೀಗ ಬಿಬಿಎಂಪಿ ಅಧಿಕಾರಿಗಳು ಬೀಗ ಜಡದಿದ್ದಾರೆ ಆದರೆ ಈ ಸಂದರ್ಭದಲ್ಲಿ ರಾಕ್ ಲೈನ್ ವೆಂಕಟೇಶ್ ಅವರ ಪುತ್ರ ಯತೀಶ್ ಅವಾಜ್ ಹಾಕಿರುವ ಘಟನೆ ನಡೆದಿದೆ..
ಬಿಬಿಎಂಪಿ ಎಆರ್ಓ ರಮೇಶ್ ಗೆ ಯತೀಶ್ ಹಿಗ್ಗಾ ಮುಗ್ಗ ಅವಾಜ್ ಹಾಕಿದ್ದಾರೆ.ತೆರಿಗೆ ಬಾಕಿ ಉಳಿಸಿಕೊಂಡಿದ್ದ ರಾಕ್ ಲೈನ್ ಮಾಲ್ಗೆ ಬಿಬಿಎಂಪಿ ಅಧಿಕಾರಿಗಳು ಬೀಗ ಹಾಕಲು ಹೇಳಿದ್ದಾರೆ. ಈ ವೇಳೆ ಯತೀಶ್ ಬಾಗಿಲು ಯಾಕೆ ಹಾಕಬೇಕು ಮಾಲ್ ಏನು ನಿಮ್ಮಪ್ಪಂದ? ಆದೇಶ ಪ್ರತಿ ಎಲ್ಲಿ ಎಂದು ಕಿರಿಕ್ ಮಾಡಿದ್ದಾರೆ ಎಂದು ತಿಳಿದುಬಂದಿದೆ.
ಇನ್ನು ಇದೇ ವಿಷಯವಾಗಿ ಮಾಲ್ ಮ್ಯಾನೇಜರ್ ಪ್ರಕಾಶ್ ಪ್ರತಿಕ್ರಿಯೆ ನೀಡಿದ್ದು ಬೆಳಿಗ್ಗೆ 7:00ಗೆ ಬಂದು ಅಧಿಕಾರಿಗಳು ನಿಂತಿದ್ದಾರೆ ಬೀಗ ಹಾಕಿ ಎಂದು ಆದರೆ ಈ ಕುರಿತು ಕೋರ್ಟ್ನಲ್ಲೇ ಇತ್ಯಾರ್ಥವಾಗಿದ್ದರು ಯಾಕೆ ಬಂದು ಈ ರೀತಿ ಮಾಡಿದರು ಗೊತ್ತಿಲ್ಲ ಬೀಗ ಹಾಕೋಕು ಮುಂಚೆ ನೋಟಿಸ್ ಆದರೂ ಕೊಡಬಹುದಾಗಿತ್ತಲ್ವಾ? ಅದನ್ನು ಮಾಡಿಲ್ಲ ಏಕಾಏಕಿ ಬಂದು ಮಾಲ್ಗೆ ಬೀಗ ಹಾಕಿದ್ದಾರೆ. ನಾವು ಈಗ ಮತ್ತೆ ಕೋರ್ಟಿಗೆ ಹೋಗುತ್ತೇವೆ ಎಂದು ಮ್ಯಾನೇಜರ್ ಪ್ರಕಾಶ್ ತಿಳಿಸಿದರು.
ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡ ಹಿನ್ನೆಲೆ ಇದೀಗ ರಾಕ್ಲೈನ್ ಮಾಲ್ಗೆ BBMP ಅಧಿಕಾರಿಗಳು ಶಾಕ್ ನೀಡಿದ್ದಾರೆ. ಆಸ್ತಿಕರಿಗೆ ಬಾಕಿ ಉಳಿಸಿಕೊಂಡ ಹನಿಯಲ್ಲಿ ಇದೀಗ ರಾಕ್ಲೈನ್ ಮಾಲ್ ಗೆ ಬಿಬಿಎಂಪಿ ಅಧಿಕಾರಿಗಳು ಬೀಗ ಹಾಕಿದ್ದಾರೆ.
ಬೆಂಗಳೂರಿನ ಟಿ ದಾಸರಹಳ್ಳಿಯ ಪ್ರಶಾಂತ್ ನಗರದಲ್ಲಿರುವ ರಾಕ್ ಲೈನ್ ಮಾಲ್ ಗೆ ಇದೀಗ ಬಿಬಿಎಂಪಿ ಬೀಗ ಹಾಕಿದೆ.ಸುಮಾರು 11.51ಕೋಟಿ ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡಿದ್ದಕ್ಕೆ ಬಿಬಿಎಂಪಿ ಮಾಲ್ ಗೆ ನೋಟಿಸ್ ನೀಡಿತ್ತು. ಇದೀಗ ಬಾಕಿ ಪಾವತಿಸಿದ ಹಿನ್ನೆಲೆಯಲ್ಲಿ ಮಾಲ್ ಗೆ ಅಧಿಕಾರಿಗಳು ಬೀಗ ಜಡಿದಿದ್ದಾರೆ.
ಮಾಜಿ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರಿ ಮೊಮ್ಮಗ ವಿಭಾಕರ್ ಶಾಸ್ತ್ರಿ ಕಾಂಗ್ರೆಸ್ ಪಕ್ಷಕ್ಕೆ ರಾಜೀನಾಮೆ