Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

BIG NEWS : ಗದಗದಲ್ಲಿ ನಿಧಿ ಪತ್ತೆ ಕೇಸ್ : ಲಕ್ಕುಂಡಿಯಲ್ಲಿ ಉತ್ಖನನಕ್ಕೆ ಮುಂದಾದ ರಾಜ್ಯ ಸರ್ಕಾರ

15/01/2026 9:52 AM

BIG NEWS : ‘TET’ ಪರೀಕ್ಷೆ ಪಾಸಾದವರಿಗೆ ಇಲ್ಲಿದೆ ಮಹತ್ವದ ಮಾಹಿತಿ

15/01/2026 9:49 AM

Army Day: ಸಶಸ್ತ್ರ ಪಡೆಗಳ ಸಿಬ್ಬಂದಿಗೆ ಸೇನಾ ದಿನಾಚರಣೆಯ ಶುಭಾಶಯ ಕೋರಿದ ಪ್ರಧಾನಿ ಮೋದಿ

15/01/2026 9:42 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಆನ್ ಲೈನ್ ಉತ್ಪನ್ನಗಳಿಗೆ ರಿಲಯನ್ಸ್ ಲೋಗೋ, ಬ್ರ್ಯಾಂಡ್ ಬಳಸುವಂತಿಲ್ಲ: ದೆಹಲಿ ಹೈ ಕೋರ್ಟ್ ಆದೇಶ
INDIA

ಆನ್ ಲೈನ್ ಉತ್ಪನ್ನಗಳಿಗೆ ರಿಲಯನ್ಸ್ ಲೋಗೋ, ಬ್ರ್ಯಾಂಡ್ ಬಳಸುವಂತಿಲ್ಲ: ದೆಹಲಿ ಹೈ ಕೋರ್ಟ್ ಆದೇಶ

By kannadanewsnow0915/07/2025 7:57 PM

ದೆಹಲಿ : ದೆಹಲಿ ಹೈ ಕೋರ್ಟ್ ನಿಂದ ಮಂಗಳವಾರದಂದು ರಿಲಯನ್ಸ್ ಪರವಾಗಿ ಮಹತ್ವದ ಆದೇಶವೊಂದು ಬಂದಿದೆ. ಇದರಿಂದಾಗಿ ಭಾರತದಲ್ಲಿ ಪ್ರಬಲವಾಗಿ ಬೆಳವಣಿಗೆ ಕಾಣುತ್ತಿರುವ ಎಫ್ಎಂಸಿಜಿ ಹಾಗೂ ಇ-ಕಾಮರ್ಸ್ ವಲಯಗಳಿಗೆ ಬ್ರ್ಯಾಂಡ್ ರಕ್ಷಣೆ ದೊರೆತಂತಾಗಿದೆ. ಆನ್ ಲೈನ್ ರೀಟೇಲ್ ಅಂತ ಬಂದರೆ ಅಲ್ಲಿ “ಲೋಗೋ”ಗಳು ಹಾಗೂ ಬ್ರ್ಯಾಂಡ್ ಹೆಸರೇ ಮೂಲಭೂತವಾಗಿ ಗ್ರಾಹಕರು ತಮಗೆ ಬೇಕಾದ ಉತ್ಪನ್ನಗಳನ್ನು ಗುರುತಿಸುವ ಸುಳುಹುಗಳಾಗಿರುತ್ತವೆ. ಇಲ್ಲದಿದ್ದರೆ ಇದರಿಂದ ಗೊಂದಲ ಆಗುವ ಸಾಧ್ಯತೆ ಬಹಳ ಹೆಚ್ಚಿರುತ್ತದೆ ಎಂದು ಹೇಳಲಾಗಿದೆ. ರಿಲಯನ್ಸ್ ಮತ್ತು ಜಿಯೋ ಟ್ರೇಡ್ ಮಾರ್ಕ್ ಗಳನ್ನು ಉಲ್ಲಂಘನೆ ಮಾಡಿರುವಂಥ ಉತ್ಪನ್ನಗಳನ್ನು ಅಮೆಜಾನ್, ಫ್ಲಿಪ್ ಕಾರ್ಟ್ ಸೇರಿದಂತೆ ಎಲ್ಲ ಪ್ರಮುಖ ಆನ್ ಲೈನ್ ಮಾರ್ಕೆಟ್ ಪ್ಲೇಸ್ ಗಳು “ಡೀಲಿಸ್ಟ್” ಮಾಡಬೇಕು, ಅಂದರೆ ಆ ಉತ್ಪನ್ನಗಳನ್ನು ಮಾರಾಟ ಮಾಡುವುದರಿಂದ ತೆಗೆಯಬೇಕು ಎಂದು ಆದೇಶಿಸಲಾಗಿದೆ.

ನ್ಯಾಯಮೂರ್ತಿಗಳಾದ ಸೌರಭ್ ಬ್ಯಾನರ್ಜಿ ಅವರು ಈ ಸಂಬಂಧವಾಗಿ ಮಧ್ಯಂತರ ಆದೇಶವನ್ನು ಹೊರಡಿಸಿದ್ದಾರೆ. ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ಟ್ರೇಡ್ ಮಾರ್ಕ್ಸ್ ತಪ್ಪಾಗಿ ಬಳಸಿಕೊಂಡು ಗ್ರಾಹಕ ಉತ್ಪನ್ನಗಳನ್ನು ಉತ್ಪಾದಿಸುವುದು, ಮಾರಾಟ ಮಾಡುವುದು ಅಥವಾ ಪ್ರಚಾರ ಮಾಡುವುದನ್ನು ಕೋರ್ಟ್ ಆದೇಶದ ಮೂಲಕ ತಡೆಯಲಾಗಿದೆ. ಅನಧಿಕೃತವಾಗಿ ರಿಲಯನ್ಸ್ ಬ್ರ್ಯಾಂಡ್ ಗುರುತನ್ನು ಬಳಕೆ ಮಾಡುವುದು ತಪ್ಪಾದ ಪ್ರಾತಿನಿಧ್ಯ ಹಾಗೂ ಉತ್ಪನ್ನಗಳು ಅಧಿಕೃತವಾಗಿ ರಿಲಯನ್ಸ್ ನಿಂದ ಉತ್ಪಾದಿಸಲಾಗಿದೆ ಅಥವಾ ಮಾನ್ಯತೆ ಪಡೆದಿದೆ ಎಂದು ನಂಬುವಂತೆ ಮಾಡಿ, ಗ್ರಾಹಕರನ್ನು ದಿಕ್ಕು ತಪ್ಪಿಸುವಂಥ ಕೃತ್ಯವಾಗುತ್ತದೆ ಎಂದು ಕೋರ್ಟ್ ತಿಳಿಸಿದೆ.

ಡಿಜಿಟಲ್ ಪ್ಲಾಟ್ ಫಾರ್ಮ್ ಗಳಲ್ಲಿ ಟ್ರೇಡ್ ಮಾರ್ಕ್ ಉಲ್ಲಂಘನೆಯಂಥ ಹಲವು ಪ್ರಕರಣಗಳನ್ನು ಗಮನಕ್ಕೆ ತಂದು, ರಿಲಯನ್ಸ್ ಇಂಡಸ್ಟ್ರೀಸ್ ನಿಂದ ದಾವೆ ಹೂಡಲಾಗಿತ್ತು. ಅದನ್ನು ಪರಾಮರ್ಶಿಸಿ ಕೋರ್ಟ್ ನಿಂದ ಇಂಜಂಕ್ಷನ್ ನೀಡಲಾಗಿದೆ. ಎಫ್ಎಂಸಿಜಿ ಕಂಪನಿಗಳು ತಮ್ಮ ತಾಜಾ ಉತ್ಪನ್ನಗಳು, ಡೇರಿ ಉತ್ಪನ್ನಗಳು, ದಿನಸಿ ಪದಾರ್ಥಗಳು ಇವಕ್ಕೆ ರಿಲಯನ್ಸ್ ನ ಹೆಸರಾಂತ ಬ್ರ್ಯಾಂಡ್ ಗಳನ್ನು ದುರುಪಯೋಗ ಮಾಡುತ್ತಿದ್ದುದು ಗಮನಕ್ಕೆ ಬಂದಿತ್ತು. ಇದರಿಂದಾಗಿ ಕಂಪನಿಯ ವರ್ಚಸ್ಸು ಮತ್ತು ಗ್ರಾಹಕರ ನಂಬಿಕೆ- ವಿಶ್ವಾಸಕ್ಕೆ ಧಕ್ಕೆ ಆಗುವ ಸಾಧ್ಯತೆಗಳು ಇದ್ದುದರಿಂದ ಈ ಬಗ್ಗೆ ರಿಲಯನ್ಸ್ ನಿಂದ ಕೋರ್ಟ್ ಮೆಟ್ಟಿಲೇರಲಾಗಿತ್ತು.

ನ್ಯಾಯಮೂರ್ತಿಗಳಾದ ಬ್ಯಾನರ್ಜಿ ಅವರು ತಮ್ಮ ಆದೇಶದಲ್ಲಿ ಪ್ರಸ್ತಾವ ಮಾಡಿರುವಂತೆ, ರಿಲಯನ್ಸ್ ಮತ್ತು ಜಿಯೋದ ಟ್ರೇಡ್ ಮಾರ್ಕ್ಸ್ ಮತ್ತು ಕಲಾತ್ಮಕ ಸ್ವತ್ತಿನ ಬಳಕೆಯನ್ನು ಅನಧಿಕೃತವಾಗಿ ಮಾಡುವುದರಿಂದ ಆ ಉತ್ಪನ್ನದ ಮೂಲ ಹಾಗೂ ಖಚಿತತೆ ಬಗ್ಗೆ ತಪ್ಪಾದ ಅಭಿಪ್ರಾಯ ಮೂಡುತ್ತದೆ. ಅದು ನೇರವಾಗಿ ಗ್ರಾಹಕರು ಮತ್ತು ಬ್ರ್ಯಾಂಡ್ ಗೌರವ- ನಂಬಿಕೆ ಮೇಲೆ ಪರಿಣಾಮ ಬೀರುತ್ತದೆ ಎಂದು ಅಭಿಪ್ರಾಯ ಪಟ್ಟಿದ್ದಾರೆ.

ರಿಲಯನ್ಸ್ ಪರವಾಗಿ ಅಂಕಿತ್ ಸಾಹ್ನಿ ಮತ್ತು ಕೃತ್ತಿಕಾ ಸಾಹ್ನಿ (ಪಾಲುದಾರರು), ಚಿರಾಗ್ ಅಹ್ಲುವಾಲಿಯಾ (ಹಿರಿಯ ವಕೀಲರು) ಮತ್ತು ಮೋಹಿತ್ ಮರು (ಅಸೊಸಿಯೇಟ್) ಪ್ರತಿನಿಧಿಸಿದ್ದರು. ಇವರು ಅಜಯ್ ಸಾಹ್ನಿ ಅಂಡ್ ಅಸೋಸಿಯೇಟ್ಸ್ ನವರು.

BREAKING: ರಾಜ್ಯದ ಎಲ್ಲಾ ಮಲ್ಟಿಪ್ಲೆಕ್ಸ್, ಚಿತ್ರಮಂದಿರಗಳಲ್ಲಿ ಏಕರೂಪದ ದರ ಜಾರಿಗೊಳಿಸಿ ಸರ್ಕಾರ ಆದೇಶ

ಮಾಧ್ಯಮ ಸಂಜೀವಿನಿ ಯೋಜನೆ ಎಲ್ಲಾ ಪತ್ರಕರ್ತರಿಗೂ ವಿಸ್ತರಿಸಿ: ಸಿಎಂಗೆ KUWJ ಅಧ್ಯಕ್ಷ ಶಿವಾನಂದ ತಗಡೂರು ಆಗ್ರಹ

Share. Facebook Twitter LinkedIn WhatsApp Email

Related Posts

Army Day: ಸಶಸ್ತ್ರ ಪಡೆಗಳ ಸಿಬ್ಬಂದಿಗೆ ಸೇನಾ ದಿನಾಚರಣೆಯ ಶುಭಾಶಯ ಕೋರಿದ ಪ್ರಧಾನಿ ಮೋದಿ

15/01/2026 9:42 AM1 Min Read

Army Day: ‘ಭಾರತೀಯ ಸೇನೆಯು ಭಾರತದ ರಾಷ್ಟ್ರೀಯ ಭದ್ರತೆಯ ತಿರುಳಾಗಿದೆ’: ಸೇನಾ ದಿನದಂದು ಶುಭ ಕೋರಿದ ರಾಷ್ಟ್ರಪತಿ ದ್ರೌಪದಿ ಮುರ್ಮು

15/01/2026 9:27 AM1 Min Read

ದೆಹಲಿ ಪೊಲೀಸ್ ಮತ್ತು ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ ನಡುವೆ ಗುಂಡಿನ ಚಕಮಕಿ : ಇಬ್ಬರ ಬಂಧನ

15/01/2026 9:12 AM1 Min Read
Recent News

BIG NEWS : ಗದಗದಲ್ಲಿ ನಿಧಿ ಪತ್ತೆ ಕೇಸ್ : ಲಕ್ಕುಂಡಿಯಲ್ಲಿ ಉತ್ಖನನಕ್ಕೆ ಮುಂದಾದ ರಾಜ್ಯ ಸರ್ಕಾರ

15/01/2026 9:52 AM

BIG NEWS : ‘TET’ ಪರೀಕ್ಷೆ ಪಾಸಾದವರಿಗೆ ಇಲ್ಲಿದೆ ಮಹತ್ವದ ಮಾಹಿತಿ

15/01/2026 9:49 AM

Army Day: ಸಶಸ್ತ್ರ ಪಡೆಗಳ ಸಿಬ್ಬಂದಿಗೆ ಸೇನಾ ದಿನಾಚರಣೆಯ ಶುಭಾಶಯ ಕೋರಿದ ಪ್ರಧಾನಿ ಮೋದಿ

15/01/2026 9:42 AM

Army Day: ‘ಭಾರತೀಯ ಸೇನೆಯು ಭಾರತದ ರಾಷ್ಟ್ರೀಯ ಭದ್ರತೆಯ ತಿರುಳಾಗಿದೆ’: ಸೇನಾ ದಿನದಂದು ಶುಭ ಕೋರಿದ ರಾಷ್ಟ್ರಪತಿ ದ್ರೌಪದಿ ಮುರ್ಮು

15/01/2026 9:27 AM
State News
KARNATAKA

BIG NEWS : ಗದಗದಲ್ಲಿ ನಿಧಿ ಪತ್ತೆ ಕೇಸ್ : ಲಕ್ಕುಂಡಿಯಲ್ಲಿ ಉತ್ಖನನಕ್ಕೆ ಮುಂದಾದ ರಾಜ್ಯ ಸರ್ಕಾರ

By kannadanewsnow0515/01/2026 9:52 AM KARNATAKA 1 Min Read

ಗದಗ : ಗದಗ ಜಿಲ್ಲೆಯ ಲಕ್ಕುಂಡಿ ಗ್ರಾಮದಲ್ಲಿ ಮನೆ ಕಟ್ಟಲು ಪಾಯ ತೆಗೆಯುವಾಗ ಸುಮಾರು 850ಕ್ಕೂ ಹೆಚ್ಚು ಗ್ರಾಂ ನಿಧಿ…

BIG NEWS : ‘TET’ ಪರೀಕ್ಷೆ ಪಾಸಾದವರಿಗೆ ಇಲ್ಲಿದೆ ಮಹತ್ವದ ಮಾಹಿತಿ

15/01/2026 9:49 AM

BREAKING : ‘RCB’ ಅಭಿಮಾನಿಗಳಿಗೆ ಬಿಗ್ ಶಾಕ್ : ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಪಂದ್ಯ ನಡೆಯುವುದು ಅನುಮಾನ

15/01/2026 9:25 AM

BREAKING : ಸಂಕ್ರಾಂತಿ ಹಬ್ಬದಂದೆ ಘೋರ ದುರಂತ : ಕೆರೆಯಲ್ಲಿ ಮುಳುಗಿ ಇಬ್ಬರು ವಿದ್ಯಾರ್ಥಿಗಳು ದಾರುಣ ಸಾವು!

15/01/2026 9:13 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.