ಕಲಬುರಗಿ: ಪ್ರಿಯಾಂಕ್ ಖರ್ಗೆ ಬಲಗೈ ಬಂಟ, ಬೆಂಬಲಿಗ ರಾಜು ಕಪನೂರ್ ( Raju Kapanoor) ಇದೀಗ ಪೊಲೀಸರ ಅತಿಥಿಯಾಗಿದ್ದಾನೆ.
ಕಲಬುರಗಿ ಜಿಲ್ಲೆಯ ಯಡ್ರಾಮಿ ಪೊಲೀಸರು ರಾಜು ಕಪನೂರ್ ಬಂಧಿಸಿದ್ದಾರೆ. ಸೆಪ್ಟೆಂಬರ್ ತಿಂಗಳಿನಲ್ಲಿ ಗುರಲಿಂಗಪ್ಪ ಎಂಬುವರಿಂದ ಕಪನೂರ್, ಎರಡು ಕಂಟ್ರಿಮೇಡ್ ಗನ್ ಮತ್ತು 30 ಗುಂಡು ಖರೀದಿಸಿದ್ದನು . ಈ ವಿಚಾರದಲ್ಲಿ ರಾಜು ಕಪನೂರ್ ಹೆಸರು ಕೇಳಿಬಂದ ಹಿನ್ನೆಲೆ ಪೊಲೀಸರು ಎರಡು ನೋಟಿಸ್ ನೀಡಿದ್ದರು, ಆದರೆ ಇದ್ಯಾವುದಕ್ಕೂ ತಲೆಕೆಡಿಸಿಕೊಳ್ಳದೇ ರಾಜು ಕಪನೂರ್ ಸುಮ್ಮನಾಗಿದ್ದನು. ಇದೀಗ ರಾಜು ಕಪನೂರ್ನನ್ನು ಪೊಲೀಸರು ಬಂಧಿಸಿದ್ದಾರೆ.
ನಿನ್ನೆಯಷ್ಟೇ ಮಣಿಕಂಠ ರಾಠೋಡ್ ತಮ್ಮ ಮೇಲೆ ಪ್ರಿಯಾಂಕ್ ಖರ್ಗೆ ಮತ್ತು ಬೆಂಬಲಿಗರಿಂದ ಕೊಲೆ ಪ್ರಯತ್ನ ನಡೆದಿದೆ, ತನ್ನನ್ನು ಕೊಲೆ ಮಾಡೋದಕ್ಕೆ ರಾಜು ಕಪನೂರ್ ಗನ್ ಕೊಂಡುಕೊಂಡಿದ್ದ ಎಂದು ಸ್ಪೋಟಕ ಹೇಳಿಕೆ ನೀಡಿದ್ದರು, ಈ ಬೆನ್ನಲ್ಲೇ ಪ್ರಿಯಾಂಕ್ ಖರ್ಗೆ ಬಲಗೈ ಬಂಟ, ಬೆಂಬಲಿಗ ರಾಜು ಕಪನೂರ್ ಪೊಲೀಸರ ಅತಿಥಿಯಾಗಿದ್ದಾರೆ.
BREAKING NEWS : ಬಳ್ಳಾರಿಯ ಶ್ರೀ ಕೃಷ್ಣ ದೇವರಾಯ ವಿವಿಯಲ್ಲಿ ಚಿರತೆ ಪ್ರತ್ಯಕ್ಷ |Leopard
BREAKING NEWS : ಐದು ದಶಕಗಳ ಹೋರಾಟಕ್ಕೆ ಜಯ : ದತ್ತಪೀಠಕ್ಕೆ ಇಬ್ಬರು ಹಿಂದೂ ಅರ್ಚಕರ ನೇಮಕ