ಶಿವಮೊಗ್ಗ: ಜಿಲ್ಲೆಯಲ್ಲಿ ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ನೀಡಿದಂತ ಪ್ರಾಧ್ಯಾಪಕನಿಗೆ ಸಾರ್ವಜನಿಕರು, ವಿದ್ಯಾರ್ಥಿಗಳು ಸೇರಿಕೊಂಡು ಮನಬಂದಂತೆ ಥಳಿಸಿರುವಂತ ಘಟನೆ ಸಾಗರದಲ್ಲಿ ನಡೆದಿದೆ.
ಶಿವಮೊಗ್ಗ ಜಿಲ್ಲೆಯ ಸಾಗರ ನಗರದಲ್ಲಿನ ಕೊಳಗಿಬೀಸ್ ಕಾಲೇಜಿನಲ್ಲಿ ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ನೀಡಿದಂತ ಕಾಲೇಜು ಪ್ರಾಧ್ಯಾಪಕ ಎಂ.ಆರ್ ಆದರ್ಶ್ ಎಂಬುವರಿಗೆ ಥಳಿಸಲಾಗಿದೆ. ಈ ಹಿಂದೆಯೂ ಸಹ ಶಿರಸಿಯಲ್ಲೂ ಇದೇ ರೀತಿ ಮಾಡಿ ಪ್ರಾಧ್ಯಾಪಕ ಎಂ.ಆರ್ ಆದರ್ಶ್ ಸಿಕ್ಕಿಬಿದ್ದಿದ್ದ ಎನ್ನಲಾಗಿದೆ.
ಇದೇ ಕಾರಣಕ್ಕಾಗಿ ಶಿರಸಿಯಿಂದ ಸಾಗರಕ್ಕೆ ಪ್ರಾಧ್ಯಾಪಕ ಆದರ್ಶ್ ನನ್ನು ವರ್ಗಾವಣೆ ಮಾಡಲಾಗಿತ್ತು. ಆದರೇ ಇಲ್ಲಿಗೆ ಬಂದಲೂ ತನ್ನ ಚಾಳಿಯನ್ನು ಪ್ರಾಧ್ಯಾಪಕ ಎಂ.ಆರ್ ಆದರ್ಶ್ ಬಿಟ್ಟಿರಲಿಲ್ಲ. ಕಾಲೇಜಿನ ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ನೀಡಿದ್ದನಂತೆ. ಈ ವಿಷಯವನ್ನು ವಿದ್ಯಾರ್ಥಿನಿ ತನ್ನ ಪೋಷಕರಿಗೆ ತಿಳಿಸಿದ್ದರು.
ಈ ಹಿನ್ನಲೆಯಲ್ಲಿ ಕಾಲೇಜು ಬಳಿಗೆ ತೆರಳಿದಂತ ವಿದ್ಯಾರ್ಥಿನಿಯ ಪೋಷಕರು, ವಿದ್ಯಾರ್ಥಿಗಳು ಸೇರಿಕೊಂಡು ಪ್ರಾಥ್ಯಾಪಕ ಎಂ.ಆರ್ ಆದರ್ಶ್ ಅವರನ್ನು ಮನಬಂದಂತೆ ಥಳಿಸಿದ್ದಾರೆ. ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ನೀಡಿದಂತ ಪ್ರಾಧ್ಯಾಪಕನಿಗೆ ಸಖತ್ ಗೂಸಾ ನೀಡಿ, ಬಿಸಿ ಮುಟ್ಟಿಸಿದ್ದಾರೆ.








