ನವದೆಹಲಿ : ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಇಡೀ ದೇಶದ ಜನತೆಗೆ ಅಷ್ಟೇ ಅಲ್ಲ ಬಿಜೆಪಿಯವರಿಗೂ ಕೂಡ ಭಯ ಹುಟ್ಟಿಸಿದ್ದಾರೆ ಎಂದು ಲೋಕಸಭೆಯಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ವಿರುದ್ಧ ವಿಪಕ್ಷ ನಾಯಕ ರಾಹುಲ್ ಗಾಂಧಿ ತೀವ್ರ ವಾಗ್ದಾಳಿ ನಡೆಸಿದರು.
ಲೋಕಸಭೆಯಲ್ಲಿ ಮಾತನಾಡಿದ ವಿಪಕ್ಷ ನಾಯಕ ರಾಹುಲ್ ಗಾಂಧಿ, ಇಡಿ ದೇಶದಲ್ಲಿ ನರೇಂದ್ರ ಮೋದಿ ಭಯ ಹುಟ್ಟಿಸಿದ್ದಾರೆ. ಬೆಳಗ್ಗೆ ಸದನಕ್ಕೆ ಬಂದಾಗ ರಾಜನಾಥ್ ಸಿಂಗ್ ಗೆ ಅತ್ಯಂತ ನಗುಮುಖದಿಂದ ಸ್ವಾಗತಿಸಿದರು. ಆದರೆ ಮೋದಿ ಮುಖದಲ್ಲಿ ನಗುವಿರು ಇಲ್ಲ ನಗು ಮಾಯವಾಗಿದೆ. ನಿತಿನ್ ಗಡ್ಕರಿ ಪರಿಸ್ಥಿತಿ ಸಹ ಇದೇ ರೀತಿ ಆಗಿದೆ ಎಂದರು.
ಮೋದಿಯವರು ಕೇವಲ ದೇಶದ ಜನತೆಗೆ ಮಾತ್ರ ಭಯ ಹುಟ್ಟಿಸಿಲ್ಲ. ಬಿಜೆಪಿಯವರಿಗೂ ಮೋದಿ ಭಯ ಹುಟ್ಟಿಸಿದ್ದಾರೆ ಎಂದು ವಾಗ್ದಾಳಿ ನಡೆಸಿದರು. ರಾಹುಲ್ ಗಾಂಧಿ ಮಾತಿಗೆ ಸ್ಪೀಕರ್ ಓಂ ಬಿರ್ಲಾ ಈ ವೇಳೆ ಆಕ್ಷೇಪ ವ್ಯಕ್ತಪಡಿಸಿದರು. ಸದನದ ಗೌರವ ಉಳಿಸಿ ವ್ಯಕ್ತಿಗತ ದಾಳಿ ಬೇಡ ಸರ್ಕಾರದ ಯೋಜನೆಗಳ ಬಗ್ಗೆ ಮಾತನಾಡಿ ಎಂದು ಆಕ್ಷೇಪ ವ್ಯಕ್ತಪಡಿಸಿದರು.