ಪ್ರಮುಖ ವಿಷಯಗಳ ಬಗ್ಗೆ ವಾರಗಳ ಚರ್ಚೆಯ ನಂತರ, ಚಳಿಗಾಲದ ಅಧಿವೇಶನವು ಅಂತಿಮ ವಾರವನ್ನು ಪ್ರವೇಶಿಸುತ್ತಿದೆ. ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು 2025-26ರ ಆರ್ಥಿಕ ವರ್ಷದ ಸರ್ಕಾರದ ವೆಚ್ಚವನ್ನು ಪೂರೈಸಲು ಭಾರತದ ಸಂಚಿತ ನಿಧಿಯಿಂದ ಹಣವನ್ನು ಹಿಂಪಡೆಯಲು ಅನುಮೋದನೆ ಕೋರಿ ಧನವಿನಿಯೋಗ ಮಸೂದೆಯನ್ನು ಮಂಡಿಸಲಿದ್ದಾರೆ ಎಂದು ಹೇಳಲಾಗಿದೆ.
ಚಳಿಗಾಲದ ಅಧಿವೇಶನವು ಮತದಾರರ ಪಟ್ಟಿ ಸುಧಾರಣೆಗಳ ಬಗ್ಗೆ ತೀವ್ರ ಚರ್ಚೆಯಿಂದ ಗುರುತಿಸಲ್ಪಟ್ಟಿತು, ಆದರೆ ವಂದೇ ಮಾತರಂ ಘೋಷಣೆಗಳು ಕಲಾಪಕ್ಕೆ ನಾಂದಿ ಹಾಡಿದವು.
ವಾಯುಮಾಲಿನ್ಯ ಬಗ್ಗೆ ಚರ್ಚೆಗೆ ಕಾಂಗ್ರೆಸ್ ಸಂಸದರು ಆಗ್ರಹ
ಕಾಂಗ್ರೆಸ್ ಸಂಸದ ಮಾಣಿಕ್ಕಂ ಟ್ಯಾಗೋರ್ ಮತ್ತು ಅಮರ್ ಸಿಂಗ್ ಅವರು ರಾಷ್ಟ್ರ ರಾಜಧಾನಿಯ ವಾಯುಮಾಲಿನ್ಯದ ಬಗ್ಗೆ ಚರ್ಚಿಸಲು ಲೋಕಸಭೆಯಲ್ಲಿ ಮುಂದೂಡಿಕೆ ನೋಟಿಸ್ ನೀಡಿದರು.
ನಿರ್ಮಲಾ ಸೀತಾರಾಮನ್ ಅವರು ಧನ ವಿನಿಯೋಗ ಮಸೂದೆ ಮಂಡನೆ
ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು 2025-26ರ ಆರ್ಥಿಕ ವರ್ಷಕ್ಕೆ ನಿರ್ದಿಷ್ಟ ಸರ್ಕಾರಿ ಸೇವಾ ವೆಚ್ಚಗಳನ್ನು ಪೂರೈಸಲು ಭಾರತದ ಸಂಚಿತ ನಿಧಿಯಿಂದ ಹಣವನ್ನು ಹಿಂಪಡೆಯಲು ಕೋರುವ ಧನವಿನಿಯೋಗ ಮಸೂದೆಯನ್ನು ಮಂಡಿಸಲಿದ್ದಾರೆ.
ಬೆಳಗ್ಗೆ 11 ಗಂಟೆಗೆ ಕಲಾಪ ಆರಂಭ
ಸಂಸತ್ತಿನ ಕೆಳಮನೆ ಮತ್ತು ಮೇಲ್ಮನೆಯಲ್ಲಿ ಕಲಾಪಗಳು ಬೆಳಿಗ್ಗೆ 11 ಗಂಟೆಗೆ ಪ್ರಾರಂಭವಾಗಲಿವೆ








