Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಕರಾವಳಿ ಕಿಚ್ಚನ್ನು ಮಂಡ್ಯದಲ್ಲಿ ಹಚ್ಚಲು ಸಾಧ್ಯವಿಲ್ಲ: ಮೈತ್ರಿ ನಾಯಕರ ವಿರುದ್ಧ ಶಾಸಕ ಕೆ.ಎಂ.ಉದಯ್ ಕೆಂಡ

17/09/2025 9:51 PM

ಭಾರತೀಯ ಸಂಸ್ಕೃತಿಗೆ ವಿಶ್ವಕರ್ಮ ಸಮುದಾಯದ ಕೊಡುಗೆ ಅವಿಸ್ಮರಣೀಯ: ಶಾಸಕ ಕೆ.ಎಂ.ಉದಯ್

17/09/2025 9:47 PM
Health effects of Alarm

‘ಅಲಾರಾಂ’ ಶಬ್ದದಿಂದ ಹಾರ್ಟ್ ಆಟ್ಯಾಕ್ ಆಗುತ್ತೆ ; ಹೊಸ ಅಧ್ಯಯನದಿಂದ ಶಾಕಿಂಗ್ ಸಂಗತಿ ಬಹಿರಂಗ

17/09/2025 9:41 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಎಲ್ಲ ಜಾತಿ, ಧರ್ಮದವರನ್ನು ಪ್ರೀತಿಸಿ, ದ್ವೇಷದ ವಿಷಬೀಜ ಬಿತ್ತುವವರನ್ನು ವಿರೋಧಿಸಿ : ಸಿಎಂ ಸಿದ್ದರಾಮಯ್ಯ 
KARNATAKA

ಎಲ್ಲ ಜಾತಿ, ಧರ್ಮದವರನ್ನು ಪ್ರೀತಿಸಿ, ದ್ವೇಷದ ವಿಷಬೀಜ ಬಿತ್ತುವವರನ್ನು ವಿರೋಧಿಸಿ : ಸಿಎಂ ಸಿದ್ದರಾಮಯ್ಯ 

By kannadanewsnow0525/10/2024 9:50 PM

ಬೆಳಗಾವಿ : ದೇಶದ ಜನತೆ ಯಾರೊಂದಿಗೂ ದ್ವೇಷ ಮಾಡಬಾರದು. ಎಲ್ಲಾ ಜಾತಿ ಧರ್ಮದವರನ್ನು ಪ್ರೀತಿಸಬೇಕು ದ್ವೇಷ ಎಂಬ ಬೀಜವನ್ನು ಬಿತ್ತುವರನ್ನು ವಿರೋಧಿಸಬೇಕು ಎಂದು ಐತಿಹಾಸಿಕ ಕಿತ್ತೂರು ಸಮಾರೋಪ ಸಮಾರಂಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರರು.

ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನ ಕಿತ್ತೂರು ಕೋಟೆ ಆವರಣದಲ್ಲಿ ಈ ಒಂದು ಕಾರ್ಯಕ್ರಮ ನಡೆಯುತ್ತಿದೆ. ಬ್ರಿಟಿಷರೇ ಭಾರತ ಬಿಟ್ಟು ತೊಲಗಿ ಎಂದು ಹೇಳಿದವರಲ್ಲಿ ಕಿತ್ತೂರು ರಾಣಿ ಚೆನ್ನಮ್ಮ ಮೊದಲಿಗರು. ಬ್ರಿಟಿಷರು ಈ ದೇಶವನ್ನು 200 ವರ್ಷಗಳ ಕಾಲ ಆಳಿದರು. ವಿದೇಶಿಯರು ಈ ದೇಶ ಆಳಬಾರದೆಂದು ಕಿತ್ತೂರು ರಾಣಿ ಚೆನ್ನಮ್ಮ ಹೋರಾಡಿದರು. ಅಮಟೂರು ಬಾಳಪ್ಪ, ಸಂಗೊಳ್ಳಿ ರಾಯಣ್ಣ ಚೆನ್ನಮ್ಮನ ಜೊತೆಗೆ ಇದ್ದವರು ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದರು.

ಕಿತ್ತೂರು ಸಂಸ್ಥಾನ ಉಳಿಸಿಕೊಳ್ಳಲು ರಾಣಿ ಚೆನ್ನಮ್ಮ ಪ್ರಾಣ ತ್ಯಾಗ ಮಾಡಿದರು.ಈ ದೇಶಕ್ಕೆ ಅಷ್ಟು ಸುಲಭವಾಗಿ ಸ್ವಾತಂತ್ರ್ಯ ಸಿಕ್ಕಿಲ್ಲ. ಯಾವುದೇ ಕಾರಣಕ್ಕೂ ಈ ದೇಶದ ಜನತೆ ದ್ವೇಷ ಮಾಡಬಾರದು. ಯಾವುದೇ ಜಾತಿ ಧರ್ಮದವರಿದ್ದರು ಪರಸ್ಪರ ಪ್ರೀತಿಸಬೇಕು ದ್ವೇಷ ಮಾಡಿ ಎಂದು ವಿಷ ಬೀಜ ಬಿತ್ತುವವರನ್ನು ಅವರನ್ನು ವಿರೋಧಿಸಬೇಕು ಎಂದರು.

ಸಮ ಸಮಾಜದ ವಿಚಾರವನ್ನು ನಮಗೆ ತಿಳಿಸಿದ್ದು ಬಸವಣ್ಣನವರು. ಹೀಗಾಗಿ ಬಸವಣ್ಣ ಅವರನ್ನು ಸಾಂಸ್ಕೃತಿಕ ನಾಯಕನೆಂದು ಕರೆದಿದ್ದೇವೆ. ಅವರು ಮಾಡಿದ ಹೋರಾಟ ಸಾಮಾಜಿಕ ಕ್ರಾಂತಿ ಇಂದಿಗೂ ಕೂಡ ಪ್ರಸ್ತುತ. ಗ್ಯಾರೆಂಟಿ ಯೋಜನೆಗಳು ಎಲ್ಲಾ ಜಾತಿಯ ಬಡವರಿಗೆ ಶಕ್ತಿ ತುಂಬಿದೆ ಎಂದು ಕಿತ್ತೂರು ಉತ್ಸವದ ಸಮಾರೋಪ ಸಮಾರಂಭದಲ್ಲಿ ಸಿಎಂ ಸಿದ್ದರಾಮಯ್ಯ ತಿಳಿಸಿದರು.

ಕಿತ್ತೂರು ವಿಜಯೋತ್ಸವಕ್ಕೆ 200  ವರ್ಷಗಳು ತುಂಬಿದೆ. ಕಿತ್ತೂರು ರಾಣಿ ಚೆನ್ನಮ್ಮ ಓರ್ವ ವೀರ ಮಹಿಳೆ. ಬ್ರಿಟಿಷರ ಕಾನೂನು ವಿರೋಧಿಸಿ ನಾನು ತೆರಿಗೆ ಕೊಡಲ್ಲ ಅಂತ ಹೇಳಿದ್ದಳು.ಬ್ರಿಟಿಷರು ದತ್ತು ಮಕ್ಕಳಿಗೆ ಹಕ್ಕಿಲ್ಲವೆಂಬ ಕಾನೂನನ್ನು ತಂದಿದ್ದರು. ಬ್ರಿಟಿಷರು ತಂದಿದ್ದ ಕಾನೂನು ಧಿಕ್ಕರಿಸಿ ಎದುರು ಹಾಕಿಕೊಂಡಿದ್ದರು. ಕಪ್ಪ ಕಾಣಿಕೆ ಕೊಡಲ್ಲ ಆದ್ರೆ ಯುದ್ಧ ಮಾಡುತ್ತೇವೆ ಎಂದು ಯುದ್ಧ ಸಾರಿದರು. ಯುದ್ಧವನ್ನು ಸಾರಿ ಬ್ರಿಟಿಷರ ವಿರುದ್ಧ ಹೋರಾಡಿ ಚೆನ್ನಮ್ಮ ಜಯಸಿದ್ದರು.

200ನೇ ವರ್ಷದ ವಿಜಯೋತ್ಸವಕ್ಕೆ ಹೆಚ್ಚು ಅನುದಾನಕ್ಕೆ ಬೇಡಿಕೆ ಇತ್ತು. ಕಿತ್ತೂರು ಶಾಸಕ ಬಾಬಾ ಸಾಹೇಬ್ ಪಾಟೀಲ್ ಒತ್ತಡ ಹಾಕಿದ್ದರು. ಹಾಗಾಗಿ ಶಾಸಕರ ಬೇಡಿಕೆಗೆ ಒಪ್ಪಿ ಹೆಚ್ಚಿನ ಅನುದಾನ ನೀಡಿದ್ದೆವು. ಯಾವ ಸರ್ಕಾರ ಮಾಡಿರುವ ಕಿತ್ತೂರು ರಾಣಿ ಚೆನ್ನಮ್ಮ ಜಯಂತಿ ಆಚರಣೆಯನ್ನು ನಮ್ಮ ಸರ್ಕಾರದಿಂದ ಆಚರಣೆ ಮಾಡಲಾಗಿದೆ ಎಂದು ಐತಿಹಾಸಿಕ ಕಿತ್ತೂರು ಉತ್ಸವದ ಸಮಾರೋಪ ಸಮಾರಂಭದಲ್ಲಿ ಸಿಎಂ ಸಿದ್ದರಾಮಯ್ಯ ತಿಳಿಸಿದರು.

ಕಿತ್ತೂರು ರಾಣಿ ಚೆನ್ನಮ್ಮನ ಉತ್ಸವವನ್ನು ಸರ್ಕಾರ ಆಚರಿಸಬೇಕು ಎಂದು ಮೊದಲ ಬಾರಿಗೆ ಆದೇಶಿಸಿದವರು ನಾವೆ. ಇವತ್ತಿನ‌ ಪೀಳಿಗೆಗೆ ಚೆನ್ನಮ್ಮನ ಇತಿಹಾಸ ಗೊತ್ತಾಗಬೇಕು ಎನ್ನುವ ಕಾರಣದಿಂದ ನಾವು ಈ ನಿರ್ಧಾರ ಮಾಡಿದೆವು. ಇತಿಹಾಸ ಗೊತ್ತಿಲ್ಲದವರು ಇತಿಹಾಸ ನಿರ್ಮಿಸಲಾಗದು ಎನ್ನುವ ಅಂಬೇಡ್ಕರ್ ಅವರ ಮಾತು ನಮಗೆ ಪ್ರೇರಣೆ.

ನಾನು ಸಂಗೊಳ್ಳಿ ರಾಯಣ್ಣ-ಕಿತ್ತೂರು ಚೆನ್ನಮ್ಮನ ಅಭಿಮಾನಿ. ರಾಣಿ ಚೆನ್ನಮ್ಮ, ರಾಣಿ ಅಬ್ಬಕ್ಕ, ಸಂಗೊಳ್ಳಿ ರಾಯಣ್ಣ, ಝಾನ್ಸಿ ರಾಣಿ ಲಕ್ಷ್ಮೀಬಾಯಿ ಮುಂತಾದವರ ಹೋರಾಟ ಮತ್ತು ಆಶಯಗಳನ್ನು ನಾವು ಅರ್ಥ ಮಾಡಿಕೊಳ್ಳಬೇಕು. ಬ್ರಿಟೀಷರಿಗೆ ಸಿಂಹ ಸ್ವಪ್ನವಾಗಿದ್ದ ಹೋರಾಟಗಾರರಿಂದ ದೇಶದ ಜನರನ್ನು ಪ್ರೀತಿಸುವುದನ್ನು ನಾವು ಕಲಿಯಬೇಕು.

ದೇಶ ಅಂದರೆ ದೇಶದ ಜನ. ಯಾವುದೇ ಧರ್ಮದವರಿರಲಿ, ಯಾವುದೇ ಜಾತಿಯವರಿರಲಿ ಎಲ್ಲರೂ ನಮ್ಮ ದೇಶದ ಜನ. ದೇಶದ ಜನರನ್ನು ಪ್ರೀತಿಸುವುದೇ ನಿಜವಾದ, ಸರಿಯಾದ ದೇಶಪ್ರೇಮ.ಬಸವಣ್ಣನವರೂ ಇದನ್ನೇ ಹೇಳಿದ್ದರು. ಜಾತಿ, ಧರ್ಮದ ತಾರತಮ್ಯ ಇಲ್ಲದಂತೆ ಮನುಷ್ಯ ಪ್ರೀತಿಯನ್ನು ಸಾರಿದವರು ಬಸವಣ್ಣ. ಹೀಗಾಗಿ ನಮ್ಮ ಸರ್ಕಾರ ಬಸವಣ್ಣನವರನ್ನು ಸಾಂಸ್ಕೃತಿಕ ನಾಯಕ ಎಂದು ಘೋಷಿಸಿದೆ.

ಜಾತಿ, ಧರ್ಮದ ಅಸಮಾನತೆ ಸಮಾಜದಲ್ಲಿ ಇರುವಷ್ಟೂ ದಿನ ಸಾಮಾಜಿಕ ನ್ಯಾಯ ಬರಲು ಸಾಧ್ಯವಿಲ್ಲ. ಇದು ಸಾಧ್ಯವಾಗಬೇಕಾದರೆ ರಾಜಕೀಯ ಸ್ವಾತಂತ್ರ್ಯದ ಜೊತೆಗೆ ಸಾಮಾಜಿಕ ಮತ್ತು ಆರ್ಥಿಕ ಸ್ವಾತಂತ್ರ್ಯ ಎಲ್ಲಾ ಜಾತಿ, ಧರ್ಮ, ಎಲ್ಲಾ ವರ್ಗದವರಿಗೂ ಸಿಗಬೇಕು.ದೇಶದ ಜನರನ್ನು ಪ್ರೀತಿಸಿ, ದೇಶದ ಜನರ ಸ್ವಾತಂತ್ರ್ಯ ರಕ್ಷಣೆಗಾಗಿ ರಾಣಿ ಚೆನ್ನಮ್ಮ ಮತ್ತು ಸಂಗೊಳ್ಳಿ ರಾಯಣ್ಣ ಪ್ರಾಣತ್ಯಾಗ ಮಾಡಿದ್ದಾರೆ. ಇದು ಅತ್ಯುನ್ನತವಾದ ತ್ಯಾಗ. ಇದನ್ನು ನಾವು, ನೀವು, ಇವತ್ತಿನ‌ ಪೀಳಿಗೆ ಪಾಲಿಸಬೇಕು ಎಂದು ತಿಳಿಸಿದರು.

ಕಿತ್ತೂರು ರಾಣಿ ಚೆನ್ನಮ್ಮನ ಉತ್ಸವವನ್ನು ಸರ್ಕಾರ ಆಚರಿಸಬೇಕು ಎಂದು ಮೊದಲ ಬಾರಿಗೆ ಆದೇಶಿಸಿದವರು ನಾವೆ. ಇವತ್ತಿನ‌ ಪೀಳಿಗೆಗೆ ಚೆನ್ನಮ್ಮನ ಇತಿಹಾಸ ಗೊತ್ತಾಗಬೇಕು ಎನ್ನುವ ಕಾರಣದಿಂದ ನಾವು ಈ ನಿರ್ಧಾರ ಮಾಡಿದೆವು. ಇತಿಹಾಸ ಗೊತ್ತಿಲ್ಲದವರು ಇತಿಹಾಸ ನಿರ್ಮಿಸಲಾಗದು ಎನ್ನುವ ಅಂಬೇಡ್ಕರ್ ಅವರ ಮಾತು ನಮಗೆ ಪ್ರೇರಣೆ.

ನಾನು ಸಂಗೊಳ್ಳಿ… pic.twitter.com/2LumaQCM9C

— Siddaramaiah (@siddaramaiah) October 25, 2024

Share. Facebook Twitter LinkedIn WhatsApp Email

Related Posts

ಕರಾವಳಿ ಕಿಚ್ಚನ್ನು ಮಂಡ್ಯದಲ್ಲಿ ಹಚ್ಚಲು ಸಾಧ್ಯವಿಲ್ಲ: ಮೈತ್ರಿ ನಾಯಕರ ವಿರುದ್ಧ ಶಾಸಕ ಕೆ.ಎಂ.ಉದಯ್ ಕೆಂಡ

17/09/2025 9:51 PM3 Mins Read

ಭಾರತೀಯ ಸಂಸ್ಕೃತಿಗೆ ವಿಶ್ವಕರ್ಮ ಸಮುದಾಯದ ಕೊಡುಗೆ ಅವಿಸ್ಮರಣೀಯ: ಶಾಸಕ ಕೆ.ಎಂ.ಉದಯ್

17/09/2025 9:47 PM1 Min Read

ಅಂಗವಿಕಲ ನಕಲಿ ಪ್ರಮಾಣ ಪತ್ರ ನೀಡಿ ವಂಚನೆ : ಬೆಂಗಳೂರು ಪೊಲೀಸರಿಂದ ಆರೋಗ್ಯ ಅಧಿಕಾರಿ ಅರೆಸ್ಟ್!

17/09/2025 9:38 PM1 Min Read
Recent News

ಕರಾವಳಿ ಕಿಚ್ಚನ್ನು ಮಂಡ್ಯದಲ್ಲಿ ಹಚ್ಚಲು ಸಾಧ್ಯವಿಲ್ಲ: ಮೈತ್ರಿ ನಾಯಕರ ವಿರುದ್ಧ ಶಾಸಕ ಕೆ.ಎಂ.ಉದಯ್ ಕೆಂಡ

17/09/2025 9:51 PM

ಭಾರತೀಯ ಸಂಸ್ಕೃತಿಗೆ ವಿಶ್ವಕರ್ಮ ಸಮುದಾಯದ ಕೊಡುಗೆ ಅವಿಸ್ಮರಣೀಯ: ಶಾಸಕ ಕೆ.ಎಂ.ಉದಯ್

17/09/2025 9:47 PM
Health effects of Alarm

‘ಅಲಾರಾಂ’ ಶಬ್ದದಿಂದ ಹಾರ್ಟ್ ಆಟ್ಯಾಕ್ ಆಗುತ್ತೆ ; ಹೊಸ ಅಧ್ಯಯನದಿಂದ ಶಾಕಿಂಗ್ ಸಂಗತಿ ಬಹಿರಂಗ

17/09/2025 9:41 PM

ಅಂಗವಿಕಲ ನಕಲಿ ಪ್ರಮಾಣ ಪತ್ರ ನೀಡಿ ವಂಚನೆ : ಬೆಂಗಳೂರು ಪೊಲೀಸರಿಂದ ಆರೋಗ್ಯ ಅಧಿಕಾರಿ ಅರೆಸ್ಟ್!

17/09/2025 9:38 PM
State News
KARNATAKA

ಕರಾವಳಿ ಕಿಚ್ಚನ್ನು ಮಂಡ್ಯದಲ್ಲಿ ಹಚ್ಚಲು ಸಾಧ್ಯವಿಲ್ಲ: ಮೈತ್ರಿ ನಾಯಕರ ವಿರುದ್ಧ ಶಾಸಕ ಕೆ.ಎಂ.ಉದಯ್ ಕೆಂಡ

By kannadanewsnow0917/09/2025 9:51 PM KARNATAKA 3 Mins Read

ಮಂಡ್ಯ : ಕರಾವಳಿಯ ಕಿಚ್ಚನ್ನು ಮಂಡ್ಯದಲ್ಲಿ ಹಚ್ಚಲು ಯಾವುದೇ ಕಾರಣಕ್ಕೂ ಸಾಧ್ಯವಿಲ್ಲ ಎಂದು ಬಿಜೆಪಿ ನಾಯಕರ ವಿರುದ್ಧ ಶಾಸಕ ಕೆ.ಎಂ.ಉದಯ್…

ಭಾರತೀಯ ಸಂಸ್ಕೃತಿಗೆ ವಿಶ್ವಕರ್ಮ ಸಮುದಾಯದ ಕೊಡುಗೆ ಅವಿಸ್ಮರಣೀಯ: ಶಾಸಕ ಕೆ.ಎಂ.ಉದಯ್

17/09/2025 9:47 PM

ಅಂಗವಿಕಲ ನಕಲಿ ಪ್ರಮಾಣ ಪತ್ರ ನೀಡಿ ವಂಚನೆ : ಬೆಂಗಳೂರು ಪೊಲೀಸರಿಂದ ಆರೋಗ್ಯ ಅಧಿಕಾರಿ ಅರೆಸ್ಟ್!

17/09/2025 9:38 PM

KSRTC ಚಾಲಕನ ಸಾವಿಗೆ ಕಂಬನಿ ಮಿಡಿದ ಸಚಿವ ರಾಮಲಿಂಗಾ ರೆಡ್ಡಿ; ಅವಲಂಬಿತರಿಗೆ ನೌಕರಿ, ಆರ್ಥಿಕ ಸೌಲಭ್ಯಕ್ಕೆ ಸೂಚನೆ

17/09/2025 9:37 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.