ಚಿತ್ರದುರ್ಗ: ಜಿಲ್ಲೆಯಲ್ಲಿ ರಾಜ್ಯದ ಪಂಚಾಯತ್ ರಾಜ್ ಇಲಾಖೆಯಲ್ಲೊಂದು ಬಹುದೊಡ್ಡ ಕರ್ಮಕಾಂಡ ಎನ್ನುವಂತೆ, ಗೋಲ್ಮಾಲ್ ನಡೆದಿರುವುದು ಬೆಳಕಿಗೆ ಬಂದಿದೆ. ಕಾಮಗಾರಿ ನಡೆಸದೇ ಬಿಲ್ ಗುಳುಂ ಮಾಡೋದಕ್ಕೆ ಹೋಗಿ, ಪ್ರಕರಣ ಹೊರಬಿದ್ದಂತೆ ಅಕ್ರಮ ಮುಚ್ಚಿ ಹಾಗೋದಕ್ಕೆ ಇಲ್ಲ ಸಲ್ಲದ ಕಥೆಯನ್ನು ಅಧಿಕಾರಿಗಳು ಕಟ್ಟುತ್ತಿದ್ದಾರೆ. ಹಾಗಾದ್ರೇ ಏನಾಗಿದೆ ಅಂತಹ ಕರ್ಮಕಾಂಡ ಎನ್ನುವ ಬಗ್ಗೆ ಮುಂದೆ ಓದಿ.
ಕಾಮಗಾರಿ ಮೊತ್ತವಿಲ್ಲ, ಪ್ರಾರಂಭದ ದಿನಾಂಕವಿಲ್ಲ
ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲ್ಲೂಕಿನ ಉಡುವಳ್ಳಿ ಗ್ರಾಮ ಪಂಚಾಯ್ತಿಯಲ್ಲೇ ಹೀಗೊಂದು ಬಹುದೊಡ್ಡ ಕರ್ಮಕಾಂಡ ನಡೆದಿದೆ. ಅದೆಲ್ಲೋ ಕುರುಚಲು ಗಿಡಗಳ ಮಧ್ಯೆ ಗೋ ಕಟ್ಟೆ ನಿರ್ಮಾಣ ಮಾಡ್ತಿವಿ ಅಂತ ಯಾರಿಗೂ ಗೊತ್ತಾಗದಂತೆ ಪಿಡಿಒ ಹಾಗೂ ಕಾಮಗಾರಿ ಮಾಡಿಸೋರು ಸೇರಿ ಬೋರ್ಡ್ ಹಾಕ್ತಾರೆ ಅಂದ್ರೆ ನೀವೇ ಯೋಚನೆ ಮಾಡಿ.
ಇನ್ನೂ ತಾಲೂಕಿನ ಉಡುವಳ್ಳಿ ಗ್ರಾಮ ಪಂಚಾಯಿತಿಯ ವ್ಯಾಪ್ತಿಯ ಅಜ್ಜಯ್ಯನಹಟ್ಟಿ ಗ್ರಾಮದ ಸರ್ವೆ ನಂಬರ್.11ರಲ್ಲಿ ಬಾಲಪ್ಪನ ಜಮೀನಿನ ಹತ್ತಿರ ಗೋಕಟ್ಟೆ ನಿರ್ಮಾಣಕ್ಕಾಗಿ ಹಾಕಿರೋ ಬೋರ್ಡ್ ನಲ್ಲಿ ಕಾಮಗಾರಿ ಆರಂಭ, ಕಾಮಗಾರಿ ಮುಕ್ತಾಯದ ಮಾಹಿತಿಯಿಲ್ಲ. ಅದು ಕಾಮಗಾರಿ ಆರಂಭವಾದಾಗ, ಮುಕ್ತಾಯವಾದಾಗ ಹಾಕ್ತಾರೆ ಅಂತ ಬಿಟ್ಟಾಕೋಣ. ಆದರೇ ಕಾಮಗಾರಿ ನಡೆಸೋದಕ್ಕೆ ಸರ್ಕಾರದಿಂದ ಮಂಜೂರಾದಂತ ಮೊತ್ತವಾದ್ರೂ ನಮೂದಿಸಬೇಕು ಅಲ್ವ? ಅದಂತೂ ಇಲ್ಲವೇ ಇಲ್ಲ. ಹೀಗೆ ಬೋರ್ಡ್ ಹಾಕಿದ್ದು ಯಾಕೆ ಅನ್ನೋದು ಉಡವಳ್ಳಿ ಗ್ರಾಮದ ಜನತೆ ಪ್ರಶ್ನೆಯಾಗಿದೆ.
ಅಂದಹಾಗೇ ಉಡವಳ್ಳಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಸರ್ವೇ ನಂ.11ರಲ್ಲಿ ಗೋ ಕಟ್ಟೆ ನಿರ್ಮಾಣಕ್ಕಾಗಿ ಸರ್ಕಾರದಿಂದ 4 ಲಕ್ಷಕ್ಕೆ ಮಂಜೂರಾತಿಯನ್ನು ಪಡೆಯಲಾಗಿದೆ. ಇದು ಕಾಮಗಾರಿ ಮುಕ್ತಾಯದ ವೇಳೆ ಇನ್ನೂ ಹೆಚ್ಚು ಆಗಬಹುದು. ಕಾಮಗಾರಿ ಮೊತ್ತವನ್ನು ನಮೂದಿಸ ಬೇಕಾದಂತವರೇ ಬೋರ್ಡಲ್ಲಿ ಹಾಕಿಲ್ಲ. ಕಾರಣ ಕಾಮಗಾರಿಯನ್ನೇ ನಡೆಸದೇ ಹಣ ನುಂಗಿ ಹಾಕೋದಕ್ಕೆ ಪ್ರಯತ್ನಿಸಲಾಗಿತ್ತು. ಈ ಪ್ರಕರಣವನ್ನು ಪ್ರಶ್ನಿಸಿ ಇಒ, ಸಿಇಒಗೆ ದೂರು ನೀಡಿದ ನಂತ್ರ, ಈಗ ಕಾಮಗಾರಿಯನ್ನು ಮಾಡಲಾಗುತ್ತಿದೆ.
ಕಣ್ತಪ್ಪಿನಿಂದ ಸರ್ವೇ ನಂಬರ್ ಬದಲಾವಣೆ ಸಾಧ್ಯವೇ?
ಈ ಬಗ್ಗೆ ಉಡುವಳ್ಳಿ ಗ್ರಾಮ ಪಂಚಾಯ್ತಿ ಪಿಡಿಒ ಶ್ರೀನಿವಾಸ್ ಸಾಹೇಬ್ರು, ಹಿರಿಯೂರು ತಾಲ್ಲೂಕು ಕಾರ್ಯನಿರ್ವಾಹಕ ಅಧಿಕಾರಿ ಸತೀಶ್ ಕುಮಾರ್ ಅವರನ್ನು ನಿಮ್ಮ ಕನ್ನಡ ನ್ಯೂಸ್ ನೌ ಸಂಪರ್ಕಿಸಿ ವಿಚಾರಿಸಿತು. ಗೋ ಕಟ್ಟೆ ನಿರ್ಮಾಣ ಮಾಡ್ತಿರೋದು ಸರ್ವೇ ನಂಬರ್.11 ಅಂತ. ಆದರೇ ಕಾಮಗಾರಿ ಮಾಡ್ತಿರೋದು ಬೇರೆ ಹತ್ತಿರ ಆಗಿದೆ ಅಂತ ಪ್ರಶ್ನಿಸಿತು.
ಪಿಡಿಒ ಸಾಹೇಬ್ರು ನನ್ನದೇನು ತಪ್ಪಿಲ್ಲ ಅನ್ನೋ ಹಾಗೇ ಏಕ್ ಧಮ್ ಸರ್ ನಮ್ಮ ಇಂಜಿನಿಯರ್ ಕುಶಾಲ್ ಸಾಹೇಬ್ರು ಇದ್ದಾರೆ. ಅವರೇ ಮಾತಾಡ್ತಾರೆ ಮಾತಾಡಿ ಅಂತ ಕಾನ್ಫೆರೆನ್ಸ್ ಹಾಕ್ತಾರೆ. ಹಾಗಾದ್ರೇ ಪಿಡಿಒ ಸಾಹೇಬ್ರೆ ಈ ಉಡುವಳ್ಳಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿನ ಗೋಕಟ್ಟೆ ನಿರ್ಮಾಣದ ಸಂಪೂರ್ಣ ಮಾಹಿತಿ ನಿಮಗೋ ಅಥವಾ ಇಂಜಿನಿಯರ್ ಗೋ ಇರೋದು? ಮಾಡಿರೋ ತಪ್ಪಿನಿಂದ ನುಣುಚಿ ಕೊಳ್ಳೋದಕ್ಕೆ ಹೀಗೆಲ್ಲಾ ಅಡ್ಡ ದಾರಿ ಹಿಡಿತೀರಾ? ಅಂತ ಪ್ರಶ್ನಿಸಿದ್ರೇ..
ಗೋಕಟ್ಟೆ ಕಾಮಗಾರಿ ಗೋಲ್ಮಾಲ್ ನಲ್ಲಿ ಇಒ ಕೂಡ ಶಾಮೀಲು?
ಸರ್ ಕಾಮಗಾರಿ ನಡೆಯುತ್ತಿದೆ. ಇದನ್ನ ಖುದ್ದು ಇಒ ಅವರೇ ಪರಿಶೀಲನೆ ಮಾಡಿದ್ದಾರೆ. ಬೇಕಾದ್ರೇ ನೀವು ಸ್ಥಳಕ್ಕೆ ಬಂದು ಪರಿಶೀಲಿಸಬಹುದು ಅಂತ ಪಿಡಿಓ, ಇಂಜಿನೀಯರ್ ಜೊತೆಯಾಗೇ ಉತ್ತರಿಸಿದ್ರು. ಆದರೇ ಕಾಮಗಾರಿಗೆ ಅನುಮತಿ ಪಡೆದಿರುವ ಸರ್ವೇ ನಂಬರ್.11 ಆಗಿದೆ. ಈಗ ಮಾಡ್ತಿರೋದು ಬೇರೆ ಕಡೆಯಾಗಿದೆ ಎನ್ನುವ ಆರೋಪ ಕೇಳಿ ಬಂದಿದೆ ಅಂತ ಮರು ಪ್ರಶ್ನಿಸಲಾಯ್ತು.
ಇದಕ್ಕೆ ಪಿಡಿಒ, ಇಓ ಸಾಹೇಬ್ರು ಇಬ್ಬರು ಕಣ್ತಪ್ಪಿನಿಂದ ಸರ್ವೇ ನಂಬರ್ ಬದಲಾವಣೆ ಆಗಿದೆ. ಕಾಮಗಾರಿ ನಡೆಯುತ್ತಿದೆ. ಯಾವುದೇ ಗೋಲ್ಮಾಲ್ ಇಲ್ಲ ಅಂತ ತಿಳಿಸಿದ್ರು. ಹಾಗಾದ್ರೇ ಇಂಜಿನಿಯರ್ ಗೆ ಗೋಕಟ್ಟೆ ಕಾಮಗಾರಿ ಕರ್ಮ ಕಾಂಡದ ಬಗ್ಗೆ ದೂರು ಬಂದ ನಂತ್ರ, ಸ್ಥಳ ಪರಿಶೀಲನೆ ಮಾಡಿ ನೋಟಿಸ್ ಕೊಟ್ಟಿದ್ದೇಕೆ ಸ್ವಾಮಿ? ನೀವು ಈ ಕರ್ಮಕಾಂಡದ ಗೋಲ್ಮಾಲ್ ನಲ್ಲಿ ಶಾಮೀಲಾಗಿದ್ದೀರಾ ಅನ್ನೋದು ಗ್ರಾಮಸ್ಥರ ಪ್ರಶ್ನೆಯಾಗಿದೆ.
ಇನ್ನೂ ಸರ್ವೇ ನಂಬರ್ ಮತ್ತೊಂದು ಕಾಮಗಾರಿ ಮಗದೊಂದು ನಡೆಸೋದಕ್ಕೆ ಸಾಧ್ಯವಿದ್ಯ ಅಂತ ನಿಮ್ಮ ಕನ್ನಡ ನ್ಯೂಸ್ ನೌ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಸಂಬಂಧ ಪಟ್ಟಂತ ಮೇಲಧಿಕಾರಿಗಳನ್ನು ಸಂಪರ್ಕಿಸಿ ಮಾಹಿತಿ ಪಡೆಯಿತು. ಹಾಗೇ ಅವಕಾಶವಿದ್ದರೂ, ಅದು ಹಣ ಮಂಜೂರಾತಿಗೆ ಮೊದಲು ಮಾತ್ರವೇ ಸಾಧ್ಯವಾಗಿದೆ ಎಂಬುದಾಗಿ ಸ್ಪಷ್ಟ ಪಡಿಸಿದರು. ಆದ್ರೇ ಉಡವಳ್ಳಿ ಗ್ರಾಮ ಪಂಚಾಯ್ತಿಯಲ್ಲಿ ಹಾಗೆ ಯಾವುದೇ ನಿಯಮ ಪಾಲಿಸಿಲ್ಲ ಎನ್ನಲಾಗುತ್ತಿದೆ.
ಉಡುವಳ್ಳಿ ಗ್ರಾಮ ಪಂಚಾಯ್ತಿ ಪಿಡಿಒ ಮತ್ತೊಂದು ಎಡವಟ್ಟು ಬಯಲು
ಸರ್ವೇ ನಂಬರ್.11 ನಮೂದಿಸಿ, ಕಾಮಗಾರಿಗೆ ಅನುಮತಿಯನ್ನು ಪಡೆದಂತ ಉಡುವಳ್ಳಿ ಗ್ರಾಮ ಪಂಚಾಯ್ತಿ ಅಧಿಕಾರಿಗಳು, ಕಾಮಗಾರಿ ಮಾಡ್ತಿರೋದು ಮಾತ್ರ ಸರ್ವೇ ನಂ.25ರಲ್ಲಿ. ಹಾಗೆ ಸಾಧ್ಯವಿದ್ದರೂ, ಕಾಮಗಾರಿ ಪ್ರಾರಂಭಕ್ಕೂ ಮುನ್ನವೇ ತಪ್ಪನ್ನು ಸರಿಪಡಿಸಿಕೊಳ್ಳಬೇಕು. ಆದರೇ ಪಿಡಿಒ, ಇಂಜಿನಿಯರ್ ಸಾಹೇಬ್ರು, ಇವರಿಗೆ ಕುಮ್ಮಕ್ಕು ಕೊಡುವಂತೆ ಇಒ ಕೂಡ ಆ ಗೋಜಿಗೆ ಹೋಗಿಲ್ಲ. ಈ ಗೋಲ್ಮಾಲ್ ಬಗ್ಗೆ ಗ್ರಾಮಸ್ಥರೊಬ್ಬರು ಸಿಇಒಗೆ ದೂರು ನೀಡಿದ್ದೇ ತಡ, ಈ ನಾಟಕವನ್ನು ಶುರು ಮಾಡಿದ್ದಾರೆ. ಇಲ್ಲದಿದ್ರೇ ಕಾಮಗಾರಿಯನ್ನೇ ನಡೆದೇ ಕಾಮಗಾರಿಗೆ ಮಂಜೂರಾದಂತ ಹಣವನ್ನೇ ಗುಳುಂ ಮಾಡ್ತಿದ್ದರು ಅಂತ ದೂರುದಾರರು ಆರೋಪಿಸಿದ್ದಾರೆ.
ಇನ್ನೂ ಇತ್ತೀಚೆಗೆ ಸರ್ವೇ ನಂಬರ್ ಬದಲಾದ ಬಗ್ಗೆ ಇಒ ಅನುಮತಿ ಪತ್ರವನ್ನು ನೀಡಿರೋದಾಗಿ ತಿಳಿದು ಬಂದಿದೆ. ಆದರೇ ಗೋಲ್ಮಾಲ್ ಕರ್ಮಕಾಂಡ ಬಯಲಾದ ನಂತ್ರ ಕೆಲವೇ ದಿನಗಳಲ್ಲಿ ಈ ಎಲ್ಲವೂ ನಡೆದಿರೋದು ದಾಖಲೆಗಳಿಂದ ಗೊತ್ತಾಗಿದೆ. ಈ ಬಗ್ಗೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ಗಮನಿಸಬೇಕು. ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿ, ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಅಂತ ಉಡವಳ್ಳಿ ಗ್ರಾಮಸ್ಥರು ಆಗ್ರಹಿಸಿದ್ದಾರೆ.
ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲ್ಲೂಕಿನ ಉಡವಳ್ಳಿ ಗ್ರಾಮ ಪಂಚಾಯ್ತಿಯ ಗೋಕಟ್ಟೆ ಕಾಮಗಾರಿ ಗೋಲ್ಮಾಲ್ ಇಲ್ಲಿಗೆ ನಿಲ್ಲುವುದಿಲ್ಲ. ಮತ್ತೊಂದು ಸುದ್ದಿಯಲ್ಲಿ ಸಂಪೂರ್ಣ ದಾಖಲೆಗಳ ಸಹಿತ ಲೋಕಾಯುಕ್ತದವರೆಗೆ ಹೋಗಿರುವಂತ ಮಾಹಿತಿಯನ್ನು ಕೆಲವೇ ದಿನಗಳಲ್ಲಿ ಬಿಚ್ಚಿಡುತ್ತೇವೆ. ಅಲ್ಲಿಯವರೆಗೆ ತಪ್ಪದೇ ಕನ್ನಡ ನ್ಯೂಸ್ ನೌ ಸುದ್ದಿಗಳನ್ನು ಓದುತ್ತಾ ಇರಿ. ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ, ಬೆಂಬಲಿಸಿ.
ದೆಹಲಿ ‘ಮೆಟ್ರೋ’ದಲ್ಲಿ ಪ್ರಯಾಣಿಸಿದ ಮಾಜಿ ಪ್ರಧಾನಿ ದೇವೇಗೌಡರು : ವಿಡಿಯೋ ವೈರಲ್ | HD Deve Gowda
Gmail Hack Alert : ನಿಮ್ಮ `ಜಿ-ಮೇಲ್ ಖಾತೆ’ ಯಾರಾದರೂ ಹ್ಯಾಕ್ ಮಾಡಿದ್ದಾರೆಯೇ? ಈ ರೀತಿ ಚೆಕ್ ಮಾಡಿಕೊಳ್ಳಿ!