ನವದೆಹಲಿ: ಈಶಾನ್ಯ ದೆಹಲಿಯಲ್ಲಿ ಹಿಂದೂ ಯುವಕನ ಹತ್ಯೆಯನ್ನು ಪ್ರತಿಭಟಿಸುವ ಕಾರ್ಯಕ್ರಮವೊಂದರಲ್ಲಿ ದೆಹಲಿ ಬಿಜೆಪಿ ಸಂಸದ ಪರ್ವೇಶ್ ವರ್ಮಾ ಅವರು ಸಮುದಾಯವೊಂದರ ವಿರುದ್ಧ ಪ್ರಚೋದನಕಾರಿ ಹೇಳಿಕೆಗಳನ್ನು ನೀಡಿ ವಿವಾದಕ್ಕೆ ಒಳಗಾಗಿದ್ದಾರೆ.
ಈ ತಿಂಗಳ ಆರಂಭದಲ್ಲಿ ಸುಂದರ್ ನಗರಿಯಲ್ಲಿ ಮನೀಶ್ (19) ಎಂಬಾತನನ್ನು ಚಾಕುವಿನಿಂದ ಇರಿದು ಹತ್ಯೆ ಮಾಡಲಾಗಿತ್ತು. ಪ್ರಕರಣದ ಎಲ್ಲ ಆರೋಪಿಗಳಾದ ಆಲಂ, ಬಿಲಾಲ್ ಮತ್ತು ಫೈಜಾನ್ ಅವರನ್ನು ಪೊಲೀಸರು ಬಂಧಿಸಿದ್ದು, ಹಳೆಯ ವೈಷಮ್ಯದ ಹಿನ್ನೆಲೆಯಲ್ಲಿ ಆತನನ್ನು ಕೊಂದಿರುವುದಾಗಿ ಹೇಳಿದ್ದಾರೆ.
ಹತ್ಯೆಯ ವಿರುದ್ಧ ವಿವಿಧ ಹಿಂದೂ ಸಂಘಟನೆಗಳು ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಪರ್ವೇಶ್ ವರ್ಮಾ ಅವರು ಮಾತನಾಡಿದ್ದು, “ನೀವು ಅವರನ್ನು ಎಲ್ಲಿ ಹುಡುಕಿದರೂ, ಅವರನ್ನು ನೇರಗೊಳಿಸಲು ಒಂದೇ ಒಂದು ಮಾರ್ಗವಿದೆ. ಅದೇ ಸಂಪೂರ್ಣ ಬಹಿಷ್ಕಾರ. ಇದಕ್ಕೆ ನೀವು ನನ್ನೊಂದಿಗೆ ಒಪ್ಪುತ್ತೀರಾ?” ಎಂದಿರುವ ವಿಡಿಯೋ ವೈರಲ್ ಆಗಿದ್ದು, ಭಾರೀ ವಿವಾದಕ್ಕೆ ಕಾರಣವಾಗಿದೆ.
ದಿಲ್ಶಾದ್ ಗಾರ್ಡನ್ನಲ್ಲಿ ನಡೆದ ಕಾರ್ಯಕ್ರಮ ಆಯೋಜಿಸಲು ಯಾವುದೇ ಅನುಮತಿಯನ್ನು ತೆಗೆದುಕೊಂಡಿಲ್ಲ. ಭಾಷಣದ ಬಗ್ಗೆ ಇನ್ನೂ ಯಾವುದೇ ದೂರುಗಳು ಬಂದಿಲ್ಲ. ಆದರೆ, ಕಾರ್ಯಕ್ರಮದಲ್ಲಿ ಮಾಡಿದ ಭಾಷಣಗಳಿಗೆ ಸಂಬಂಧಿಸಿದ ದೃಶ್ಯಗಳನ್ನು ಪರಿಶೀಲಿಸಲಾಗುವುದು. ಪಶ್ಚಿಮ ದೆಹಲಿಯ ಬಿಜೆಪಿ ಸಂಸದ ವರ್ಮಾ ಅವರಿಂದ ತಕ್ಷಣದ ಪ್ರತಿಕ್ರಿಯೆ ಲಭ್ಯವಾಗಿಲ್ಲʼ ಎಂದು ದೆಹಲಿಯ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ವರ್ಮಾ ಅವರು ಸಮುದಾಯದ “ಸಂಪೂರ್ಣ ಬಹಿಷ್ಕಾರ” ದ ಬಗ್ಗೆ ಜನಸಮೂಹದಿಂದ ಉತ್ತರವನ್ನು ಹುಡುಕುತ್ತಿರುವುದನ್ನು ವೀಡಿಯೊದಲ್ಲಿ ಕಾಣಬಹುದು ಮತ್ತು ನೀವು ನನಗೆ ಸಮ್ಮತಿಸಿದರೆ ನಿಮ್ಮ ಕೈ ಎತ್ತಿ. ನಾವು ಅವರ ಅಂಗಡಿಗಳಿಂದ ಏನನ್ನೂ ಖರೀದಿಸುವುದಿಲ್ಲ ಅಥವಾ ಅವರಿಗೆ ಯಾವುದೇ ವೇತನವನ್ನು ನೀಡುವುದಿಲ್ಲ. ಇದು ಅವರಿಗೆ ಚಿಕಿತ್ಸೆಯಾಗಿದೆ” ಎಂದು ಅವರು ವೀಡಿಯೊದಲ್ಲಿ ಕೇಳಬಹುದು.
भाजपा-RSS का सांसद देश के राजधानी में, खुली सभा में मुसलमानों का बहिष्कार करने की शपथ ले रहा है। RSS के मोहन ने कहा था कि मुसलमानों में झूठा डर फैलाया जा रहा है।सच तो यही है कि BJP ने मुसलमानों के खिलाफ़ जंग का आगाज़ कर दिया है।दिल्ली CM और @amitshah दिनों ने चुप्पी साध ली है 1/2 pic.twitter.com/X2xMFKLCef
— Asaduddin Owaisi (@asadowaisi) October 9, 2022
BIG BREAKING NEWS: ಸಮಾಜವಾದಿ ಪಕ್ಷದ ಸಂಸ್ಥಾಪಕ ಮುಲಾಯಂ ಸಿಂಗ್ ಯಾದವ್ (82) ಇನ್ನಿಲ್ಲ