ಬೆಂಗಳೂರು: ಪ್ರಯಾಣಿಕರ ಹೆಚ್ಚುವರಿ ದಟ್ಟಣೆಯನ್ನು ತೆರವುಗೊಳಿಸಲು, ನೈಋತ್ಯ ರೈಲ್ವೆಯು ಸರ್ ಎಂ. ವಿಶ್ವೇಶ್ವರಯ್ಯ ಟರ್ಮಿನಲ್, ಬೆಂಗಳೂರು ಮತ್ತು ಬೀದರ್ ನಿಲ್ದಾಣಗಳ ನಡುವೆ ವಿಶೇಷ ಎಕ್ಸ್ಪ್ರೆಸ್ ರೈಲು ಸೇವೆಯನ್ನು ನಿರ್ವಹಿಸಲಿದೆ. ಇದರ ವಿವರಗಳು ಹೀಗಿವೆ:
ರೈಲು ಸಂಖ್ಯೆ 06539 ಸರ್ ಎಂ. ವಿಶ್ವೇಶ್ವರಯ್ಯ ಟರ್ಮಿನಲ್ ಬೆಂಗಳೂರು – ಬೀದರ್ ಎಕ್ಸ್ಪ್ರೆಸ್ ವಿಶೇಷ ರೈಲು ಜೂನ್ 15 ರಿಂದ 29, 2025 ರವರೆಗೆ ಶುಕ್ರವಾರ ಮತ್ತು ಭಾನುವಾರದಂದು ಒಟ್ಟು 5 ಟ್ರಿಪ್ ಸಂಚರಿಸಲಿದೆ. ಈ ರೈಲು ಎಸ್ಎಂವಿಟಿ ಬೆಂಗಳೂರಿನಿಂದ 21:15 ಗಂಟೆಗೆ ಹೊರಟು, ಮರುದಿನ 11:30 ಗಂಟೆಗೆ ಬೀದರ್ ತಲುಪಲಿದೆ. ಮಾರ್ಗಮಧ್ಯೆ, ಈ ರೈಲು ಯಲಹಂಕ (21:45/21:47 ಗಂಟೆ), ಹಿಂದೂಪುರ (23:01/23:03 ಗಂಟೆ), ಧರ್ಮಾವರಂ (00:05/00:10 ಗಂಟೆ), ಅನಂತಪುರ (00:38/00:40 ಗಂಟೆ), ಗುಂತಕಲ್ (01:55/02:00 ಗಂಟೆ), ಆದೋನಿ (02:43/02:45 ಗಂಟೆ), ಮಂತ್ರಾಲಯಂ ರೋಡ್ (03:13/03:15 ಗಂಟೆ), ರಾಯಚೂರು (03:43/03:45 ಗಂಟೆ), ಕೃಷ್ಣಾ (04:40/04:50 ಗಂಟೆ), ಯಾದಗಿರಿ (05:38/05:40 ಗಂಟೆ), ವಾಡಿ (07:30/07:35 ಗಂಟೆ), ಶಹಾಬಾದ್ (07:48/07:50 ಗಂಟೆ), ಕಲಬುರಗಿ (08:15/08:20 ಗಂಟೆ) ಮತ್ತು ಹುಮ್ನಾಬಾದ್ (09:33/09:35 ಗಂಟೆ) ನಿಲ್ದಾಣಗಳಲ್ಲಿ ನಿಲುಗಡೆ ನೀಡಲಿದೆ.
ಮರಳಿ, ರೈಲು ಸಂಖ್ಯೆ 06540 ಬೀದರ್ – ಸರ್ ಎಂ. ವಿಶ್ವೇಶ್ವರಯ್ಯ ಟರ್ಮಿನಲ್ ಬೆಂಗಳೂರು ಎಕ್ಸ್ಪ್ರೆಸ್ ವಿಶೇಷ ರೈಲು ಜೂನ್ 16 ರಿಂದ 30, 2025 ರವರೆಗೆ ಶನಿವಾರ ಮತ್ತು ಸೋಮವಾರದಂದು ಒಟ್ಟು 5 ಟ್ರಿಪ್ ಸಂಚರಿಸಲಿದೆ. ಈ ರೈಲು ಬೀದರ್ನಿಂದ 13:00 ಗಂಟೆಗೆ ಹೊರಟು, ಮರುದಿನ 04:00 ಗಂಟೆಗೆ ಎಸ್ಎಂವಿಟಿ ಬೆಂಗಳೂರು ತಲುಪಲಿದೆ. ಈ ರೈಲು ಹುಮ್ನಾಬಾದ್ (14:19/14:20 ಗಂಟೆ), ಕಲಬುರಗಿ (16:15/16:20 ಗಂಟೆ), ಶಹಾಬಾದ್ (16:40/16:42 ಗಂಟೆ), ವಾಡಿ (16:55/17:00 ಗಂಟೆ), ಯಾದಗಿರಿ (17:23/17:25 ಗಂಟೆ), ಕೃಷ್ಣಾ (18:00/18:10 ಗಂಟೆ), ರಾಯಚೂರು (18:28/18:30 ಗಂಟೆ), ಮಂತ್ರಾಲಯಂ ರೋಡ್ (18:53/18:55 ಗಂಟೆ), ಆದೋನಿ (19:28/19:30 ಗಂಟೆ), ಗುಂತಕಲ್ (20:49/20:51 ಗಂಟೆ), ಅನಂತಪುರ (21:48/21:50 ಗಂಟೆ), ಧರ್ಮಾವರಂ (23:15/23:20 ಗಂಟೆ), ಹಿಂದೂಪುರ (00:51/00:52 ಗಂಟೆ) ಮತ್ತು ಯಲಹಂಕ (02:08/02:10 ಗಂಟೆ) ನಿಲ್ದಾಣಗಳಲ್ಲಿ ನಿಲುಗಡೆ ನೀಡಲಿದೆ.
ಈ ವಿಶೇಷ ರೈಲು ಸೇವೆಯು 20 ಬೋಗಿಗಳನ್ನು ಒಳಗೊಂಡಿರಲಿದೆ. ಅವುಗಳಲ್ಲಿ ಎಸಿ 2-ಟೈರ್ (1), ಎಸಿ 3-ಟೈರ್ (2), ಸ್ಲೀಪರ್ ಕ್ಲಾಸ್ (11), ಜನರಲ್ ಸೆಕೆಂಡ್ ಕ್ಲಾಸ್ (4) ಮತ್ತು ಎಸ್ಎಲ್ಆರ್/ಡಿ ಬೋಗಿಗಳು (2) ಸೇರಿವೆ.
ರೈಲು ಸಂಖ್ಯೆ 06539 ಮತ್ತು ರೈಲು ಸಂಖ್ಯೆ 06540 ಎರಡೂ ತಮ್ಮ ತಮ್ಮ ಪ್ರಾರಂಭಿಕ ನಿಲ್ದಾಣಗಳಿಂದ ತಲಾ 5 ಟ್ರಿಪ್ಗಳನ್ನು ನಿರ್ವಹಿಸಲಿವೆ. ಪ್ರಯಾಣಿಕರು ಈ ವಿಶೇಷ ರೈಲು ಸೇವೆಗಳ ಸದುಪಯೋಗ ಪಡೆದುಕೊಳ್ಳಲು ಕೋರಲಾಗಿದೆ.