ದಾವಣಗೆರೆ : ಗ್ರಾಮಾಂತರ ಮಟ್ಟದಲ್ಲಿರುವ ಎಲ್ಲಾ ನ್ಯಾಯಬೆಲೆ ಅಂಗಡಿಗಳಲ್ಲಿ ಮತ್ತು ಗ್ರಾಮಒನ್ ಕೇಂದ್ರಗಳಲ್ಲಿ ಉಚಿತ ಆಯುಷ್ಮಾನ್ ಭಾರತ್ ಕಾರ್ಡ್ಗಳನ್ನು ಎಲ್ಲಾ ಪಡಿತರ ಫಲಾನುಭವಿಗಳಿಗೆ ಶಿಬಿರಗಳ ಮೂಲಕ ನೋಂದಣಿಯನ್ನು ಹಮ್ಮಿಕೊಳ್ಳಲಾಗಿದೆ.
BIGG NEWS : ಕರ್ನಾಟಕ ರೈತ ಸುರಕ್ಷಾ ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆ : ರೈತ ಸಮುದಾಯಕ್ಕೆ ಇಲ್ಲಿದೆ ಮುಖ್ಯ ಮಾಹಿತಿ
ಆಯುಷ್ಮಾನ್ ಭಾರತ್ ಯೋಜನೆಯಲ್ಲಿ ನೋಂದಣಿಯಾದ ಬಿ.ಪಿ.ಎಲ್ ಫಲಾನುಭವಿ ಕುಟುಂಬವು ವಾರ್ಷಿಕ 5 ಲಕ್ಷದವರೆಗೆ ಮತ್ತು ಎ.ಪಿ.ಎಲ್ ಫಲಾನುಭವಿ ಕುಟುಂಬವು ವಾರ್ಷಿಕ 1.5 ಲಕ್ಷದವರೆಗೆ ಅಥವಾ ಚಿಕಿತ್ಸೆಯ 30% ರಷ್ಟು ನಗದು ರೈತ ಆರೋಗ್ಯ ರಕ್ಷಣೆಯನ್ನು ಒದಗಿಸುತ್ತದೆ. ಹಾಗೂ ಈ ಕಾರ್ಡುದಾರನ ಚಿಕಿತ್ಸೆಯ ಎಲ್ಲಾ ಮಾಹಿತಿಯು ಈ ಕಾರ್ಡಿನೊಂದಿಗೆ ಅಡಕವಾಗಿದ್ದು ಸಾರ್ವಜನಿಕರು ಇದರ ಸದುಪಯೋಗವನ್ನು ಪಡೆದುಕೊಳ್ಳಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ಗ್ರಾಮ ಒನ್ ಕೇಂದ್ರಗಳನ್ನು ಸಂಪರ್ಕಿಸಬಹುದು ಎಂದು ಅಪಾರ ಜಿಲ್ಲಾಧಿಕಾರಿ ಪಿ.ಎನ್ ಲೋಕೆಶ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
BIGG NEWS : ಅ.26ಕ್ಕೆ ರಾಜ್ಯದ ಎಲ್ಲ ಪಶು ಆಸ್ಪತ್ರೆ, ಗೋಶಾಲೆಗಳಲ್ಲಿ `ಗೋಪೂಜೆ’ : ಸಚಿವ ಪ್ರಭು ಚವ್ಹಾಣ್ ಆದೇಶ